शेतकऱ्यांच्या नुकसान भरपाई प्रश्नावर हुबळी येथे खासदारासोबत बैठक; खासदार दिल्ली दरबारी प्रयत्न करणार.
खानापूर : खानापूर शहरातील मच्छी मार्केट परिसरातील जमिनीबाबत नुकसान भरपाई मिळावी या मागणीसाठी काही शेतकऱ्यांनी न्यायालयाचा दरवाजा ठोठावला होता. तसेच फिश मार्केट परिसरातील रस्ता काही काळ शेतकऱ्यांनी बंद केला होता. मात्र आमदार विठ्ठल हलगेकर आणि भाजपचे राज्य कार्यकारिणी सदस्य प्रमोद कोचेरी यांनी प्रश्न सोडवण्याचे आश्वासन दिल्यानंतर शेतकऱ्यांनी हा रस्ता पुन्हा सुरू केला आहे.

दरम्यान या विषयावर पुढील तोडगा काढण्यासाठी नुकतीच हुबळी येथे बैठक घेण्यात आली. या बैठकीत आमदार विठ्ठल हलगेकर, प्रमोद कोचेरी आणि शेतकरी प्रतिनिधींनी खासदार विश्वेश्वर हेगडे-कागेरी यांची भेट घेऊन सविस्तर चर्चा केली.
या वेळी शेतकऱ्यांनी सांगितले की, खानापूर शहराच्या विकासासाठी त्यांनी आपली जमीन दिली आहे. मात्र अनेक वर्षे उलटूनही त्यांना योग्यती नुकसान भरपाई मिळालेली नाही. त्यामुळे वारंवार पाठपुरावा करूनही न्याय न मिळाल्याने अखेर न्यायालयात धाव घेऊन संबंधित रस्ता बंद करण्याचा निर्णय घ्यावा लागला.

यावर खासदार विश्वेश्वर हेगडे-कागेरी यांनी शेतकऱ्यांचे म्हणणे ऐकून घेत केंद्रीय रस्ते वाहतूक मंत्री Nitin Gadkari यांच्याशी चर्चा करून या प्रश्नावर पाठपुरावा करण्याचे आश्वासन दिले. तसेच लवकरच आमदार विठ्ठल हलगेकर, प्रमोद कोचेरी आणि शेतकरी प्रतिनिधींची संयुक्त बैठक आयोजित करण्यासाठी प्रयत्न करण्यात येणार असल्याचेही त्यांनी सांगितले. तसेच
काही तांत्रिक अडचणींमुळे रस्त्याच्या हस्तांतरणाची प्रक्रिया रखडली असल्याचेही यावेळी स्पष्ट करण्यात आले. यासंदर्भात दक्षिण भारतातील संबंधित अधिकारी व्यंकटरामन यांच्याशी चर्चा करण्यात येणार असल्याचेही सांगण्यात आले.
शेतकऱ्यांना योग्य नुकसान भरपाई मिळावी तसेच खानापूर तालुक्याच्या सर्वांगीण विकासासाठी दिल्ली पातळीवर सातत्याने प्रयत्न सुरू असून त्यासाठी आपण कटिबद्ध असल्याचे आश्वासन खासदारांनी दिले.
या प्रसंगी शेतकरी राहुल सावंत, विनायक चव्हाण, मानसिंग चौगुले तसेच नितीन पाटील उपस्थित होते.
ರೈತರಿಗೆ ದೊರಕಬೇಕಾದ ಪರಿಹಾರ ಪ್ರಶ್ನೆ ಕುರಿತು ಹುಬ್ಬಳ್ಳಿಯಲ್ಲಿ ಸಂಸದರು ಜೊತೆ ಸಭೆ; ದೆಹಲಿಯಲ್ಲಿ ಪ್ರಯತ್ನ ಮಾಡುವ ಭರವಸೆ.
ಖಾನಾಪುರ : ಖಾನಾಪುರ ನಗರದ ಮಚ್ಚಿ ಮಾರ್ಕೆಟ್ ಪ್ರದೇಶದಲ್ಲಿರುವ ಭೂಮಿಗೆ ಸಂಬಂಧಿಸಿದ ಪರಿಹಾರ ದೊರಕಬೇಕು ಎಂಬ ಬೇಡಿಕೆಗೆ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ವೇಳೆ ಫಿಶ್ ಮಾರ್ಕೆಟ್ ಪ್ರದೇಶದ ರಸ್ತೆವನ್ನು ಕೆಲ ಕಾಲ ರೈತರು ಬಂದ್ ಮಾಡಿದ್ದರು. ಆದರೆ ಶಾಸಕರಾದ ವಿಠ್ಠಲ್ ಹಲಗೆಕರ್ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೋಚೇರಿ ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ರೈತರು ಮತ್ತೆ ಆ ರಸ್ತೆಯನ್ನು ತೆರೆಯಲು ಒಪ್ಪಿಕೊಂಡಿದ್ದಾರೆ.
ಇದೀಗ ಈ ವಿಷಯಕ್ಕೆ ಮುಂದಿನ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕ ವಿಠ್ಠಲ್ ಹಲಗೆಕರ್, ಪ್ರಮೋದ ಕೋಚೇರಿ ಮತ್ತು ರೈತ ಪ್ರತಿನಿಧಿಗಳು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಸವಿಸ್ತಾರವಾಗಿ ಚರ್ಚಿಸಿದರು.
ಈ ವೇಳೆ ರೈತರ ಪ್ರಕಾರ, ಖಾನಾಪುರ ನಗರದ ಅಭಿವೃದ್ಧಿಗಾಗಿ ಅವರು ತಮ್ಮ ಭೂಮಿಯನ್ನು ನೀಡಿದ್ದಾರೆ. ಆದರೆ ಹಲವು ವರ್ಷಗಳು ಕಳೆದರೂ ಅವರಿಗೆ ಸಮರ್ಪಕ ಪರಿಹಾರ ದೊರಕಿಲ್ಲ. ಹೀಗಾಗಿ ಹಲವು ಬಾರಿ ಮನವಿ ಮಾಡಿದರೂ ನ್ಯಾಯ ಸಿಗದ ಕಾರಣ ಕೊನೆಗೆ ನ್ಯಾಯಾಲಯದ ಮೊರೆ ಹೋಗಿ ಸಂಬಂಧಿಸಿದ ರಸ್ತೆಯನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈತರ ಮಾತು ಆಲಿಸಿ, ಕೇಂದ್ರ ರಸ್ತೆ ಸಾರಿಗೆ ಸಚಿವ ನೀತಿನ ಗಡಕರಿ ಅವರೊಂದಿಗೆ ಚರ್ಚಿಸಿ ಈ ವಿಷಯವನ್ನು ಮುಂದುವರೆಸಿ ಪರಿಹಾರ ಕಂಡುಹಿಡಿಯಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ ಶೀಘ್ರದಲ್ಲೇ ಶಾಸಕ ವಿಠ್ಠಲ್ ಹಲಗೆಕರ್, ಪ್ರಮೋದ ಕೋಚೇರಿ ಮತ್ತು ರೈತ ಪ್ರತಿನಿಧಿಗಳ ಸಂಯುಕ್ತ ಸಭೆ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಇದಲ್ಲದೆ ಕೆಲವು ತಾಂತ್ರಿಕ ಅಡಚಣೆಗಳಿಂದ ರಸ್ತೆ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿರುವುದಾಗಿ ಈ ವೇಳೆ ಸ್ಪಷ್ಟಪಡಿಸಲಾಯಿತು. ಈ ಸಂಬಂಧ ದಕ್ಷಿಣ ಭಾರತದ ಸಂಬಂಧಿತ ಅಧಿಕಾರಿ ವ್ಯಂಕಟರಮನ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ರೈತರಿಗೆ ಸಮರ್ಪಕ ಪರಿಹಾರ ದೊರಕಬೇಕು ಹಾಗೂ ಖಾನಾಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ದೆಹಲಿಯ ಮಟ್ಟದಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಅದಕ್ಕಾಗಿ ತಾವು ಬದ್ಧರಾಗಿರುವುದಾಗಿ ಸಂಸದರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ರಾಹುಲ್ ಸಾವಂತ್, ವಿನಾಯಕ ಚವ್ಹಾಣ, ಮಾನಸಿಂಗ್ ಚೌಗುಲೆ ಹಾಗೂ ನಿತಿನ್ ಪಾಟೀಲ ಉಪಸ್ಥಿತರಿದ್ದರು.


