धावत्या कारमध्ये चाकूहल्ला व पेट्रोल बॉम्बचा स्फोट; प्रियकराचा होरपळून मृत्यू, परिचारिका युवती जखमी.
बेंगळूर / तुमकूर : प्रतिनिधी
एकतर्फी प्रेम, संताप आणि सूडभावनेतून घडलेल्या धक्कादायक घटनेने कर्नाटक हादरले आहे. धावत्या कारमध्ये प्रेयसीवर चाकूने हल्ला करून त्यानंतर पेट्रोल बॉम्बचा स्फोट घडवून आणल्याच्या घटनेत ३० वर्षीय तरुणाचा जागीच होरपळून मृत्यू झाला, तर त्याची २३ वर्षीय प्रेयसी गंभीर जखमी झाली आहे. ही थरारक घटना शनिवारी तुमकूर–बेंगळूर–पुणे राष्ट्रीय महामार्गावरील शिरा तालुक्यातील जोगीहळ्ळी परिसरात घडली.
मृत तरुणाची ओळख नागेंद्र (वय ३०) अशी झाली आहे. पोलिसांनी दिलेल्या माहितीनुसार, नागेंद्रने बेंगळूरहून अंकोल्याकडे जाण्यासाठी एक खासगी कार भाड्याने घेतली होती. त्यानंतर त्याने जयनगर परिसरातून आपल्या परिचयातील युवतीला जबरदस्तीने कारमध्ये बसवले. प्रवासादरम्यान दोघांमध्ये तीव्र वाद झाला आणि संतापाच्या भरात नागेंद्रने तिच्यावर चाकूने हल्ला केल्याचा आरोप आहे.
घटनेची गंभीरता लक्षात येताच कारचालकाने वाहन तातडीने रस्त्याच्या कडेला थांबवले. चालक आणि जखमी युवती दोघेही जीव वाचवण्यासाठी कारबाहेर पळाले. त्याच वेळी नागेंद्रने कारमध्ये आणलेला पेट्रोल बॉम्ब पेटवून स्फोट घडवून आणला. काही क्षणांत कारला भीषण आग लागली आणि नागेंद्र त्यात अडकून जळून मृत्युमुखी पडला.
या स्फोटात कार पूर्णपणे जळून खाक झाली. कारचालकाने पत्नीचे दागिने गहाण ठेवून ही कार खरेदी केल्याचे समोर आले असून, या घटनेमुळे त्याचे मोठे आर्थिक नुकसान झाले आहे.
जखमी युवतीवर सध्या बेंगळूर येथील संजय गांधी रुग्णालयात उपचार सुरू आहेत. ती तेथे परिचारिका म्हणून कार्यरत असून तिची प्रकृती स्थिर असल्याचे सांगितले जात आहे.
तीन वर्षांची ओळख; नकारातून संताप
तपासात समोर आलेल्या माहितीनुसार, नागेंद्र आणि युवती हे दोघेही मूळचे अंकोला येथील असून त्यांची ओळख सुमारे तीन वर्षांपूर्वी झाली होती. नागेंद्र युवतीवर प्रेम करत होता; मात्र अलीकडच्या काळात युवती त्याला टाळू लागल्याने तो संतप्त झाला होता. याच रागातून त्याने शनिवारी सकाळी साडेअकराच्या सुमारास तिचे अपहरण करून हा जीवघेणा कट रचल्याचा संशय व्यक्त केला जात आहे.
पोलीस तपास सुरू
जखमी युवतीच्या मैत्रिणीने दिलेल्या तक्रारीवरून सिद्धापूर पोलीस ठाण्यात अपहरण, खुनाचा प्रयत्न आणि इतर संबंधित कलमांखाली गुन्हा दाखल करण्यात आला आहे. पेट्रोल बॉम्ब आत्महत्येच्या उद्देशाने आणला होता की प्रेयसीची हत्या करण्यासाठी, याचा तपास पोलीस करत असून घटनास्थळावरील पुरावे आणि फॉरेन्सिक अहवालाच्या आधारे पुढील कारवाई केली जाणार आहे.
या घटनेमुळे राष्ट्रीय महामार्गावर काही काळ वाहतूक विस्कळीत झाली होती. पोलिसांनी घटनास्थळ पंचनामा करून तपासाला वेग दिला असून, प्रेमसंबंधातून उद्भवलेल्या वादाचे हे अत्यंत भीषण रूप असल्याची चर्चा परिसरात सुरू आहे.
ಪ್ರಿಯಕರನಿಂದ ಕಾರಿನಲ್ಲೇ ಸ್ಫೋಟ; ಯುವಕ ಕಾರಿನೊಂದಿಗೆ ಸುಟ್ಟು ಕರಕಲು : ಚಾಕು ದಾಳಿಯಲ್ಲಿ ಯುವತಿ ಗಾಯಗೊಂಡಳು
ಬೆಂಗಳೂರು : ಆಕ್ರೋಶಗೊಂಡ ಪ್ರಿಯಕರನೊಬ್ಬ ಚಲಿಸುತ್ತಿದ್ದ ಕಾರಿನಲ್ಲೇ ಯುವತಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿ, ಬಳಿಕ ಪೆಟ್ರೋಲ್ ಬಾಂಬ್ ಸ್ಫೋಟಗೊಳಿಸಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಪ್ರಿಯಕರ ಕಾರಿನೊಂದಿಗೆ ಬೆಂಕಿಗಾಹುತಿಯಾಗಿ ಮೃತಪಟ್ಟಿದ್ದಾನೆ. ಈ ಘಟನೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಶನಿವಾರ ತುಮಕೂರು–ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಶಿರಾ ತಾಲ್ಲೂಕಿನ ಜೋಗಿಹಳ್ಳಿ ಸಮೀಪ ಈ ಘಟನೆ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಯುವಕನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದೆ.
ಘಟನೆಯ ವಿವರ ಹೀಗಿದೆ: ಬೆಂಗಳೂರಿನಿಂದ ಅಂಕೋಲಾಗೆ ತೆರಳಲು ನಾಗೇಂದ್ರ ಕಾರನ್ನು ಬುಕ್ ಮಾಡಿದ್ದನು. ಬಳಿಕ ಜಯನಗರದಲ್ಲಿದ್ದ ತನ್ನ ಪ್ರೇಯಸಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದೇ ವೇಳೆ ನಾಗೇಂದ್ರ ತನ್ನ ಪ್ರೇಯಸಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ಬಳಿಕ ಕಾರು ಚಾಲಕನು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ. ತಕ್ಷಣ ಚಾಲಕ ಹಾಗೂ ಯುವತಿ ಕಾರಿನಿಂದ ಹೊರಗೆ ಓಡಿ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ನಾಗೇಂದ್ರ ಪೂರ್ವಯೋಜಿತವಾಗಿ ತನ್ನೊಂದಿಗೆ ತಂದಿದ್ದ ಪೆಟ್ರೋಲ್ ಬಾಂಬ್ ಅನ್ನು ಕಾರಿನೊಳಗೇ ಸ್ಫೋಟಗೊಳಿಸಿದ್ದಾನೆ. ಇದರಿಂದ ಯುವತಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಪೆಟ್ರೋಲ್ ಬಾಂಬ್ ಅನ್ನು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತಂದಿದ್ದನಾ ಅಥವಾ ಪ್ರೇಯಸಿಯನ್ನು ಕೊಲೆ ಮಾಡುವ ಉದ್ದೇಶದಿಂದ ತಂದಿದ್ದನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ಫೋಟದ ಬಳಿಕ ನಾಗೇಂದ್ರ ಬೆಂಕಿಗೆ ಆಹುತಿಯಾಗಿ ಮೃತಪಟ್ಟಿದ್ದಾನೆ. ಕಾರು ಕೂಡ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದ ತನ್ನ ಪತ್ನಿಯ ಆಭರಣಗಳನ್ನು ಗಿರವಿ ಇಟ್ಟು ಖರೀದಿಸಿದ್ದ ಕಾರನ್ನು ಕಳೆದುಕೊಂಡ ಚಾಲಕ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಈ ಘಟನೆಯಲ್ಲಿ ಗಾಯಗೊಂಡಿರುವ 23 ವರ್ಷದ ಯುವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಗಾಯಗೊಂಡ ಯುವತಿಯ ಸ್ನೇಹಿತೆ ನೀಡಿದ ದೂರಿನ ಆಧಾರದ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಗಾಯಗೊಂಡ ಯುವತಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮೂಲತಃ ಅಂಕೋಲಾದವನಾದ ನಾಗೇಂದ್ರನೊಂದಿಗೆ ಆಕೆಗೆ ಪರಿಚಯವಾಗಿತ್ತು. ಕಳೆದ ಮೂರು ವರ್ಷಗಳಿಂದ ನಾಗೇಂದ್ರ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಇತ್ತೀಚಿನ ದಿನಗಳಲ್ಲಿ ಯುವತಿ ನಾಗೇಂದ್ರನನ್ನು ದೂರವಿಡಲು ಆರಂಭಿಸಿದ್ದಳು. ಇದರಿಂದ ಶನಿವಾರ ಬೆಳಿಗ್ಗೆ ಸುಮಾರು 11:30 ಗಂಟೆಗೆ ನಾಗೇಂದ್ರ ತಾನು ಬುಕ್ ಮಾಡಿದ್ದ ಕಾರಿನಲ್ಲಿ ಯುವತಿಯನ್ನು ಬಲವಂತವಾಗಿ ಕೂರಿಸಿಕೊಂಡು ಹೋಗಿದ್ದಾನೆ. ಅದಾದ ನಂತರ, ಮೇಲೆ ವಿವರಿಸಿದ ಅಪಾಯಕಾರಿ ಘಟನೆ ನಡೆಯಿತು.


