ग्रामपंचायतीच्या दुर्लक्षाला नागरिकांचे श्रमदानातून चोख उत्तर; रूमेवाडी क्रॉस येथील काटे प्लॉटचा रस्ता स्वखर्चाने व श्रमदानातून केला दुरुस्त. घरपट्टी भरमसाठ, पण सुविधा शून्य; सामाजिक कार्यकर्ते व नागरिकांच्या पुढाकाराने रस्ता झाला मजबूत.
खानापूर : प्रतिनिधी
करंबळ ग्रामपंचायतीच्या हद्दीतील रूमेवाडी क्रॉस येथील काटे प्लॉट परिसरातील नागरिकांनी ग्रामपंचायतीच्या दुर्लक्षाविरोधात एक आदर्शवत पाऊल उचलत स्वखर्चाने व श्रमदानातून रस्त्याची दुरुस्ती केली आहे. अनेक वर्षांपासून खराब अवस्थेत असलेल्या या रस्त्यावर मुरूम टाकून तो वाहतुकीसाठी योग्य करण्यात आला असून, यामुळे परिसरातील नागरिकांमध्ये समाधानाचे वातावरण निर्माण झाले आहे.
स्थानिक नागरिकांच्या म्हणण्यानुसार, करंबळ ग्रामपंचायत प्रत्येक घरमालकाकडून नियमितपणे घरपट्टी व विविध करांची वसुली करते. मात्र, मूलभूत सुविधांच्या बाबतीत नागरिकांकडे सातत्याने दुर्लक्ष केले जात आहे. विशेषतः रूमेवाडी क्रॉस येथील काटे प्लॉट परिसरातील रस्त्याची अवस्था अत्यंत दयनीय झाली होती.
पावसाळा सुरू होताच या रस्त्यावर चिखलाचे साम्राज्य निर्माण होत असे. पावसाचे पाणी साचल्यामुळे नागरिकांना पायी चालणेही कठीण होत होते. अनेकदा लहान मुलांचे पाय घसरून अपघात होत असल्याच्या घटना घडल्या आहेत. याबाबत वारंवार ग्रामपंचायतीकडे तक्रारी करूनही कोणतीही ठोस कार्यवाही करण्यात आली नसल्याचा आरोप नागरिकांनी केला आहे.
या समस्येला कंटाळून सामाजिक कार्यकर्ते अशोक हनमंत पाटील, गंगाराम हावनाप्पा खानापुरकर, माजी सैनिक गंगाराम पाटील तसेच परिसरातील इतर नागरिकांनी पुढाकार घेत सोमवारी (दि. 1 जून) स्वखर्चाने चार ट्रॅक्टर मुरूम मागवून घेतला. त्यानंतर सर्वांनी श्रमदान करत रस्त्यावर मुरूम पसरवून रस्ता मजबूत केला.
नागरिकांच्या या सामूहिक प्रयत्नामुळे रस्त्यावर पाणी साचण्याची समस्या मोठ्या प्रमाणात कमी होणार असून, वाहनचालक, महिला, ज्येष्ठ नागरिक आणि शालेय विद्यार्थ्यांना याचा मोठा लाभ होणार आहे. विशेषतः पावसाळ्यात निर्माण होणाऱ्या गैरसोयींना मोठ्या प्रमाणात आळा बसणार असल्याचे स्थानिकांनी सांगितले.
या उपक्रमामुळे ग्रामपंचायतीच्या कार्यपद्धतीवर प्रश्नचिन्ह उपस्थित झाले असून, नागरिकांनी आता कायमस्वरूपी रस्त्याचे काँक्रीटीकरण किंवा पेवर्स बसविण्याची मागणी केली आहे. तसेच भविष्यात अशा मूलभूत सुविधांसाठी नागरिकांना स्वतःचा पैसा खर्च करण्याची वेळ येऊ नये, यासाठी ग्रामपंचायतीने तत्काळ लक्ष देण्याची मागणीही करण्यात आली आहे.
रस्ता दुरुस्तीच्या श्रमदान मोहिमेत सहभागी झालेल्या सामाजिक कार्यकर्त्यांचे आणि परिसरातील नागरिकांचे स्थानिकांनी कौतुक करत आभार व्यक्त केले आहेत. नागरिकांच्या एकजुटीमुळे आणि सामाजिक बांधिलकीच्या भावनेतून साकारलेल्या या उपक्रमाची परिसरात सर्वत्र चर्चा होत आहे.
ಕರಂಬಳ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಲಕ್ಷ್ಯ, ನಾಗರಿಕರಿಂದ ಶ್ರಮದಾನದ ಮೂಲಕ ತಕ್ಕ ಉತ್ತರ; ರೂಮೇವಾಡಿ ಕ್ರಾಸ್ನ ಕಾಟೆ ಪ್ಲಾಟ್ ಭಾಗದ ರಸ್ತೆಯನ್ನು ಸ್ವಂತ ಖರ್ಚು ಹಾಗೂ ಶ್ರಮದಾನದಿಂದ ದುರಸ್ತಿ ಕಾರ್ಯ. ಮನೆ ತೆರಿಗೆ ಭಾರೀ ಪ್ರಮಾಣದಲ್ಲಿ ಎರಿಕೆಯ ವಸೂಲಿ, ಆದರೆ ಸೌಲಭ್ಯಗಳು ಶೂನ್ಯ; ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರ ಮುಂದಾಳತ್ವದಿಂದ ರಸ್ತೆ ಕಾಮಗಾರಿ ಬಲಿಷ್ಠ.
ಖಾನಾಪುರ : ಪ್ರತಿನಿಧಿ
ಕರಂಬಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೂಮೇವಾಡಿ ಕ್ರಾಸ್ನ ಕಾಟೆ ಪ್ಲಾಟ್ ಪ್ರದೇಶದ ನಾಗರಿಕರು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದ ವಿರುದ್ಧ ಆದರ್ಶಪ್ರಾಯ ಹೆಜ್ಜೆ ಇಟ್ಟು, ತಮ್ಮ ಸ್ವಂತ ಖರ್ಚು ಹಾಗೂ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ. ಅನೇಕ ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದ ಈ ರಸ್ತೆಗೆ ಮಣ್ಣು (ಮುರಂ) ಹಾಕಿ ಸಂಚಾರಯೋಗ್ಯವಾಗುವಂತೆ ಮಾಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯರ ಪ್ರಕಾರ, ಕರಂಬಳ ಗ್ರಾಮ ಪಂಚಾಯಿತಿ ಪ್ರತಿಯೊಬ್ಬ ಮನೆಮಾಲೀಕರಿಂದ ನಿಯಮಿತವಾಗಿ ಮನೆ ತೆರಿಗೆ ಹಾಗೂ ವಿವಿಧ ತೆರಿಗೆಗಳನ್ನು ವಸೂಲಿ ಮಾಡುತ್ತಿದೆ. ಆದರೆ ಮೂಲಭೂತ ಸೌಲಭ್ಯಗಳ ವಿಷಯದಲ್ಲಿ ನಾಗರಿಕರ ಕಡೆ ನಿರಂತರ ನಿರ್ಲಕ್ಷ್ಯ ತೋರಲಾಗುತ್ತಿದೆ. ವಿಶೇಷವಾಗಿ ರೂಮೇವಾಡಿ ಕ್ರಾಸ್ನ ಕಾಟೆ ಪ್ಲಾಟ್ ಭಾಗದ ರಸ್ತೆಯ ಸ್ಥಿತಿ ಅತ್ಯಂತ ಹದಗೆಟ್ಟಿತ್ತು.
ಮಳೆಗಾಲ ಆರಂಭವಾದ ಕೂಡಲೇ ಈ ರಸ್ತೆ ಸಂಪೂರ್ಣವಾಗಿ ಕೆಸರಮಯವಾಗುತ್ತಿತ್ತು. ಮಳೆನೀರು ರಸ್ತೆ ಮೇಲೆ ನಿಂತುಕೊಳ್ಳುವುದರಿಂದ ನಾಗರಿಕರಿಗೆ ಕಾಲ್ನಡಿಗೆಯಲ್ಲಿಯೇ ಸಂಚರಿಸುವುದು ಕಷ್ಟಕರವಾಗುತ್ತಿತ್ತು. ಅನೇಕ ಬಾರಿ ಸಣ್ಣ ಮಕ್ಕಳ ಕಾಲು ಜಾರಿ ಅಪಘಾತಗಳು ಸಂಭವಿಸಿದ್ದವು. ಈ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಮಸ್ಯೆಯಿಂದ ಬೇಸತ್ತು ಸಾಮಾಜಿಕ ಕಾರ್ಯಕರ್ತರಾದ ಅಶೋಕ್ ಹನುಮಂತ ಪಾಟೀಲ, ಗಂಗಾರಾಮ ಹಾವನಪ್ಪ ಖಾನಾಪುರಕರ, ಮಾಜಿ ಸೈನಿಕ ಗಂಗಾರಾಮ ಪಾಟೀಲ ಹಾಗೂ ಇತರ ಸ್ಥಳೀಯ ನಾಗರಿಕರು ಮುಂದಾಳತ್ವ ವಹಿಸಿ ಸೋಮವಾರ (ಜೂನ್ 1) ತಮ್ಮ ಸ್ವಂತ ಖರ್ಚಿನಲ್ಲಿ ನಾಲ್ಕು ಟ್ರ್ಯಾಕ್ಟರ್ಗಳಷ್ಟು ಮುರಂ ತರಿಸಿಕೊಂಡರು. ಬಳಿಕ ಎಲ್ಲರೂ ಶ್ರಮದಾನ ಮಾಡಿ ರಸ್ತೆಯ ಮೇಲೆ ಮುರಂ ಹಾಸಿ ರಸ್ತೆಯನ್ನು ಬಲಪಡಿಸಿದರು.
ನಾಗರಿಕರ ಈ ಸಾಮೂಹಿಕ ಪ್ರಯತ್ನದಿಂದ ರಸ್ತೆ ಮೇಲೆ ನೀರು ನಿಲ್ಲುವ ಸಮಸ್ಯೆ ಬಹುಮಟ್ಟಿಗೆ ಕಡಿಮೆಯಾಗಲಿದ್ದು, ವಾಹನ ಸವಾರರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಮಳೆಗಾಲದಲ್ಲಿ ಉಂಟಾಗುತ್ತಿದ್ದ ತೊಂದರೆಗಳಿಗೆ ಸಾಕಷ್ಟು ಮಟ್ಟಿಗೆ ಪರಿಹಾರ ದೊರೆಯಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಉಪಕ್ರಮದಿಂದ ಗ್ರಾಮ ಪಂಚಾಯಿತಿಯ ಕಾರ್ಯವೈಖರಿಯ ಕುರಿತು ಪ್ರಶ್ನೆಗಳು ಉದ್ಭವಿಸಿದ್ದು, ನಾಗರಿಕರು ಈಗ ರಸ್ತೆಯನ್ನು ಶಾಶ್ವತವಾಗಿ ಕಾಂಕ್ರೀಟ್ಗೊಳಿಸುವುದು ಅಥವಾ ಪೇವರ್ಸ್ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಮೂಲಭೂತ ಸೌಲಭ್ಯಗಳಿಗಾಗಿ ನಾಗರಿಕರು ತಮ್ಮ ಸ್ವಂತ ಹಣ ಖರ್ಚು ಮಾಡುವ ಪರಿಸ್ಥಿತಿ ಬರಬಾರದು ಎಂಬುದಕ್ಕಾಗಿ ಗ್ರಾಮ ಪಂಚಾಯಿತಿ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಉಪಕ್ರಮದಿಂದ ಗ್ರಾಮ ಪಂಚಾಯಿತಿಯ ಕಾರ್ಯವೈಖರಿಯ ಕುರಿತು ಪ್ರಶ್ನೆಗಳು ಉದ್ಭವಿಸಿದ್ದು, ನಾಗರಿಕರು ಈಗ ರಸ್ತೆಯನ್ನು ಶಾಶ್ವತವಾಗಿ ಕಾಂಕ್ರೀಟ್ಗೊಳಿಸುವುದು ಅಥವಾ ಪೇವರ್ಸ್ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಮೂಲಭೂತ ಸೌಲಭ್ಯಗಳಿಗಾಗಿ ನಾಗರಿಕರು ತಮ್ಮ ಸ್ವಂತ ಹಣ ಖರ್ಚು ಮಾಡುವ ಪರಿಸ್ಥಿತಿ ಬರಬಾರದು ಎಂಬುದಕ್ಕಾಗಿ ಗ್ರಾಮ ಪಂಚಾಯಿತಿ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಸ್ತೆ ದುರಸ್ತಿ ಶ್ರಮದಾನ ಅಭಿಯಾನದಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾಗರಿಕರ ಏಕತೆ ಹಾಗೂ ಸಾಮಾಜಿಕ ಬದ್ಧತೆಯ ಮನೋಭಾವದಿಂದ ಸಾಕಾರಗೊಂಡಿರುವ ಈ ಉಪಕ್ರಮವು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.


