खानापूर भाजपाचे ज्येष्ठ नेते संजय कुबल यांची भाजपाच्या जिल्हा उपाध्यक्षपदी नियुक्ती.
खानापूर : भाजपाचे राज्याध्यक्ष बी. वाय. विजेंद्र यांच्या सूचनेनुसार भारतीय जनता पार्टीचे जिल्हाध्यक्ष सुभाष पाटील यांनी बेळगाव जिल्ह्यात पक्ष संघटना अधिक मजबूत करण्यासाठी महत्त्वाचा निर्णय घेतला आहे. त्यानुसार खानापूर विधानसभा मतदारसंघातील भाजपाचे माजी तालुका अध्यक्ष व ज्येष्ठ नेते संजय कुबल यांची बेळगाव ग्रामीण जिल्हा उपाध्यक्षपदी नियुक्ती करण्यात आली आहे. यासंदर्भातील अधिकृत नियुक्तीपत्र जिल्हाध्यक्ष सुभाष पाटील यांनी आज शनिवार, दिनांक 7 मार्च 2026 रोजी जारी केले.

जिल्ह्यात पक्षाची संघटनात्मक बांधणी अधिक बळकट करण्यासाठी तसेच तळागाळातील कार्य अधिक प्रभावीपणे राबविण्याच्या उद्देशाने ही नियुक्ती करण्यात आल्याचे नियुक्तीपत्रात नमूद करण्यात आले आहे. नव्याने देण्यात आलेली जबाबदारी अत्यंत जबाबदारीने पार पाडत पक्षाचे संघटन गावागावात मजबूत करावे, तसेच आगामी राजकीय आव्हानांना सामोरे जाण्यासाठी कार्यकर्त्यांना प्रेरित करून पक्षाचा प्रभाव वाढविण्यासाठी सातत्याने प्रयत्न करावेत, असेही पत्रात म्हटले आहे.
नियुक्तीपत्र प्रदान करताना माजी आमदार संजय पाटील, भाजपाचे राज्य कार्यकारिणी सदस्य प्रमोद कोचेरी, युवा मोर्चा बेळगाव जिल्हा उपाध्यक्ष पंडित ओगले तसेच इतर पदाधिकारी उपस्थित होते.

संजय कुबल यांच्या नियुक्तीमुळे खानापूर तालुक्यातील भाजप कार्यकर्त्यांमध्ये उत्साहाचे वातावरण निर्माण झाले आहे. खानापूर तालुक्यात भारतीय जनता पार्टीचे अस्तित्व अत्यंत मर्यादित असलेल्या काळापासून संजय कुबल हे पक्षात सक्रियपणे कार्यरत आहेत. त्यांनी दोन वेळा भाजपाचे तालुका अध्यक्ष म्हणून जबाबदारी सांभाळली असून त्या काळात त्यांनी संपूर्ण तालुक्यात खेडोपाडी दौरे करून पक्ष संघटना मजबूत करण्यासाठी मोठे प्रयत्न केले. त्यांच्या नेतृत्वाखाली पक्षाचे कार्य तळागाळापर्यंत पोहोचले आणि तालुक्यात भाजपाचे अस्तित्व दृढ झाले.
खानापूर तालुक्यात आज भाजपाचा मोठा कार्यकर्ता वर्ग तयार होण्यात संजय कुबल यांचे महत्त्वपूर्ण योगदान मानले जाते. संपूर्ण तालुक्यात त्यांना मानणारा कार्यकर्त्यांचा मोठा गट आहे. कोणताही भेदभाव न करता सर्वसामान्य नागरिकांची कामे व अडचणी सोडविण्यासाठी ते नेहमी प्रयत्नशील असतात.
त्यांच्या या निवडीमुळे खानापूर तालुक्यातील भाजप पदाधिकारी, कार्यकर्ते तसेच मित्रपरिवारामध्ये आनंदाचे व उत्साहाचे वातावरण निर्माण झाले आहे. अनेकांनी त्यांचे अभिनंदन करून पुढील कार्यासाठी शुभेच्छा दिल्या आहेत.
ಖಾನಾಪುರ ತಾಲೂಕಿನ ಬಿಜೆಪಿಯ ಹಿರಿಯ ನಾಯಕ ಸಂಜಯ ಕುಬಲ ಅವರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ.
ಖಾನಾಪುರ : ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ. ವಾಯ್. ವಿಜೇಂದ್ರ ಅವರ ಸೂಚನೆಯ ಮೇರೆಗೆ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ್ ಅವರ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಖಾನಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ತಾಲೂಕು ಅಧ್ಯಕ್ಷ ಹಾಗೂ ಹಿರಿಯ ನಾಯಕ ಸಂಜಯ್ ಕುಬಲ ಅವರನ್ನು ಬೆಳಗಾವಿ ಗ್ರಾಮೀಣ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಅಧಿಕೃತ ನೇಮಕಾತಿ ಪತ್ರವನ್ನು ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಇಂದು ಶನಿವಾರ, ದಿನಾಂಕ 7 ಮಾರ್ಚ್ 2026 ರಂದು ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಪಕ್ಷದ ಸಂಘಟನಾ ಬಲವನ್ನು ಹೆಚ್ಚಿಸುವುದರ ಜೊತೆಗೆ ತಳಮಟ್ಟದ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ನೇಮಕಾತಿ ಮಾಡಲಾಗಿದೆ ಎಂದು ನೇಮಕಾತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೊಸದಾಗಿ ನೀಡಲಾದ ಜವಾಬ್ದಾರಿಯನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಿ, ಪಕ್ಷದ ಸಂಘಟನೆಯನ್ನು ಪ್ರತಿ ಗ್ರಾಮದ ತಳ ಮಟ್ಟದವರೆಗೆ ಬಲಪಡಿಸಬೇಕು. ಜೊತೆಗೆ ಮುಂದಿನ ರಾಜಕೀಯ ಸವಾಲುಗಳನ್ನು ಎದುರಿಸಲು ಕಾರ್ಯಕರ್ತರನ್ನು ಪ್ರೇರೇಪಿಸಿ ಪಕ್ಷದ ಪ್ರಭಾವವನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನೇಮಕಾತಿ ಪತ್ರ ನೀಡುವ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ , ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ್ ಕೂಚೇರಿ, ಯುವ ಮೋರ್ಚಾ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಒಗಲೆ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಜಯ ಕುಬಲ ಅವರ ನೇಮಕಾತಿಯಿಂದ ಖಾನಾಪುರ ತಾಲೂಕಿನ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಖಾನಾಪುರ ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ಅಸ್ತಿತ್ವ ಬಹಳ ಸೀಮಿತವಾಗಿದ್ದ ಕಾಲದಿಂದಲೇ ಸಂಜಯ ಕುಬಲ ಅವರು ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಎರಡು ಬಾರಿ ಬಿಜೆಪಿಯ ತಾಲೂಕು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ಆ ಸಮಯದಲ್ಲಿ ಅವರು ಸಂಪೂರ್ಣ ತಾಲೂಕಿನ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆಯನ್ನು ಬಲಪಡಿಸಲು ಮಹತ್ವದ ಪ್ರಯತ್ನಗಳನ್ನು ಮಾಡಿದ್ದಾರೆ.
ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯ ತಳಮಟ್ಟದವರೆಗೆ ತಲುಪಿದ್ದು, ತಾಲೂಕಿನಲ್ಲಿ ಬಿಜೆಪಿಯ ಅಸ್ತಿತ್ವ ದೃಢವಾಗಿದೆ.
ಖಾನಾಪುರ ತಾಲೂಕಿನಲ್ಲಿ ಇಂದು ಬಿಜೆಪಿಯ ದೊಡ್ಡ ಕಾರ್ಯಕರ್ತರ ಬಳಗ ನಿರ್ಮಾಣವಾಗಲು ಸಂಜಯ ಕುಬಲ ಅವರ ಮಹತ್ವದ ಕೊಡುಗೆ ಇದೆ ಎಂದು ಪರಿಗಣಿಸಲಾಗುತ್ತದೆ. ಸಂಪೂರ್ಣ ತಾಲೂಕಿನಲ್ಲೂ ಅವರಿಗೆ ಬೆಂಬಲಿಸುವ ಕಾರ್ಯಕರ್ತರ ದೊಡ್ಡ ಗುಂಪಿದೆ. ಯಾವುದೇ ಭೇದಭಾವವಿಲ್ಲದೆ ಸಾಮಾನ್ಯ ನಾಗರಿಕರ ಕೆಲಸಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅವರು ಸದಾ ಪ್ರಯತ್ನಿಸುತ್ತಾರೆ.
ಅವರ ಈ ನೇಮಕಾತಿಯಿಂದ ಖಾನಾಪುರ ತಾಲೂಕಿನ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ನೇಹಿತರಲ್ಲಿ ಸಂತೋಷ ಮತ್ತು ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಹಲವರು ಅವರನ್ನು ಅಭಿನಂದಿಸಿ ಮುಂದಿನ ಕಾರ್ಯಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.



