
पदवी कॉलेज, प्रथम वर्षाच्या विद्यार्थ्यांचे ऑनलाइन अर्ज भरण्याची तारीख वाढविण्यात आली.
खानापूर ; राणी चन्नम्मा युनिव्हर्सिटी भूतरामहट्टी, बेळगाव. यांच्याकडून, शैक्षणिक वर्ष 2024-25 मध्ये पदवीपूर्व अभ्यासक्रमांच्या पहिल्या सत्रासाठी प्रवेशाची शेवटची तारीख 10 ऑगस्ट 2024 होती. परंतु खानापूर तालुक्यात व बेळगाव जिल्ह्यात पावसाच्या अतिवृष्टीमुळे व सर्वेयर डाऊन असल्याने, विद्यार्थ्यांना ऑनलाइन फॉर्म भरता आला नाही. त्यामुळे हे वर्ष वाया जाते की, काय.? या विवंचनेत अनेक विद्यार्थी होते. शेवटी खानापूर तालुक्याचे आमदार विठ्ठलराव हलगेकर, यांनी राणी चन्नम्मा युनिव्हर्सिटीच्या अधिकाऱ्यांबरोबर चर्चा केली व त्यांच्या सल्ल्यानुसार, कुलपतीना पत्र लिहून ऑनलाइन अर्ज भरण्याची तारीख वाढविण्याची विनंती केली.
त्यांनी आपल्या पत्रात लिहिले होते की, खानापूर तालुक्यात सततच्या पावसामुळे, रस्ते, वाहतूक जोडणी व्यवस्था, इंटरनेटची अडचण, व वीज कनेक्शन खंडित झाल्याने, अनेक अडचणी निर्माण झाल्या आहेत. या पार्श्वभूमीवर अनेक विद्यार्थ्यांना प्रवेशही मिळाला नाही. त्यामुळे ते शिक्षणापासून वंचित रहाणारं आहेत. मी या भागाचा आमदार असल्याने, विद्यार्थ्यांनी माझ्याकडे येऊन आपल्या तक्रारी मांडल्या असून, प्रवेशाची तारीख वाढवून देण्याच्या मागणीचे निवेदन सादर केलं आहे. त्यामुळे कुलपतीना विनंती आहे. की, त्यांनी या विनंतीचा विचार करून, प्रवेशाचा कालावधी वाढवावा आणि आमच्या विनंतीला प्रतिसाद द्यावा.
वरील पत्राची दखल कुलपतींनी घेतले असून, राणी चन्नम्मा युनिव्हर्सिटीच्या निबंधकानी, आमदारांना एक आदेशाची कॉपी पाठवली असून, त्या आदेशात म्हटले आहे की, आपल्या पत्राची दखल कुलपतींनी घेतली असून, 19 ऑगस्ट 2024 ते 24 ऑगस्ट 2024 पर्यंत, ऑनलाइन अर्ज भरण्याची तारीख वाढविण्यात आली, असल्याचे कळविले आहे.
त्यासाठी विद्यार्थ्यांनी आपापल्या महाविद्यालयात जाऊन, माहिती घ्यावीत. व महाविद्यालयीन प्रवेशाचे अर्ज ऑनलाइन भरण्याची विनंती, आमदार विठ्ठलराव हलगेकर यांनी केली आहे.
ಪದವಿ ಕಾಲೇಜು, ಪ್ರಥಮ ವರ್ಷದ ವಿದ್ಯಾರ್ಥಿಗಳ ಆನ್ಲೈನ್ ಅರ್ಜಿ ದಿನಾಂಕ ವಿಸ್ತರಣೆ.
ಖಾನಾಪುರ; ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಭೂತ್ರಮಹಟ್ಟಿ, ಬೆಳಗಾವಿ. 2024-25ರ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಕೋರ್ಸ್ಗಳ ಮೊದಲ ಸೆಮಿಸ್ಟರ್ಗೆ ಪ್ರವೇಶದ ಕೊನೆಯ ದಿನಾಂಕ 10 ಆಗಸ್ಟ್ 2024 ಆಗಿತ್ತು ಅದನ್ನು ಈಗ ವಿಸ್ತರಣೆ ಮಾಡಿದೆ. ಖಾನಾಪುರ ತಾಲೂಕು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಸರ್ವರ್ ಡೌನ್ನಿಂದಾಗಿ ಕೆಲ ವಿದ್ಯಾರ್ಥಿಗಳು ಆನ್ಲೈನ್ ಫಾರ್ಮ್ ಭರ್ತಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಈ ವರ್ಷ ವ್ಯರ್ಥವಾಗುವ ಸಂದಿಗ್ಧ ಸ್ಥಿತಿಯಲ್ಲಿದ್ದರು. ಕೊನೆಗೆ ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಸಲಹೆಯಂತೆ, ಕುಲಪತಿಗಳಿಗೆ ಪತ್ರ ಬರೆದು ಆನ್ಲೈನ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವಂತೆ ಮನವಿ ಮಾಡಿದರು.
ಖಾನಾಪುರ ತಾಲೂಕಿನಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರಸ್ತೆ, ಸಾರಿಗೆ ಸಂಪರ್ಕ, ಇಂಟರ್ ನೆಟ್ ಸಮಸ್ಯೆ, ವಿದ್ಯುತ್ ಸಂಪರ್ಕ ಕಡಿತದಿಂದ ಹಲವು ಸಮಸ್ಯೆಗಳು ತಲೆದೋರಿವೆ. ಈ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಪ್ರವೇಶವೂ ಸಿಕ್ಕಿಲ್ಲ. ಹಾಗಾಗಿ ಶಿಕ್ಷಣದಿಂದ ವಂಚಿತರಾಗುವ ಸಂಭವ ಉಂಟಾಗಿತ್ತು. ನಾನು ಈ ಭಾಗದ ಶಾಸಕನಾಗಿರುವುದರಿಂದ ವಿದ್ಯಾರ್ಥಿಗಳು ನನ್ನ ಬಳಿ ಬಂದು ತಮ್ಮ ಅಹವಾಲು ಮಂಡಿಸಿ ಪ್ರವೇಶ ದಿನಾಂಕ ವಿಸ್ತರಣೆಗೆ ಒತ್ತಾಯಿಸಿ ಮನವಿ ನೀಡಿದ್ದಾರೆ. ಆದ್ದರಿಂದ ಕುಲಪತಿಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಹಾಳು ಆಗದಂತೆ ಶಾಸಕರ ವಿನಂತಿಯನ್ನು ಪರಿಗಣಿಸಿ ಪ್ರವೇಶದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಮೇಲ್ಕಂಡ ಪತ್ರವನ್ನು ಕುಲಪತಿಗಳು ಗಮನಕ್ಕೆ ತಂದಿದ್ದು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಆದೇಶದ ಪ್ರತಿಯನ್ನು ಶಾಸಕರಿಗೆ ಕಳುಹಿಸಿದ್ದಾರೆ. ಆ ಆದೇಶದಲ್ಲಿ ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು 19 ಆಗಸ್ಟ್ 2024 ರಿಂದ 24 ಆಗಸ್ಟ್ 2024 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.
ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜುಗಳಿಗೆ ತೆರಳಿ ಮಾಹಿತಿ ಪಡೆಯಬೇಕು. ಹಾಗೂ ಕಾಲೇಜು ಪ್ರವೇಶ ಪತ್ರಗಳನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಇದರ ಲಾಭ ಪಡೆಯಬೇಕೆಂದು ಶಾಸಕ ವಿಠ್ಠಲರಾವ್ ಹಲಗೇಕರ ಮನವಿ ಮಾಡಿದ್ದಾರೆ.
