दोन महिन्यांतच सीसी गटार कोसळले; पारिषवाड क्रॉस येथील कामाच्या दर्जावर प्रश्नचिन्ह, चौकशीची नागरिकांची मागणी.
खानापूर, प्रतिनिधी :
खानापूर नगरपंचायतीच्या वतीने पारिषवाड क्रॉस येथे अवघ्या दोन महिन्यांपूर्वी बांधण्यात आलेले सिमेंट काँक्रीट (सीसी) गटार कोसळल्याने नगरपंचायतीच्या कामकाजावर गंभीर प्रश्नचिन्ह निर्माण झाले आहे. नुकत्याच पूर्ण झालेल्या या कामाचे मोठे नुकसान झाल्याने लाखो रुपयांचा निधी वाया गेल्याची चर्चा नागरिकांमध्ये सुरू असून, या बांधकामात निकृष्ट दर्जाचे साहित्य वापरण्यात आल्याचा संशय व्यक्त केला जात आहे.
स्थानिक नागरिकांच्या म्हणण्यानुसार, गटाराच्या बांधकामासाठी कमी दर्जाचे साहित्य तसेच बारीक आकाराच्या लोखंडी सळ्यांचा वापर करण्यात आला असल्याचे प्रत्यक्ष पाहणीदरम्यान दिसून येत आहे. त्यामुळे हे बांधकाम नगरपंचायतीने मंजूर केलेल्या आराखड्यानुसार आणि तांत्रिक निकषांनुसार करण्यात आले होते का, याची सखोल चौकशी करण्याची मागणी जोर धरू लागली आहे.
नागरिकांनी नगरपंचायतीच्या अभियंत्यांच्या भूमिकेवरही प्रश्न उपस्थित केले आहेत. अशा प्रकारच्या कामांमध्ये अभियंत्यांनी वेळोवेळी प्रत्यक्ष स्थळी भेट देऊन कामाची गुणवत्ता, वापरण्यात येणारे साहित्य आणि बांधकामाचा दर्जा तपासणे अपेक्षित असते. मात्र या कामात आवश्यक देखरेख करण्यात आली नसल्याचा आरोप नागरिकांकडून केला जात आहे.
या प्रकरणाची स्वतंत्र तांत्रिक समितीमार्फत चौकशी करून दोषी कंत्राटदार, संबंधित अभियंता तसेच जबाबदार अधिकाऱ्यांवर कठोर कायदेशीर कारवाई करण्यात यावी, अशी मागणी परिसरातील नागरिकांनी केली आहे. तसेच निकृष्ट दर्जाच्या कामामुळे झालेल्या आर्थिक नुकसानीची भरपाई संबंधितांकडून वसूल करण्यात यावी, अशीही मागणी करण्यात येत आहे.
दरम्यान, नगरपंचायतीकडून या घटनेबाबत अद्याप अधिकृत भूमिका जाहीर करण्यात आलेली नाही. चौकशीनंतरच गटार कोसळण्यामागील नेमके कारण स्पष्ट होणार असले तरी, या घटनेमुळे शहरातील विकासकामांच्या गुणवत्तेबाबत नागरिकांमध्ये तीव्र नाराजीचे वातावरण निर्माण झाले आहे. नगरपंचायतीने या प्रकरणाची तातडीने दखल घेऊन पारदर्शक चौकशी करावी आणि दोषींवर कठोर कारवाई करावी, अशी एकमुखी मागणी नागरिकांकडून होत आहे.
ಎರಡು ತಿಂಗಳಲ್ಲೇ ಹೊಸದಾಗಿ ಕಟ್ಟಿದ ಸಿಸಿ ಚರಂಡಿ ಕುಸಿತ; ಪಾರಿಷವಾಡ ಕ್ರಾಸ್ನ ಕಾಮಗಾರಿಯ ಗುಣಮಟ್ಟದ ಮೇಲೆ ಪ್ರಶ್ನೆ, ತನಿಖೆಗೆ ಸಾರ್ವಜನಿಕರ ಆಗ್ರಹ.
ಖಾನಾಪುರ, ಪ್ರತಿನಿಧಿ : ಖಾನಾಪುರ ಪಟ್ಟಣ ಪಂಚಾಯಿತಿಯ ವತಿಯಿಂದ ಪಾರಿಷವಾಡ ಕ್ರಾಸ್ನಲ್ಲಿ ಕೇವಲ ಎರಡು ತಿಂಗಳ ಹಿಂದೆ ನಿರ್ಮಿಸಲಾದ ಸಿಮೆಂಟ್ ಕಾಂಕ್ರೀಟ್ (ಸಿಸಿ) ಚರಂಡಿ ಕುಸಿದಿರುವ ಘಟನೆ ಪಟ್ಟಣ ಪಂಚಾಯಿತಿಯ ಕಾಮಗಾರಿಗಳ ಗುಣಮಟ್ಟದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದ ಈ ಕಾಮಗಾರಿ ಹಾನಿಗೊಳಗಾಗಿರುವುದರಿಂದ ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ವ್ಯರ್ಥವಾಗಿರುವ ಕುರಿತು ಸ್ಥಳೀಯರಲ್ಲಿ ಚರ್ಚೆ ನಡೆಯುತ್ತಿದೆ. ಜೊತೆಗೆ, ಈ ನಿರ್ಮಾಣ ಕಾರ್ಯದಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.
ಸ್ಥಳೀಯ ನಿವಾಸಿಗಳ ಹೇಳಿಕೆಯ ಪ್ರಕಾರ, ಚರಂಡಿ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳ ಜೊತೆಗೆ ಸಣ್ಣ ಗಾತ್ರದ ಕಬ್ಬಿಣದ ರಾಡ್ಗಳನ್ನು ಬಳಸಲಾಗಿದೆ ಎಂಬುದು ಸ್ಥಳ ಪರಿಶೀಲನೆಯ ವೇಳೆ ಕಂಡುಬಂದಿದೆ. ಆದ್ದರಿಂದ ಈ ಕಾಮಗಾರಿ ಪಟ್ಟಣ ಪಂಚಾಯಿತಿಯಿಂದ ಅನುಮೋದಿಸಲಾದ ನಕ್ಷೆ ಹಾಗೂ ತಾಂತ್ರಿಕ ಮಾನದಂಡಗಳ ಪ್ರಕಾರವೇ ನಡೆದಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಬೇಡಿಕೆ ದಿನೇದಿನೇ ಬಲವಾಗುತ್ತಿದೆ.
ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಇಂಜಿನಿಯರ್ಗಳ ಪಾತ್ರದ ಮೇಲೂ ಪ್ರಶ್ನೆಗಳನ್ನು ಎತ್ತಿದ್ದಾರೆ. ಇಂತಹ ಕಾಮಗಾರಿಗಳ ಸಂದರ್ಭದಲ್ಲಿ ಇಂಜಿನಿಯರ್ಗಳು ಕಾಲಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ, ಬಳಸಲಾಗುತ್ತಿರುವ ಸಾಮಗ್ರಿಗಳು ಹಾಗೂ ನಿರ್ಮಾಣದ ಮಟ್ಟವನ್ನು ಪರಿಶೀಲಿಸುವುದು ಕಡ್ಡಾಯ. ಆದರೆ ಈ ಕಾಮಗಾರಿಯಲ್ಲಿ ಅಗತ್ಯ ಮೇಲ್ವಿಚಾರಣೆ ನಡೆದಿಲ್ಲ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.
ಈ ಪ್ರಕರಣದ ಕುರಿತು ಸ್ವತಂತ್ರ ತಾಂತ್ರಿಕ ಸಮಿತಿಯ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥ ಗುತ್ತಿಗೆದಾರ, ಸಂಬಂಧಿತ ಇಂಜಿನಿಯರ್ ಹಾಗೂ ಹೊಣೆಗಾರ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಲ್ಲದೆ, ಕಳಪೆ ಕಾಮಗಾರಿಯಿಂದ ಉಂಟಾದ ಆರ್ಥಿಕ ನಷ್ಟವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಬೇಕು ಎಂಬ ಬೇಡಿಕೆಯನ್ನೂ ಅವರು ಮುಂದಿಟ್ಟಿದ್ದಾರೆ.
ಇದೀಗ ಈ ಘಟನೆ ಕುರಿತು ಪಟ್ಟಣ ಪಂಚಾಯಿತಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಚರಂಡಿ ಕುಸಿತದ ನಿಖರ ಕಾರಣ ಬಹಿರಂಗವಾಗಲಿದೆ. ಆದರೆ ಈ ಘಟನೆಯಿಂದ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಪಟ್ಟಣ ಪಂಚಾಯಿತಿ ಈ ಪ್ರಕರಣವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಏಕಮತದ ಆಗ್ರಹವಾಗಿದೆ.

