गोव्यातील सुरल धबधब्यात बेळगावच्या 20 वर्षीय तरुणाचा दुर्दैवी बुडून मृत्यू; पावसामुळे शोधकार्यात अडथळे.
खानापूर : प्रतिनिधी
गोव्याच्या सत्तरी तालुक्यातील ठाणे ग्रामपंचायत हद्दीतील सुरल (सुर्ल) येथील, खानापूर तालुक्याच्या सीमेलगत असलेल्या धबधब्यात बेळगावातील एका २० वर्षीय तरुणाचा बुडून दुर्दैवी मृत्यू झाल्याची घटना रविवारी (दि. २८ जून) घडली. मृत तरुणाचे नाव आदित्य दीपककुमार सत्पती (वय 20) असे असून तो मित्रांसोबत सहलीसाठी आला होता.
माहितीनुसार, म्हादई अभयारण्य परिसरातील प्रसिद्ध धबधबा पाहण्यासाठी गेलेल्या आदित्यने पाण्यात प्रवेश केला. मात्र पाण्याची खोली आणि प्रवाहाचा अचूक अंदाज न आल्याने तो खोल पाण्यात बुडाला. त्याच्या मित्रांनी तातडीने त्याला बाहेर काढण्याचा प्रयत्न केला, परंतु त्यांचे प्रयत्न अपयशी ठरले.
घटनेची माहिती मिळताच वाळपई पोलीस, म्हादई अभयारण्याचे कर्मचारी आणि अग्निशमन दलाचे जवान घटनास्थळी दाखल झाले. रविवारी सायंकाळपर्यंत बचाव पथकांनी धबधब्याच्या परिसरात शोधमोहीम राबविली. मात्र मुसळधार पाऊस, वाढलेला पाण्याचा प्रवाह आणि कठीण भौगोलिक परिस्थितीमुळे शोधकार्यात मोठ्या अडचणी निर्माण झाल्याने रात्री शोधमोहीम थांबविण्यात आली.
सोमवारी (दि. 29 जून) सकाळी पुन्हा शोधकार्य सुरू करण्यात आले असून बचाव पथके तरुणाचा शोध घेत आहेत.
आदित्य हा मूळचा ओडिशा राज्यातील रहिवासी असून त्याचे कुटुंब सध्या बेळगाव येथे वास्तव्यास आहे. त्याचे वडील दीपककुमार सत्पती हे भारतीय नौदलातून निवृत्त झालेले अधिकारी आहेत. घटनेची माहिती मिळताच कुटुंबीयांनी घटनास्थळी धाव घेतली.
दरम्यान, पावसाळ्यात म्हादई अभयारण्य परिसरातील धबधबे पाहण्यासाठी बेळगाव, खानापूर आणि गोवा परिसरातून मोठ्या संख्येने पर्यटक येत आहेत. मात्र वन विभागाकडून वारंवार सूचना व इशारे देऊनही काही पर्यटक धोकादायक ठिकाणी जाण्याचे प्रकार सुरूच असल्याचे समोर आले आहे. त्यामुळे सुरक्षेच्या नियमांचे उल्लंघन करणाऱ्यांविरोधात यापुढे कठोर कारवाई करण्यात येणार असल्याचा इशारा वन विभागाने दिला आहे.
ಗೋವಾದ ಸುರ್ಲ (ಸುರಲ)ಜಲಪಾತದಲ್ಲಿ ಬೆಳಗಾವಿಯ 20 ವರ್ಷದ ಯುವಕನ ನೀರಿನಲ್ಲಿ ಮುಳುಗಿ ಸಾವು; ಭಾರಿ ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿ.
ಖಾನಾಪುರ : ಪ್ರತಿನಿಧಿ
ಗೋವಾದ ಸತ್ತಾರಿ ತಾಲ್ಲೂಕಿನ ಠಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರ್ಲ (ಸುರಲ) ಗ್ರಾಮದಲ್ಲಿರುವ, ಖಾನಾಪುರ ತಾಲ್ಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಲಪಾತದಲ್ಲಿ ಬೆಳಗಾವಿಯ 20 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಭಾನುವಾರ (ಜೂನ್ 28) ನಡೆದಿದೆ.
ಮೃತ ಯುವಕನನ್ನು ಆದಿತ್ಯ ದೀಪಕ್ಕುಮಾರ್ ಸತ್ಪತಿ (ವಯಸ್ಸು 20) ಎಂದು ಗುರುತಿಸಲಾಗಿದ್ದು, ಆತ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದನು.
ಲಭ್ಯ ಮಾಹಿತಿಯ ಪ್ರಕಾರ, ಮಹಾದಾಯಿ ಅಭಯಾರಣ್ಯ ಪ್ರದೇಶದಲ್ಲಿರುವ ಪ್ರಸಿದ್ಧ ಜಲಪಾತವನ್ನು ವೀಕ್ಷಿಸಲು ತೆರಳಿದ್ದ ಆದಿತ್ಯ ನೀರಿಗೆ ಇಳಿದಿದ್ದನು. ನೀರಿನ ಆಳ ಹಾಗೂ ಪ್ರವಾಹದ ತೀವ್ರತೆಯನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೇ ಆತ ಆಳವಾದ ನೀರಿನಲ್ಲಿ ಮುಳುಗಿದ್ದಾನೆ. ಆತನ ಸ್ನೇಹಿತರು ತಕ್ಷಣವೇ ರಕ್ಷಿಸಲು ಪ್ರಯತ್ನಿಸಿದರೂ ಅವರ ಎಲ್ಲಾ ಪ್ರಯತ್ನಗಳು ವಿಫಲವಾದವು.
ಘಟನೆಯ ಮಾಹಿತಿ ತಿಳಿದ ತಕ್ಷಣ ವಾಲ್ಪೊಯಿ ಪೊಲೀಸರು, ಮಹಾದಾಯಿ ಅಭಯಾರಣ್ಯದ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಭಾನುವಾರ ಸಂಜೆವರೆಗೆ ರಕ್ಷಣಾ ತಂಡಗಳು ಜಲಪಾತದ ಸುತ್ತಮುತ್ತ ಶೋಧ ಕಾರ್ಯ ನಡೆಸಿದವು. ಆದರೆ ಭಾರೀ ಮಳೆ, ಏರಿದ ನೀರಿನ ಮಟ್ಟ ಹಾಗೂ ಪ್ರವಾಹದ ವೇಗ ಹೆಚ್ಚಿರುವುದು ಮತ್ತು ದುರ್ಗಮ ಭೌಗೋಳಿಕ ಪರಿಸ್ಥಿತಿಯಿಂದಾಗಿ ಶೋಧ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾದ ಕಾರಣ ರಾತ್ರಿ ವೇಳೆಗೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು.
ಸೋಮವಾರ (ಜೂನ್ 29) ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಲಾಗಿದ್ದು, ರಕ್ಷಣಾ ಸಿಬ್ಬಂದಿ ಯುವಕನಿಗಾಗಿ ನಿರಂತರ ಹುಡುಕಾಟ ನಡೆಸುತ್ತಿದ್ದಾರೆ.
ಆದಿತ್ಯ ಮೂಲತಃ ಒಡಿಶಾ ರಾಜ್ಯದ ನಿವಾಸಿಯಾಗಿದ್ದು, ಪ್ರಸ್ತುತ ಅವರ ಕುಟುಂಬ ಬೆಳಗಾವಿಯಲ್ಲಿ ವಾಸಿಸುತ್ತಿದೆ. ಅವರ ತಂದೆ ದೀಪಕ್ಕುಮಾರ್ ಸತ್ಪತಿ ಅವರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ.
ಇದೀಗ ಮಳೆಗಾಲದ ಹಿನ್ನೆಲೆಯಲ್ಲಿ ಮಹಾದಾಯಿ ಅಭಯಾರಣ್ಯ ಪ್ರದೇಶದ ಜಲಪಾತಗಳನ್ನು ವೀಕ್ಷಿಸಲು ಬೆಳಗಾವಿ, ಖಾನಾಪುರ ಹಾಗೂ ಗೋವಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯು ಪದೇ ಪದೇ ಎಚ್ಚರಿಕೆ ಹಾಗೂ ಸೂಚನೆಗಳನ್ನು ನೀಡುತ್ತಿದ್ದರೂ, ಕೆಲವು ಪ್ರವಾಸಿಗರು ಅಪಾಯಕರ ಪ್ರದೇಶಗಳಿಗೆ ತೆರಳುತ್ತಿರುವ ಘಟನೆಗಳು ಮುಂದುವರಿದಿವೆ.
ಆದ್ದರಿಂದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಇನ್ನುಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.


