अळ्णावर रेल्वे स्थानकावर कडेकोट बंदोबस्त; राज्यपालांच्या दौऱ्यापूर्वी एसपी गुंजन आर्या यांची पाहणी.
अळ्णावर (प्रतिनिधी) : अमृत भारत स्थानक योजनेअंतर्गत पुनर्विकसित करण्यात आलेल्या अळ्णावर रेल्वे स्थानकाच्या उद्घाटन सोहळ्यासाठी शुक्रवारी राज्यपाल थावरचंद गेहलोत, केंद्रीय मंत्री प्रल्हाद जोशी यांच्यासह अनेक मान्यवर उपस्थित राहणार असल्याने स्थानक परिसरात कडेकोट सुरक्षा व्यवस्था करण्यात आली आहे, अशी माहिती जिल्हा पोलीस अधीक्षक (एसपी) गुंजन आर्या यांनी दिली.
गुरुवारी अळ्णावर रेल्वे स्थानकाला भेट देऊन सुरक्षा व्यवस्था आणि कार्यक्रमाच्या तयारीची पाहणी केल्यानंतर त्यांनी पत्रकारांशी संवाद साधला. कार्यक्रमाच्या सुरक्षेसाठी सुमारे २०० पोलीस कर्मचारी तैनात करण्यात आले असून, वाहनतळासाठी स्वतंत्र व्यवस्था करण्यात आली आहे. तसेच नागरिकांच्या वाहतुकीस कोणताही अडथळा निर्माण होऊ नये यासाठी आवश्यक उपाययोजना करण्यात आल्याचे त्यांनी सांगितले.
रेल्वे सुरक्षा दल (आरपीएफ), सरकारी रेल्वे पोलीस (जीआरपी), श्वानपथक (डॉग स्क्वॉड) तसेच तांत्रिक सुरक्षा पथके तैनात करण्यात आली आहेत. कार्यक्रमस्थळ आणि रेल्वे स्थानक परिसराची कसून तपासणी करण्यात येत असून, सर्व प्रकारच्या सुरक्षा उपाययोजना करण्यात आल्या आहेत, असेही त्यांनी स्पष्ट केले.
राज्यपाल थावरचंद गेहलोत हे हुबळीहून विशेष रेल्वेगाडीद्वारे अळ्णावर येथे येणार असल्याने त्यांच्या संपूर्ण मार्गावर विशेष सतर्कता बाळगण्यात आली असून, प्रत्येक टप्प्यावर सुरक्षा व्यवस्था अधिक मजबूत करण्यात आली आहे.
यावेळी पीएसआय बसवराज यद्दलगुड्ड, रेल्वे विभागाचे अधिकारी, रेल्वे विभागाचे जनसंपर्क निरीक्षक आय. जी. उद्दनय्या, रमेश चव्हाण तसेच वरिष्ठ विभागीय अभियंता ओमप्रकाश उपस्थित होते.
ಅಳ್ನಾವರ ರೈಲು ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್; ರಾಜ್ಯಪಾಲರ ಭೇಟಿ ಹಿನ್ನೆಲೆ ಎಸ್ಪಿ ಗುಂಜನ್ ಆರ್ಯ ಪರಿಶೀಲನೆ.
ಅಳ್ನಾವರ (ಪ್ರತಿನಿಧಿ) : ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರ್ಅಭಿವೃದ್ಧಿಗೊಂಡಿರುವ ಅಳ್ನಾವರ ರೈಲು ನಿಲ್ದಾಣದ ಉದ್ಘಾಟನಾ ಸಮಾರಂಭವು ಶುಕ್ರವಾರ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ (ಎಸ್ಪಿ) ಗುಂಜನ್ ಆರ್ಯ ತಿಳಿಸಿದ್ದಾರೆ.
ಗುರುವಾರ ಅಳ್ನಾವರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾರ್ಯಕ್ರಮದ ಭದ್ರತೆಗಾಗಿ ಸುಮಾರು 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ), ಶ್ವಾನ ದಳ (ಡಾಗ್ ಸ್ಕ್ವಾಡ್) ಹಾಗೂ ತಾಂತ್ರಿಕ ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮಗ್ರ ತಪಾಸಣೆ ನಡೆಸಲಾಗುತ್ತಿದ್ದು, ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಹುಬ್ಬಳ್ಳಿಯಿಂದ ವಿಶೇಷ ರೈಲಿನ ಮೂಲಕ ಅಳ್ನಾವರಿಗೆ ಆಗಮಿಸಲಿರುವುದರಿಂದ, ಅವರ ಸಂಪೂರ್ಣ ಸಂಚಾರ ಮಾರ್ಗದಲ್ಲಿ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಪ್ರತಿಯೊಂದು ಹಂತದಲ್ಲೂ ಭದ್ರತೆಯನ್ನು ಇನ್ನಷ್ಟು ಬಲಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಬಸವರಾಜ ಯದ್ದಲಗುಡ್ಡ, ರೈಲ್ವೆ ಇಲಾಖೆಯ ಅಧಿಕಾರಿಗಳು, ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ನಿರೀಕ್ಷಕ ಐ. ಜಿ. ಉದ್ದನಯ್ಯ, ರಮೇಶ್ ಚವ್ಹಾಣ್ ಹಾಗೂ ಹಿರಿಯ ವಿಭಾಗೀಯ ಅಭಿಯಂತರ ಓಂಪ್ರಕಾಶ್ ಉಪಸ್ಥಿತರಿದ್ದರು.

