19 वर्षांनंतर होणाऱ्या श्री महालक्ष्मी यात्रेच्या तयारीला वेग; कारलगा येथे पूर्व नियोजन बैठक, आमदार विठ्ठलराव हलगेकर यांचे मार्गदर्शन.
कारलगा (प्रतिनिधी) : तब्बल 19 वर्षांनंतर 24 फेब्रुवारी 2027 रोजी कारलगा, शिवोली आणि कारलगाहाट्टी या तीन गावांच्या संयुक्त विद्यमाने होणाऱ्या श्री महालक्ष्मी यात्रेच्या पार्श्वभूमीवर कारलगा येथे पूर्व नियोजन बैठक उत्साहात पार पडली. या बैठकीस प्रमुख मार्गदर्शक म्हणून आमदार विठ्ठलराव हलगेकर उपस्थित होते.
बैठकीच्या अध्यक्षस्थानी गावातील ज्येष्ठ नागरिक मनोहर पाटील होते. यावेळी खानापूर भाजपा अध्यक्ष बसवराज सानिकोप, भाजपा नेत्या धनश्री सरदेसाई, भाजपा नेते जोतिबा रेमाणी, मलाप्पा मारीहाळ, सुंदर कुलकर्णी, भाजपा युवा नेते दत्ता कदम तसेच पंच कमिटीचे सदस्य आणि मोठ्या संख्येने ग्रामस्थ उपस्थित होते.

बैठकीच्या प्रारंभी श्री महालक्ष्मी यात्रेची परंपरा आणि 19 वर्षांनंतर पुन्हा आयोजित होत असलेल्या या ऐतिहासिक उत्सवाचे महत्त्व विषद करण्यात आले. त्यानंतर आमदार विठ्ठलराव हलगेकर यांनी उपस्थितांना मार्गदर्शन करताना, “श्री महालक्ष्मी यात्रा ही केवळ धार्मिक उत्सव नसून तीन गावांच्या एकात्मतेचे आणि सांस्कृतिक परंपरेचे प्रतीक आहे. ही यात्रा भव्य आणि यशस्वी करण्यासाठी सर्वांनी पक्षभेद बाजूला ठेवून एकजुटीने काम करावे,” असे आवाहन केले.

यात्रेच्या नियोजनाबाबत वाहतूक व्यवस्था, भाविकांसाठी आवश्यक सुविधा, सुरक्षा, सांस्कृतिक कार्यक्रम तसेच पायाभूत सुविधांच्या उभारणीसंदर्भात सविस्तर चर्चा करण्यात आली. यात्रेच्या यशस्वी आयोजनासाठी प्रशासनाकडून आवश्यक ते सर्व सहकार्य दिले जाईल, अशी ग्वाही आमदार हलगेकर यांनी दिली.
यावेळी खानापूर भाजपा अध्यक्ष बसवराज सानिकोप यांनी यात्रेच्या नियोजनासाठी भाजपा कार्यकर्त्यांचे संपूर्ण सहकार्य राहील, असे सांगितले. धनश्री सरदेसाई यांनी महिलांनीही यात्रेच्या नियोजनात सक्रिय सहभाग घ्यावा आणि विविध समित्यांमध्ये जबाबदाऱ्या स्वीकाराव्यात, असे आवाहन केले.
बैठकीत पंच कमिटीच्या वतीने यात्रेच्या विविध कामांसाठी स्वतंत्र समित्या स्थापन करण्याचा निर्णय घेण्यात आला. ग्रामस्थांनीही यात्रेच्या यशस्वी आयोजनासाठी सर्वतोपरी सहकार्य करण्याचा निर्धार व्यक्त केला.
24 फेब्रुवारी 2027 रोजी होणाऱ्या या ऐतिहासिक श्री महालक्ष्मी यात्रेच्या पूर्व नियोजन बैठकीमुळे कारलगा, शिवोली आणि कारलगाहाट्टी परिसरात उत्साहाचे वातावरण निर्माण झाले असून, यात्रेच्या भव्य तयारीला आता वेग आला आहे.
19 ವರ್ಷಗಳ ನಂತರ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಸಿದ್ಧತೆಗೆ ವೇಗ; ಕಾರಲಗದಲ್ಲಿ ಪೂರ್ವಸಿದ್ಧತಾ ಸಭೆ, ಶಾಸಕ ವಿಠ್ಠಲರಾವ್ ಹಲಗೇಕರ ಮಾರ್ಗದರ್ಶನ.
ಕಾರಲಗ (ಪ್ರತಿನಿಧಿ): ಸುಮಾರು 19 ವರ್ಷಗಳ ಬಳಿಕ ೨೪ ಫೆಬ್ರವರಿ 2027 ರಂದು ಕಾರಲಗ, ಶಿವೋಲಿ ಹಾಗೂ ಕಾರಲಗಾಹಟ್ಟಿಯ ಈ ಮೂರು ಗ್ರಾಮಗಳಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಹಿನ್ನೆಲೆ ಕಾರಲಗ ಗ್ರಾಮದಲ್ಲಿ ಪೂರ್ವಸಿದ್ಧತಾ ಸಭೆ ಉತ್ಸಾಹದಿಂದ ನಡೆಯಿತು. ಈ ಸಭೆಗೆ ಮುಖ್ಯ ಮಾರ್ಗದರ್ಶಕರಾಗಿ ಶಾಸಕ ವಿಠ್ಠಲರಾವ್ ಹಲಗೇಕರ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ನಾಗರಿಕ ಮನೋಹರ ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ಖಾನಾಪುರ ಬಿಜೆಪಿ ಅಧ್ಯಕ್ಷ ಬಸವರಾಜ ಸಾನಿಕೋಪ, ಬಿಜೆಪಿ ಮಹಿಳಾ ಮುಖಂಡರಾದ ಧನಶ್ರೀ ಸರದೇಶಾಯಿ, ಬಿಜೆಪಿ ಮುಖಂಡ ಜೋತಿಬಾ ರೇಮಾನಿ, ಮಲಪ್ಪ ಮಾರಿಹಾಳ, ಸುಂದರ ಕುಲಕರ್ಣಿ, ಬಿಜೆಪಿ ಯುವ ಮುಖಂಡ ದತ್ತಾ ಕದಮ, ಪಂಚ ಸಮಿತಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಪರಂಪರೆ ಹಾಗೂ 19 ವರ್ಷಗಳ ನಂತರ ಮತ್ತೆ ಆಯೋಜಿಸಲಾಗುತ್ತಿರುವ ಈ ಐತಿಹಾಸಿಕ ಉತ್ಸವದ ಮಹತ್ವವನ್ನು ವಿವರಿಸಲಾಯಿತು. ಬಳಿಕ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಮಾತನಾಡಿ, “ಶ್ರೀ ಮಹಾಲಕ್ಷ್ಮಿ ಜಾತ್ರೆ ಕೇವಲ ಧಾರ್ಮಿಕ ಉತ್ಸವವಲ್ಲ; ಇದು ಮೂರು ಗ್ರಾಮಗಳ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಈ ಜಾತ್ರೆಯನ್ನು ಅತ್ಯಂತ ಭವ್ಯ ಹಾಗೂ ಯಶಸ್ವಿಯಾಗಿ ನಡೆಸಲು ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು,” ಎಂದು ಕರೆ ನೀಡಿದರು.
ಜಾತ್ರೆಯ ಯೋಜನೆ ಕುರಿತು ಸಂಚಾರ ವ್ಯವಸ್ಥೆ, ಭಕ್ತರಿಗೆ ಅಗತ್ಯ ಸೌಲಭ್ಯಗಳು, ಭದ್ರತಾ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೂಲಸೌಕರ್ಯಗಳ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು. ಜಾತ್ರೆಯ ಯಶಸ್ವಿ ಆಯೋಜನೆಗಾಗಿ ಆಡಳಿತದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಶಾಸಕ ಹಲಗೇಕರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಖಾನಾಪುರ ಬಿಜೆಪಿ ಅಧ್ಯಕ್ಷ ಬಸವರಾಜ ಸಾನಿಕೋಪ ಅವರು ಜಾತ್ರೆಯ ಸಿದ್ಧತೆಗೆ ಬಿಜೆಪಿ ಕಾರ್ಯಕರ್ತರಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ತಿಳಿಸಿದರು. ಧನಶ್ರೀ ಸರದೇಶಾಯಿ ಅವರು ಮಹಿಳೆಯರೂ ಜಾತ್ರೆಯ ಸಿದ್ಧತೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿವಿಧ ಸಮಿತಿಗಳಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಪಂಚ ಸಮಿತಿಯ ವತಿಯಿಂದ ಜಾತ್ರೆಯ ವಿವಿಧ ಕಾರ್ಯಗಳಿಗಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸುವ ನಿರ್ಧಾರ ಕೈಗೊಳ್ಳಲಾಯಿತು. ಗ್ರಾಮಸ್ಥರೂ ಜಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಲು ಸರ್ವತೋಮುಖ ಸಹಕಾರ ನೀಡುವ ಸಂಕಲ್ಪ ವ್ಯಕ್ತಪಡಿಸಿದರು.
24 ಫೆಬ್ರವರಿ 2027ರಂದು ನಡೆಯಲಿರುವ ಈ ಐತಿಹಾಸಿಕ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಪೂರ್ವಸಿದ್ಧತಾ ಸಭೆಯಿಂದ ಕಾರಲಗ, ಶಿವೋಲಿ ಹಾಗೂ ಕಾರಲಗಾಹಟ್ಟಿ ಪ್ರದೇಶದಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದ್ದು, ಜಾತ್ರೆಯ ಭವ್ಯ ಸಿದ್ಧತೆಗಳಿಗೆ ಈಗ ಮತ್ತಷ್ಟು ವೇಗ ದೊರೆತಿದೆ.



