शिरोली विद्यालयाच्या विद्यार्थ्यांची बुद्धिबळ व बॅडमिंटन स्पर्धेत घवघवीत कामगिरी; सहा विद्यार्थ्यांची जिल्हास्तरीय स्पर्धेसाठी निवड.
खानापूर : प्रतिनिधी
खानापूर येथे नुकत्याच पार पडलेल्या बुद्धिबळ व बॅडमिंटन स्पर्धेत शासकीय माध्यमिक विद्यालय, शिरोली, ता. खानापूर येथील विद्यार्थ्यांनी उल्लेखनीय कामगिरी करत विद्यालयाच्या शिरपेचात मानाचा तुरा खोवला आहे.
बुद्धिबळ स्पर्धेत कु. सानिका कोवाडकर, कु. सानिका गावकर, कु. परशराम गावकर आणि कु. महादेव दळवी यांनी उत्कृष्ट कामगिरी केली. तसेच बॅडमिंटन स्पर्धेत कु. नागराज गावडा आणि कु. प्रभाकर सुतार यांनी चमकदार कामगिरी केली. या सर्व सहा विद्यार्थ्यांची जिल्हास्तरीय स्पर्धेसाठी निवड झाली आहे.
विद्यार्थ्यांच्या या यशाबद्दल शाळा सुधारणा समिती, मुख्याध्यापिका श्रीमती अनिता चिगारे, शारीरिक शिक्षक श्री. पी. एस. पाटील तसेच इतर शिक्षकवृंदांनी विद्यार्थ्यांचे अभिनंदन करून जिल्हास्तरीय स्पर्धेसाठी शुभेच्छा दिल्या.
ಶಿರೋಳಿ ಶಾಲೆಯ ವಿದ್ಯಾರ್ಥಿಗಳ ಚದುರಂಗ ಹಾಗೂ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ; ಆರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ.
ಖಾನಾಪುರ : ಪ್ರತಿನಿಧಿ
ಖಾನಾಪುರದಲ್ಲಿ ಇತ್ತೀಚೆಗೆ ನಡೆದ ಚದುರಂಗ ಹಾಗೂ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶಿರೋಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಚದುರಂಗ ಸ್ಪರ್ಧೆಯಲ್ಲಿ ಕು. ಸಾನಿಕಾ ಕೋವಾಡ್ಕರ್, ಕು. ಸಾನಿಕಾ ಗಾವ್ಕರ್, ಕು. ಪರಶರಾಮ ಗಾವ್ಕರ್ ಹಾಗೂ ಕು. ಮಹಾದೇವ ದಳವಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದೇ ರೀತಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕು. ನಾಗರಾಜ ಗಾವಡೆ ಹಾಗೂ ಕು. ಪ್ರಭಾಕರ ಸುತಾರ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಎಲ್ಲಾ ಆರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಸುಧಾರಣಾ ಸಮಿತಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಚಿಗಾರೆ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ. ಪಿ. ಎಸ್. ಪಾಟೀಲ ಹಾಗೂ ಇತರ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲು ಶುಭ ಹಾರೈಸಿದ್ದಾರೆ.



