शिक्षक भरती (2026) नियमावलीत बदलांची मागणी. मराठीसह मातृभाषेत परीक्षा घेण्याचा आग्रह ; तालिकोटी यांच्यामार्फत पालकमंत्री व जिल्हाधिकाऱ्यांची भेट घेणार.
खानापूर (प्रतिनिधी) : शिक्षक भरती (2026) नियमावली (C&R) मध्ये आवश्यक बदल करून उमेदवारांना न्याय द्यावा, अशी मागणी शिक्षक भरतीसाठी इच्छुक उमेदवारांकडून करण्यात आली आहे. केंद्रीय विद्यालय व इतर राज्यांप्रमाणे भरती प्रक्रिया राबविणे, 2015 च्या प्राथमिक शिक्षक भरती नियमांचा आधार घेणे तसेच मातृभाषेत परीक्षा घेण्यासह विविध मागण्या करण्यात आल्या आहेत. याबाबत काही उमेदवारांनी सामाजिक कार्यकर्ते इरफान तालिकोटी यांची भेट घेतली आहे. या संदर्भात इरफान तालीकोटी हे लवकरच बेळगाव जिल्हाचे पालक मंत्री सतीश जारकीहोळी व जील्हाधीकारी मोहम्मद रोशन यांची भेट घेऊन त्यांना सविस्तरपणे माहीती देऊन त्यांच्या सहकाऱ्याने सदर प्रस्ताव मंजुरीसाठी राज्याचे मुख्यमंत्री डी के शिवकुमार यांच्याकडे पाठवीणार असल्याचे समजते.
मागण्यांमध्ये प्राथमिक शिक्षकांची भरती ही सामान्य शिक्षक म्हणून करावी, अशी प्रमुख मागणी करण्यात आली आहे. तसेच प्राथमिक शिक्षक भरतीसाठी 2015 मधील नियम लागू करून बारावीमध्ये प्रत्येक विषयात स्वतंत्रपणे 50 टक्के गुणांची अट न ठेवता, एकूण (Aggregate) 50 टक्के गुण ग्राह्य धरावेत, अशी मागणी आहे.
याशिवाय शिक्षक भरतीची परीक्षा उमेदवारांच्या मातृभाषेत घेण्यात यावी. मराठी, कन्नड, इंग्रजी, उर्दू, तमिळ, तेलुगू आदी भाषांमध्ये परीक्षा उपलब्ध करून द्यावी, अशी मागणी करण्यात आली आहे.
कोरोना काळामुळे इतर भरती प्रक्रियांना जशी पाच वर्षांची वयोमर्यादा सवलत देण्यात आली होती, त्याचप्रमाणे शिक्षक भरतीतील उमेदवारांनाही ही सवलत लागू करावी, अशी मागणी करण्यात आली आहे.
2015 च्या प्राथमिक शिक्षक भरती नियमांप्रमाणे परीक्षेसाठी एकच पेपर (पेपर-1) ठेवावा, असेही उमेदवारांनी नमूद केले आहे.
तसेच खानापूर तालुक्यात मराठी माध्यमाच्या शाळांची गरज लक्षात घेऊन मराठी शिक्षकांची अधिक पदे भरावीत, अशी मागणी करण्यात आली आहे. इयत्ता 6 वी ते 8 वीसाठी पदवीधर प्राथमिक शिक्षक भरतीची परीक्षा देखील मातृभाषेतच घेण्यात यावी, असे निवेदनात म्हटले आहे.
याशिवाय 2022 च्या पदवीधर प्राथमिक शिक्षक भरती नियमांनुसार भरती प्रक्रिया राबवावी तसेच पदवीधर प्राथमिक शिक्षकांची नियुक्ती करताना बारावी व पदवीचे एकूण (Aggregate) गुण विचारात घ्यावेत, अशी मागणीही उमेदवारांनी शासनाकडे केली आहे.
ಶಿಕ್ಷಕರ ನೇಮಕಾತಿ (2026) ನಿಯಮಾವಳಿಯಲ್ಲಿ ಬದಲಾವಣೆ ಮಾಡುವಂತೆ ಆಗ್ರಹ; ಮರಾಠಿ ಸೇರಿದಂತೆ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿಡುವಂತೆ ಒತ್ತಾಯ –ಇರ್ಫಾನ್ ತಾಲಿಕೋಟಿ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಿರುವ ಅಭ್ಯರ್ಥಿಗಳು.
ಖಾನಾಪುರ (ಪ್ರತಿನಿಧಿ): ಶಿಕ್ಷಕರ ನೇಮಕಾತಿ (2026) ನಿಯಮಾವಳಿ (C&R)ಯಲ್ಲಿ ಅಗತ್ಯ ತಿದ್ದುಪಡಿ ಮಾಡಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಶಿಕ್ಷಕರ ನೇಮಕಾತಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಕೇಂದ್ರಿಯ ವಿದ್ಯಾಲಯ ಹಾಗೂ ಇತರೆ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿರುವ ಮಾದರಿಯಂತೆ ನೇಮಕಾತಿ ಪ್ರಕ್ರಿಯೆ ಜಾರಿಗೊಳಿಸುವುದು, 2015ರ ಪ್ರಾಥಮಿಕ ಶಿಕ್ಷಕರ ನೇಮಕಾತಿ ನಿಯಮಗಳನ್ನು ಆಧಾರವಾಗಿಸಿಕೊಳ್ಳುವುದು ಹಾಗೂ ಮಾತೃಭಾಷೆಯಲ್ಲಿ ಪರೀಕ್ಷೆ ನಡೆಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.
ಈ ಕುರಿತು ಕೆಲ ಅಭ್ಯರ್ಥಿಗಳು ಸಮಾಜಸೇವಕ ಇರ್ಫಾನ್ ತಾಲಿಕೋಟಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂಬಂಧ ಇರ್ಫಾನ್ ತಾಲಿಕೋಟಿ ಅವರು ಶೀಘ್ರದಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿ ಮಾಡಿ ವಿಷಯವನ್ನು ಸವಿಸ್ತಾರವಾಗಿ ವಿವರಿಸಲಿದ್ದಾರೆ. ನಂತರ ಅವರ ಸಹಕಾರದೊಂದಿಗೆ ಈ ಪ್ರಸ್ತಾವನೆಯನ್ನು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.
ಬೇಡಿಕೆಗಳಲ್ಲಿನ ಪ್ರಮುಖ ಅಂಶವೆಂದರೆ ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು “ಸಾಮಾನ್ಯ ಶಿಕ್ಷಕರ” (General Teacher) ಹುದ್ದೆಯಾಗಿ ನಡೆಸಬೇಕು ಎಂಬುದು. ಜೊತೆಗೆ, ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ 2015ರ ನಿಯಮಗಳನ್ನು ಜಾರಿಗೆ ತರಬೇಕು ಹಾಗೂ ಪಿಯುಸಿ (12ನೇ ತರಗತಿ)ಯಲ್ಲಿ ಪ್ರತಿಯೊಂದು ವಿಷಯದಲ್ಲೂ ಪ್ರತ್ಯೇಕವಾಗಿ 50 ಶೇಕಡಾ ಅಂಕಗಳ ಕಡ್ಡಾಯ ಷರತ್ತನ್ನು ವಿಧಿಸದೇ, ಒಟ್ಟು (Aggregate) 50 ಶೇಕಡಾ ಅಂಕಗಳನ್ನು ಮಾನ್ಯಗೊಳಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಇದಲ್ಲದೆ, ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳ ಮಾತೃಭಾಷೆಯಲ್ಲಿ ನಡೆಸಬೇಕು. ಮರಾಠಿ, ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬೇಕು ಎಂದು ಅವರು ಬೇಡಿಕೆ ಸಲ್ಲಿಸಿದ್ದಾರೆ.
ಕೊರೊನಾ ಅವಧಿಯಲ್ಲಿ ಇತರೆ ನೇಮಕಾತಿ ಪ್ರಕ್ರಿಯೆಗಳಲ್ಲಿ ನೀಡಿದಂತೆ ಐದು ವರ್ಷದ ವಯೋಮಿತಿ ಸಡಿಲಿಕೆಯನ್ನು ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಲಾಗಿದೆ.
2015ರ ಪ್ರಾಥಮಿಕ ಶಿಕ್ಷಕರ ನೇಮಕಾತಿ ನಿಯಮಗಳಂತೆ ಪರೀಕ್ಷೆಗೆ ಒಂದೇ ಪ್ರಶ್ನೆಪತ್ರಿಕೆ (ಪೇಪರ್–1) ಇರಬೇಕು ಎಂದು ಅಭ್ಯರ್ಥಿಗಳು ತಿಳಿಸಿದ್ದಾರೆ.
ಅದೇ ರೀತಿ, ಖಾನಾಪುರ ತಾಲ್ಲೂಕಿನಲ್ಲಿ ಮರಾಠಿ ಮಾಧ್ಯಮ ಶಾಲೆಗಳ ಅಗತ್ಯವನ್ನು ಗಮನದಲ್ಲಿಟ್ಟು ಹೆಚ್ಚಿನ ಮರಾಠಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
6ರಿಂದ 8ನೇ ತರಗತಿವರೆಗಿನ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನೂ ಮಾತೃಭಾಷೆಯಲ್ಲೇ ನಡೆಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, 2022ರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ನಿಯಮಗಳ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ವೇಳೆ ಪಿಯುಸಿ (12ನೇ ತರಗತಿ) ಮತ್ತು ಪದವಿಯ ಒಟ್ಟು (Aggregate) ಅಂಕಗಳನ್ನು ಪರಿಗಣಿಸಬೇಕು ಎಂದು ಅಭ್ಯರ್ಥಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.


