19 जानेवारी रोजी नंदगडला मुख्यमंत्री सिद्धरामय्या यांची भेट; रायण्णा म्युझियमचे लोकार्पण – मंत्री तंगडगी यांची माहिती
खानापूर : तालुक्यातील नंदगड गावाला दि. 19 जानेवारी रोजी मुख्यमंत्री सिद्धरामय्या भेट देणार असून, त्या दिवशी मुख्यमंत्री सिद्धरामय्या, हे, ब्रिटिशांनी स्वातंत्र्यवीर क्रांतिकारक संगोळी रायण्णा यांना फाशी दिलेल्या ठिकाणी राज्य सरकारतर्फे संगोळी रायण्णा क्षेत्र विकास प्राधिकरणाच्या माध्यमातून उभारलेल्या रायण्णा म्युझियमचे लोकार्पण करणार असल्याची माहिती कन्नड व संस्कृती मंत्री शिवराज तंगडगी यांनी दिली.
शुक्रवारी नंदगड गावातील संगोळी रायण्णांना फाशी देण्यात आलेल्या स्थळाला भेट देऊन कामांची पाहणी केल्यानंतर पत्रकारांशी बोलताना मंत्री तंगडगी म्हणाले,
“सुमारे 200 वर्षांपूर्वीच देशातील नागरिकांमध्ये स्वातंत्र्यलढ्याची ज्वाला पेटवून देशाभिमान जागवणारे शूर संगोळी रायण्णा यांची ही कर्मभूमी आहे. येथे सरकारकडून विविध विकासकामे हाती घेण्यात आली असून, या कामांच्या माध्यमातून रायण्णांचे शौर्य, धैर्य आणि पराक्रम आजच्या पिढीपर्यंत पोहोचवण्याचा उद्देश आहे.
नंदगड येथील राण्णांच्या समाधीस्थळाजवळील तलावाच्या मध्यभागी रायण्णांचा कांस्य पुतळा उभारण्याचे काम पूर्ण झाले आहे. या पुतळ्याचे लोकार्पण मुख्यमंत्री करतील. त्यानंतर ते रायण्णांच्या वीरभूमीला भेट देऊन म्युझियमचे उद्घाटन करतील.
याचवेळी मुख्यमंत्री रायण्णा तलाव विकास, सैनिक शाळा, वसतिगृह या कामांसाठी भूमिपूजन करतील. त्यानंतर नंदगड येथील एन.आर.ई. संस्थेच्या मैदानावर आयोजित करण्यात आलेल्या जाहीर सभेत ते जनतेला संबोधित करतील. या कार्यक्रमाला राज्यातील मंत्री, खासदार, आमदार तसेच रायण्णांचे असंख्य चाहते उपस्थित राहणार आहेत,” असे त्यांनी सांगितले.
गॅरंटी अंमलबजावणी समितीचे अध्यक्ष तसेच संगोळी रायण्णा क्षेत्र विकास प्राधिकरणाचे अध्यक्ष एच.एम. रेवण्णा म्हणाले,
“ब्रिटिशांनी रायण्णांना फाशी दिलेल्या ठिकाणी वीरभूमी व म्युझियमचे बांधकाम आधीच पूर्ण झाले आहे. पुढील टप्प्यात रायण्णांच्या समाधीस्थळाजवळ यात्रानिवास बांधकाम, तसेच समाधीस्थळालगत असलेल्या ऐतिहासिक तलावाचे जिर्णोद्धार यासह विविध कामे हाती घेतली जाणार आहेत. या सर्व कामांचे शिलान्यास मुख्यमंत्री सिद्धरामय्या करतील. आजपासूनच या कार्यक्रमाच्या पूर्वतयारीला सुरुवात करण्यात आली आहे,” अशी माहिती त्यांनी दिली.
यावेळी नंदगड ग्रामपंचायत अध्यक्ष यल्लाप्पा गुरव, पीडीओ सागरकुमार बिरादार, काँग्रेस पक्षाचे जिल्हाध्यक्ष विनय नावलागट्टी, ब्लॉक अध्यक्ष महांतेश राऊत, संगोळी रायण्णा क्षेत्र विकास आंदोलन समितीचे अध्यक्ष शंकर सोनोळी, गॅरंटी समिती तालुका घटकाचे अध्यक्ष सूर्यकांत कुलकर्णी. यांच्यासह नंदगड व परिसरातील ग्रामस्थ, लोकप्रतिनिधी व अधिकारी उपस्थित होते.
याचवेळी रायण्णा म्युझियमच्या परिसरात मंत्र्यांच्या हस्ते वृक्षारोपण करण्यात आले. संगोळी रायण्णा क्षेत्र विकास प्राधिकरणाचे आयुक्त होरपेटे मल्लेशप्पा यांनी म्युझियमबाबत सविस्तर माहिती दिली. म्युझियमची पाहणी झाल्यानंतर मंत्री व इतर मान्यवरांनी नंदगड गावातील रायण्णांची समाधी, तलाव तसेच प्रस्तावित कार्यक्रम स्थळांना भेट देऊन पाहणी केली.
ಜ.19 ರಂದು ನಂದಗಡಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ, ರಾಯಣ್ಣ ಮ್ಯುಜಿಯಂ ಲೋಕಾರ್ಪಣೆ: ಸಚಿವ ತಂಗಡಗಿ ಮಾಹಿತಿ
ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮಕ್ಕೆ ಜ.19ರಂದು ಸಿಎಂ ಸಿದ್ಧರಾಮಯ್ಯ ಭೇಟಿ ನೀಡಲಿದ್ದು, ಅಂದು ಅವರು ರಾಯಣ್ಣನನ್ನು ಬ್ರಿಟೀಷರು ಗಲ್ಲಿಗೇರಿಸಿದ ಸ್ಥಳದಲ್ಲಿ ರಾಜ್ಯ ಸರ್ಕಾರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿರ್ಮಿಸಿರುವ ರಾಯಣ್ಣ ಮ್ಯೂಜಿಯಂ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು.
ಶುಕ್ರವಾರ ನಂದಗಡ ಗ್ರಾಮದ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “200 ವರ್ಷಗಳ ಹಿಂದೆಯೇ ದೇಶದ ನಾಗರಿಕರಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹೊತ್ತಿಸಿ ದೇಶಾಭಿಮಾನ ಮೆರೆದ ಶೂರ ಸಂಗೊಳ್ಳಿ ರಾಯಣ್ಣನ ಕರ್ಮಭೂಮಿಯಾಗಿದೆ. ಇಲ್ಲಿ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಕಾಮಗಾರಿಗಳ ಮೂಲಕ ರಾಯಣ್ಣನ ಸಾಹಸ, ಧೈರ್ಯ ಮತ್ತು ಶೌರ್ಯದ ಮಾಹಿತಿಯನ್ನು ಇಂದಿನ ಜನತೆಗೆ ತಿಳಿಸುವ ಉದ್ದೇಶ ಹೊಂದಲಾಗಿದೆ. ನಂದಗಡದ ರಾಯಣ್ಣನ ಸಮಾಧಿ ಸ್ಥಳದ ಬಳಿಯ ಕೆರೆಯ ಮಧ್ಯದಲ್ಲಿ ರಾಯಣ್ಣನ ಕಂಚಿನ ಪುತ್ಥಳಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ರಾಯಣ್ಣನ ಪುತ್ಥಳಿಯನ್ನು ಸಿಎಂ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ರಾಯಣ್ಣನ ವೀರಭೂಮಿಗೆ ತೆರಳಿ ಮ್ಯೂಜಿಯಂ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ರಾಯಣ್ಣನ ಕೆರೆ ಅಭಿವೃದ್ಧಿ, ಸೈನಿಕ ಶಾಲೆ, ವಸತಿಗೃಹ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಬಳಿಕ ನಂದಗಡದ ಎನ್.ಆರ್.ಇ ಸಂಸ್ಥೆಯ ಮೈದಾನದಲ್ಲಿ ಆಯೋಜಿಸುವ ಬಹಿರಂಗ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಸಂಸದರು, ಶಾಸಕರು ಸೇರಿದಂತೆ ರಾಯಣ್ಣನ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ” ಎಂದು ವಿವರಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ರೇವಣ್ಣ ಮಾತನಾಡಿ, “ಈಗಾಗಲೇ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ವೀರಭೂಮಿ ಮತ್ತು ಮ್ಯುಜಿಯಂ ನಿಮರ್ಾಣ ಕಾರ್ಯ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ರಾಯಣ್ಣನ ಸಮಾಧಿ ಸ್ಥಳದ ಬಳಿ ಯಾತ್ರಿ ನಿವಾಸ ನಿರ್ಮಾಣ, ಸಮಾಧಿ ಸ್ಥಳದ ಬಳಿಯ ಐತಿಹಾಸಿಕ ಕೆರೆ ಜೀರ್ಣೋದ್ಧಾರ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಸಿದ್ಧರಾಮಯ್ಯ ಈ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದಿನಿಂದಲೇ ಈ ಕಾರ್ಯಕ್ರಮದ ಪೂರ್ವಸಿದ್ಧತೆ ಆರಂಭಗೊಂಡಿದೆ” ಎಂದು ಮಾಹಿತಿ ನೀಡಿದರು.
ನಂದಗಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಗುರವ, ಪಿಡಿಒ ಸಾಗರಕುಮಾರ ಬಿರಾದಾರ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬ್ಲಾಕ್ ಅಧ್ಯಕ್ಷ ಮಹಾಂತೇಶ ರಾಹೂತ, ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೋನೊಳಿ, ಗ್ಯಾರಂಟಿ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಸೇರಿದಂತೆ ನಂದಗಡ ಹಾಗೂ ಸುತ್ತಲಿನ ಗ್ರಾಮಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಯಣ್ಣನ ಮ್ಯೂಜಿಯಂ ಆವರಣದಲ್ಲಿ ಸಚಿವರು ಸಸಿ ನೆಟ್ಟರು. ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೊರಪೇಟೆ ಮಲ್ಲೇಶಪ್ಪ ಮ್ಯುಜಿಯಂ ಬಗ್ಗೆ ವಿವರಿಸಿದರು. ಮ್ಯೂಜಿಯಂ ವೀಕ್ಷಣೆಯ ಬಳಿಕ ಸಚಿವರು ಹಾಗೂ ಇತರರು ನಂದಗಡ ಗ್ರಾಮದ ರಾಯಣ್ಣನ ಸಮಾಧಿ, ಕೆರೆ ಮತ್ತು ಉದ್ದೇಶಿತ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


