
प्रसिद्ध यात्रोत्सवाला होणारे अपघात टाळण्यासाठी रस्ता दुरुस्ती करा ; सामाजिक कार्यकर्त्यांची मागणी.
खानापूर ; बेळगाव-तळगुप्पा राज्य महामार्गावरील खानापुर-लिंगणमठ या मुख्य रस्त्यावर अनेक ठिकाणी खड्डे पडले आहेत. त्यामुळे या रस्त्यावरून प्रवास करणाऱ्या प्रवाशांना जीव धोक्यात घालून प्रवास करावा लागत आहे. तसेच वाहनांना ये-जा करताना नरक यात्ना सहन कराव्या लागत आहेत. खानापुर तालुक्यातील या मुख्य रस्त्याचा 20 वर्षापासून विकास झालेला नाही. सदर रस्ता हा मुख्य रस्ता असून, या रस्त्यावर असलेले श्री क्षेत्र कक्केरी बिष्टम्मादेवी मंदिर आहे. या ठिकाणी दरवर्षी मोठी यात्रा भरते. यावर्षी 11 ऑक्टोंबर 2024 पासून मोठ्या प्रमाणात यात्रा भरणार आहे. या यात्रेला संपूर्ण जिल्ह्यातून व राज्यातून तसेच राज्याबाहेरील भावीक मोठ्या संख्येने येत असतात.

त्यासाठी या गोष्टीकडे संबंधित अधिकारी व लोकप्रतिनिधींनी तातडीने लक्ष घालावेत व सर्व भाविकांना आपल्या वाहनाने यात्रेला येताना कोणतीही दुर्घटना घडू नयेत. यासाठी खबरदारीचा उपाय म्हणून रस्त्यावर पडलेले सर्व खड्डे बुजवावेत, असी मागणी सामाजिक कार्यकर्ते ज्योतिबा भेंडीगेरी यांनी निवेदनाद्वारे सार्वजनीक बांधकाम विभागाच्या अधीका्यांकडे केली आहे. यावेळी विठ्ठल हिंडलकर करवे सरचिटणीस, रवि मदिगरा करवे तालुका समन्वयक, रवि मादार बी.आर.आंबेडकर शक्ती संघ अध्यक्ष खानापूर, व आदीजन उपस्थित होते.

ಸುಪ್ರಸಿದ್ಧ ಜಾತ್ರಾ ಮಹೋತ್ಸವಕ್ಕೆ ರಸ್ತೆಯಿಂದ ಅನಾಹುತ ಆಗದಂತೆ ಕ್ರಮ ಕೈಗೊಳ್ಳಿ. ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ
ಬೆಳಗಾವಿ -ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬರುವ ಖಾನಾಪೂರ -ಲಿಂಗನಮಠ ಮುಖ್ಯ ರಸ್ತೆಯಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ತಗ್ಗುಗಳು ಬಿದ್ದು, ತಗ್ಗುಗಳಲ್ಲಿ ನೀರು ತುಂಬಿಕೊಂಡು ಈಗಾಗಲೇ ಸಾರ್ವಜನಿಕರ ಜೀವ ಹಾನಿ ಆಗಿರುತ್ತದೆ. ಅಲ್ಲದೇ ವಾಹನಗಳು ಸಂಚರಿಸುವಾಗ ನರಕಯಾತನೆಯನ್ನು ಅನುಭವಿಸಬೇಕಾಗಿದೆ. ಮತ್ತು ಕಳೆದ 20 ವರ್ಷಗಳಿಂದ ಖಾನಾಪೂರ ತಾಲೂಕಿನಲ್ಲಿ ಇದುವರೆಗೆ ಮುಖ್ಯ ರಸ್ತೆಗಳು ಅಭಿವೃದ್ಧಿ ಕಂಡಿರುವುದಿಲ್ಲ. ಸದರಿ ರಸ್ತೆಯು ಮುಖ್ಯ ರಸ್ತೆಯಾಗಿದ್ದು, ಇದೇ ಮಾರ್ಗದಲ್ಲಿರುವ ಶ್ರೀ ಕ್ಷೇತ್ರ ಕಕ್ಕೇರಿ ಬಿಷ್ಣಮ್ಮಾದೇವಿ ಮಂದಿರದಲ್ಲಿ ದಿ: 11-10-2024ರಿಂದ ಪ್ರತಿವರ್ಷದಂತೆ ದೊಡ್ಡ ಪ್ರಮಾಣದಲ್ಲಿ ಜಾತ್ರೆಯು ನೆರವೇರುತ್ತದೆ. ಜಾತ್ರೆ ಸಮಯದಲ್ಲಿ ಜಿಲ್ಲೆ, ಪರಜಿಲ್ಲೆ, ರಾಜ್ಯ ಮತ್ತು ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಅದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ವಿಷಯದ ಕುರಿತು ಕೂಡಲೇ ಗಮನಹರಿಸಿ ಬರುವ ಎಲ್ಲ ಭಕ್ತಾದಿಗಳು ತಮ್ಮ ವಾಹನಗಳ ಮೂಲಕ ಬರುವ ಸಮಯದಲ್ಲಿ ಯಾವುದೇ ಅನಾಹುತವಾಗದಂತೆ ಮುಂಜಾಗೃತ ಕ್ರಮವಾಗಿ ತುರ್ತಾಗಿ ರಸ್ತೆಯಲ್ಲಿ ಬಿದ್ದಿರುವ ಎಲ್ಲ ತಗ್ಗು ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಅವರು ಮನವಿ ಮಾಡಿಕೊಂಡಿದ್ದಾರೆ
ಈ ಸಂದರ್ಭದಲ್ಲಿ. ವಿಠ್ಠಲ ಹಿಂಡಲಕರ್ ಕರವೇ ಪ್ರಧಾನ ಕಾರ್ಯದರ್ಶಿ, ರವಿ ಮಾದಿಗರ ಕರವೇ ತಾಲೂಕ ಸಂಚಾಲಕರು, ರವಿ ಮಾದಾರ B R ಅಂಬೇಡ್ಕರ್ ಶಕ್ತಿ ಸಂಘ ಅಧ್ಯಕ್ಷರು ಖಾನಾಪುರ, ಮತ್ತು ಇತರರು ಉಪಸ್ಥಿರಿದ್ದರು
