मुसळधार पावसाचा कहर; सलग दुसऱ्या दिवशीही बेळगाव, खानापूर आणि निपाणी तालुक्यातील शाळांना सुट्टी.
बेळगाव (प्रतिनिधी) : जिल्ह्यात सुरू असलेल्या मुसळधार पावसामुळे जनजीवन विस्कळीत झाले असून विद्यार्थ्यांच्या सुरक्षिततेच्या दृष्टीने जिल्हा प्रशासनाने महत्त्वाचा निर्णय घेतला आहे. सलग दुसऱ्या दिवशीही बुधवार, दि. 8 जुलै 2026 रोजी बेळगाव, खानापूर आणि निपाणी तालुक्यातील शहरी व ग्रामीण भागातील सर्व अंगणवाडी केंद्रे तसेच प्राथमिक व माध्यमिक शाळांना सुट्टी जाहीर करण्यात आली आहे.
बेळगाव जिल्हाधिकारी मोहम्मद रोशन यांनी याबाबत आदेश जारी केले आहेत. गेल्या काही दिवसांपासून सुरू असलेल्या संततधार पावसामुळे अनेक ठिकाणी नद्या-नाले दुथडी भरून वाहत आहेत. काही भागांत रस्त्यांवर पाणी साचल्याने वाहतुकीवर परिणाम झाला असून विद्यार्थ्यांच्या सुरक्षिततेचा विचार करून हा निर्णय घेण्यात आला आहे.
जिल्हा प्रशासनाने नागरिकांना विनाकारण घराबाहेर पडू नये, नदी-नाल्यांच्या परिसरात जाणे टाळावे तसेच हवामान विभाग आणि प्रशासनाच्या सूचनांचे पालन करावे, असे आवाहन केले आहे.
ಧಾರಾಕಾರ ಮಳೆಯ ಆರ್ಭಟ; ಸತತ ಎರಡನೇ ದಿನವೂ ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ
ಬೆಳಗಾವಿ (ಪ್ರತಿನಿಧಿ): ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದ್ದು ಸತತ ಎರಡನೇ ದಿನ ಬುಧವಾರ, ಜುಲೈ 8, 2026 ರಂದು ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲ ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ನದಿಗಳು ಮತ್ತು ಹಳ್ಳಗಳು ಉಕ್ಕಿ ಹರಿಯುತ್ತಿವೆ. ಕೆಲ ಪ್ರದೇಶಗಳಲ್ಲಿ ರಸ್ತೆಗಳ ಮೇಲೆ ನೀರು ನಿಂತಿರುವುದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ಜಿಲ್ಲಾಡಳಿತವು ಸಾರ್ವಜನಿಕರಿಗೆ ಅನಗತ್ಯವಾಗಿ ಮನೆಗಳಿಂದ ಹೊರಬರಬಾರದು, ನದಿ-ಹಳ್ಳಗಳ ಸಮೀಪಕ್ಕೆ ಹೋಗುವುದನ್ನು ತಪ್ಪಿಸಬೇಕು ಹಾಗೂ ಹವಾಮಾನ ಇಲಾಖೆ ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದೆ.

