केंद्र सरकारच्या सहकार मंत्रालयाच्या पाच वर्षपूर्तीनिमित्त ‘सहकार सप्ताह’ अंतर्गत खानापूरात वृक्षारोपण कार्यक्रम उत्साहात.
खानापूर : प्रतिनिधी
केंद्र सरकारच्या सहकार मंत्रालयाच्या स्थापनेला पाच वर्षे पूर्ण झाल्याच्या निमित्ताने देशभर ‘सहकार सप्ताह’ साजरा करण्यात येत असून, त्याअंतर्गत सोमवारी (दि. 29 जून 2026) रोजी खानापूर येथे “सहकारातून समृद्धीकडे” या संकल्पनेवर आधारित वृक्षारोपण कार्यक्रम दि खानापूर को-ऑपरेटिव्ह बँकेच्या आवारात उत्साहात पार पडला. यावेळी प्रमुख अतिथी म्हणून खानापूर तालुक्याचे आमदार विठ्ठलराव हलगेकर, माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील उपस्थित होते.

हा कार्यक्रम सहकार विभाग, कर्नाटक राज्य सहकार महामंडळ, बेंगळुरू, बेळगाव जिल्हा सहकार युनियन, बेळगाव जिल्हा मध्यवर्ती सहकारी बँक, कर्नाटक राज्य सौहार्द संयुक्त सहकारी संस्था, तसेच दि खानापूर को-ऑपरेटिव्ह बँक लि., खानापूर यांच्या संयुक्त विद्यमाने आयोजित करण्यात आला.
दि खानापूर को-ऑपरेटिव्ह बँकेच्या परिसरात आयोजित या उपक्रमात पर्यावरण संवर्धनाचा संदेश देत विविध मान्यवर, अर्बन को-ऑपरेटिव्ह बँकेचे संचालक तसेच सहकारी संस्थांचे पदाधिकारी, अधिकारी, कर्मचारी आणि सभासद यांनी वृक्षारोपण केले.
यावेळी सहकार चळवळीच्या माध्यमातून समाजाचा सर्वांगीण विकास साधण्याबरोबरच पर्यावरण संरक्षणाची जबाबदारीही प्रत्येकाने स्वीकारावी, असे आवाहन उपस्थित मान्यवरांनी केले. सहकार क्षेत्रातील सामाजिक बांधिलकी जपत अशा उपक्रमांमुळे पर्यावरण संवर्धनास चालना मिळणार असल्याचा विश्वास व्यक्त करण्यात आला.
कार्यक्रमास सामाजिक कार्यकर्ते रवी काटगी, महांतेश कोडोळी, मल्लाप्पा मारीहाळ, पत्रकार विवेक गिरी तसेच बँकेचे संचालक मंडळ व सहकार क्षेत्रातील विविध संस्थेचे पदाधिकारी, कर्मचारी मोठ्या संख्येने उपस्थित होते.
ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಐದು ವರ್ಷದ ಪೂರ್ಣ ವಾದ ಕಾರಣ ‘ಸಹಕಾರ ಸಪ್ತಾಹ’ದ ಅಂಗವಾಗಿ ಖಾನಾಪುರದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಖಾನಾಪುರ : ಪ್ರತಿನಿಧಿ
ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ‘ಸಹಕಾರ ಸಪ್ತಾಹ’ವನ್ನು ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಸೋಮವಾರ (ಜೂನ್ 29, 2026) ರಂದು ಖಾನಾಪುರದಲ್ಲಿ “ಸಹಕಾರದಿಂದ ಸಮೃದ್ಧಿಯತ್ತ” ಎಂಬ ಪರಿಕಲ್ಪನೆಯಡಿ ದಿ ಖಾನಾಪುರ ಕೋ-ಆಪರೇಟಿವ್ ಬ್ಯಾಂಕ್ ಆವರಣದಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ಉತ್ಸಾಹದಿಂದ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಖಾನಾಪುರ ಕ್ಷೇತ್ರದ ಶಾಸಕರಾದ ವಿಠ್ಠಲರಾವ್ ಹಲಗೇಕರ ಹಾಗೂ ಮಾಜಿ ಶಾಸಕರು ಮತ್ತು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಅರವಿಂದ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆ, ಹಾಗೂ ದಿ ಖಾನಾಪುರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ದಿ ಖಾನಾಪುರ ಕೋ-ಆಪರೇಟಿವ್ ಬ್ಯಾಂಕ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ಸಾರುತ್ತಾ ವಿವಿಧ ಗಣ್ಯರು, ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ನಿರ್ದೇಶಕರು, ವಿವಿಧ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ವೃಕ್ಷಾರೋಪಣ ನಡೆಸಿದರು.
ಈ ಸಂದರ್ಭದಲ್ಲಿ ಸಹಕಾರ ಚಳವಳಿಯ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂದು ಗಣ್ಯರು ಕರೆ ನೀಡಿದರು. ಸಹಕಾರ ಕ್ಷೇತ್ರದ ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಇಂತಹ ಕಾರ್ಯಕ್ರಮಗಳು ಪರಿಸರ ಸಂರಕ್ಷಣೆಗೆ ಮತ್ತಷ್ಟು ಉತ್ತೇಜನ ನೀಡಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರವಿ ಕಾಡಗಿ, ಮಹಾಂತೇಶ ಕೊಡೋಳಿ, ಮಲ್ಲಪ್ಪಾ ಮಾರಿಹಾಳ, ವಿವೇಕ ಗಿರಿ, ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರು, ಸಹಕಾರ ಕ್ಷೇತ್ರದ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


