श्री विश्वकर्मा मंदिरात धार्मिक-सामाजिक उपक्रमांचा संगम; मान्यवरांचा सत्कार, महाप्रसादाचा लाभ.
करंबळ क्रॉस (ता. खानापूर), दि. 14 : श्री विश्वकर्मा समाज विकास देवस्थान ट्रस्ट कमिटीच्या वतीने करंबळ क्रॉस येथील श्री विश्वकर्मा मंदिरात अमावास्येनिमित्त विविध धार्मिक व सामाजिक कार्यक्रमांचे भक्तिमय वातावरणात आयोजन करण्यात आले. अभिषेक, महापूजा, भजन, सत्कार सोहळा आणि महाप्रसाद अशा विविध कार्यक्रमांनी मंदिर परिसर भक्तिरसाने भारावून गेला.
कार्यक्रमाची सुरुवात सकाळी अभिषेकाने झाली. त्यानंतर विधिवत महापूजा संपन्न झाली. महापूजेनंतर श्री विश्वकर्मा समाजातील बांधवांनी सादर केलेल्या सुमधुर भजनांनी उपस्थित भाविक मंत्रमुग्ध झाले. संपूर्ण मंदिर परिसर भक्तिमय वातावरणाने न्हाऊन निघाला.
सामाजिक सलोखा आणि बंधुभाव जपण्याच्या उद्देशाने मराठा समाजासह इतर समाजातील मान्यवर तसेच फर्निचर व्यवसायात उल्लेखनीय कार्य करणाऱ्या बांधवांचा शाल, श्रीफळ आणि स्मृतिचिन्ह देऊन सत्कार करण्यात आला.
कार्यक्रमाच्या अध्यक्षस्थानी श्री अशोक सुतार होते. तर सत्कारमूर्ती श्री पुंडलिक ज्ञानोबा सुतार यांच्या हस्ते व उपस्थित मान्यवरांच्या शुभहस्ते सत्कार सोहळा पार पडला. तालुक्यातील विश्वकर्मा समाजातील ज्येष्ठ उपासक तसेच विविध क्षेत्रातील मान्यवरांची उपस्थिती कार्यक्रमाचे विशेष आकर्षण ठरली.
कार्यक्रमाचे प्रभावी सूत्रसंचालन यल्लारी सुतार यांनी केले. हनुमंत सुतार यांनी प्रास्ताविकातून कार्यक्रमाचा उद्देश स्पष्ट केला तसेच उपस्थितांचे आभार मानले.
या कार्यक्रमाला विश्वकर्मा समाजातील महिला, पुरुष, युवक तसेच इतर समाजातील नागरिक मोठ्या संख्येने उपस्थित होते. कार्यक्रमानंतर सर्व भाविकांनी महाप्रसादाचा लाभ घेतला.
अलिकडच्या काळात श्री विश्वकर्मा मंदिरात भाविकांची संख्या सातत्याने वाढत असून मंदिराच्या विकासासाठी देणगीदार व भक्तांकडून उत्स्फूर्त सहकार्य लाभत आहे. धार्मिक, सामाजिक आणि सांस्कृतिक उपक्रमांद्वारे समाजातील सर्व घटकांना एकत्र आणणारे हे मंदिर परिसरातील श्रद्धा, एकात्मता आणि सामाजिक सलोख्याचे प्रेरणास्थान बनत असून, भविष्यातही अशाच विविध उपक्रमांचे आयोजन करण्यात येणार असल्याची माहिती ट्रस्टच्या पदाधिकाऱ्यांनी दिली.
ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳ ಸಂಗಮ; ಗಣ್ಯರಿಗೆ ಸನ್ಮಾನ, ಮಹಾಪ್ರಸಾದ ವಿತರಣೆ.
ಕರಂಬಳ ಕ್ರಾಸ್ (ತಾ. ಖಾನಾಪುರ), ಜು. 14 : ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ದೇವಸ್ಥಾನ ಟ್ರಸ್ಟ್ ಸಮಿತಿಯ ವತಿಯಿಂದ ಕರಂಬಳ ಕ್ರಾಸ್ನಲ್ಲಿರುವ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಅಮಾವಾಸ್ಯೆಯ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ಅಭಿಷೇಕ, ಮಹಾಪೂಜೆ, ಭಜನೆ, ಸನ್ಮಾನ ಸಮಾರಂಭ ಹಾಗೂ ಮಹಾಪ್ರಸಾದ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ದೇವಸ್ಥಾನದ ಆವರಣ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು.
ಕಾರ್ಯಕ್ರಮವು ಬೆಳಿಗ್ಗೆ ಅಭಿಷೇಕದೊಂದಿಗೆ ಆರಂಭವಾಯಿತು. ಬಳಿಕ ವಿಧಿವತ್ತಾಗಿ ಮಹಾಪೂಜೆ ನೆರವೇರಿಸಲಾಯಿತು. ಮಹಾಪೂಜೆಯ ನಂತರ ಶ್ರೀ ವಿಶ್ವಕರ್ಮ ಸಮಾಜದ ಸದಸ್ಯರು ಪ್ರಸ್ತುತಪಡಿಸಿದ ಸುಮಧುರ ಭಜನೆಗಳು ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ಸಂಪೂರ್ಣ ದೇವಸ್ಥಾನ ಆವರಣ ಭಕ್ತಿರಸದಿಂದ ತುಂಬಿ ತುಳುಕಿತು.
ಸಾಮಾಜಿಕ ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಲಪಡಿಸುವ ಉದ್ದೇಶದಿಂದ ಮರಾಠಾ ಸಮಾಜ ಸೇರಿದಂತೆ ಇತರ ಸಮಾಜಗಳ ಗಣ್ಯರು ಹಾಗೂ ಪೀಠೋಪಕರಣ (ಫರ್ನಿಚರ್) ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಸಮಾಜಬಾಂಧವರನ್ನು ಶಾಲು, ಶ್ರೀಫಲ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಶೋಕ ಸುತಾರ್ ವಹಿಸಿದ್ದರು. ಸನ್ಮಾನಮೂರ್ತಿಗಳಾದ ಶ್ರೀ ಪುಂಡಲೀಕ ಜ್ಞಾನೋಬಾ ಸುತಾರ್ ಅವರ ಸಮ್ಮುಖದಲ್ಲಿ ಹಾಗೂ ಇತರ ಗಣ್ಯರ ಶುಭಹಸ್ತಗಳಿಂದ ಸನ್ಮಾನ ಕಾರ್ಯಕ್ರಮ ನೆರವೇರಿತು. ಖಾನಾಪುರ ತಾಲ್ಲೂಕಿನ ವಿಶ್ವಕರ್ಮ ಸಮಾಜದ ಹಿರಿಯ ಉಪಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಕಾರ್ಯಕ್ರಮವನ್ನು ಯಲ್ಲಾರಿ ಸುತಾರ್ ಅವರು ಪರಿಣಾಮಕಾರಿಯಾಗಿ ನಿರೂಪಿಸಿದರು. ಹನುಮಂತ ಸುತಾರ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಆಗಮಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಮಹಿಳೆಯರು, ಪುರುಷರು, ಯುವಕರು ಹಾಗೂ ಇತರ ಸಮಾಜಗಳ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲಾ ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿದರು.
ಇತ್ತೀಚಿನ ದಿನಗಳಲ್ಲಿ ಶ್ರೀ ವಿಶ್ವಕರ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ದೇವಸ್ಥಾನದ ಅಭಿವೃದ್ಧಿಗಾಗಿ ದಾನಿಗಳು ಹಾಗೂ ಭಕ್ತರಿಂದ ಉತ್ಸಾಹಭರಿತ ಸಹಕಾರ ದೊರೆಯುತ್ತಿದೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಈ ದೇವಸ್ಥಾನವು ಪ್ರದೇಶದ ಭಕ್ತಿ, ಏಕತೆ ಹಾಗೂ ಸಾಮಾಜಿಕ ಸೌಹಾರ್ದತೆಯ ಪ್ರೇರಣಾ ಕೇಂದ್ರವಾಗಿ ರೂಪುಗೊಂಡಿದ್ದು, ಮುಂದೆಯೂ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದ್ದಾರೆ.

