मोहरम मिरवणुकीत विषारी कॅप्सूल वाटपाचा कट उधळला; 14,900, कॅप्सूल जप्त, उच्चशिक्षित आरोपी अटकेत.
मुंबई : प्रतिनिधी
मुंबईतील भायखळा परिसरात मोहरमच्या मिरवणुकीदरम्यान हजारो नागरिकांच्या जीवाशी खेळण्याचा कथित कट मुंबई पोलिसांनी वेळेत उधळून लावला आहे. संशयास्पद कॅप्सूलचे वाटप करणाऱ्या ३९ वर्षीय फैयाज प्रेमजी या आरोपीला अटक करण्यात आली असून त्याच्याकडून तब्बल १४,९०० विषारी कॅप्सूल जप्त करण्यात आल्या आहेत. प्राथमिक चौकशीत आरोपीने मोठ्या प्रमाणावर विषारी कॅप्सूल वाटप करण्याचा हेतू असल्याची माहिती समोर आली असल्याचे पोलिसांनी सांगितले आहे.
शुक्रवारी रात्री मोहरमची मिरवणूक सुरू असताना काही व्यक्ती गर्दीत कॅप्सूल वाटत असल्याचे एका महिलेच्या लक्षात आले. तिने कॅप्सूलबाबत विचारणा केली असता ती वेदनाशामक औषध असल्याचे सांगण्यात आले. मात्र संशय आल्याने संबंधित महिलेने तातडीने पोलिसांना माहिती दिली. पोलिसांनी घटनास्थळी धाव घेत आरोपीला ताब्यात घेतले आणि त्याच्याकडील सर्व कॅप्सूल जप्त केल्या.
दरम्यान, पहाटे एका तरुणाला तीव्र पोटदुखी व उलट्यांमुळे रुग्णालयात दाखल करण्यात आले. रुग्णालयातून मिळालेल्या वैद्यकीय अहवालानंतर पोलिसांनी या घटनेची सांगड संशयित कॅप्सूलशी घातली. त्यानंतर आरोपीची सखोल चौकशी करण्यात आली असता त्याने धक्कादायक माहिती दिल्याचे पोलिसांनी सांगितले.
तपासात आरोपीने सुमारे ३० हजार रिकाम्या कॅप्सूल आणि ५० किलो झिंक फॉस्फाईड या अत्यंत विषारी रसायनाची मागणी केल्याचे समोर आले आहे. प्रत्येक कॅप्सूलमध्ये सुमारे एक ग्रॅम विष भरून लोकांमध्ये वाटप करण्याची तयारी त्याने केली होती, अशी माहिती तपासातून पुढे आली आहे. आतापर्यंत चार जणांना या कॅप्सूल दिल्याचेही पोलिसांनी नमूद केले आहे.
पुण्यातील विमाननगर येथे राहणारा फैयाज प्रेमजी हा बीबीएपर्यंत शिक्षण घेतलेला असून तो उच्चशिक्षित असल्याची माहिती समोर आली आहे. गेल्या वर्षी त्याने इराण आणि इराकचा दौरा केल्याचेही तपासात निष्पन्न झाले आहे. मात्र या दौऱ्यांचा आणि सद्य प्रकरणाचा काही संबंध आहे का, तसेच या कटामागे इतर कोणी सहभागी आहे का, याचा सर्वंकष तपास मुंबई पोलीस करत आहेत.
या प्रकरणी विविध कलमांखाली गुन्हा दाखल करण्यात आला असून जप्त केलेल्या कॅप्सूल व रासायनिक पदार्थांचे न्यायवैद्यक प्रयोगशाळेत परीक्षण करण्यात येत आहे. पोलिसांनी नागरिकांना अफवांवर विश्वास न ठेवण्याचे आणि कोणतीही संशयास्पद वस्तू किंवा व्यक्ती आढळल्यास तात्काळ पोलिसांना माहिती देण्याचे आवाहन केले आहे.
ಮೊಹರಂ ಮೆರವಣಿಗೆಯಲ್ಲಿ ವಿಷಕಾರಿ ಕ್ಯಾಪ್ಸುಲ್ ವಿತರಣೆ ಸಂಚು ವಿಫಲ; 14,900 ಕ್ಯಾಪ್ಸುಲ್ ವಶ, ಉನ್ನತ ಶಿಕ್ಷಣ ಪಡೆದ ಆರೋಪಿ ಬಂಧನ.
ಮುಂಬೈ : ಪ್ರತಿನಿಧಿ
ಮುಂಬೈನ ಭಾಯ್ಖಳಾ ಪ್ರದೇಶದಲ್ಲಿ ಮೊಹರಂ ಮೆರವಣಿಗೆಯ ವೇಳೆ ಸಾವಿರಾರು ನಾಗರಿಕರ ಜೀವದೊಂದಿಗೆ ಆಟವಾಡುವ ಉದ್ದೇಶದಿಂದ ರೂಪಿಸಲಾಗಿದ್ದ ಎನ್ನಲಾದ ಸಂಚುವನ್ನು ಮುಂಬೈ ಪೊಲೀಸರು ಸಮಯಕ್ಕೆ ಸರಿಯಾಗಿ ಭೇದಿಸಿದ್ದಾರೆ. ಸಂಶಯಾಸ್ಪದ ಕ್ಯಾಪ್ಸುಲ್ಗಳನ್ನು ಹಂಚುತ್ತಿದ್ದ 39 ವರ್ಷದ ಫಯ್ಯಾಜ್ ಪ್ರೇಮ್ಜಿ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ಒಟ್ಟು 14,900 ವಿಷಕಾರಿ ಕ್ಯಾಪ್ಸುಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ಕ್ಯಾಪ್ಸುಲ್ಗಳನ್ನು ಸಾರ್ವಜನಿಕರಿಗೆ ಹಂಚುವ ಉದ್ದೇಶ ಹೊಂದಿದ್ದಾನೆ ಎಂಬ ಮಾಹಿತಿ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಮೊಹರಂ ಮೆರವಣಿಗೆ ನಡೆಯುತ್ತಿದ್ದ ವೇಳೆ ಕೆಲವರು ಜನಸಮೂಹದಲ್ಲಿ ಕ್ಯಾಪ್ಸುಲ್ಗಳನ್ನು ಹಂಚುತ್ತಿರುವುದನ್ನು ಒಬ್ಬ ಮಹಿಳೆ ಗಮನಿಸಿದರು. ಅವರು ಕ್ಯಾಪ್ಸುಲ್ ಬಗ್ಗೆ ಪ್ರಶ್ನಿಸಿದಾಗ ಅದು ನೋವು ನಿವಾರಕ ಔಷಧಿ ಎಂದು ಹೇಳಲಾಯಿತು. ಆದರೆ ಅನುಮಾನಗೊಂಡ ಮಹಿಳೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಎಲ್ಲಾ ಕ್ಯಾಪ್ಸುಲ್ಗಳನ್ನು ಜಪ್ತಿ ಮಾಡಿದರು.
ಈ ಮಧ್ಯೆ, ಮುಂಜಾನೆ ಒಬ್ಬ ಯುವಕನಿಗೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಿಂದ ಬಂದ ವೈದ್ಯಕೀಯ ವರದಿಯ ನಂತರ ಪೊಲೀಸರು ಈ ಘಟನೆಗೆ ಸಂಶಯಾಸ್ಪದ ಕ್ಯಾಪ್ಸುಲ್ಗಳ ಸಂಪರ್ಕವಿರಬಹುದೆಂದು ಶಂಕಿಸಿದರು. ಬಳಿಕ ಆರೋಪಿಯನ್ನು ಸವಿಸ್ತಾರವಾಗಿ ವಿಚಾರಣೆ ನಡೆಸಿದಾಗ ಆತ ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಆರೋಪಿ ಸುಮಾರು 30 ಸಾವಿರ ಖಾಲಿ ಕ್ಯಾಪ್ಸುಲ್ಗಳು ಹಾಗೂ 50 ಕಿಲೋಗ್ರಾಂ ಜಿಂಕ್ ಫಾಸ್ಫೈಡ್ ಎಂಬ ಅತ್ಯಂತ ವಿಷಕಾರಿ ರಾಸಾಯನಿಕವನ್ನು ಖರೀದಿಸಲು ಆದೇಶಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಪ್ರತಿಯೊಂದು ಕ್ಯಾಪ್ಸುಲ್ನಲ್ಲಿ ಸುಮಾರು ಒಂದು ಗ್ರಾಂ ವಿಷ ತುಂಬಿ ಜನರಿಗೆ ಹಂಚಲು ಸಿದ್ಧತೆ ನಡೆಸಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ. ಇದುವರೆಗೆ ನಾಲ್ವರಿಗೆ ಈ ಕ್ಯಾಪ್ಸುಲ್ಗಳನ್ನು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪುಣೆಯ ವಿಮಾನನಗರ ನಿವಾಸಿಯಾಗಿರುವ ಫಯ್ಯಾಜ್ ಪ್ರೇಮ್ಜಿ ಬಿಬಿಎ ಪದವಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಉನ್ನತ ಶಿಕ್ಷಣ ಪಡೆದ ವ್ಯಕ್ತಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಆತ ಇರಾನ್ ಮತ್ತು ಇರಾಕ್ಗೆ ಭೇಟಿ ನೀಡಿದ್ದಾನೆ ಎಂಬುದೂ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಆ ಪ್ರವಾಸಗಳಿಗೆ ಈ ಪ್ರಕರಣದೊಂದಿಗೆ ಯಾವುದೇ ಸಂಬಂಧವಿದೆಯೇ? ಅಥವಾ ಈ ಸಂಚುವಿನ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಎಲ್ಲಾ ಆಯಾಮಗಳಲ್ಲಿ ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡಿರುವ ಕ್ಯಾಪ್ಸುಲ್ಗಳು ಹಾಗೂ ರಾಸಾಯನಿಕ ಪದಾರ್ಥಗಳನ್ನು ನ್ಯಾಯವೈದ್ಯಕೀಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಸಂಶಯಾಸ್ಪದ ವಸ್ತು ಅಥವಾ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.


