हलसाल शाळेतील शिक्षकावर मद्यधुंद अवस्थेत शाळेत येणे, गुटखा-तंबाखू सेवनाचे गंभीर आरोप; पालक व ग्रामस्थांची चौकशीसह बदलीची मागणी.
खानापूर : प्रतिनिधी
खानापूर तालुक्यातील हलसाल येथील सरकारी मराठी उच्च प्राथमिक शाळेतील (एमएचपीएस) एका कन्नड शिक्षकाविरोधात मद्यधुंद अवस्थेत शाळेत येणे, तंबाखू-गुटखा सेवन करणे, वारंवार गैरहजर राहणे आणि विद्यार्थ्यांकडे दुर्लक्ष करणे असे गंभीर आरोप पालक, ग्रामस्थ आणि शाळा विकास व व्यवस्थापन समितीने (एसडीएमसी) केले आहेत. या प्रकरणाची सखोल चौकशी करून संबंधित शिक्षकावर विभागीय नियमानुसार कठोर कारवाई करावी तसेच त्यांच्या जागी सक्षम कन्नड शिक्षकाची नियुक्ती करावी, अशी मागणी भाजपा युवा मोर्चाचे जिल्हा उपाध्यक्ष पंडित ओगले यांच्या नेतृत्वाखाली क्षेत्र शिक्षणाधिकाऱ्यांकडे सादर करण्यात आलेल्या निवेदनातून करण्यात आली आहे.
ग्रामस्थांनी आज सोमवारी 29 जून रोजी शिक्षण अधिकाऱ्यांना दिलेल्या निवेदनानुसार, संबंधित शिक्षकांकडून विद्यार्थ्यांना नियमित व दर्जेदार अध्यापन होत नसल्याने शाळेच्या शैक्षणिक गुणवत्तेवर विपरीत परिणाम होत आहे. शाळेत तंबाखू-गुटखा सेवन करून येणे, तसेच काहीवेळा मद्यधुंद अवस्थेत कर्तव्यावर उपस्थित राहिल्याचा कथित आरोपही पालक व ग्रामस्थांनी केला आहे. त्यामुळे विद्यार्थ्यांच्या आरोग्य, सुरक्षितता आणि शिक्षणाबाबत गंभीर प्रश्न निर्माण झाल्याचे निवेदनात नमूद करण्यात आले आहे.
याशिवाय, शाळेत मराठी माध्यमाच्या विद्यार्थ्यांची संख्या जास्त असताना केवळ दोनच मराठी शिक्षक कार्यरत आहेत. त्यापैकी एक मुख्याध्यापक असल्याने प्रशासकीय जबाबदाऱ्यांमुळे अध्यापनासाठी पुरेसा वेळ मिळत नाही. परिणामी एका शिक्षकावर पहिली ते सातवीपर्यंतच्या सर्व वर्गांचा अध्यापनाचा भार पडत असून विद्यार्थ्यांचे शैक्षणिक नुकसान होत असल्याचे निवेदनात म्हटले आहे.
शाळेसाठी तातडीने एक अतिरिक्त मराठी शिक्षक आणि एक सक्षम कन्नड शिक्षक नियुक्त करावा. कायमस्वरूपी नियुक्तीस विलंब होत असल्यास अतिथी शिक्षकांची नेमणूक करून विद्यार्थ्यांचे नुकसान टाळावे, अशीही मागणी करण्यात आली आहे.
या संदर्भात 8 जून 2026 रोजीही शिक्षण विभागाकडे निवेदन देण्यात आले होते. मात्र अद्याप कोणतीही ठोस कारवाई झालेली नसल्याचा आरोप करत, विद्यार्थ्यांच्या भवितव्याचा विचार करून तातडीने निर्णय घ्यावा, अशी मागणी एसडीएमसी पदाधिकारी, पालक आणि ग्रामस्थांनी केली आहे.
ಹಲಸಾಳ ಸರ್ಕಾರಿ ಶಾಲೆಯ ಶಿಕ್ಷಕರ ವಿರುದ್ಧ ಮದ್ಯಪಾನ ಸ್ಥಿತಿಯಲ್ಲಿ ಶಾಲೆಗೆ ಆಗಮಿಸುವುದು, ಗುಟ್ಕಾ-ತಂಬಾಕು ಸೇವನೆ ಸೇರಿದಂತೆ ಗಂಭೀರ ಆರೋಪ; ಪಾಲಕರು ಹಾಗೂ ಗ್ರಾಮಸ್ಥರಿಂದ ತನಿಖೆ ನಡೆಸಿ ವರ್ಗಾವಣೆ ಮಾಡುವಂತೆ ಆಗ್ರಹ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಹಲಸಾಳ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ (MHPS)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಕನ್ನಡ ಶಿಕ್ಷಕರ ವಿರುದ್ಧ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಶಾಲೆಗೆ ಬರುವುದು, ತಂಬಾಕು-ಗುಟ್ಕಾ ಸೇವನೆ ಮಾಡುವುದು, ಪದೇಪದೇ ಶಾಲೆಗೆ ಗೈರುಹಾಜರಾಗುವುದು ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಕಡೆ ನಿರ್ಲಕ್ಷ್ಯ ವಹಿಸುವುದು ಸೇರಿದಂತೆ ಗಂಭೀರ ಆರೋಪಗಳನ್ನು ಪಾಲಕರು, ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಮಾಡಿದ್ದಾರೆ.
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸಂಬಂಧಿತ ಶಿಕ್ಷಕರ ವಿರುದ್ಧ ಇಲಾಖೆಯ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಅವರ ಸ್ಥಾನಕ್ಕೆ ಸಮರ್ಥ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಓಗಲೆ ಅವರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇಂದು ಸೋಮವಾರ (29 ಜೂನ್) ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯ ಪ್ರಕಾರ, ಸಂಬಂಧಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ನಿಯಮಿತ ಹಾಗೂ ಗುಣಮಟ್ಟದ ಬೋಧನೆ ನೀಡುತ್ತಿಲ್ಲ. ಇದರಿಂದ ಶಾಲೆಯ ಶೈಕ್ಷಣಿಕ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಲಾಗಿದೆ.
ಶಾಲೆಗೆ ತಂಬಾಕು-ಗುಟ್ಕಾ ಸೇವಿಸಿ ಬರುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಮದ್ಯಪಾನ ಮಾಡಿದ ಸ್ಥಿತಿಯಲ್ಲೇ ಕರ್ತವ್ಯಕ್ಕೆ ಹಾಜರಾಗಿರುವರೆಂಬ ಆರೋಪವನ್ನೂ ಪಾಲಕರು ಹಾಗೂ ಗ್ರಾಮಸ್ಥರು ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆ ಹಾಗೂ ಶಿಕ್ಷಣದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಶಾಲೆಯಲ್ಲಿ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೂ ಕೇವಲ ಇಬ್ಬರು ಮರಾಠಿ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಮುಖ್ಯೋಪಾಧ್ಯಾಯರಾಗಿರುವುದರಿಂದ ಆಡಳಿತಾತ್ಮಕ ಜವಾಬ್ದಾರಿಗಳ ಕಾರಣದಿಂದ ಬೋಧನೆಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಒಬ್ಬ ಶಿಕ್ಷಕರ ಮೇಲೆಯೇ ಮೊದಲನೇ ತರಗತಿಯಿಂದ ಏಳನೇ ತರಗತಿವರೆಗೆ ಎಲ್ಲಾ ತರಗತಿಗಳ ಬೋಧನೆಯ ಹೊರೆ ಬಿದ್ದಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಾನಿಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಶಾಲೆಗೆ ತಕ್ಷಣವೇ ಒಬ್ಬ ಹೆಚ್ಚುವರಿ ಮರಾಠಿ ಶಿಕ್ಷಕರನ್ನು ಹಾಗೂ ಒಬ್ಬ ಸಮರ್ಥ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು. ಶಾಶ್ವತ ನೇಮಕಾತಿಗೆ ವಿಳಂಬವಾದಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾನಿಯನ್ನು ತಪ್ಪಿಸಬೇಕು ಎಂದು ಸಹ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಕುರಿತು 2026ರ ಜೂನ್ 8ರಂದು ಸಹ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿರುವ ಎಸ್ಡಿಎಂಸಿ ಪದಾಧಿಕಾರಿಗಳು, ಪಾಲಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.


