दूधसागर नदीत चार विद्यार्थ्यांचा दुर्दैवी बुडून मृत्यू; तिघे सख्खे भाऊ असल्याने शोककळा. सुट्टीचा आनंद घेण्यासाठी गेलेला सहलीचा बेत ठरला अखेरचा; गोव्यात हळहळ.
पणजी/कुळे : प्रतिनिधी
गोव्यातील प्रसिद्ध दूधसागर परिसरात शनिवारी एक अत्यंत दुर्दैवी घटना घडली. कुळे येथील दूधसागर नदीपात्रात पोहण्यासाठी उतरलेल्या चार तरुण विद्यार्थ्यांचा बुडून मृत्यू झाला. मृतांमध्ये एकाच कुटुंबातील तीन सख्ख्या भावांचा समावेश असल्याची माहिती पोलिसांनी दिली आहे. या घटनेमुळे गोवा तसेच विद्यार्थी वर्तुळात शोककळा पसरली आहे.
मिळालेल्या माहितीनुसार, पाच मित्रांचा एक गट सकाळी वास्कोहून रेल्वेमार्गे कुळे येथे पोहोचला होता. महाविद्यालये पुन्हा सुरू होण्यापूर्वी सहलीचा आनंद घेण्यासाठी त्यांनी दूधसागर परिसर गाठला. त्यानंतर नदीत पोहण्यासाठी उतरलेल्या या तरुणांपैकी चार जण खोल पाण्यात अडकले. एका मित्राला वाचवण्यात यश आले, मात्र उर्वरित चौघांचा दुर्दैवी मृत्यू झाला.
स्थानिकांची धावपळ, पण प्रयत्न अपुरे…
घटना लक्षात येताच परिसरातील नागरिकांनी आणि पर्यटकांनी तत्काळ मदतीसाठी धाव घेतली. काही जणांनी नदीत उतरून विद्यार्थ्यांना बाहेर काढण्याचा प्रयत्न केला. मात्र पाण्याचा वेग आणि खोली यामुळे बचावकार्य कठीण ठरले. पोलिस व आपत्ती व्यवस्थापन पथक घटनास्थळी दाखल झाल्यानंतर शोधमोहीम राबवण्यात आली आणि काही तासांनंतर मृतदेह बाहेर काढण्यात आले.
पावसाळ्यातील नदीपात्रे ठरतात धोकादायक…
दूधसागर परिसर हा पर्यटकांचे प्रमुख आकर्षण मानला जातो. मात्र पावसाळ्याच्या सुरुवातीच्या काळात नदीतील प्रवाह अचानक वाढतो, तसेच पाण्याची खोली व तळाचा अंदाज येत नाही. यापूर्वीही या परिसरात बुडण्याच्या घटना घडल्या असून प्रशासनाने वारंवार खबरदारी घेण्याचे आवाहन केले आहे.
पोलीस तपास सुरू…
या घटनेनंतर पोलिसांनी पंचनामा करून मृतदेह शवविच्छेदनासाठी पाठवले आहेत. विद्यार्थ्यांच्या कुटुंबीयांना घटनेची माहिती देण्यात आली असून पुढील तपास सुरू आहे. मृत विद्यार्थी वास्को परिसरात वास्तव्यास होते आणि महाविद्यालयीन शिक्षण घेत असल्याची प्राथमिक माहिती समोर आली आहे.
सुरक्षिततेचा गंभीर प्रश्न…
दूधसागरसारख्या पर्यटनस्थळी मोठ्या प्रमाणात पर्यटक आणि तरुण वर्ग भेट देत असतो. मात्र धोकादायक नदीपात्रात किंवा धबधब्याजवळ योग्य सुरक्षा उपायांशिवाय पाण्यात उतरणे जीवघेणे ठरू शकते. या दुर्दैवी घटनेने पुन्हा एकदा जलपर्यटन स्थळांवरील सुरक्षेचा प्रश्न ऐरणीवर आणला आहे.
“क्षणिक आनंदासाठी घेतलेली जोखीम चार तरुणांचे प्राण घेऊन गेली; दूधसागर दुर्घटनेने अनेक कुटुंबांवर दुःखाचा डोंगर कोसळला आहे.”
ಪ್ರವಾಸಿ ತಾನವಾದ ದುಧ್ಸಾಗರ್ ನದಿಯಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಗಳ ದಾರುಣ ಸಾವು; ಒಂದೇ ಕುಟುಂಬದ ಮೂವರು ಸಹೋದರರು ಎಂಬ ಕಾರಣಕ್ಕೆ ಶೋಕಸಾಗರ. ರಜೆಯ ಸಂಭ್ರಮಕ್ಕಾಗಿ ಹೋದ ಪ್ರವಾಸವೇ ಕೊನೆಯದಾಯಿತು; ಗೋವಾದಲ್ಲಿ ದುಃಖದ ಘಟನೆ.
ಪಣಜಿ/ಕುಳೆ : ಪ್ರತಿನಿಧಿಗೋವಾದ ಪ್ರಸಿದ್ಧ ದುಧ್ಸಾಗರ್ ಪ್ರದೇಶದಲ್ಲಿ ಶನಿವಾರ ಅತ್ಯಂತ ದುಃಖದ ಘಟನೆ ಸಂಭವಿಸಿದೆ. ಕುಳೆ ಸಮೀಪದ ದುಧ್ಸಾಗರ್ ನದಿಪಾತ್ರದಲ್ಲಿ ಈಜಲು ಇಳಿದ ನಾಲ್ವರು ಯುವ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಗೋವಾ ಸೇರಿದಂತೆ ವಿದ್ಯಾರ್ಥಿ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಗೋವಾದ ಪ್ರಸಿದ್ಧ ದುಧ್ಸಾಗರ್ ಪ್ರದೇಶದಲ್ಲಿ ಶನಿವಾರ ಅತ್ಯಂತ ದುಃಖದ ಘಟನೆ ಸಂಭವಿಸಿದೆ. ಕುಳೆ ಸಮೀಪದ ದುಧ್ಸಾಗರ್ ನದಿಪಾತ್ರದಲ್ಲಿ ಈಜಲು ಇಳಿದ ನಾಲ್ವರು ಯುವ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಗೋವಾ ಸೇರಿದಂತೆ ವಿದ್ಯಾರ್ಥಿ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಐವರು ಸ್ನೇಹಿತರ ತಂಡವು ಬೆಳಿಗ್ಗೆ ವಾಸ್ಕೋದಿಂದ ರೈಲು ಮಾರ್ಗದ ಮೂಲಕ ಕುಳೆಗೆ ಆಗಮಿಸಿತ್ತು. ಕಾಲೇಜುಗಳು ಪುನಃ ಆರಂಭವಾಗುವ ಮುನ್ನ ಪ್ರವಾಸದ ಸಂಭ್ರಮವನ್ನು ಅನುಭವಿಸಲು ಅವರು ದುಧ್ಸಾಗರ್ ಪ್ರದೇಶಕ್ಕೆ ತೆರಳಿದ್ದರು. ಬಳಿಕ ನದಿಯಲ್ಲಿ ಈಜಲು ಇಳಿದ ಈ ಯುವಕರಲ್ಲಿ ನಾಲ್ವರು ಆಳವಾದ ನೀರಿನಲ್ಲಿ ಸಿಲುಕಿಕೊಂಡರು. ಒಬ್ಬ ಸ್ನೇಹಿತನನ್ನು ರಕ್ಷಿಸಲು ಯಶಸ್ವಿಯಾದರೂ, ಉಳಿದ ನಾಲ್ವರು ದುರ್ಘಟನೆಯಲ್ಲಿ ಮೃತಪಟ್ಟರು.
ಸ್ಥಳೀಯರ ಹರಸಾಹಸ, ಆದರೆ ಪ್ರಯತ್ನ ಫಲಿಸಲಿಲ್ಲ…
ಘಟನೆ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರು ತಕ್ಷಣ ಸಹಾಯಕ್ಕಾಗಿ ಧಾವಿಸಿದರು. ಕೆಲವರು ನದಿಗೆ ಇಳಿದು ವಿದ್ಯಾರ್ಥಿಗಳನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ನೀರಿನ ತೀವ್ರ ಹರಿವು ಹಾಗೂ ಆಳವಾದ ಕಾರಣ ರಕ್ಷಣಾ ಕಾರ್ಯ ಕಷ್ಟಕರವಾಯಿತು. ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿತು. ಕೆಲವು ಗಂಟೆಗಳ ಬಳಿಕ ಮೃತದೇಹಗಳನ್ನು ಹೊರತೆಗೆದರು.
ಮಳೆಗಾಲದಲ್ಲಿ ನದಿಪಾತ್ರಗಳು ಅಪಾಯಕಾರಿಯಾಗುತ್ತವೆ…
ದುಧ್ಸಾಗರ್ ಪ್ರದೇಶವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಮಳೆಗಾಲದ ಆರಂಭಿಕ ದಿನಗಳಲ್ಲಿ ನದಿಯ ಹರಿವು ಏಕಾಏಕಿ ಹೆಚ್ಚಾಗುತ್ತದೆ. ಜೊತೆಗೆ ನೀರಿನ ಆಳ ಹಾಗೂ ನದಿಯ ತಳಭಾಗದ ಸ್ಥಿತಿಯನ್ನು ಅಂದಾಜಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಗಳು ನಡೆದಿದ್ದು, ಎಚ್ಚರಿಕೆ ವಹಿಸುವಂತೆ ಆಡಳಿತವು ಹಲವಾರು ಬಾರಿ ಮನವಿ ಮಾಡಿದೆ.
ಪೊಲೀಸ್ ತನಿಖೆ ಆರಂಭ…
ಘಟನೆಯ ನಂತರ ಪೊಲೀಸರು ಮಹಜರು ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವಿದ್ಯಾರ್ಥಿಗಳ ಕುಟುಂಬ ಸದಸ್ಯರಿಗೆ ಘಟನೆಯ ಮಾಹಿತಿ ನೀಡಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಮೃತ ವಿದ್ಯಾರ್ಥಿಗಳು ವಾಸ್ಕೋ ಪ್ರದೇಶದ ನಿವಾಸಿಗಳಾಗಿದ್ದು, ಕಾಲೇಜು ಶಿಕ್ಷಣ ಪಡೆಯುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಸುರಕ್ಷತೆಯ ಗಂಭೀರ ಪ್ರಶ್ನೆ…
ದುಧಸಾಗರ್ನಂತಹ ಪ್ರವಾಸಿ ತಾಣಗಳಿಗೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಯುವಕರು ಭೇಟಿ ನೀಡುತ್ತಾರೆ. ಆದರೆ ಅಪಾಯಕಾರಿಯಾದ ನದಿಪಾತ್ರಗಳಲ್ಲಿ ಅಥವಾ ಜಲಪಾತಗಳ ಸಮೀಪ ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೆ ನೀರಿಗೆ ಇಳಿಯುವುದು ಜೀವಕ್ಕೆ ಅಪಾಯಕಾರಿಯಾಗಬಹುದು. ಈ ದುರ್ಘಟನೆಯು ಜಲ ಪ್ರವಾಸೋದ್ಯಮ ತಾಣಗಳಲ್ಲಿನ ಸುರಕ್ಷತಾ ವ್ಯವಸ್ಥೆಗಳ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆ ಎಬ್ಬಿಸಿದೆ.
“ಕ್ಷಣಿಕ ಸಂತೋಷಕ್ಕಾಗಿ ತೆಗೆದುಕೊಂಡ ಅಪಾಯ ನಾಲ್ವರು ಯುವಕರ ಪ್ರಾಣವನ್ನು ಬಲಿ ಪಡೆದಿದೆ; ದುಧ್ಸಾಗರ್ ದುರಂತದಿಂದ ಅನೇಕ ಕುಟುಂಬಗಳ ಮೇಲೆ ದುಃಖದ ಪರ್ವತವೇ ಕುಸಿದಂತಾಗಿದೆ.”


