खानापूर महाराष्ट्र एकीकरण समितीच्या पाठपुराव्याला यश; केसरेकर कुटुंबीयांसाठी वरिष्ठ विधिज्ञांची नियुक्ती.
सांगली : कुपवाड, जि. सांगली येथे 15 ऑगस्ट 2026 रोजी घडलेल्या दुर्दैवी घटनेत मृत्यू झालेल्या सौ. मनीषा केसरेकर व श्री. मोहन नागप्पा केसरेकर यांच्या कुटुंबीयांना पीडित नुकसानभरपाई तसेच मोफत कायदेशीर सहाय्य मिळण्यासाठी जिल्हा विधी सेवा प्राधिकरण, सांगलीने पुढाकार घेतला आहे.
खानापूर तालुका महाराष्ट्र एकीकरण समितीच्या वतीने 20 ऑगस्ट रोजी करण्यात आलेल्या मागणीच्या अनुषंगाने जिल्हा विधी सेवा प्राधिकरणाने वरिष्ठ विधिज्ञ श्री. जे. व्ही. नवले यांची नियुक्ती केली आहे. सदर विधिज्ञ केसरेकर कुटुंबीयांना पीडित नुकसानभरपाई मिळवून देण्याबाबत तसेच मोफत कायदेशीर सल्ला व मार्गदर्शन करणार आहेत.
जिल्हा विधी सेवा प्राधिकरणाचे सचिव गि. ग. कांबळे यांनी 3 सप्टेंबर 2026 रोजी यासंदर्भात पत्र जारी केले आहे. संबंधित पीडितांच्या वारसांनी नियुक्त वरिष्ठ विधिज्ञांशी संपर्क साधून आवश्यक माहिती व कागदपत्रे उपलब्ध करून द्यावीत, असे आवाहन करण्यात आले आहे.
तसेच, या कार्यवाहीबाबत महाराष्ट्र राज्य विधी सेवा प्राधिकरण, मुंबई यांनाही जिल्हा विधी सेवा प्राधिकरणाकडून कळविण्यात आले आहे. अर्जदार खानापूर तालुका महाराष्ट्र एकीकरण समितीच्या वतीने दिलेल्या 9449154097 या मोबाईल क्रमांकावर तसेच वैयक्तिक पत्राद्वारे संबंधितांना माहिती देण्यात आल्याचे पत्रात नमूद करण्यात आले आहे.
या निर्णयामुळे केसरेकर कुटुंबीयांना कायदेशीर लढ्यासाठी आवश्यक मार्गदर्शन मिळण्याबरोबरच पीडित नुकसानभरपाई मिळविण्याच्या प्रक्रियेला गती मिळण्याची अपेक्षा व्यक्त होत आहे.
ಖಾನಾಪುರ ಮಹಾರಾಷ್ಟ್ರ ಏಕೀಕರಣ ಸಮಿತಿಯ ಹೋರಾಟಕ್ಕೆ ಯಶಸ್ಸು; ಸಮರ್ಪಕ ವಾದ ಮಂಡಿಸಲು ಕೇಸರೆಕರ ಕುಟುಂಬಕ್ಕೆ ಹಿರಿಯ ವಕೀಲರ ನೇಮಕ.
ಸಾಂಗ್ಲಿ : ಕುಪವಾಡ, ಜಿ. ಸಾಂಗ್ಲಿ ಇಲ್ಲಿ 15 ಆಗಸ್ಟ್ 2026ರಂದು ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಸೌ. ಮನಿಷಾ ಕೇಸರೆಕರ ಹಾಗೂ ಶ್ರೀ. ಮೋಹನ್ ನಾಗಪ್ಪ ಕೇಸರೆಕರ ಅವರ ಕುಟುಂಬದವರಿಗೆ ಸಂತ್ರಸ್ತರ ಪರಿಹಾರಧನ ಹಾಗೂ ಉಚಿತ ಕಾನೂನು ನೆರವು ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾಂಗ್ಲಿ ಮುಂದಾಳತ್ವ ವಹಿಸಿದೆ.
ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಆಗಸ್ಟ್ 20ರಂದು ಮಾಡಲಾದ ಮನವಿಯ ಹಿನ್ನೆಲೆಯಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಹಿರಿಯ ವಕೀಲರಾದ ಶ್ರೀ. ಜೆ. ವಿ. ನವಲೆ ಅವರನ್ನು ನೇಮಕ ಮಾಡಿದೆ. ಸಂಬಂಧಿತ ವಕೀಲರು ಕೇಸರೆಕರ ಕುಟುಂಬದವರಿಗೆ ಸಂತ್ರಸ್ತರ ಪರಿಹಾರಧನ ದೊರಕಿಸಿಕೊಡುವ ಕುರಿತು ಹಾಗೂ ಉಚಿತ ಕಾನೂನು ಸಲಹೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಗಿ. ಗ. ಕಾಂಬಳೆ ಅವರು ಸೆಪ್ಟೆಂಬರ್ 3, 2026ರಂದು ಈ ಕುರಿತು ಪತ್ರವನ್ನು ಹೊರಡಿಸಿದ್ದಾರೆ. ಸಂಬಂಧಿತ ಸಂತ್ರಸ್ತರ ವಾರಸುದಾರರು ನೇಮಕಗೊಂಡ ಹಿರಿಯ ವಕೀಲರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಇದೇ ವೇಳೆ, ಈ ಕ್ರಮದ ಕುರಿತು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮುಂಬೈ ಅವರಿಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾಹಿತಿ ನೀಡಲಾಗಿದೆ.
ಅರ್ಜಿದಾರರಾದ ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ನೀಡಲಾಗಿರುವ 9449154097 ಮೊಬೈಲ್ ಸಂಖ್ಯೆಯ ಮೂಲಕ ಹಾಗೂ ವೈಯಕ್ತಿಕ ಪತ್ರದ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ.
ಈ ನಿರ್ಧಾರದಿಂದ ಕೇಸರೆಕರ ಕುಟುಂಬಕ್ಕೆ ಕಾನೂನು ಹೋರಾಟಕ್ಕೆ ಅಗತ್ಯವಾದ ಸಲಹೆ ಮತ್ತು ಮಾರ್ಗದರ್ಶನ ದೊರಕುವುದರ ಜೊತೆಗೆ, ಸಂತ್ರಸ್ತರ ಪರಿಹಾರಧನ ಪಡೆಯುವ ಪ್ರಕ್ರಿಯೆಗೂ ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

