सुतकटी वनक्षेत्रातील बिबट्या अखेर पिंजऱ्यात; वन विभागाच्या प्रयत्नांना यश.
बेळगाव : तालुक्यातील वंटमुरी घाटाच्या पाठीमागील सुतकटी (सुतगट्टी) गावाच्या वनक्षेत्रात गेल्या आठ ते दहा दिवसांपासून वावर असलेल्या बिबट्याला अखेर वन विभागाने पिंजऱ्यात जेरबंद केले. बुधवारी सकाळी बिबट्या पिंजऱ्यात अडकल्यानंतर वन विभागाने त्याला सुरक्षित ताब्यात घेतले.
सुतकटी व शिवापूर परिसरात गेल्या काही दिवसांपासून बिबट्याचा वावर ग्रामस्थ तसेच वाहनचालकांना दिसून येत होता. बिबट्याचे दर्शन वारंवार होत असल्याने परिसरात भीतीचे वातावरण निर्माण झाले होते. बिबट्याच्या वावराचे व्हिडिओ सोशल मीडियावर व्हायरल झाल्यानंतर ग्रामस्थांनी काकती वन विभागाला याची माहिती दिली.
माहिती मिळताच वन विभागाने परिसरात गस्त वाढवून बिबट्याच्या हालचालींवर लक्ष ठेवण्यास सुरुवात केली. काही दिवसांपूर्वी सुतकटीच्या वनक्षेत्रात बिबट्याला पकडण्यासाठी पिंजरा लावण्यात आला होता. अखेर बुधवारी सकाळी बिबट्या पिंजऱ्यात अडकल्याने वन विभागाच्या प्रयत्नांना यश आले.
त्यानंतर बिबट्याला काकती येथील वन्यजीव बचाव केंद्रात सुरक्षितपणे आणण्यात आले आहे. आवश्यक वैद्यकीय तपासणी केल्यानंतर त्याला भीमगड अभयारण्यात सोडण्यात येणार असल्याची माहिती वन विभागाकडून देण्यात आली.
ही कारवाई काकतीचे आरएफओ बी. एल. सनदी, हुक्केरीचे आरएफओ शिवकुमार माळी, डीआरएफओ बसवराज हनगंडी, प्रभू तंगडी, राकेश मुरारी, मुतगेकर तसेच काकती वन विभागाच्या कर्मचाऱ्यांनी केली. बिबट्याला पकडण्यासाठी वन विभागाने केलेल्या प्रयत्नांना सुतकटी गावातील ग्रामस्थांनीही सहकार्य केले.
बिबट्या जेरबंद झाल्याने सुतकटी व शिवापूर परिसरातील ग्रामस्थांनी सुटकेचा नि:श्वास सोडला आहे.
ಸುತ್ತಕಟ್ಟಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೇರೆ; ಅರಣ್ಯ ಇಲಾಖೆಯ ಪ್ರಯತ್ನಕ್ಕೆ ಯಶಸ್ಸು.
ಬೆಳಗಾವಿ : ತಾಲೂಕಿನ ವಂಟಮುರಿ ಘಾಟ್ನ ಹಿಂಭಾಗದಲ್ಲಿರುವ ಸುತ್ತಕಟ್ಟಿ (ಸುತ್ತಗಟ್ಟಿ) ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಳೆದ ಎಂಟು–ಹತ್ತು ದಿನಗಳಿಂದ ಸಂಚರಿಸುತ್ತಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಬುಧವಾರ ಬೆಳಗ್ಗೆ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದ ಬಳಿಕ ಅರಣ್ಯ ಇಲಾಖೆ ಅದನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಂಡಿದೆ.
ಸುತ್ತಕಟ್ಟಿ ಹಾಗೂ ಶಿವಾಪುರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಸಂಚರಿಸುತ್ತಿರುವುದು ಗ್ರಾಮಸ್ಥರು ಹಾಗೂ ವಾಹನ ಚಾಲಕರಿಗೆ ಕಾಣಿಸಿಕೊಂಡಿತ್ತು. ಚಿರತೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಚಿರತೆ ಸಂಚರಿಸುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಗ್ರಾಮಸ್ಥರು ಕಾಕತಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿ, ಚಿರತೆಯ ಚಲನವಲನಗಳ ಮೇಲೆ ನಿಗಾ ಇಡಲು ಆರಂಭಿಸಿತ್ತು. ಕೆಲವು ದಿನಗಳ ಹಿಂದೆ ಸುತ್ತಕಟ್ಟಿ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಸೆರೆಹಿಡಿಯಲು ಬೋನನ್ನು ಅಳವಡಿಸಲಾಗಿತ್ತು. ಕೊನೆಗೂ ಬುಧವಾರ ಬೆಳಗ್ಗೆ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿದ್ದು, ಅರಣ್ಯ ಇಲಾಖೆಯ ಹಲವು ದಿನಗಳ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ.
ನಂತರ ಚಿರತೆಯನ್ನು ಕಾಕತಿ ಬಳಿಯಿರುವ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅಗತ್ಯ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಚಿರತೆಯನ್ನು ಭೀಮಗಡ ಅಭಯಾರಣ್ಯದಲ್ಲಿ ಬಿಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಕಾರ್ಯಾಚರಣೆಯನ್ನು ಕಾಕತಿ ಆರ್ಎಫ್ಒ ಬಿ. ಎಲ್. ಸನದಿ, ಹುಕ್ಕೇರಿ ಆರ್ಎಫ್ಒ ಶಿವಕುಮಾರ ಮಾಳಿ, ಡಿಆರ್ಎಫ್ಒ ಬಸವರಾಜ ಹನಗಂಡಿ, ಪ್ರಭು ತಂಗಡಿ, ರಾಕೇಶ ಮುರಾರಿ, ಮುತಗೆಕರ ಹಾಗೂ ಕಾಕತಿ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದರು.
ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಗೆ ಸುತ್ತಕಟ್ಟಿ ಗ್ರಾಮದ ಗ್ರಾಮಸ್ಥರೂ ಸಹಕಾರ ನೀಡಿದರು. ಚಿರತೆ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಸುತ್ತಕಟ್ಟಿ ಹಾಗೂ ಶಿವಾಪುರ ಪ್ರದೇಶದ ಗ್ರಾಮಸ್ಥರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.



