हलकर्णी, होनकल, खेमेवाडी व हत्तरगुंजी क्रॉसवर सेवा रस्ते, VUP व स्ट्रीट लाईटची मागणी ; खासदार विश्वेश्वर हेगडे-कागेरी यांची निवेदन.
खानापूर : खानापूर तालुक्यातील हलकर्णी, होनकल, खेमेवाडी आणि हत्तरगुंजी क्रॉस परिसरातून जाणाऱ्या NH-4A (बेळगाव–पणजी) महामार्गावर नागरिकांच्या सुरक्षेसाठी सेवा रस्ते, वाहनांसाठी अंडरपास (VUP) आणि स्ट्रीट लाईटची सुविधा उपलब्ध करून द्यावी, अशी मागणी खासदार विश्वेश्वर हेगडे-कागेरी यांनी केली आहे.
यासंदर्भात खासदार कागेरी यांनी दि. 21 ऑगस्ट 2026 रोजी राष्ट्रीय महामार्ग प्राधिकरणाच्या (NHAI) धारवाड प्रकल्प अंमलबजावणी विभागाच्या (PIU) प्रकल्प संचालकांना निवेदन सादर केले आहे. या समस्या सोडविण्यासंदर्भात भाजपाचे राज्य कार्यकारिणी सदस्य प्रमोद कोचेरी यांनी खासदार विश्वेश्वर हेगडे-कागेरी यांच्याकडे पाठपुरावा करण्यासंदर्भात मागणी केली होती त्याला अनुसरून खासदार हेगडे यांनी वरील निवेदन सादर केले आहे.
हलकर्णी, होनकल, खेमेवाडी आणि हत्तरगुंजी परिसर हा मोठ्या प्रमाणावर कृषी क्षेत्र असलेला भाग आहे. या परिसरातील शेतकरी, पादचारी तसेच पशुधनाला महामार्ग ओलांडताना दररोज मोठ्या धोक्याचा सामना करावा लागत आहे. विशेषतः होनकल क्रॉस आणि हत्तरगुंजी क्रॉस येथे आवश्यक सुरक्षा सुविधांचा अभाव असल्याने हे ठिकाण अपघातप्रवण बनले असल्याचे निवेदनात नमूद करण्यात आले आहे.
या समस्या सोडविण्यासंदर्भात भाजपाचे राज्य कार्यकारिणी सदस्य प्रमोद कोचेरी यांनी खासदार विश्वेश्वर हेगडे-कागेरी त्यांच्याकडे पाठपुरावा करण्यासंदर्भात मागणी केली होती त्याला अनुसरून खासदार हेगडे यांनी वरील निवेदन सादर केले आहे.
NHAIच्या सुरू असलेल्या कामांत सुविधांचा समावेश करण्याची मागणी..
महामार्गावरील सुरक्षेच्या दृष्टीने सुरू असलेल्या NHAIच्या कामांत पुढील सुविधांचा समावेश करावा, अशी मागणी करण्यात आली आहे.
होनकल–हलकर्णी–खेमेवाडी–हत्तरगुंजी जोडणारे सेवा रस्ते
महामार्ग ओलांडण्यासाठी Vehicular Underpass (VUP)
महत्त्वाच्या चौकांवर स्ट्रीट लाईट व हाय-मास्ट लाईटची सुविधा
नागरिकांच्या सुरक्षिततेचा गंभीर प्रश्न लक्षात घेऊन या मागण्यांना तातडीने मंजुरी देऊन आवश्यक कार्यवाही करण्याचे निर्देश NHAIच्या संबंधित अधिकाऱ्यांना द्यावेत, अशी विनंती खासदार विश्वेश्वर हेगडे-कागेरी यांनी केली आहे.
महामार्गावरील वाहतूक वाढत असताना स्थानिक शेतकरी, विद्यार्थी, पादचारी आणि ग्रामस्थांच्या सुरक्षिततेसाठी या सुविधा अत्यंत आवश्यक असल्याचेही निवेदनातून स्पष्ट करण्यात आले आहे.
ಹಲಕರ್ಣಿ, ಹೊನಕಲ್, ಖೇಮೇವಾಡಿ ಹಾಗೂ ಹತ್ತರಗುಂಜಿ ಕ್ರಾಸ್ ಬಳಿ ಸರ್ವಿಸ್ ರಸ್ತೆ, VUP ಹಾಗೂ ಸ್ಟ್ರೀಟ್ಲೈಟ್ಗಳ ಅಳವಡಿಸಲು ಬೇಡಿಕೆ ; ಸಂಸದ ಹೆಗಡೆಯವರ ಹೇಳಿಕೆ.
ಖಾನಾಪುರ : ಖಾನಾಪುರ ತಾಲೂಕಿನ ಹಲಕರ್ಣಿ, ಹೊನಕಲ್, ಖೇಮೇವಾಡಿ ಹಾಗೂ ಹತ್ತರಗುಂಜಿ ಕ್ರಾಸ್ ಬಳಿ ಯಿಂದ ಹಾದುಹೋಗುವ NH-4A (ಬೆಳಗಾವಿ–ಪಣಜಿ) ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸರ್ವಿಸ್ ರಸ್ತೆಗಳು, ವಾಹನಗಳ ಸಂಚಾರಕ್ಕಾಗಿ ಅಂಡರ್ಪಾಸ್ (VUP) ಹಾಗೂ ಸ್ಟ್ರೀಟ್ಲೈಟ್ಗಳ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಸಂಸದ ಕಾಗೇರಿ ಅವರು ದಿ. 21 ಆಗಸ್ಟ್ 2026 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಧಾರವಾಡ ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಯುನಿಟ್ (PIU)ನ ಪ್ರಾಜೆಕ್ಟ್ ಡೈರೆಕ್ಟರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೊಚೇರಿ ಅವರು ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ, ಈ ವಿಷಯದಲ್ಲಿ ನಿರಂತರವಾಗಿ ಒತ್ತಾಯಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಇದೀಗ NHAI ಅಧಿಕಾರಿಗಳಿಗೆ ಮೇಲ್ಕಂಡ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ಹಲಕರ್ಣಿ, ಹೊನಕಲ್, ಖೇಮೇವಾಡಿ ಹಾಗೂ ಹತ್ತರಗುಂಜಿ ಪ್ರದೇಶವು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಪ್ರದೇಶವನ್ನು ಹೊಂದಿರುವ ಭಾಗವಾಗಿದೆ. ಈ ಭಾಗದ ರೈತರು, ಪಾದಚಾರಿಗಳು ಹಾಗೂ ಜಾನುವಾರುಗಳು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭದಲ್ಲಿ ಪ್ರತಿದಿನವೂ ಅಪಾಯವನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಹೊನಕಲ್ ಕ್ರಾಸ್ ಹಾಗೂ ಹತ್ತರಗುಂಜಿ ಕ್ರಾಸ್ ಬಳಿ ಅಗತ್ಯ ಸುರಕ್ಷತಾ ಸೌಲಭ್ಯಗಳ ಕೊರತೆಯಿಂದಾಗಿ ಈ ಸ್ಥಳಗಳು ಅಪಘಾತಕ್ಕೆ ಆಹ್ವಾನ ನೀಡುವಂತಹ ಅಪಾಯಕಾರಿ ಪ್ರದೇಶಗಳಾಗಿ ಮಾರ್ಪಟ್ಟಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
NHAIಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲೇ ಸೌಲಭ್ಯಗಳನ್ನು ಸೇರಿಸುವಂತೆ ಬೇಡಿಕೆ
ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ NHAI ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿಯೇ ಕೆಳಗಿನ ಅಗತ್ಯ ಸೌಲಭ್ಯಗಳನ್ನು ಸೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹೊನಕಲ್–ಹಲಕರ್ಣಿ–ಖೇಮೇವಾಡಿ–ಹತ್ತರಗುಂಜಿ ಸಂಪರ್ಕಿಸುವ ಸರ್ವಿಸ್ ರಸ್ತೆಗಳ ನಿರ್ಮಾಣ
ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು Vehicular Underpass (VUP) ನಿರ್ಮಾಣ
ಪ್ರಮುಖ ಕ್ರಾಸ್ಗಳು ಹಾಗೂ ಜಂಕ್ಷನ್ಗಳಲ್ಲಿ ಸ್ಟ್ರೀಟ್ಲೈಟ್ ಮತ್ತು ಹೈಮಾಸ್ಟ್ ಲೈಟ್ಗಳ ಅಳವಡಿಕೆ
ಸ್ಥಳೀಯ ನಾಗರಿಕರ ಸುರಕ್ಷತೆಯ ಗಂಭೀರ ಸಮಸ್ಯೆಯನ್ನು ಪರಿಗಣಿಸಿ, ಮೇಲ್ಕಂಡ ಬೇಡಿಕೆಗಳಿಗೆ ತಕ್ಷಣ ಅನುಮೋದನೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ NHAIಯ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಮನವಿಯಲ್ಲಿ ವಿನಂತಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ರೈತರು, ವಿದ್ಯಾರ್ಥಿಗಳು, ಪಾದಚಾರಿಗಳು ಹಾಗೂ ಗ್ರಾಮಸ್ಥರ ಸುರಕ್ಷತೆಗಾಗಿ ಸರ್ವಿಸ್ ರಸ್ತೆ, VUP ಹಾಗೂ ಬೆಳಕಿನ ವ್ಯವಸ್ಥೆಗಳು ಅತ್ಯಂತ ಅಗತ್ಯವಾಗಿವೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.

