लोंढा बसस्थानकात प्रवाशांची गैरसोय; खानापूरकडे जाण्यासाठी दुपारच्या बससेवेचा अभाव.
खानापूर : बेळगाव जिल्ह्यातील लोंढा गावातील बसस्थानकात प्रवाशांना विविध समस्यांना सामोरे जावे लागत आहे. विशेषतः सकाळी 12.00 ते दुपारी 2.30 या वेळेत खानापूरकडे जाण्यासाठी योग्य बससेवा उपलब्ध नसल्याने नागरिकांना तासन्तास बसस्थानकात थांबावे लागत असून मोठी गैरसोय होत आहे.
तहसील रुग्णालयात जाणारे रुग्ण, विद्यार्थी, महिला, ज्येष्ठ नागरिक तसेच दैनंदिन कामासाठी प्रवास करणारे नागरिक यांना याचा मोठा फटका बसत आहे. काही बसेस लोनडा गावाच्या बाहेरील भागातूनच पुढे जात असल्याचे निदर्शनास येत असून त्या बसस्थानकात न येताच मार्गस्थ होत असल्याने प्रवाशांची अधिकच अडचण निर्माण झाली आहे.
याशिवाय बसस्थानकात पिण्याच्या पाण्याची कोणतीही सोय नसल्याने प्रवाशांना त्रास सहन करावा लागत आहे. शौचालयाचीही योग्य व्यवस्था नसल्याची तक्रार आहे. प्रवाशांना बसच्या वेळांची माहिती देण्यासाठी कोणताही कंट्रोलर किंवा जबाबदार कर्मचारी उपलब्ध नसल्याचेही समोर आले आहे.
विशेषतः महिला आणि लहान मुले सकाळी कामानिमित्त किंवा रुग्णालयात जाऊन परतताना मोठ्या अडचणींना सामोरे जात आहेत. यामुळे नागरिकांमध्ये तीव्र नाराजीचे वातावरण निर्माण झाले आहे.
नागरिकांच्या वतीने खालील मागण्या करण्यात आल्या आहेत :
लोंढा – खानापूर मार्गावर दुपारच्या वेळेत अतिरिक्त बससेवा सुरू करावी.
सर्व बसेस लोनडा बसस्थानकात अनिवार्यपणे येतील यासाठी उपाययोजना करावी.
पिण्याच्या पाण्याची तात्काळ व्यवस्था करावी.
सार्वजनिक शौचालयाची सुविधा त्वरित सुधारावी.
बसच्या वेळांची माहिती देण्यासाठी कंट्रोलर किंवा कर्मचारी नेमावा.
वरील मागण्यांवर तातडीने कार्यवाही न झाल्यास नागरिकांच्या वतीने आंदोलन छेडण्याचा इशारा या भागातील सामाजिक कार्यकर्ते उमरफारूक मुल्ला यांनी दिला आला आहे.
ಲೋಂಡಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಕಷ್ಟ; ಖಾನಾಪುರಕ್ಕೆ ಮಧ್ಯಾಹ್ನದ ವೇಳೆ ಬಸ್ ಸೇವೆಯ ಕೊರತೆ.
ಖಾನಾಪೂರ : ಬೆಳಗಾವಿ ಜಿಲ್ಲೆಯ ಲೋಂಡಾ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಬೆಳಿಗ್ಗೆ 12.00 ರಿಂದ ಮಧ್ಯಾಹ್ನ 2.30 ರವರೆಗೆ ಖಾನಾಪುರಕ್ಕೆ ಹೋಗಲು ಸಮರ್ಪಕ ಬಸ್ ಸೇವೆ ಲಭ್ಯವಿಲ್ಲದ ಕಾರಣ ನಾಗರಿಕರು ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾಯಬೇಕಾಗಿ ಬರುತ್ತಿದ್ದು, ಭಾರೀ ಅನಾನುಕೂಲ ಉಂಟಾಗಿದೆ.
ತಹಶೀಲ್ದಾರ ಕಚೇರಿ, ಆಸ್ಪತ್ರೆಗೆ ತೆರಳುವ ರೋಗಿಗಳು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದೈನಂದಿನ ಕೆಲಸಕ್ಕಾಗಿ ಪ್ರಯಾಣಿಸುವ ಜನರಿಗೆ ಇದರ ಪರಿಣಾಮ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವು ಬಸ್ಸುಗಳು ಲೋಂಡಾ ಗ್ರಾಮದ ಬಸ್ ನಿಲ್ದಾಣಕ್ಕೆ ಬರದೆ ಹೊರವಲಯದಿಂದಲೇ ಮುಂದಕ್ಕೆ ಸಾಗುತ್ತಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ಇನ್ನಷ್ಟು ತೊಂದರೆ ಉಂಟಾಗಿದೆ.
ಇದಲ್ಲದೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ. ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ. ಬಸ್ ಸಮಯಗಳ ಬಗ್ಗೆ ಮಾಹಿತಿ ನೀಡಲು ಯಾವುದೇ ಕಂಟ್ರೋಲರ್ ಅಥವಾ ಜವಾಬ್ದಾರಿ ಸಿಬ್ಬಂದಿ ಲಭ್ಯವಿಲ್ಲ ಎಂಬುದೂ ತಿಳಿದು ಬಂದಿದೆ.
ವಿಶೇಷವಾಗಿ ಮಹಿಳೆಯರು ಮತ್ತು ಸಣ್ಣ ಮಕ್ಕಳು ಕೆಲಸ ಅಥವಾ ಆಸ್ಪತ್ರೆಗೆ ಹೋಗಿ ವಾಪಸ್ಸು ಬರುವಾಗ ಹೆಚ್ಚಿನ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ನಾಗರಿಕರಲ್ಲಿ ತೀವ್ರ ಅಸಮಾಧಾನದ ವಾತಾವರಣ ನಿರ್ಮಾಣವಾಗಿದೆ.
ನಾಗರಿಕರ ಪರವಾಗಿ ಕೆಲ ಬೇಡಿಕೆಗಳನ್ನು ಮುಂದಿಟ್ಟಿದು:
ಲೋಂಡಾ – ಖಾನಾಪುರ ಮಾರ್ಗದಲ್ಲಿ ಮಧ್ಯಾಹ್ನ ವೇಳೆಯಲ್ಲಿ ಹೆಚ್ಚುವರಿ ಬಸ್ ಸೇವೆ ಪ್ರಾರಂಭಿಸಬೇಕು.
ಎಲ್ಲಾ ಬಸ್ಸುಗಳು ಲೋಂಡಾ ಬಸ್ ನಿಲ್ದಾಣಕ್ಕೆ ಕಡ್ಡಾಯವಾಗಿ ಬರುವಂತೆ ಕ್ರಮ ಕೈಗೊಳ್ಳಬೇಕು.
ಕುಡಿಯುವ ನೀರಿನ ತಕ್ಷಣದ ವ್ಯವಸ್ಥೆ ಮಾಡಬೇಕು.
ಸಾರ್ವಜನಿಕ ಶೌಚಾಲಯದ ಸೌಲಭ್ಯವನ್ನು ತ್ವರಿತವಾಗಿ ಸುಧಾರಿಸಬೇಕು.
ಬಸ್ ಸಮಯಗಳ ಮಾಹಿತಿ ನೀಡಲು ಕಂಟ್ರೋಲರ್ ಅಥವಾ ಸಿಬ್ಬಂದಿಯನ್ನು ನೇಮಿಸಬೇಕು.
ಮೇಲಿನ ಬೇಡಿಕೆಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನಾಗರಿಕರ ಪರವಾಗಿ ಹೋರಾಟ ಆರಂಭಿಸಲಾಗುವುದು ಎಂದು ಈ ಭಾಗದ ಸಾಮಾಜಿಕ ಕಾರ್ಯಕರ್ತ ಉಮರ್ಫಾರೂಕ್ ಮುಲ್ಲಾ ಎಚ್ಚರಿಕೆ ನೀಡಿದ್ದಾರೆ.


