क्रॉस-व्होटिंगने भाजप-जेडीएस आघाडीला मोठा धक्का!हायकमांडचा कडक पवित्रा; चौकशी समिती स्थापन, विजयेंद्र-अशोक यांना दिल्लीचे समन्स.
बेंगळुरू : वृत्तसंस्थाविधान परिषदेच्या सात जागांसाठी झालेल्या निवडणुकीत भाजप-जेडीएस आघाडीतील आमदारांकडून झालेल्या कथित क्रॉस-व्होटिंगमुळे राज्यातील राजकीय वातावरण तापले असून, या प्रकरणाची भाजपच्या केंद्रीय नेतृत्वाने गंभीर दखल घेतली आहे. आघाडीच्या उमेदवारांच्या पराभवानंतर पक्षश्रेष्ठींनी चौकशीची सूत्रे हाती घेत विशेष समितीची स्थापना केली आहे.
विधान परिषदेच्या सात जागांसाठी झालेल्या निवडणुकीत भाजप-जेडीएस आघाडीतील आमदारांकडून झालेल्या कथित क्रॉस-व्होटिंगमुळे राज्यातील राजकीय वातावरण तापले असून, या प्रकरणाची भाजपच्या केंद्रीय नेतृत्वाने गंभीर दखल घेतली आहे. आघाडीच्या उमेदवारांच्या पराभवानंतर पक्षश्रेष्ठींनी चौकशीची सूत्रे हाती घेत विशेष समितीची स्थापना केली आहे.
या पार्श्वभूमीवर भाजपचे प्रदेशाध्यक्ष बी. वाय. विजयेंद्र, विरोधी पक्षनेते आर. अशोक आणि राज्य प्रभारी राधा मोहन दास अग्रवाल यांना 23 जून रोजी दिल्लीत उपस्थित राहण्याचे निर्देश देण्यात आले आहेत. पक्षाच्या मतांमध्ये झालेल्या गळतीबाबत सविस्तर अहवाल सादर करण्यासही सांगण्यात आल्याची माहिती मिळाली आहे.
विधान परिषदेच्या निवडणुकीत भाजप-जेडीएस आघाडीला अपेक्षित यश मिळाले नाही. पक्षांतर्गत मतभेद आणि नाराजीचा फटका मतदान प्रक्रियेत बसल्याचे दिसून आले. सूत्रांच्या माहितीनुसार, भाजपचे 4 ते 5 आणि जेडीएसचे 6 ते 7 आमदारांनी पक्षाच्या अधिकृत भूमिकेविरुद्ध मतदान केल्याची शक्यता व्यक्त केली जात आहे. यामुळे काँग्रेसच्या उमेदवारांना अतिरिक्त 11 मते मिळाल्याचे सांगितले जात असून, आघाडीच्या पराभवामागे हीच प्रमुख कारणे मानली जात आहेत.
घडलेल्या प्रकाराची सखोल चौकशी करण्यासाठी भाजपने वरिष्ठ नेते सी. टी. रवी, एन. महेश आणि महेश तेंगीनकाई यांचा समावेश असलेली विशेष समिती नेमली आहे. ही समिती आमदारांच्या मतदानाचा अभ्यास करून क्रॉस-व्होटिंगसाठी जबाबदार असलेल्या सदस्यांची ओळख पटविणार आहे. दोषी आढळणाऱ्यांवर कठोर पक्षशिस्तीची कारवाई होण्याची शक्यता वर्तविली जात आहे.
दरम्यान, प्रदेशाध्यक्ष विजयेंद्र यांनी माध्यमांशी बोलताना पक्षातील काही आमदारांनी अपेक्षेप्रमाणे मतदान केले नसल्याचे मान्य केले. “क्रॉस-व्होटिंग करणाऱ्यांना माफ करण्याचा प्रश्नच उद्भवत नाही. या घडामोडीमागे कोण आहे, याची माहिती आमच्याकडे आहे. संपूर्ण परिस्थितीची माहिती केंद्रीय नेतृत्वाला दिली जाईल,” असे त्यांनी स्पष्ट केले.
राज्यातील आगामी राजकीय समीकरणांवर या घटनेचा परिणाम होण्याची शक्यता व्यक्त होत आहे. विशेषतः भाजप-जेडीएस आघाडीतील अंतर्गत समन्वय, पक्षनिष्ठा आणि नेतृत्वावरील विश्वास या मुद्द्यांवर आता नव्याने चर्चा सुरू झाली आहे. दिल्लीतील बैठकीनंतर पक्षश्रेष्ठी कोणता निर्णय घेतात, याकडे राज्याच्या राजकीय वर्तुळाचे लक्ष लागले आहे.
ಕ್ರಾಸ್ ವೋಟಿಂಗ್: ತನಿಖೆಗೆ ಹೈಕಮಾಂಡ್ ಸಮಿತಿ!
ವಿಜಯೇಂದ್ರ ಮತ್ತು ಆರ್. ಅಶೋಕ್ ಅವರಿಗೆ ಜೂನ್ 23ರಂದು ದೆಹಲಿಗೆ ಬರುವಂತೆ ಸೂಚನೆ!
ಬೆಂಗಳೂರು : ಸುದ್ದಿ ಸಂಸ್ಥೆ
ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ 11 ಶಾಸಕರು ಕ್ರಾಸ್ ವೋಟಿಂಗ್ ನಡೆಸಿರುವ ವಿಚಾರವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತನಿಖಾ ಸಮಿತಿಯನ್ನು ರಚಿಸಿದೆ. ಜೊತೆಗೆ ರಾಜ್ಯದ ಪ್ರಮುಖ ನಾಯಕರನ್ನು ದೆಹಲಿಗೆ ಬರಲು ಸೂಚಿಸಿದೆ.
ತಮ್ಮದೇ ಪಕ್ಷದ ಶಾಸಕರು ಕ್ರಾಸ್ ವೋಟಿಂಗ್ ನಡೆಸಿರುವುದರಿಂದ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್ ಅವರನ್ನು ಜೂನ್ 23ರಂದು ದೆಹಲಿಗೆ ಹಾಜರಾಗುವಂತೆ ಸೂಚಿಸಿದೆ.
ವಿಧಾನ ಪರಿಷತ್ತಿನ 7 ಸ್ಥಾನಗಳಿಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಒಟ್ಟು 11 ಶಾಸಕರು ಕ್ರಾಸ್ ವೋಟಿಂಗ್ ನಡೆಸಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಹೆಚ್ಚುವರಿಯಾಗಿ 11 ಮತಗಳು ದೊರೆತಿದ್ದು, ಮೈತ್ರಿಕೂಟಕ್ಕೆ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಮೈತ್ರಿಕೂಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕ್ರಾಸ್ ವೋಟಿಂಗ್ ವಿಚಾರವಾಗಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದೆ.
ಅಲ್ಲದೆ, ಕ್ರಾಸ್ ವೋಟಿಂಗ್ ನಡೆಸಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸಿ.ಟಿ. ರವಿ, ಎನ್. ಮಹೇಶ್ ಹಾಗೂ ಮಹೇಶ್ ತೆಂಗಿನಕಾಯಿ ಅವರನ್ನು ಒಳಗೊಂಡ ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗಿದೆ. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಶಾಸಕರು ನಡೆಸಿದ ಕ್ರಾಸ್ ವೋಟಿಂಗ್ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಪಕ್ಷದ ವಲಯಗಳು ಅಭಿಪ್ರಾಯಪಟ್ಟಿವೆ.
“ಪಕ್ಷದ ನಿರೀಕ್ಷೆಯಂತೆ ಮತದಾನ ನಡೆದಿಲ್ಲ. ಸುಮಾರು 4 ರಿಂದ 5 ಬಿಜೆಪಿ ಶಾಸಕರು ಹಾಗೂ 6 ರಿಂದ 7 ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ನಮ್ಮ ಪಕ್ಷದ ಶಾಸಕರನ್ನು ಕ್ಷಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ರಾಜಕೀಯ ನಾಟಕವನ್ನು ಯಾರು ನಡೆಸಿರಬಹುದು ಎಂಬುದರ ಕುರಿತು ನಮಗೆ ಈಗಾಗಲೇ ಮಾಹಿತಿ ಇದೆ,” ಎಂದು ಹೇಳಿದರು.
ಪರಿಸ್ಥಿತಿಯ ಕುರಿತು ವಿವರಣೆ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಭೇಟಿಗೆ ಸಮಯ ಕೋರಿರುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.
“ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ವಿಧಾನ ಪರಿಷತ್ ಚುನಾವಣೆಯ ಕ್ರಾಸ್ ವೋಟಿಂಗ್ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲು ನಾನು ಸಮಯ ಕೋರಿದ್ದೇನೆ. ಬಹುಶಃ ಅವರು ಸೋಮವಾರ ಭೇಟಿಗೆ ಅವಕಾಶ ನೀಡಬಹುದು. ನಾನು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಈ ವಿಷಯದ ಸಂಪೂರ್ಣ ವಿವರ ಮತ್ತು ಸ್ಪಷ್ಟನೆ ನೀಡುತ್ತೇನೆ,” ಎಂದು ವಿಜಯೇಂದ್ರ ಹೇಳಿದರು.


