बेळगावात घरफोडीचा उलगडा; दिल्लीतील आरोपी अटकेत, 45 लाखांपेक्षा जास्त किमतीचे सोनं जप्त.
बेळगाव : शहरातील शहापूर परिसरात घडलेल्या घरफोडी प्रकरणाचा शहापूर पोलिसांनी यशस्वी छडा लावत दिल्लीतील एका आरोपीला अटक केली आहे. या कारवाईत सुमारे 45 लाख 56 हजार 390 रुपयांचा मुद्देमाल हस्तगत करण्यात आला आहे.
भारत नगर, शहापूर येथील एका घराचे कुलूप तोडून अज्ञात व्यक्तीने घरात प्रवेश करत मोठ्या प्रमाणात सोन्याचे दागिने लंपास केले होते. याप्रकरणी शहापूर पोलीस ठाण्यात गुन्हा क्रमांक 42/2026 दाखल करण्यात आला होता. बीएनएस 2023 अंतर्गत कलम 331(3), 331(4), व 305 अन्वये गुन्ह्याची नोंद झाली होती.
तपासादरम्यान पोलिसांनी मिंटू विश्वास उर्फ चिंटू (वय 52 वर्षे, रा. डी-284, बस्ती काला, तिलक नगर, पश्चिम दिल्ली) याला ताब्यात घेतले. त्याच्याकडून सुमारे 294,190 ग्रॅम वजनाचे सोन्याचे दागिने जप्त करण्यात आले असून त्यांची अंदाजित किंमत 44 लाख 86 हजार 930 रुपये आहे. याशिवाय चोरीसाठी वापरण्यात आलेली होंडा ॲक्टिव्हा दुचाकी (किंमत सुमारे 70 हजार रुपये) देखील पोलिसांनी जप्त केली आहे.
ही संपूर्ण कारवाई पोलीस आयुक्त, बेळगाव शहर तसेच उप-पोलीस आयुक्त (कायदा व सुव्यवस्था) व उप-पोलीस आयुक्त (गुन्हे व प्रशासन) यांच्या मार्गदर्शनाखाली पार पडली. सहाय्यक पोलीस आयुक्त, मार्केट उपविभाग यांच्या देखरेखीखाली पोलीस निरीक्षक एस. एस. सिमानी, पीएसआय मणिकंठ पुजारी, पीएसआय प्रवीण बिरादार, पीएसआय मंजुनाथ भजन्त्री (सीसीबी) आणि त्यांच्या पथकाने विशेष मेहनत घेतली.
तसेच शंकर गुडदईगोल, श्रीधर तळवार, अजित शिपुरे, श्रीशैल गोकावी, शिवराज पच्चन्नवर, श्रीरंग भस्म, खादरसाब खानम्मन्नवर, लक्ष्मण कडोलकर, यासिर जमादार, फिंगरप्रिंट विभागाचे निरीक्षक आनंद मेत्री तसेच तांत्रिक विभागातील रमेश अक्की आणि महादेव कासीद यांनी तपासात मोलाची भूमिका बजावली.
या उल्लेखनीय कामगिरीबद्दल पोलीस आयुक्तांनी संबंधित अधिकारी व कर्मचाऱ्यांचे कौतुक केले आहे.
ದೆಹಲಿ ಕಳ್ಳನ ಬಂಧನ; 45 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಜಪ್ತಿ.
ಬೆಳಗಾವಿ : ಬೆಳಗಾವಿ ನಗರದ ಶಾಹಾಪುರ ಪ್ರದೇಶದಲ್ಲಿ ಮನೆ ಒಡೆದು ಚಿನ್ನದ ಆಭರಣಗಳನ್ನು ಕಳವು ಮಾಡಿದ ಆರೋಪಿಯನ್ನು ಶಾಹಾಪುರ ಪೊಲೀಸರು ಬಂಧಿಸಿದ್ದು, ಅವನಿಂದ ಒಟ್ಟು 45 ಲಕ್ಷ 56 ಸಾವಿರ 390 ರೂಪಾಯಿ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶಾಹಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 42/2026 ಅಡಿಯಲ್ಲಿ ಬಿಎನ್ಎಸ್ 2023ರ ಕಲಂ 331 (3), 331 (4) ಮತ್ತು 305 ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಭಾರತನಗರ, ಶಾಹಾಪುರದಲ್ಲಿರುವ ಒಂದು ಮನೆಯ ಬಾಗಿಲಿನ ತಾಳೆ ಒಡೆದು ಒಳನುಗ್ಗಿ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಮಿಂಟು ವಿಶ್ವಾಸ್ ಅಲಿಯಾಸ್ ಚಿಂಟು, ವಯಸ್ಸು 52 ವರ್ಷ, ಡಿ-284, ಬಸ್ತಿ ಕಾಲಾ, ತಿಲಕ್ ನಗರ, ಪಶ್ಚಿಮ ದೆಹಲಿ ನಿವಾಸಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 294.190 ಗ್ರಾಂ ತೂಕದ ಚಿನ್ನದ ಆಭರಣಗಳು, ಅಂದಾಜು ಮೌಲ್ಯ 44 ಲಕ್ಷ 86 ಸಾವಿರ 390 ರೂಪಾಯಿ ಹಾಗೂ ಕಳ್ಳತನಕ್ಕೆ ಬಳಸಿದ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನ (ಅಂದಾಜು ಮೌಲ್ಯ 70 ಸಾವಿರ ರೂಪಾಯಿ) ಜಪ್ತಿ ಮಾಡಲಾಗಿದೆ. ಒಟ್ಟು 45 ಲಕ್ಷ 56 ಸಾವಿರ 390 ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಆಡಳಿತ) ಹಾಗೂ ಮಾರ್ಕೆಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಎಸ್. ಸಿಮಾನಿ, ಪಿಎಸ್ಐ ಮಣಿಕಂಠ ಪೂಜಾರಿ, ಪಿಎಸ್ಐ ಪ್ರವೀಣ ಬಿರಾದಾರ್, ಪಿಎಸ್ಐ ಮಂಜುನಾಥ ಭಜನ್ತ್ರಿ (ಸಿಸಿಬಿ) ಹಾಗೂ ಶಂಕರ್ ಗುಡದೈಗೋಳ, ಶ್ರೀಧರ ತಳವಾರ, ಅಜಿತ ಶಿಪುರೇ, ಶ್ರೀಶೈಲ್ ಗೊಕಾವಿ, ಶಿವರಾಜ ಪಚ್ಚನ್ನವರ, ಶ್ರೀರಂಗ ಭಸ್ಮ, ಖಾದರ್ಸಾಬ್ ಖಾನಮ್ಮನ್ನವರ, ಲಕ್ಷ್ಮಣ ಕಡೋಲ್ಕರ್, ಯಾಸಿರ್ ಜಮಾದಾರ್, ಫಿಂಗರ್ಪ್ರಿಂಟ್ ವಿಭಾಗದ ಇನ್ಸ್ಪೆಕ್ಟರ್ ಆನಂದ ಮೆತ್ರಿ, ತಾಂತ್ರಿಕ ವಿಭಾಗದ ರಮೇಶ್ ಅಕ್ಕಿ ಮತ್ತು ಮಹಾದೇವ ಕಾಸೀದ ಅವರು ವಿಶೇಷ ಪರಿಶ್ರಮ ಪಟ್ಟಿದ್ದಾರೆ.
ಈ ಅತ್ಯುತ್ತಮ ಕಾರ್ಯದ ಬಗ್ಗೆ ಪೊಲೀಸ್ ಆಯುಕ್ತರು ಸಂಬಂಧಿತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರಶಂಸಿಸಿದ್ದಾರೆ.


