खानापूरच्या जुन्या बसस्थानकावरून बेळगावच्या बससेवा पूर्ववत करा ; ज्येष्ठ नागरिकांची निवेदनाद्वारे मागणी.
खानापूर : खानापूर आगारातून बेळगावकडे जाणाऱ्या बसेस पूर्वीप्रमाणे खानापूर शहरातील जुन्या बसस्थानकावर म्हणजेच शिवस्मारक सर्कल येथे येऊन पुढे बेळगावला रवाना कराव्यात, तसेच बेळगावहून खानापूरकडे येणाऱ्या बसेस जुन्या बसस्थानकावर आणून त्यानंतर आगारात न्याव्यात, अशी मागणी ज्येष्ठ नागरिक व प्रवासी वर्गाने खानापूरचे केएसआरटीसी आगार व्यवस्थापक संतोष बेनकनकोप यांच्याकडे निवेदनाद्वारे केली आहे.
निवेदनात म्हटले आहे की, खानापूर आगारातून बेळगावकडे जाणाऱ्या अनेक बसेस सध्या जुन्या बसस्थानकावर न येता थेट नव्या बसस्थानकातून बेळगावकडे रवाना होत आहेत. त्याचप्रमाणे बेळगावहून खानापूरला येणाऱ्या बसेसही जुन्या बसस्थानकावर न येता थेट आगारापर्यंतच येत आहेत.
यामुळे विशेषतः ज्येष्ठ नागरिक, वयोवृद्ध तसेच शहरातील सर्वसामान्य प्रवाशांना मोठ्या अडचणींचा सामना करावा लागत आहे. शहरातून नव्या बसस्थानकापर्यंत जाण्यासाठी खासगी वाहनांचा किंवा इतर वाहतुकीचा आधार घ्यावा लागत असून, त्यासाठी मोठा अतिरिक्त खर्च होत असल्याचे निवेदनात नमूद करण्यात आले आहे.
पूर्वीप्रमाणे बेळगावकडे जाणाऱ्या सर्व बसेस खानापूर जुन्या बसस्थानकावर (शिवस्मारक सर्कल) येऊन तेथून बेळगावकडे रवाना कराव्यात. तसेच बेळगावहून येणाऱ्या सर्व बसेस प्रथम जुन्या बसस्थानकावर आणून त्यानंतर आगारात न्याव्यात, अशी मागणी ज्येष्ठ नागरिक व नागरिकांनी केली आहे.
या मागणीची तातडीने दखल घेऊन प्रवाशांची गैरसोय दूर करावी, अशी विनंती निवेदनाद्वारे करण्यात आली आहे.
यावेळी सामाजिक कार्यकर्ते जॅकी फर्नांडिस, शिवानंद पाटील, बाबा गिरी, एस जी पाटील, तुकाराम गोरल, एन ए चव्हाण, टी के जांगळे, शिवाजी कोलेकर, मुरारी तसेच आदीजण उपस्थित होते.
जनप्रतिनिधी म्हणून स्वतःला मिरवणारे लोकप्रतिनिधी याकडे का लक्ष देत नाहीत, असा सवाल सामान्य नागरिकांकडून उपस्थित केला जात आहे. त्यांच्या घरातील ज्येष्ठ नागरिकांना स्वतःच्या वाहनातून ने-आण केली जात असल्याने, सामान्य नागरिकांना भेडसावणाऱ्या अडचणी त्यांना जाणवत नाहीत का??, अशी चर्चा नागरिकांमध्ये स्वाभाविकपणे होत आहे.
ಖಾನಾಪುರದ ಹಳೆಯ ಬಸ್ ನಿಲ್ದಾಣದಿಂದ ಬೆಳಗಾವಿಗೆ ಬಸ್ ಸೇವೆಗಳನ್ನು ಎಂದಿನಂತೆ ಪುನರಾರಂಭಿಸಿ ; ಹಿರಿಯ ನಾಗರಿಕರ ಮನವಿ ಮೂಲಕ ಆಗ್ರಹ.
ಖಾನಾಪುರ : ಖಾನಾಪುರ ಘಟಕದಿಂದ ಬೆಳಗಾವಿಗೆ ತೆರಳುವ ಬಸ್ಗಳನ್ನು ಈ ಹಿಂದೆ ಇದ್ದಂತೆ ಖಾನಾಪುರ ನಗರದ ಹಳೆಯ ಬಸ್ ನಿಲ್ದಾಣವಾದ ಶಿವಸ್ಮಾರಕ ಸರ್ಕಲ್ಗೆ ಬಂದು, ಅಲ್ಲಿಂದ ಮುಂದೆ ಬೆಳಗಾವಿಗೆ ತೆರಳುವಂತೆ ಮಾಡಬೇಕು. ಅದೇ ರೀತಿ ಬೆಳಗಾವಿಯಿಂದ ಖಾನಾಪುರದತ್ತ ಬರುವ ಬಸ್ಗಳನ್ನು ಸಹ ಮೊದಲು ಹಳೆಯ ಬಸ್ ನಿಲ್ದಾಣಕ್ಕೆ ತಂದು, ನಂತರ ಘಟಕಕ್ಕೆ ಕಳುಹಿಸಬೇಕು ಎಂದು ಹಿರಿಯ ನಾಗರಿಕರು ಹಾಗೂ ಪ್ರಯಾಣಿಕರು ಖಾನಾಪುರದ ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರಾದ ಸಂತೋಷ ಬೆನಕನಕೋಪ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಮನವಿಯಲ್ಲಿ ತಿಳಿಸಿರುವಂತೆ, ಖಾನಾಪುರ ಘಟಕದಿಂದ ಬೆಳಗಾವಿಯತ್ತ ತೆರಳುವ ಹಲವು ಬಸ್ಗಳು ಸದ್ಯ ಹಳೆಯ ಬಸ್ ನಿಲ್ದಾಣಕ್ಕೆ ಬಾರದೆ ನೇರವಾಗಿ ಹೊಸ ಬಸ್ ನಿಲ್ದಾಣದಿಂದಲೇ ಬೆಳಗಾವಿಯತ್ತ ತೆರಳುತ್ತಿವೆ. ಅದೇ ರೀತಿ ಬೆಳಗಾವಿಯಿಂದ ಖಾನಾಪುರಕ್ಕೆ ಬರುವ ಬಸ್ಗಳು ಸಹ ಹಳೆಯ ಬಸ್ ನಿಲ್ದಾಣಕ್ಕೆ ಬಾರದೆ ನೇರವಾಗಿ ಕೆಎಸ್ಆರ್ಟಿಸಿ ಘಟಕದವರೆಗೆ ಮಾತ್ರ ಬರುತ್ತಿವೆ.
ಇದರಿಂದ ವಿಶೇಷವಾಗಿ ಹಿರಿಯ ನಾಗರಿಕರು, ವಯೋವೃದ್ಧರು ಹಾಗೂ ನಗರದ ಸಾಮಾನ್ಯ ಪ್ರಯಾಣಿಕರು ಸಾಕಷ್ಟು ತೊಂದರೆಗಳನ್ನು ಎದುರಿಸುವಂತಾಗಿದೆ. ನಗರದ ವಿವಿಧ ಭಾಗಗಳಿಂದ ಹೊಸ ಬಸ್ ನಿಲ್ದಾಣಕ್ಕೆ ತೆರಳಲು ಖಾಸಗಿ ವಾಹನಗಳು ಅಥವಾ ಇತರ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕಾಗಿದ್ದು, ಇದಕ್ಕಾಗಿ ಪ್ರಯಾಣಿಕರಿಗೆ ಹೆಚ್ಚುವರಿ ಹಣ ಖರ್ಚಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಇದ್ದ ವ್ಯವಸ್ಥೆಯಂತೆ ಬೆಳಗಾವಿಯತ್ತ ತೆರಳುವ ಎಲ್ಲಾ ಬಸ್ಗಳು ಖಾನಾಪುರದ ಹಳೆಯ ಬಸ್ ನಿಲ್ದಾಣವಾದ ಶಿವಸ್ಮಾರಕ ಸರ್ಕಲ್ಗೆ ಬಂದು, ಅಲ್ಲಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸುವಂತೆ ಮಾಡಬೇಕು. ಅದೇ ರೀತಿ ಬೆಳಗಾವಿಯಿಂದ ಖಾನಾಪುರಕ್ಕೆ ಆಗಮಿಸುವ ಎಲ್ಲಾ ಬಸ್ಗಳನ್ನು ಮೊದಲು ಹಳೆಯ ಬಸ್ ನಿಲ್ದಾಣಕ್ಕೆ ತಂದು, ನಂತರ ಕೆಎಸ್ಆರ್ಟಿಸಿ ಘಟಕಕ್ಕೆ ಕಳುಹಿಸಬೇಕು, ಎಂದು ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಯಾಣಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಈ ಬೇಡಿಕೆಯನ್ನು ತುರ್ತಾಗಿ ಪರಿಗಣಿಸಿ, ಹಳೆಯ ಬಸ್ ನಿಲ್ದಾಣದಿಂದಲೇ ಬಸ್ ಸೇವೆಗಳನ್ನು ಎಂದಿನಂತೆ ಪುನರಾರಂಭಿಸುವ ಮೂಲಕ ಪ್ರಯಾಣಿಕರ ಅನಾನುಕೂಲತೆಯನ್ನು ನಿವಾರಿಸಬೇಕು, ಎಂದು ಮನವಿ ಮೂಲಕ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಜಾಕಿ ಫರ್ನಾಂಡಿಸ್, ಶಿವಾನಂದ ಪಾಟೀಲ, ಬಾಬಾ ಗಿರಿ, ಎಸ್. ಜಿ. ಪಾಟೀಲ, ತುಕಾರಾಮ ಗೋರಲ, ಎನ್. ಎ. ಚವ್ಹಾಣ, ಟಿ. ಕೆ. ಜಾಂಗಳೆ, ಶಿವಾಜಿ ಕೋಲೆಕರ, ಮುರಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜನ ಪ್ರತಿನಿಧಿಗಳು ಎಂದು ಕರೆಸಿಕೊಳ್ಳುವರು ಯಾಕೆ ಗಮನಹರಿಸುತ್ತಿಲ್ಲ ಎಂದು ಸಾಮಾನ್ಯ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅವರ ಮನೆಯಲ್ಲಿನ ಹಿರಿಯರಿಗೆ ತಮ್ಮ ಸ್ವಂತ ವಾಹನದಲ್ಲಿ ಕರೆದುಕೊಂಡು ಹೋಗುವುದರಿಂದ ಅವರಿಗೆ ಸಾಮಾನ್ಯ ನಾಗರಿಕರು ಅನುಭವಿಸುವ ತೊಂದರೆ ಕಾಣಿಸದು ಎಂದು ಮಾತನಾಡುತ್ತೀರುವುದು ಸಹಜವಾಗಿತ್ತು.



