खानापूरमध्ये रस्ता वाद पेटला; माजी नगरसेवक आमरण उपोषणावर ठाम! सर्वपक्षीय नेते मंडळींचा आंदोलनाला पाठिंबा!
खानापूर : सार्वजनिक बांधकाम विभागाने नगरपंचायतीला दोन वेळा नोटीस देऊनही राजा शिवछत्रपती चौक ते मरिअम्मा मंदिर दरम्यान नव्याने होणाऱ्या रस्त्याच्या कामात अडथळा ठरत असलेली अतिक्रमणे हटविण्यास नगरपंचायतीकडून दिरंगाई होत असल्याचा आरोप माजी नगरसेवक दिनकर मरगाळे व विवेक गिरी यांनी केला आहे. चार दिवसांत अतिक्रमणे हटविण्यात यावीत, अन्यथा नगरपंचायतीसमोर आमरण उपोषण करण्याचा इशाराही त्यांनी यापूर्वी दिला होता. मात्र अद्याप अतिक्रमणे हटविण्यात आलेली नसल्याने, दोन्ही माजी नगरसेवकांनी मंगळवार, दिनांक 13 जानेवारी 2025 रोजी सकाळी 11 वाजता नगरपंचायतीसमोर आमरण उपोषणास सुरुवात करणार असल्याची घोषणा केली आहे.
या पार्श्वभूमीवर काँग्रेसचे नेते सुरेश जाधव यांनी नगरपंचायतीचे मुख्याधिकारी संतोष कुरबेट यांच्याकडे याबाबत विचारणा केली असता, त्यांनी सांगितले की नगरपंचायतीच्या वतीने सार्वजनिक बांधकाम विभागाला रस्त्याचे मार्किंग करण्याबाबत पत्र देण्यात आले आहे. पीडब्ल्यूडी विभागाकडून मार्किंग झाल्यानंतर पोलीस बंदोबस्तात अतिक्रमणे हटविण्यात येतील.
दरम्यान, सार्वजनिक बांधकाम विभागाच्या वतीनेही सोमवारी रस्त्याच्या मध्यभागापासून दोन्ही बाजूंना प्रत्येकी दहा मीटरचे मार्किंग करण्यात येणार असून, त्यानंतर अतिक्रमण हटविण्याची कारवाई करण्यात येईल, असे सुरेश जाधव यांना सांगण्यात आले आहे. दरम्यान रस्त्यामध्ये राजकीय हस्तक्षेप झाल्यास, हस्तक्षेप करणाऱ्या राजकीय नेत्यांचे प्रतीकात्मक पुतळे दहन करण्याचा इशारा खानापूर शहरातील नागरिकांनी दिला आहे.
रस्त्यामधील अतिक्रमणे न हटविल्यास माजी नगरसेवकांच्या आंदोलनाला समितीचे नेते व कार्याध्यक्ष मुरलीधर पाटील, काँग्रेसचे अध्यक्ष एडवोकेट ईश्वर घाडी, समितीचे नेते प्रकाश चव्हाण तसेच भारतीय जनता पार्टी पक्षातील अनेक नेते मंडळींनी तसेच खानापूर शहरातील अनेक सामाजिक कार्यकर्त्यांनी सुद्धा या आंदोलनाला पाठिंबा व्यक्त केला आहे.
यासंदर्भात माजी नगरसेवक दिनकर मरगाळे व विवेक गिरी यांनी नगरपंचायत व सार्वजनिक बांधकाम विभागाला स्पष्ट इशारा दिला असून, सोमवार, दिनांक 12 जानेवारी 2025 पर्यंत अतिक्रमणे हटविण्यात आली नाहीत, तर मंगळवार, दिनांक 13 जानेवारी 2025 पासून आमरण उपोषणास सुरुवात करण्यात येईल, असे त्यांनी स्पष्ट केले आहे.
ಖಾನಾಪುರದಲ್ಲಿ ಅತಿಕ್ರಮನ ಮಾಡಿದ ರಸ್ತೆ ತೆರವು ವಿವಾದ ಭುಗಿಲೆದ್ದಿದೆ; ಮಾಜಿ ನಗರಸಭಾ ಸದಸ್ಯರು ನಿರ್ಧರಿಸಿದಂತೆ ಆಮರಣ ಉಪವಾಸಕ್ಕೆ ನಿರ್ಧಾರ! ಸರ್ವಪಕ್ಷೀಯ ನಾಯಕರಿಂದ ಹೋರಾಟಕ್ಕೆ ಬೆಂಬಲ!
ಖಾನಾಪುರ : ಸಾರ್ವಜನಿಕ ನಿರ್ಮಾಣ ಇಲಾಖೆ (PWD) ಇವರಿಂದ ನಗರ ಪಂಚಾಯಿತಿಗೆ ಎರಡು ಬಾರಿ ನೋಟಿಸ್ ನೀಡಿದ್ದರೂ, ರಾಜಾ ಶಿವಛತ್ರಪತಿ ವೃತ್ತದಿಂದ ಮರಿಯಮ್ಮ ದೇವಸ್ಥಾನವರೆಗೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆಯ ಕೆಲಸಕ್ಕೆ ಅಡ್ಡಿಯಾಗಿರುವ ಅಕ್ರಮ ರಸ್ತೆ ಅತಿಕ್ರಮಣಗಳನ್ನು ತೆರವುಗೊಳಿಸುವಲ್ಲಿ ನಗರ ಪಂಚಾಯಿತಿಯಿಂದ ವಿಳಂಬವಾಗುತ್ತಿದೆ ಎಂದು ಮಾಜಿ ನಗರಸಭಾ ಸದಸ್ಯರಾದ ದಿನಕರ ಮರಗಾಳೆ ಮತ್ತು ವಿವೇಕ ಗಿರಿ ಆರೋಪಿಸಿದ್ದಾರೆ. ನಾಲ್ಕು ದಿನಗಳೊಳಗೆ ಅತಿಕ್ರಮಣ ತೆರವುಗೊಳಿಸಬೇಕು, ಇಲ್ಲವಾದಲ್ಲಿ ನಗರ ಪಂಚಾಯಿತಿ ಎದುರು ಆಮರಣ ಉಪವಾಸ ಕೈಗೊಳ್ಳಲಾಗುವುದು ಎಂದು ಅವರು ಇದಕ್ಕೂ ಮುನ್ನ ಮನವಿ ಮೂಲಕ ಎಚ್ಚರಿಕೆ ನೀಡಿದ್ದರು. ಆದರೆ ಇನ್ನೂ ಅತಿಕ್ರಮಣ ತೆರವುಗೊಳಿಸದ ಹಿನ್ನೆಲೆ, ಇಬ್ಬರೂ ಮಾಜಿ ಸದಸ್ಯರು ಮಂಗಳವಾರ, ದಿನಾಂಕ 13 ಜನವರಿ 2025ರಂದು ಬೆಳಿಗ್ಗೆ 11 ಗಂಟೆಗೆ ನಗರ ಪಂಚಾಯಿತಿ ಎದುರು ಆಮರಣ ಉಪವಾಸ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಸುರೇಶ್ ಜಾಧವ್ ಅವರು ನಗರ ಪಂಚಾಯಿತಿಯ ಮುಖ್ಯಾಧಿಕಾರಿ ಸಂತೋಷ ಕುರಬೆಟ್ ಅವರನ್ನು ಈ ವಿಷಯವಾಗಿ ಪ್ರಶ್ನಿಸಿದಾಗ, ನಗರ ಪಂಚಾಯಿತಿಯ ಪರವಾಗಿ ಸಾರ್ವಜನಿಕ ನಿರ್ಮಾಣ ಇಲಾಖೆಗೆ ರಸ್ತೆಯ ಮಾರ್ಕಿಂಗ್ ಮಾಡುವಂತೆ ಪತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು. ಪಿಡಬ್ಲ್ಯುಡಿ ಇಲಾಖೆಯಿಂದ ಮಾರ್ಕಿಂಗ್ ಆದ ನಂತರ ಪೊಲೀಸ್ ಬಂದೋಬಸ್ತಿನಲ್ಲಿ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಸಾರ್ವಜನಿಕ ನಿರ್ಮಾಣ ಇಲಾಖೆ ವತಿಯಿಂದಲೂ ಸೋಮವಾರ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗಳಲ್ಲಿ ತಲಾ ಹತ್ತು ಮೀಟರ್ ಮಾರ್ಕಿಂಗ್ ಮಾಡಲಾಗುವುದು; ನಂತರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಸುರೇಶ್ ಜಾಧವ್ ಅವರಿಗೆ ತಿಳಿಸಲಾಗಿದೆ.
ಇದರ ನಡುವೆ, ರಸ್ತೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದರೆ, ಹಸ್ತಕ್ಷೇಪ ಮಾಡುವ ರಾಜಕೀಯ ನಾಯಕರ ಪ್ರತೀಕಾತ್ಮಕ ಪುತ್ತಳಿ ದಹನ ಮಾಡುವ ಎಚ್ಚರಿಕೆಯನ್ನು ಖಾನಾಪುರ ನಗರದ ನಾಗರಿಕರು ನೀಡಿದ್ದಾರೆ.
ರಸ್ತೆಯಲ್ಲಿನ ಅತಿಕ್ರಮಣ ತೆರವುಗೊಳಿಸದಿದ್ದರೆ, ಮಾಜಿ ನಗರಸಭಾ ಸದಸ್ಯರ ಹೋರಾಟಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕ ಹಾಗೂ ಕಾರ್ಯಾಧ್ಯಕ್ಷ ಮುರಳಿಧರ ಪಾಟೀಲ, ಕಾಂಗ್ರೆಸ್ ಅಧ್ಯಕ್ಷ ಅಡ್ವೊಕೇಟ್ ಈಶ್ವರ ಘಾಡಿ, ಸಮಿತಿ ನಾಯಕ ಪ್ರಕಾಶ ಚವ್ಹಾಣ, ಹಾಗೆಯೇ ಭಾರತೀಯ ಜನತಾ ಪಕ್ಷದ ಅನೇಕ ನಾಯಕರು ಮತ್ತು ಖಾನಾಪುರ ನಗರದ ಹಲವಾರು ಸಾಮಾಜಿಕ ಕಾರ್ಯಕರ್ತರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಜಿ ನಗರಸಭಾ ಸದಸ್ಯರಾದ ದಿನಕರ ಮರಗಾಳೆ ಮತ್ತು ವಿವೇಕ ಗಿರಿ ಅವರು ನಗರ ಪಂಚಾಯಿತಿ ಹಾಗೂ ಸಾರ್ವಜನಿಕ ನಿರ್ಮಾಣ ಇಲಾಖೆಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಸೋಮವಾರ, ದಿನಾಂಕ 12 ಜನವರಿ 2025ರೊಳಗೆ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭವಾಗದಿದ್ದರೆ, ಮಂಗಳವಾರ, ದಿನಾಂಕ 13 ಜನವರಿ 2025ರಿಂದ ಆಮರಣ ಉಪವಾಸ ಆರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


