कक्केरीत रानडुकरांकडून दोन एकर ऊस पिकाची नासधूस; शेतकऱ्याला नुकसानभरपाई देण्याची मागणी.
कक्केरी : खानापूर तालुक्यातील बीडी भागातील करिकट्टी हद्दीतील सर्व्हे क्रमांक 5 मध्ये स्थानिक शेतकरी सेबस्तीन बावतिस सोझ यांच्या दोन एकर शेतजमिनीत लागवड केलेल्या ऊस पिकाची रानडुकरांनी बुधवारी पूर्णपणे नासधूस केली. त्यामुळे शेतकऱ्याचे मोठे आर्थिक नुकसान झाले आहे.
सेबस्तीन सोझ हे या दोन एकर जमिनीवर शेती करून आपल्या संपूर्ण कुटुंबाचा उदरनिर्वाह चालवतात. यंदा त्यांनी चांगले ऊस पीक घेतले होते. मात्र, पीक हातातोंडाशी आले असताना रानडुकरांनी संपूर्ण ऊस फस्त करून पिकाचे नुकसान केल्याने शेतकऱ्यावर मोठे संकट ओढवले आहे.
या घटनेची तातडीने दखल घेऊन वन विभागाच्या अधिकाऱ्यांनी घटनास्थळी भेट देऊन नुकसानीची पाहणी करावी आणि पंचनामा करून शेतकऱ्याला शासनाकडून योग्य नुकसानभरपाई मंजूर करावी, अशी मागणी करण्यात आली आहे.
यासाठी शेतकरी संघटनेचे नेते यल्लाप्पा चन्नापूर, किशोर मिठारी, रमानंद अंबडगट्टी, अंतोन सोझ, बिस्वप्पा सुंबळी, रमेश वीरापूर, शिवाजी अंबडगट्टी, गोपाळ अगसिमनी आदींनी शासनाकडे आर्थिक नुकसान भरपाई देण्याची मागणी केली आहे.
ಕರಿಕಟ್ಟಿಯಲ್ಲಿ ಕಾಡುಹಂದಿಗಳಿಂದ ಎರಡು ಎಕರೆ ಕಬ್ಬು ಬೆಳೆ ನಾಶ; ರೈತನಿಗೆ ಪರಿಹಾರ ನೀಡುವಂತೆ ಆಗ್ರಹ.
ಕಕ್ಕೇರಿ : ಖಾನಾಪುರ ತಾಲ್ಲೂಕಿನ ಬೀಡಿ ಭಾಗದ ಕರಿಕಟ್ಟಿ ವ್ಯಾಪ್ತಿಯ ಸರ್ವೇ ನಂಬರ್ 5ರಲ್ಲಿ ಸ್ಥಳೀಯ ರೈತ ಸೆಬಸ್ತಿನ್ ಬಾವತಿಸ್ ಸೋಝ ಅವರ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆಯನ್ನು ಬುಧವಾರ ಕಾಡುಹಂದಿಗಳು ಸಂಪೂರ್ಣವಾಗಿ ನಾಶಪಡಿಸಿವೆ. ಇದರಿಂದ ರೈತನಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ.
ಸೆಬಸ್ತಿನ್ ಸೋಝ ಅವರು ಈ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ತಮ್ಮ ಸಂಪೂರ್ಣ ಕುಟುಂಬದ ಜೀವನೋಪಾಯವನ್ನು ನಡೆಸುತ್ತಿದ್ದಾರೆ. ಈ ವರ್ಷ ಅವರು ಉತ್ತಮ ಕಬ್ಬು ಬೆಳೆಯನ್ನು ಬೆಳೆದಿದ್ದರು. ಆದರೆ ಬೆಳೆ ಕೈಗೆ ಬರುವ ಹಂತದಲ್ಲಿದ್ದಾಗ ಕಾಡುಹಂದಿಗಳು ಸಂಪೂರ್ಣ ಕಬ್ಬು ಬೆಳೆಯನ್ನು ತಿಂದು ನಾಶಪಡಿಸಿರುವುದರಿಂದ ರೈತನ ಮೇಲೆ ದೊಡ್ಡ ಸಂಕಷ್ಟ ಎದುರಾಗಿದೆ.
ಈ ಘಟನೆಗೆ ತಕ್ಷಣ ಸ್ಪಂದಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಬೇಕು. ಪಂಚನಾಮೆ ಮಾಡಿ ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಮಂಜೂರು ಮಾಡಬೇಕು, ಎಂದು ಆಗ್ರಹಿಸಲಾಗಿದೆ.
ಈ ಸಂಬಂಧ ರೈತ ಸಂಘದ ಮುಖಂಡರಾದ ಯಲ್ಲಪ್ಪ ಚನ್ನಾಪುರ, ಕಿಶೋರ್ ಮಿಠಾರಿ, ರಮಾನಂದ ಅಂಬಡಗಟ್ಟಿ, ಅಂತೋನ್ ಸೋಝ, ಬಿಸ್ವಪ್ಪ ಸುಂಬಳಿ, ರಮೇಶ್ ವೀರಾಪುರ, ಶಿವಾಜಿ ಅಂಬಡಗಟ್ಟಿ, ಗೋಪಾಳ ಅಗಸಿಮನಿ ಸೇರಿದಂತೆ ಹಲವರು ಸರ್ಕಾರಕ್ಕೆ ಆರ್ಥಿಕ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
.



