मलप्रभा नदी पुलावरील रस्त्यावर पावसाचे पाणी साचले; नागरिकांकडून तातडीच्या दुरुस्तीची मागणी.
खानापूर : प्रतिनिधी
खानापूर येथील मलप्रभा नदी घाटानजीक तसेच मलप्रभा नदी पुलावरून जाणाऱ्या मुख्य रस्त्यावर पहिल्याच पावसात मोठ्या प्रमाणात पाणी साचून तलावाचे स्वरूप निर्माण झाले आहे. त्यामुळे वाहनचालक, प्रवासी तसेच स्थानिक नागरिकांना मोठ्या अडचणींचा सामना करावा लागत आहे.
मागील वर्षी आमदार विठ्ठलराव हलगेकर यांनी या ठिकाणी सुमारे 50 फूट रस्त्यावर पेवर्स बसवून काही प्रमाणात समस्या दूर करण्याचा प्रयत्न केला होता. त्यामुळे नागरिकांना थोडासा दिलासा मिळाला होता. मात्र उर्वरित रस्त्याचे काम दुसऱ्या टप्प्यात करण्यात येईल, असे आश्वासन देण्यात आले होते.
परंतु अद्यापपर्यंत उर्वरित भागात ना पेवर्स बसविण्यात आले आहेत ना डांबरीकरण करण्यात आले आहे. परिणामी आज सकाळी झालेल्या पावसामुळे रस्त्यावर मोठ्या प्रमाणात पाणी साचले असून संपूर्ण परिसर तलावासारखा दिसत आहे.
या समस्येमुळे वाहनचालकांना वाहने चालविताना व पायी चालत जात असताना मोठी कसरत करावी लागत असून अपघाताचा धोका देखील वाढला आहे. त्यामुळे ज्या ठिकाणी पाणी साचत आहे त्या भागात तातडीने पेवर्स बसविणे अथवा रस्त्याची दुरुस्ती करावी, अशी मागणी नागरिक आणि प्रवासी वर्गातून जोर धरत आहे.
ಮಲಪ್ರಭಾ ನದಿ ಸೇತುವೆ ರಸ್ತೆಯ ಬಳಿ ಮಳೆಯ ನೀರು ನಿಂತು ಸಮಸ್ಯೆ; ತುರ್ತು ದುರಸ್ತಿಗೆ ಸಾರ್ವಜನಿಕರ ಆಗ್ರಹ
ಖಾನಾಪುರ : ಪ್ರತಿನಿಧಿ
ಖಾನಾಪುರದ ಮಲಪ್ರಭಾ ನದಿ ಘಾಟ್ ಸಮೀಪ ಹಾಗೂ ಮಲಪ್ರಭಾ ನದಿ ಸೇತುವೆ ಮೂಲಕ ಸಾಗುವ ಮುಖ್ಯ ರಸ್ತೆಯಲ್ಲಿ ಮೊದಲ ಮಳೆಯಲ್ಲೇ ದೊಡ್ಡ ಪ್ರಮಾಣದಲ್ಲಿ ನೀರು ನಿಂತು ಕೆರೆಯಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು, ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹಿಂದಿನ ವರ್ಷ ಶಾಸಕ ವಿಠ್ಠಲರಾವ್ ಹಲಗೆಕರ ಅವರು ಈ ಭಾಗದಲ್ಲಿ ಸುಮಾರು 50 ಅಡಿ ರಸ್ತೆಗೆ ಪೇವರ್ಸ್ ಅಳವಡಿಸಿ ಸಮಸ್ಯೆಯನ್ನು ಕೆಲವು ಮಟ್ಟಿಗೆ ನಿವಾರಿಸಲು ಪ್ರಯತ್ನಿಸಿದ್ದರು. ಇದರಿಂದ ಸಾರ್ವಜನಿಕರಿಗೆ ಅಲ್ಪ ಸ್ವಲ್ಪ ಮಟ್ಟಿನ ನಿರಾಳತೆ ದೊರಕಿತ್ತು. ಆದರೆ ಉಳಿದ ರಸ್ತೆಯ ಕಾಮಗಾರಿಯನ್ನು ಎರಡನೇ ಹಂತದಲ್ಲಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದಾಗ್ಯೂ ಇಂದಿಗೂ ಉಳಿದ ಭಾಗದಲ್ಲಿ ಪೇವರ್ಸ್ ಅಳವಡಿಸುವುದಾಗಲಿ, ಡಾಂಬರೀಕರಣ ಮಾಡುವುದಾಗಲಿ ನಡೆದಿಲ್ಲ. ಪರಿಣಾಮವಾಗಿ ಇಂದು ಬೆಳಿಗ್ಗೆ ಸುರಿದ ಮಳೆಯಿಂದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದ್ದು, ಸಂಪೂರ್ಣ ಪ್ರದೇಶವೇ ಕೆರೆಯಂತಾಗಿದೆ.
ಈ ಸಮಸ್ಯೆಯಿಂದ ವಾಹನ ಸವಾರರು ವಾಹನ ಚಲಾಯಿಸಲು ಹಾಗೂ ಪಾದಚಾರಿಗಳು ನಡೆದು ಹೋಗಲು ಭಾರೀ ಕಸರತ್ತು ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತದ ಭೀತಿಯೂ ಹೆಚ್ಚಾಗಿದೆ. ಆದ್ದರಿಂದ ನೀರು ನಿಂತು ಸಮಸ್ಯೆಯಾಗುತ್ತಿರುವ ಪ್ರದೇಶದಲ್ಲಿ ತಕ್ಷಣ ಪೇವರ್ಸ್ ಅಳವಡಿಸುವುದು ಅಥವಾ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.


