हेमाडगा शाळेतील ‘श्री कलमेश्वर विद्यार्थी बचत बँके’च्या द्वितीय वर्षाचा उत्साहात शुभारंभ. विद्यार्थ्यांमध्ये बचतीची सवय, आर्थिक शिस्त आणि बँकिंगचे ज्ञान रुजविणारा अभिनव उपक्रम.
हेमाडगा : प्रतिनिधी
विद्यार्थ्यांनी लहानपणापासूनच बचतीचे महत्त्व ओळखावे, आर्थिक नियोजनाची सवय अंगीकारावी आणि बँकिंग व्यवहारांचे प्राथमिक ज्ञान मिळवावे या उद्देशाने हेमाडगा येथील शाळेत सुरू करण्यात आलेल्या ‘श्री कलमेश्वर विद्यार्थी बचत बँके’ने यशस्वीपणे एक वर्ष पूर्ण केले आहे. या उपक्रमाला विद्यार्थ्यांकडून मिळालेल्या उत्स्फूर्त प्रतिसादामुळे त्याच्या द्वितीय वर्षाचा प्रारंभ मोठ्या उत्साहात करण्यात आला.
जुलै 2025 मध्ये सुरू झालेल्या या विद्यार्थी बचत बँकेच्या माध्यमातून विद्यार्थ्यांनी वर्षभरात केलेल्या बचतीचा परतावा नुकताच त्यांना वितरित करण्यात आला. त्यानंतर गुरुवारी (दि. 18 जून) एसडीएमसी पदाधिकारी, पालक, शिक्षक व विद्यार्थ्यांच्या उपस्थितीत द्वितीय वर्षारंभ सोहळा उत्साहपूर्ण वातावरणात पार पडला.
यावेळी विद्यार्थ्यांनी मोठ्या आनंदाने आपल्या बचत खात्यांमध्ये रक्कम जमा करत बचतीचा संकल्प अधिक दृढ केला. आर्थिक शिस्त, जबाबदारीची जाणीव आणि भविष्यासाठी नियोजन करण्याची वृत्ती विद्यार्थ्यांमध्ये विकसित करण्यासाठी हा उपक्रम अत्यंत उपयुक्त ठरत असल्याचे मान्यवरांनी नमूद केले.
कार्यक्रमाला एसडीएमसी अध्यक्ष सुभाष गावडा, उपाध्यक्षा श्रुतिका गावडा, माजी ग्रामपंचायत अध्यक्षा नीलम मादार, मुख्याध्यापक किशोर शितोळे, तसेच एसडीएमसी सदस्य, पालक, शिक्षक व विद्यार्थी मोठ्या संख्येने उपस्थित होते.
विद्यार्थ्यांमध्ये बचतीची संस्कृती रुजविणारा हा उपक्रम परिसरात विशेष चर्चेचा विषय ठरत असून, भविष्यातही अशाच नाविन्यपूर्ण शैक्षणिक उपक्रमांच्या माध्यमातून विद्यार्थ्यांचा सर्वांगीण विकास साधण्याचा शाळेचा निर्धार असल्याचे यावेळी सांगण्यात आले.
ಹೇಮಾಡಗಾ ಶಾಲೆಯ ‘ಶ್ರೀ ಕಲ್ಮೇಶ್ವರ ವಿದ್ಯಾರ್ಥಿ ಉಳಿತಾಯ ಬ್ಯಾಂಕಿನ ಯೋಜನೆ ಕಾರ್ಯ ದ್ವಿತೀಯ ವರ್ಷದ ಶುಭಾರಂಭ ಸಂಭ್ರಮದಿಂದ. ವಿದ್ಯಾರ್ಥಿಗಳಲ್ಲಿ ಉಳಿತಾಯದ ಅಭ್ಯಾಸ, ಆರ್ಥಿಕ ಶಿಸ್ತು ಮತ್ತು ಬ್ಯಾಂಕಿಂಗ್ ಜ್ಞಾನ ಬೆಳೆಸುವ ವಿನೂತನ ಉಪಕ್ರಮ.
ಹೇಮಾಡಗಾ : ಪ್ರತಿನಿಧಿ
ವಿದ್ಯಾರ್ಥಿಗಳು ಬಾಲ್ಯದಿಂದಲೇ ಉಳಿತಾಯದ ಮಹತ್ವವನ್ನು ಅರಿತುಕೊಳ್ಳಬೇಕು, ಆರ್ಥಿಕ ಯೋಜನೆ ರೂಪಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ಬ್ಯಾಂಕಿಂಗ್ ವ್ಯವಹಾರಗಳ ಪ್ರಾಥಮಿಕ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಹೇಮಾಡಗಾ ಗ್ರಾಮದ ಶಾಲೆಯಲ್ಲಿ ಆರಂಭಿಸಲಾದ ‘ಶ್ರೀ ಕಲ್ಮೇಶ್ವರ ವಿದ್ಯಾರ್ಥಿ ಉಳಿತಾಯ ಬ್ಯಾಂಕ್ ಯೋಜನೆ’ ಯಶಸ್ವಿಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸಿದೆ. ವಿದ್ಯಾರ್ಥಿಗಳಿಂದ ದೊರೆತ ಉತ್ಸಾಹಭರಿತ ಸ್ಪಂದನೆಯ ಹಿನ್ನೆಲೆಯಲ್ಲಿ ಇದರ ದ್ವಿತೀಯ ವರ್ಷದ ಆರಂಭವನ್ನು ಅತ್ಯಂತ ಸಂಭ್ರಮದಿಂದ ನೆರವೇರಿಸಲಾಯಿತು.
ಜುಲೈ 2025ರಲ್ಲಿ ಆರಂಭಗೊಂಡ ಈ ವಿದ್ಯಾರ್ಥಿ ಉಳಿತಾಯ ಬ್ಯಾಂಕ್ ಮೂಲಕ ವಿದ್ಯಾರ್ಥಿಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಡಿದ ಉಳಿತಾಯದ ಮೊತ್ತವನ್ನು ಇತ್ತೀಚೆಗೆ ಅವರಿಗೆ ಹಿಂತಿರುಗಿ ಸಲಾಯಿತು. ನಂತರ ಗುರುವಾರ (ಜೂನ್ 18) ಎಸ್ಡಿಎಂಸಿ ಪದಾಧಿಕಾರಿಗಳು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ದ್ವಿತೀಯ ವರ್ಷದ ಉದ್ಘಾಟನಾ ಸಮಾರಂಭವು ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂತೋಷದಿಂದ ತಮ್ಮ ಉಳಿತಾಯ ಖಾತೆಗಳಿಗೆ ಹಣವನ್ನು ಜಮಾ ಮಾಡುವ ಮೂಲಕ ಉಳಿತಾಯದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದರು. ವಿದ್ಯಾರ್ಥಿಗಳಲ್ಲಿ ಆರ್ಥಿಕ ಶಿಸ್ತು, ಜವಾಬ್ದಾರಿಯ ಅರಿವು ಹಾಗೂ ಭವಿಷ್ಯಕ್ಕಾಗಿ ಯೋಜನೆ ರೂಪಿಸುವ ಮನೋಭಾವವನ್ನು ಬೆಳೆಸಲು ಈ ಉಪಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸುಭಾಷ್ ಗಾವಡಾ, ಉಪಾಧ್ಯಕ್ಷೆ ಶ್ರುತಿಕಾ ಗಾವಡಾ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಂ ಮದಾರ, ಮುಖ್ಯೋಪಾಧ್ಯಾಯ ಕಿಶೋರ್ ಶಿತೋಳೆ, ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ಉಳಿತಾಯದ ಸಂಸ್ಕೃತಿಯನ್ನು ಬೆಳೆಸುತ್ತಿರುವ ಈ ಉಪಕ್ರಮವು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಶೇಷ ಚರ್ಚೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ವಿನುತನ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಯು ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.


