पाच वर्षांखालील सर्व बालकांना पोलिओचे दोन थेंब द्या; डॉ. संगीता कलमठ यांचे आवाहन.
कक्केरी : प्रतिनिधी
पाच वर्षांखालील प्रत्येक बालकाला पोलिओ प्रतिबंधक लसीचे दोन थेंब देऊन पोलिओमुक्त भारताच्या अभियानात सर्वांनी सहभागी व्हावे, असे आवाहन सरकारी रुग्णालयाच्या वैद्यकीय अधिकारी डॉ. संगीता कलमठ यांनी केले.
कक्केरी येथील सरकारी मॉडेल कन्नड उच्च प्राथमिक शाळेच्या परिसरात शनिवारी आयोजित करण्यात आलेल्या पल्स पोलिओ जनजागृती रॅलीला हिरवा झेंडा दाखवून त्या बोलत होत्या.
यावेळी त्यांनी अंगणवाडी सेविका, आशा कार्यकर्त्या व त्यांच्या सहाय्यकांनी गावातील पाच वर्षांखालील प्रत्येक बालकाला पल्स पोलिओ बूथवर आणून लसीकरण करून घ्यावे, असे आवाहन केले.
आशा कार्यकर्त्या शिवलीला पत्रीमठ यांनी रविवारी पोलिओ बूथवर तसेच सोमवार व मंगळवारी घरोघरी आणि शेतवस्त्यांवर जाऊन पाच वर्षांखालील सर्व बालकांना पोलिओ लस दिली जाणार असल्याची माहिती देत पालकांनी या मोहिमेचा लाभ घ्यावा, असे सांगितले.
या जनजागृती रॅलीत शाळेतील विद्यार्थी, शिक्षक, रुग्णालय कर्मचारी, आशा व अंगणवाडी कार्यकर्त्या सहभागी झाल्या. गावातील प्रमुख रस्त्यांवरून रॅली काढून ग्रामस्थांमध्ये पल्स पोलिओ मोहिमेबाबत जनजागृती करण्यात आली.
यावेळी एम. आय. बागवान, स्मिता सामुळ, जीविता चव्हाण, पूनम नायक, महम्मद अली गुलेदकोप्प, कस्तुरी रेडेकर, संध्याराणी पानेरी, राधा एडेकेनवर, अश्विनी पाटील, अनिता पिळ्ळे, विजय नायक, संतोष पाटील, गायत्री देसाई, सुवर्णा बडिगेर यांच्यासह शाळेतील विद्यार्थी, पालक आणि ग्रामस्थ उपस्थित होते.
ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆಯ ಎರಡು ಹನಿಗಳನ್ನು ತಪ್ಪದೇ ಹಾಕಿಸಿ; ಡಾ. ಸಂಗೀತಾ ಕಲ್ಮಠ ಮನವಿ.
ಕಕ್ಕೇರಿ : ಪ್ರತಿನಿಧಿ
ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೊ ತಡೆಗಟ್ಟುವ ಲಸಿಕೆಯ ಎರಡು ಹನಿಗಳನ್ನು ನೀಡಿ, ಪೋಲಿಯೊ ಮುಕ್ತ ಭಾರತದ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂಗೀತಾ ಕಲ್ಮಠ ಅವರು ಮನವಿ ಮಾಡಿದರು.
ಕಕ್ಕೇರಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಲಾದ ಪಲ್ಸ್ ಪೋಲಿಯೊ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಅವರ ಸಹಾಯಕರು ಗ್ರಾಮದಲ್ಲಿರುವ ಐದು ವರ್ಷದೊಳಗಿನ ಪ್ರತಿಯೊಂದು ಮಗುವನ್ನು ಪಲ್ಸ್ ಪೋಲಿಯೊ ಲಸಿಕಾ ಕೇಂದ್ರಕ್ಕೆ ಕರೆತಂದು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಕರೆ ನೀಡಿದರು.
ಆಶಾ ಕಾರ್ಯಕರ್ತೆ ಶಿವಲೀಲಾ ಪತ್ರಿಮಠ ಅವರು ಮಾತನಾಡಿ, ಭಾನುವಾರ ಪಲ್ಸ್ ಪೋಲಿಯೊ ಲಸಿಕಾ ಕೇಂದ್ರಗಳಲ್ಲಿ ಹಾಗೂ ಸೋಮವಾರ ಮತ್ತು ಮಂಗಳವಾರ ಮನೆ ಮನೆಗೆ ಹಾಗೂ ತೋಟ-ಹೊಲಗಳಿಗೆ ತೆರಳಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಲಸಿಕೆ ನೀಡಲಾಗುವುದು. ಆದ್ದರಿಂದ ಪಾಲಕರು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಜಾಗೃತಿ ಜಾಥಾದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಪಲ್ಸ್ ಪೋಲಿಯೊ ಅಭಿಯಾನದ ಕುರಿತು ಗ್ರಾಮಸ್ಥರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಎಂ. ಐ. ಬಾಗವಾನ್, ಸ್ಮಿತಾ ಸಾಮೂಳ, ಜೀವಿತಾ ಚವ್ಹಾಣ್, ಪೂನಂ ನಾಯಕ, ಮಹಮ್ಮದ್ ಅಲಿ ಗುಲೇದಕೊಪ್ಪ, ಕಸ್ತೂರಿ ರೆಡೇಕರ್, ಸಂಧ್ಯಾರಾಣಿ ಪಾನೇರಿ, ರಾಧಾ ಎಡೆಕೆನವರ, ಅಶ್ವಿನಿ ಪಾಟೀಲ್, ಅನಿತಾ ಪಿಳ್ಳೆ, ವಿಜಯ ನಾಯಕ, ಸಂತೋಷ ಪಾಟೀಲ್, ಗಾಯತ್ರಿ ದೇಸಾಯಿ, ಸುವರ್ಣಾ ಬಡಿಗೇರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


