गोव्याकडे वाळू घेऊन जाणारा टिप्पर दरीत कोसळला ; चालकाचा जागीच मृत्यू.
खानापूर : अनमोड घाटात शनिवारी (दि. 13 जून) रात्री झालेल्या भीषण अपघातात वाळू वाहतूक करणाऱ्या टिप्पर चालकाचा दुर्दैवी मृत्यू झाला. गोव्याकडे वाळू घेऊन जाणारा टिप्पर चालकाचे वाहनावरील नियंत्रण सुटल्याने सुमारे 50 मीटर खोल दरीत कोसळल्याची घटना घडली.
मिळालेल्या माहितीनुसार, अनमोड मार्गे गोव्याकडे वाळू वाहतूक करणारा टिप्पर अनमोड घाटातील दूधसागर मंदिराजवळील एका तीव्र वळणावर आला असता चालकाचा वाहनावरील ताबा सुटला. त्यामुळे टिप्पर थेट दरीत कोसळला. अपघात इतका भीषण होता की चालक वाहनातच अडकून पडला.
अपघाताची माहिती मिळताच रविवारी सकाळी कुळे पोलीस घटनास्थळी दाखल झाले. पोलिसांनी पंचनामा करून चालकाचा मृतदेह बाहेर काढला. त्यानंतर मृतदेह उत्तरीय तपासणीसाठी प्राथमिक आरोग्य केंद्रात पाठविण्यात आला.
या दुर्घटनेमुळे परिसरात हळहळ व्यक्त होत असून अपघाताचे नेमके कारण शोधण्यासाठी पोलिसांनी तपास सुरू केला आहे. या प्रकरणाची नोंद कुळे (गोवा) पोलीस स्थानकात करण्यात आली असून पुढील तपास सुरू आहे.
अनमोड घाटातील धोकादायक वळणावर पुन्हा अपघात..
अनमोड घाटातील दूधसागर मंदिराजवळील वळण हे अपघातप्रवण ठिकाण म्हणून ओळखले जाते. या भागात यापूर्वीही अनेक अपघात घडले असून सुरक्षिततेच्या उपाययोजना करण्याची गरज निर्माण झाली आहे.
ಗೋವಾಕ್ಕೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಕಂದಕಕ್ಕೆ ಉರುಳಿ ಬಿದ್ದು, ಚಾಲಕ ಸ್ಥಳದಲ್ಲೇ ಸಾವು.
ಖಾನಾಪೂರ : ಅನಮೋಡ್ ಘಾಟ್ನಲ್ಲಿ ಶನಿವಾರ (ಜೂನ್ 13) ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಚಾಲಕ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ಗೋವಾ ಕಡೆಗೆ ಮರಳು ಹೊತ್ತೊಯ್ಯುತ್ತಿದ್ದ ಟಿಪ್ಪರ್ ವಾಹನದ ಮೇಲಿನ ನಿಯಂತ್ರಣ ತಪ್ಪಿ ಸುಮಾರು 50 ಮೀಟರ್ ಆಳದ ಕಣಿವೆಗೆ ಉರುಳಿದ ಘಟನೆ ನಡೆದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಅನಮೋಡ್ ಮಾರ್ಗವಾಗಿ ಗೋವಾ ಕಡೆಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಅನಮೋಡ್ ಘಾಟ್ನಲ್ಲಿರುವ ದೂಧಸಾಗರ ದೇವಸ್ಥಾನದ ಸಮೀಪದ ತೀವ್ರ ತಿರುವಿನ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟಿಪ್ಪರ್ ನೇರವಾಗಿ ಕಣಿವೆಗೆ ಉರುಳಿದೆ. ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಚಾಲಕ ವಾಹನದಲ್ಲೇ ಸಿಲುಕಿ ಮೃತಪಟ್ಟಿದ್ದಾನೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾನುವಾರ ಬೆಳಿಗ್ಗೆ ಕುಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಮಹಜರು ನಡೆಸಿ ಚಾಲಕನ ಮೃತದೇಹವನ್ನು ಹೊರತೆಗೆದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು.
ಈ ದುರ್ಘಟನೆಯಿಂದಾಗಿ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಕುಳೆ (ಗೋವಾ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಅನಮೋಡ್ ಘಾಟ್ನ ಅಪಾಯಕಾರಿ ತಿರುವಿನಲ್ಲಿ ಮತ್ತೆ ಅಪಘಾತ…
ಅನಮೋಡ್ ಘಾಟ್ನ ದೂಧಸಾಗರ ದೇವಸ್ಥಾನದ ಸಮೀಪದ ತಿರುವು ಅಪಘಾತಪ್ರವಣ ಪ್ರದೇಶವೆಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಈ ಹಿಂದೆ ಕೂಡ ಅನೇಕ ಅಪಘಾತಗಳು ಸಂಭವಿಸಿದ್ದು, ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆ ಮತ್ತೆ ಒತ್ತಿಹೇಳಲಾಗಿದೆ.


