
बेळगाव : पंतप्रधानांच्या बेळगाव दौऱ्यातील कार्यक्रमात सुरक्षा व शिष्टाचारात कसूर होणार नाही याची दक्षता घेण्यात यावी. कार्यक्रम यशस्वी करण्यासाठी सर्वांनी समन्वयाने काम करावे, अशा सूचना कृषी राज्यमंत्री शोभा करंदलाजे यांनी दिल्या आहेत.
पंतप्रधानांच्या बेळगाव दौऱ्यातील कार्यक्रमाच्या पार्श्वभूमीवर सुवर्ण विधानसौधच्या सभागृहात आज गुरुवारी आयोजित आढावा बैठकीच्या अध्यक्षस्थानी ते बोलत होते.यावेळी पुढे बोलताना त्या म्हणाल्या, याशिवाय कार्यक्रमात सहभागी होणार्या लाभार्थ्यांच्या सुरक्षित वाहतुकीसाठी योग्य वाहतूक व्यवस्था करण्यात यावी.पंतप्रधान ज्या मार्गांवर प्रवास करतील त्या मार्गांवर आवश्यक त्या ठिकाणी दुरुस्ती किंवा बांधकामाची कामे करण्यात यावीत.
जिल्ह्याच्या विविध भागातून कार्यक्रमात सहभागी होणाऱ्या लाभार्थ्यांनी, लोकांना शुद्ध पिण्याचे पाणी आणि चांगले जेवण देण्यासाठी प्रत्येक ठिकाणी अन्न सुरक्षा अधिकाऱ्यांची टीम तैनात करावी.केवळ उच्चभ्रू लोकांच्याच नव्हे तर सर्वसामान्यांच्याही सोयीसाठी आपत्कालीन वैद्यकीय सुविधा देण्यासाठी वैद्यकीय पथके आणि रुग्णवाहिका तैनात कराव्यात.S.P.G.टीम आल्यानंतर सखोल चर्चा करून कार्यक्रमाची अंतिम रूपरेषा ठरवावी.सेंद्रिय व तृणधान्यांचे प्रदर्शन आयोजित करण्यासाठी चर्चा करून योग्य ती पावले उचलणार असल्याचेही मंत्री शोभा करंदलाजे यांनी सांगितले.
कार्यक्रमाच्या तयारीची माहिती देताना जिल्हाधिकारी नितेश पाटील म्हणाले की, सर्व तयारी सुरू असून एस.पी.जी. अधिकाऱ्यांचे पथक आल्यानंतरच स्पष्ट चित्र समोर येईल, असे ते म्हणाले.वाहतूक व्यवस्था, स्टेज बांधकाम, पार्किंग आदी व्यवस्था करण्यात येत असल्याचे त्यांनी सांगितले.
ಬೆಳಗಾವಿ :ಪ್ರಧಾನಿ ಬೆಳಗಾವಿ ಭೇಟಿ ಸಂದರ್ಭದಲ್ಲಿ ಭದ್ರತೆ ಹಾಗೂ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.
ಪ್ರಧಾನಿಯವರ ಬೆಳಗಾವಿ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಗುರುವಾರ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳ ಸುರಕ್ಷಿತ ಸಾಗಾಟಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು.ಪ್ರಧಾನಿ ಅವರು ಸಂಚರಿಸುವ ರಸ್ತೆಗಳಲ್ಲಿ ಅಗತ್ಯ ಬಿದ್ದಲ್ಲಿ ದುರಸ್ತಿ ಅಥವಾ ನಿರ್ಮಾಣ ಕಾರ್ಯ ನಡೆಯಬೇಕು. .ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳು ಪ್ರತಿ ಸ್ಥಳದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡವನ್ನು ನಿಯೋಜಿಸಿ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಉತ್ತಮ ಆಹಾರ ಒದಗಿಸಲು ಅನುಕೂಲವಾಗುವಂತೆ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ವೈದ್ಯಕೀಯ ತಂಡಗಳು ಮತ್ತು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಬೇಕು. ಗಣ್ಯರು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ.ಎಸ್ ಪಿಜಿ ತಂಡ ಬಂದ ನಂತರ ಕೂಲಂಕುಷವಾಗಿ ಚರ್ಚೆ ನಡೆಸಿ ಕಾರ್ಯಕ್ರಮದ ಅಂತಿಮ ರೂಪುರೇಷೆ ನಿರ್ಧರಿಸಬೇಕು.ಸಾವಯವ ಮತ್ತು ಆಹಾರ ಧಾನ್ಯಗಳ ಪ್ರದರ್ಶನ ಆಯೋಜಿಸಲು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕಾರ್ಯಕ್ರಮದ ಸಿದ್ಧತೆ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಎಸ್.ಪಿ.ಜಿ. ಅಧಿಕಾರಿಗಳ ತಂಡ ಬಂದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದ ಅವರು, ಸಾರಿಗೆ ವ್ಯವಸ್ಥೆ, ವೇದಿಕೆ ನಿರ್ಮಾಣ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
