मंदिरासोबत वाचनालय उभारणीचा संकल्प प्रेरणादायी; सीमाभागाशी नातं अबाधित ठेवणार – आमदार रोहित पाटील.
खानापूर, ता. 15 : बेळगाव सीमाभागाशी आपल्या कुटुंबाचे जिव्हाळ्याचे संबंध कायम राहतील, अशी ग्वाही देत तासगाव–कवठेमहांकाळ मतदारसंघाचे आमदार रोहित आर. आर. आबा पाटील यांनी सीमाभागातील प्रश्नांविषयी आपुलकी व्यक्त केली. नागुर्डावाडा येथे राबविण्यात आलेला “मंदिर तेथे वाचनालय” हा अभिनव उपक्रम आदर्शवत असल्याचे सांगून, आपल्या मतदारसंघातही मंदिर उभारणीसोबत वाचनालय सुरू करण्याचा प्रयत्न केला जाईल, असे त्यांनी स्पष्ट केले.

नागुर्डावाडा येथे शुक्रवारी श्री नागेश महारूद्र मंदिराच्या उद्घाटन सोहळ्यात ते बोलत होते. कार्यक्रमाच्या अध्यक्षस्थानी मंदिर समितीचे अध्यक्ष निरंजन सरदेसाई होते. यावेळी आमदार विठ्ठलराव हलगेकर, माजी आमदार दिगंबर पाटील, माजी आमदार अरविंद पाटील, मध्यवर्ती महाराष्ट्र एकीकरण समितीचे अध्यक्ष प्रकाश मरगाळे, श्रीराम सेना अध्यक्ष रमाकांत कोंडुसकर, सरचिटणीस मालोजी आष्टेकर, खानापूर समितीचे अध्यक्ष गोपाळराव देसाई, सरचिटणीस आबासाहेब दळवी तसेच विविध क्षेत्रातील मान्यवर उपस्थित होते.
कार्यक्रमाची सुरुवात मंदिराच्या प्रवेशद्वाराच्या उद्घाटनाने झाली. हे उद्घाटन आमदार रोहित पाटील यांच्या हस्ते पार पडले, तर गाभाऱ्याचे उद्घाटन आमदार विठ्ठलराव हलगेकर यांनी केले. “मंदिर तेथे वाचनालय” या उपक्रमाचा शुभारंभ मालोजी आष्टेकर यांच्या हस्ते करण्यात आला. त्यानंतर दीपप्रज्वलन व प्रतिमापूजनाचा विधी संपन्न झाला.
यावेळी आमदार विठ्ठलराव हलगेकर यांनी ग्रामदैवताच्या मंदिराचा जीर्णोद्धार हा गावाच्या सांस्कृतिक ऐक्याचा आणि धार्मिक सलोख्याचा प्रतीक असल्याचे मत व्यक्त केले.
कार्यक्रमात अन्य मान्यवरांनीही आपली मनोगते मांडली.
या सोहळ्यास नागुर्डा, नागुर्डावाडी व विश्रांतवाडी परिसरातील नागरिकांसह अनेक राजकीय कार्यकर्ते आणि भाविकांनी मोठ्या संख्येने उपस्थिती दर्शविली. प्रस्ताविक व स्वागत ज्ञानेश्वर पाटील यांनी केले. शेवटी महाप्रसादाने कार्यक्रमाची सांगता झाली.
ದೇವಾಲಯದ ಜೊತೆಗೆ ವಾಚನಾಲಯ ನಿರ್ಮಾಣದ ಸಂಕಲ್ಪ ಪ್ರೇರಣಾದಾಯಕ; ಗಡಿಭಾಗದೊಂದಿಗೆ ನಂಟು ಅಬಾಧಿತವಾಗಿರುತ್ತದೆ – ಶಾಸಕ ರೋಹಿತ್ ಪಾಟೀಲ.
ಖಾನಾಪುರ, ತಾ. ೧೫ : ಬೆಳಗಾವಿ ಗಡಿಭಾಗದೊಂದಿಗೆ ತಮ್ಮ ಕುಟುಂಬದ ಆತ್ಮೀಯ ಸಂಬಂಧಗಳು ಸದಾ ಉಳಿಯುತ್ತವೆ ಎಂದು ಭರವಸೆ ನೀಡಿದ ತಾಸಗಾಂವ್–ಕವಠೇಮಹಾಂಕಾಳ ವಿಧಾನಸಭಾ ಕ್ಷೇತ್ರದ ಶಾಸಕ ರೋಹಿತ್ ಆರ್. ಆಬಾ ಪಾಟೀಲ ಅವರು ಗಡಿಭಾಗದ ಪ್ರಶ್ನೆಗಳ ಬಗ್ಗೆ ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸಿದರು. ನಾಗುರ್ಡಾವಾಡಾದಲ್ಲಿ ಜಾರಿಗೊಂಡ “ದೇವಾಲಯ ಇದ್ದಲ್ಲಿ ವಾಚನಾಲಯ” ಎಂಬ ಅಭಿನವ ಉಪಕ್ರಮ ಆದರ್ಶಪ್ರಾಯವಾಗಿದ್ದು, ತಮ್ಮ ಮತಕ್ಷೇತ್ರದಲ್ಲಿಯೂ ದೇವಾಲಯ ನಿರ್ಮಾಣದ ಜೊತೆಗೆ ವಾಚನಾಲಯ ಪ್ರಾರಂಭಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ನಾಗುರ್ಡಾವಾಡಾದಲ್ಲಿ ಶುಕ್ರವಾರ ಶ್ರೀ ನಾಗೇಶ ಮಹಾರುದ್ರ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷ ನಿರಂಜನ್ ಸರದೇಶಾಯಿ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೆಕರ, ಮಾಜಿ ಶಾಸಕ ದಿಗಂಬರ್ ಪಾಟೀಲ, ಅರವಿಂದ ಪಾಟೀಲ, ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ಪ್ರಕಾಶ ಮರಗಾಳೆ, ಶ್ರೀರಾಮ ಸೇನೆಯ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್, ಸರಚಿಟಣಿಸ ಮಾಳೋಜಿ ಆಷ್ಟೇಕರ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭ ದೇವಸ್ಥಾನದ ಪ್ರವೇಶದ್ವಾರದ ಉದ್ಘಾಟನೆಯೊಂದಿಗೆ ನಡೆಯಿತು. ಈ ಉದ್ಘಾಟನೆಯನ್ನು ಮಹಾರಾಷ್ಟ್ರ ರಾಜ್ಯದ ಶಾಸಕ ರೋಹಿತ್ ಪಾಟೀಲ ನೆರವೇರಿಸಿದರೆ, ಗರ್ಭಗುಡಿಯ ಉದ್ಘಾಟನೆಯನ್ನು ಶಾಸಕ ವಿಠ್ಠಲರಾವ್ ಹಲಗೆಕರ ನೆರವೇರಿಸಿದರು. “ದೇವಾಲಯ ಇದ್ದಲ್ಲಿ ವಾಚನಾಲಯ” ಉಪಕ್ರಮದ ಶುಭಾರಂಭವನ್ನು ಮಾಳೋಜಿ ಆಷ್ಟೇಕರ್ ಅವರ ಕೈಯಿಂದ ನೆರವೇರಿಸಲಾಯಿತು. ನಂತರ ದೀಪಪ್ರಜ್ವಲನ ಹಾಗೂ ಪ್ರತಿಮಾಪೂಜೆಯ ವಿಧಿ ಸಂಪ್ರದಾಯಬದ್ಧವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೆಕರ ಅವರು ಗ್ರಾಮ ದೇವರ ದೇವಸ್ಥಾನದ ಜೀರ್ಣೋದ್ಧಾರವು ಗ್ರಾಮದ ಸಾಂಸ್ಕೃತಿಕ ಏಕತೆ ಹಾಗೂ ಧಾರ್ಮಿಕ ಸೌಹಾರ್ದದ ಪ್ರತೀಕವಾಗಿದ್ದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಇತರ ಗಣ್ಯರೂ ತಮ್ಮ ಮನೋಗತಗಳನ್ನು ವ್ಯಕ್ತಪಡಿಸಿದರು. ಈ ಸಮಾರಂಭಕ್ಕೆ ನಾಗುರ್ಡಾ, ನಾಗುರ್ಡಾವಾಡಾ ಮತ್ತು ವಿಶ್ರಾಂತವಾಡಿ ಪ್ರದೇಶದ ನಾಗರಿಕರು, ಅನೇಕ ರಾಜಕೀಯ ಕಾರ್ಯಕರ್ತರು ಹಾಗೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು. ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಜ್ಞಾನೇಶ್ವರ ಪಾಟೀಲ ನೆರವೇರಿಸಿದರು. ಕೊನೆಯಲ್ಲಿ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


