अळणावर येथे हिंदू एकता वेदिकेतर्फे ‘नारी प्रबोधन’ कार्यक्रम; सनातन संस्कार पुढील पिढीपर्यंत पोहोचविण्याचे आवाहन.
अळणावर (प्रतिनिधी) : आपल्या परंपरेत खोलवर रुजलेला सनातन धर्म हा जगातील सर्वात प्राचीन जीवनपद्धतींपैकी एक असून, उत्तम मूल्ये, नैतिकता आणि समाजातील सामंजस्यपूर्ण जीवनाचा मार्ग दाखवतो. या संस्कारांचा आणि परंपरांचा परिचय नव्या पिढीला करून देणे ही प्रत्येकाची जबाबदारी आहे, असे प्रतिपादन धार्मिक विचारवंत हरिओम सुधाकर के. शेट्टी यांनी केले.

अळ्णावर येथील उमा भवन येथे रविवारी हिंदू एकता वेदिकेच्या वतीने आयोजित हिंदू युवती व महिला जागृती अभियानांतर्गत ‘नारी प्रबोधन’ कार्यक्रमात गोमाता, तुळस आणि भारतमातेच्या प्रतिमेचे पूजन करून कार्यक्रमाचे उद्घाटन करण्यात आले. यावेळी ते बोलत होते.
ते म्हणाले की, संस्कारवान व्यक्तीमुळे सुसंस्कृत कुटुंब निर्माण होते आणि सुदृढ कुटुंबातून सक्षम समाज व राष्ट्र घडते. विज्ञान-तंत्रज्ञान कितीही प्रगत झाले तरी आपली संस्कृती, साहित्य, परंपरा, ज्येष्ठांचे विचार आणि मूल्ये विसरता कामा नयेत. त्यांचे पालन केल्यास समाजात सौहार्द आणि शांतता टिकून राहते.
‘हिंदू नारी आणि कौटुंबिक संबंध’ या विषयावर मार्गदर्शन करताना श्रीमद् परमहंस परिव्राजकाचार्य सत्यप्रमोदेंद्र सरस्वती स्वामीजी म्हणाले की, हिंदू कुटुंब व्यवस्थेत आई, पत्नी आणि मुलगी या कुटुंबाच्या आधारस्तंभ आहेत. प्रेम, त्याग, संयम, करुणा आणि संस्कार यांच्या बळावर कुटुंब एकत्र ठेवण्यामध्ये महिलांची भूमिका अत्यंत महत्त्वाची आहे. परस्पर प्रेम, विश्वास आणि ज्येष्ठांचा आदर राखून कौटुंबिक नाती अधिक दृढ करावीत, असे त्यांनी सांगितले.
‘लव्ह जिहाद’ या विषयावर हिंदू जनजागृती समितीच्या रणरागिणी विभागाच्या जिल्हा संघटक भव्या गौडा यांनी मार्गदर्शन केले. प्रेमाच्या नावाखाली होणारी फसवणूक, धोका आणि सक्तीच्या प्रकारांविषयी तरुणींमध्ये जागृती निर्माण होणे आवश्यक असल्याचे त्यांनी नमूद केले. विवेकपूर्ण निर्णय घेऊन सुरक्षित आणि सौहार्दपूर्ण समाज उभारण्यासाठी सर्वांनी योगदान द्यावे, असे आवाहन त्यांनी केले.
कार्यक्रमाला महादेव सागरकर, पांडुरंग रेवणकर, उदय शिब्रिकेरी, नागरत्ना हिरेमठ, सुमा सोप्पी, जयश्री सोप्पी, यल्लुबाई काकतकर, कविता रांदेवाडी, चंद्रहास कडकॊळ यांच्यासह अनेक महिला व नागरिक उपस्थित होते. नागरत्ना उडुपी यांनी प्रार्थना सादर केली. राजू कर्लेकर यांनी प्रास्ताविक केले, तर प्रभाकर शास्त्री यांनी शंखनाद केला. वै. व्ही. शिंपी यांनी उपस्थित मान्यवरांचा परिचय करून दिला.
ಅಳ್ನಾವರದಲ್ಲಿ ಹಿಂದೂ ಏಕತಾ ವೇದಿಕೆಯಿಂದ ‘ನಾರಿ ಪ್ರಬೋಧನ’ ಕಾರ್ಯಕ್ರಮ; ಸನಾತನ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವಂತೆ ಕರೆ.
ಅಳ್ನಾವರ (ಪ್ರತಿನಿಧಿ): ನಮ್ಮ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಸನಾತನ ಧರ್ಮವು ವಿಶ್ವದ ಅತ್ಯಂತ ಪ್ರಾಚೀನ ಜೀವನ ಪದ್ಧತಿಗಳಲ್ಲಿ ಒಂದಾಗಿದ್ದು, ಉತ್ತಮ ಮೌಲ್ಯಗಳು, ನೈತಿಕತೆ ಹಾಗೂ ಸಮಾಜದಲ್ಲಿ ಸಾಮರಸ್ಯಯುತ ಜೀವನ ನಡೆಸುವ ಮಾರ್ಗವನ್ನು ತೋರಿಸುತ್ತದೆ. ಈ ಸಂಸ್ಕಾರಗಳು ಮತ್ತು ಪರಂಪರೆಗಳ ಪರಿಚಯವನ್ನು ಹೊಸ ಪೀಳಿಗೆಗೆ ಮಾಡಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಧಾರ್ಮಿಕ ಚಿಂತಕರಾದ ಹರಿಓಂ ಸುಧಾಕರ್ ಕೆ. ಶೆಟ್ಟಿ ಅವರು ಹೇಳಿದರು.
ಅಳ್ನಾವರದ ಉಮಾ ಭವನದಲ್ಲಿ ಭಾನುವಾರ ಹಿಂದೂ ಏಕತಾ ವೇದಿಕೆ ವತಿಯಿಂದ ಹಿಂದೂ ಯುವತಿಯರು ಹಾಗೂ ಮಹಿಳೆಯರ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ‘ನಾರಿ ಪ್ರಬೋಧನ’ ಕಾರ್ಯಕ್ರಮದಲ್ಲಿ ಗೋಮಾತೆ, ತುಳಸಿ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಅವರು ಮಾತನಾಡಿ, ಸಂಸ್ಕಾರವಂತ ವ್ಯಕ್ತಿಯಿಂದ ಸುಸಂಸ್ಕೃತ ಕುಟುಂಬ ನಿರ್ಮಾಣವಾಗುತ್ತದೆ. ಸುಸಂಸ್ಕೃತ ಕುಟುಂಬಗಳಿಂದಲೇ ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಸಂಸ್ಕೃತಿ, ಸಾಹಿತ್ಯ, ಪರಂಪರೆ, ಹಿರಿಯರ ಚಿಂತನೆಗಳು ಮತ್ತು ಜೀವನ ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ಅವುಗಳನ್ನು ಪಾಲಿಸಿದರೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಿದರು.
‘ಹಿಂದೂ ನಾರಿ ಮತ್ತು ಕುಟುಂಬ ಸಂಬಂಧಗಳು’ ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಿದ ಶ್ರೀಮದ್ ಪರಮಹಂಸ ಪರಿವ್ರಾಜಕಾಚಾರ್ಯ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಅವರು, ಹಿಂದೂ ಕುಟುಂಬ ವ್ಯವಸ್ಥೆಯಲ್ಲಿ ತಾಯಿ, ಪತ್ನಿ ಮತ್ತು ಪುತ್ರಿಯರು ಕುಟುಂಬದ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ. ಪ್ರೀತಿ, ತ್ಯಾಗ, ಸಂಯಮ, ಕರುಣೆ ಮತ್ತು ಸಂಸ್ಕಾರದ ಬಲದಿಂದ ಕುಟುಂಬವನ್ನು ಒಗ್ಗೂಡಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಹಿರಿಯರಿಗೆ ಗೌರವ ನೀಡುವ ಮೂಲಕ ಕುಟುಂಬ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ತಿಳಿಸಿದರು.
‘ಲವ್ ಜಿಹಾದ್’ ವಿಷಯದ ಕುರಿತು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ವಿಭಾಗದ ಜಿಲ್ಲಾ ಸಂಘಟಕಿ ಭವ್ಯಾ ಗೌಡ ಅವರು ಮಾತನಾಡಿ, ಪ್ರೀತಿಯ ಹೆಸರಿನಲ್ಲಿ ನಡೆಯುವ ಮೋಸ, ವಂಚನೆ ಹಾಗೂ ಬಲವಂತದ ಘಟನೆಗಳ ಕುರಿತು ಯುವತಿಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ವಿವೇಕಪೂರ್ಣ ನಿರ್ಧಾರಗಳನ್ನು ಕೈಗೊಂಡು ಸುರಕ್ಷಿತ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾದೇವ ಸಾಗರಕರ, ಪಾಂಡುರಂಗ ರೇವಣಕರ, ಉದಯ ಶಿಬ್ರಿಕೇರಿ, ನಾಗರತ್ನ ಹಿರೇಮಠ, ಸುಮಾ ಸೊಪ್ಪಿ, ಜಯಶ್ರೀ ಸೊಪ್ಪಿ, ಯಲ್ಲುಬಾಯಿ ಕಾಕತ್ಕರ್, ಕವಿತಾ ರಾಂದೇವಾಡಿ, ಚಂದ್ರಹಾಸ ಕಡಕೋಳ ಸೇರಿದಂತೆ ಅನೇಕ ಮಹಿಳೆಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ನಾಗರತ್ನ ಉಡುಪಿ ಅವರು ಪ್ರಾರ್ಥನೆ ಸಲ್ಲಿಸಿದರು. ರಾಜು ಕರ್ಲೆಕರ ಅವರು ಪ್ರಾಸ್ತಾವಿಕ ಮಾಡಿದರು. ಪ್ರಭಾಕರ ಶಾಸ್ತ್ರಿ ಅವರು ಶಂಖನಾದ ಮಾಡಿದರು. ವೈ. ವಿ. ಶಿಂಪಿ ಅವರು ಆಗಮಿಸಿದ್ದ ಗಣ್ಯರ ಪರಿಚಯ ಮಾಡಿಕೊಟ್ಟರು.

