भाजप नेते योगेश गौडा हत्या प्रकरणात माजी मंत्री व आमदार विनय कुलकर्णीसह 19 जण दोषी; शिक्षेची घोषणा उद्या.
बेळगाव : धारवाड येथील भाजप नेते योगेश गौडा हत्या प्रकरणी बेंगळुरू येथील जनप्रतिनिधींसाठीच्या विशेष न्यायालयाने आज महत्त्वपूर्ण निकाल देत आमदार विनय कुलकर्णी यांच्यासह एकूण १९ आरोपींना दोषी ठरवले आहे. दोन्ही बाजूंचे युक्तिवाद ऐकल्यानंतर न्यायालयाने हा निर्णय दिला. या प्रकरणातील शिक्षेची घोषणा उद्या करण्यात येणार आहे.
सुमारे दहा वर्षे सुरू असलेल्या सुनावणीनंतर अखेर या बहुचर्चित खटल्याचा निकाल जाहीर झाला आहे. या निकालामुळे राज्यातील राजकीय वर्तुळात मोठी खळबळ उडाली आहे.
प्रकरणाची पार्श्वभूमी…
१५ जून २०१६ रोजी धारवाडच्या सप्तापूर परिसरातील उदय जिममध्ये व्यायाम करत असताना योगेश गौडा यांची धारदार शस्त्रांनी निर्घृण हत्या करण्यात आली होती. त्या वेळी ते जिल्हा परिषद सदस्य होते.
योगेश गौडा यांना जिल्हा परिषद अध्यक्षपदी बसवण्यात विनय कुलकर्णी यांची भूमिका महत्त्वाची होती. ठरलेल्या करारानुसार एका वर्षानंतर अध्यक्षपदाचा राजीनामा द्यायचा होता; मात्र तो न दिल्याने दोघांमध्ये मतभेद निर्माण झाले होते, अशी माहिती समोर आली होती.
अटक आणि राजकीय संघर्ष…
हेब्बळी जिल्हा परिषद मतदारसंघातून निवडणूक लढविताना निवडणुकीच्या दिवशीच योगेश गौडा यांना पीएसआयवर हल्ल्याच्या आरोपाखाली अटक करण्यात आली होती. तुरुंगात असतानाही त्यांनी जिल्हा परिषद निवडणूक जिंकली होती. या घटनेनंतर राजकीय वैमनस्य अधिकच तीव्र झाले.
एप्रिल २०१६ मध्ये जिल्हा परिषद सभागृहात तत्कालीन जिल्हा पालकमंत्री विनय कुलकर्णी आणि योगेश गौडा यांच्यात वाद झाल्याचेही सांगितले जाते. त्यानंतर अवघ्या दोन महिन्यांत, १५ जून रोजी त्यांची हत्या झाली.
राजकीय आरोप-प्रत्यारोप…
भाजपने सुरुवातीपासूनच ही हत्या राजकीय द्वेषातून झाल्याचा आरोप केला होता. पोलिसांनी मात्र प्राथमिक फिर्यादीत जमिनीच्या वादातून हत्या झाल्याची नोंद केली होती.
या प्रकरणाचा सखोल तपास व्हावा यासाठी तत्कालीन भाजप नेते जगदीश शेट्टर यांच्यासह अनेक नेत्यांनी त्यावेळचे गृहमंत्री डॉ. जी. परमेश्वर यांच्यावर दबाव आणला होता. मात्र सरकारकडून तत्काळ कारवाई झाली नव्हती.
सीबीआय चौकशी आणि दोषारोप…
२०१९ मध्ये बी. एस. येडियुरप्पा यांच्या नेतृत्वाखालील सरकार सत्तेत आल्यानंतर हे प्रकरण केंद्रीय अन्वेषण विभागाकडे (सीबीआय) सोपविण्यात आले. तपासादरम्यान सीबीआयने विनय कुलकर्णी यांना १५वा आरोपी म्हणून समाविष्ट केले.
दीर्घ सुनावणीनंतर आज विशेष न्यायालयाने आमदार विनय कुलकर्णी यांच्यासह १९ आरोपींना दोषी ठरवले आहे. उद्या शिक्षेची घोषणा होणार असल्याने राज्यभर या निकालाकडे लक्ष लागले आहे.
ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಮಂದಿ ದೋಷಿ; ಶಿಕ್ಷೆ ಘೋಷಣೆ ನಾಳೆ
ಬೆಳಗಾವಿ : ಧಾರವಾಡದ ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದ್ದು, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿದೆ. ಎರಡೂ ಪಾರ್ಶ್ವಗಳ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಈ ಪ್ರಕರಣದ ಶಿಕ್ಷೆಯನ್ನು ನಾಳೆ ಘೋಷಿಸಲಾಗುವುದು.
ಸುಮಾರು ಹತ್ತು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ ಈ ಬಹುಚರ್ಚಿತ ಪ್ರಕರಣಕ್ಕೆ ಅಂತಿಮವಾಗಿ ತೀರ್ಪು ಪ್ರಕಟವಾಗಿದೆ. ಈ ತೀರ್ಪಿನಿಂದ ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಮತ್ತು ಸಂಚಲನ ಉಂಟಾಗಿದೆ.
ಪ್ರಕರಣದ ಹಿನ್ನೆಲೆ…
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಪ್ರದೇಶದಲ್ಲಿರುವ ಉದಯ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಿರ್ದಯವಾಗಿ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಯೋಗೇಶ್ ಗೌಡ ಅವರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಏರಿಸಲು ವಿನಯ್ ಕುಲಕರ್ಣಿ ಪ್ರಮುಖ ಪಾತ್ರವಹಿಸಿದ್ದರು. ಒಪ್ಪಂದದ ಪ್ರಕಾರ ಒಂದು ವರ್ಷದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ರಾಜೀನಾಮೆ ನೀಡದ ಕಾರಣ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು ಎಂಬ ಮಾಹಿತಿ ಹೊರಬಂದಿತ್ತು.
ಬಂಧನ ಮತ್ತು ರಾಜಕೀಯ ಸಂಘರ್ಷ…
ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೇಳೆ, ಮತದಾನ ದಿನವೇ ಯೋಗೇಶ್ ಗೌಡ ಅವರನ್ನು ಪಿಎಸ್ಐ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಂಧಿಸಲಾಗಿತ್ತು. ಕಾರಾಗೃಹದಲ್ಲಿದ್ದಾಗಲೇ ಅವರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಘಟನೆ ಬಳಿಕ ರಾಜಕೀಯ ವೈಮನಸ್ಸು ಇನ್ನಷ್ಟು ತೀವ್ರಗೊಂಡಿತು. 2016ರ ಏಪ್ರಿಲ್ನಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಮತ್ತು ಯೋಗೇಶ್ ಗೌಡ ನಡುವೆ ವಾಗ್ವಾದ ನಡೆದಿದ್ದುದಾಗಿ ಹೇಳಲಾಗಿದೆ. ಅದರ ನಂತರ ಕೇವಲ ಎರಡು ತಿಂಗಳಲ್ಲೇ, ಜೂನ್ 15ರಂದು ಅವರ ಹತ್ಯೆ ನಡೆದಿದೆ.
ರಾಜಕೀಯ ಆರೋಪ-ಪ್ರತ್ಯಾರೋಪ…
ಈ ಹತ್ಯೆ ರಾಜಕೀಯ ದ್ವೇಷದಿಂದ ಪ್ರೇರಿತವಾಗಿದೆ ಎಂದು ಬಿಜೆಪಿ ಆರಂಭದಿಂದಲೇ ಆರೋಪಿಸಿತ್ತು. ಆದರೆ ಪೊಲೀಸ್ ಇಲಾಖೆಯ ಪ್ರಾಥಮಿಕ ಎಫ್ಐಆರ್ನಲ್ಲಿ ಭೂ ವಿವಾದದ ಹಿನ್ನೆಲೆ ಹತ್ಯೆ ನಡೆದಿದೆ ಎಂದು ದಾಖಲಿಸಲಾಗಿತ್ತು. ಈ ಪ್ರಕರಣದ ಸವಿಸ್ತಾರ ತನಿಖೆಗೆ ಆಗಿನ ಬಿಜೆಪಿ ನಾಯಕ ಜಗದೀಶ ಶೆಟ್ಟರ್ ಸೇರಿದಂತೆ ಹಲವು ನಾಯಕರು ಆಗಿನ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಮೇಲೆ ಒತ್ತಡ ಹೇರಿದ್ದರು. ಆದರೆ ಸರ್ಕಾರದಿಂದ ತಕ್ಷಣದ ಕ್ರಮ ಕೈಗೊಳ್ಳಲಾಗಿಲ್ಲವೆಂಬ ಆರೋಪ ಕೇಳಿಬಂದಿತ್ತು.
ಸಿಬಿಐ ತನಿಖೆ ಮತ್ತು ದೋಷಾರೋಪ…
2019ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣವನ್ನು ಕೇಂದ್ರ ಅನ್ವೇಷಣಾ ದಳ (ಸಿಬಿಐ)ಗೆ ಹಸ್ತಾಂತರಿಸಲಾಯಿತು. ತನಿಖೆಯ ಸಂದರ್ಭದಲ್ಲಿ ಸಿಬಿಐ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯಾಗಿ ಸೇರಿಸಿತು. ದೀರ್ಘ ವಿಚಾರಣೆಯ ನಂತರ ಇಂದು ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. ನಾಳೆ ಶಿಕ್ಷೆ ಪ್ರಕಟವಾಗಲಿರುವುದರಿಂದ ರಾಜ್ಯದಾದ್ಯಂತ ಈ ತೀರ್ಪಿನತ್ತ ಗಮನ ಹರಿಸಲಾಗಿದೆ.


