शहीद धोंडीबा देसाई यांच्या पुतळा अनावरणासाठी उपस्थित राहण्याचे आवाहन.
खानापूर : जांबोटी येथील वडगाव गावचे सुपुत्र, कारगिल युद्धातील वीर जवान शहीद धोंडीबा देसाई यांनी 25 मे 1999 रोजी देशासाठी सर्वोच्च बलिदान दिले. ते कारगिल युद्धामध्ये कर्नाटक राज्यातील तिसरे तसेच बेळगाव जिल्ह्यातील पहिले भारतीय जवान शहीद ठरले होते.

त्यांच्या शौर्यपूर्ण स्मृती जतन करण्यासाठी यापूर्वी जांबोटी-वडगाव येथे त्यांच्या नावाने भव्य प्रवेशद्वार (कमान) उभारण्यात आली आहे. आता त्याच प्रवेशद्वारावर शहीद धोंडीबा देसाई यांचा पुतळा बसविण्यात येणार आहे.
या निमित्ताने रविवार, दिनांक 24 मे 2026 रोजी सकाळी 8 वाजता बेळगाव येथील अनगोळ परिसरातून शहीद धोंडीबा देसाई यांचा पुतळा भव्य मिरवणुकीद्वारे जांबोटी-वडगाव येथे आणण्यात येणार आहे.
या ऐतिहासिक आणि प्रेरणादायी कार्यक्रमासाठी परिसरातील नागरिक, युवक, माजी सैनिक, विविध संघटनांचे पदाधिकारी तसेच देशभक्तांनी व राष्ट्रप्रेमी नागरिकांनी मोठ्या संख्येने उपस्थित राहून शहीद जवानास अभिवादन करावे, असे आवाहन वडगाव (जांबोटी) ग्रामस्थांच्या वतीने करण्यात आले आहे.
ಶಹೀದ ಧೊಂಡಿಬಾ ದೇಸಾಯಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ.
ಖಾನಾಪುರ : ಜಾಂಬೋಟಿ ಸಮೀಪದ ವಡಗಾವ ಗ್ರಾಮದ ಸುಪುತ್ರ ಹಾಗೂ ಕಾರ್ಗಿಲ್ ಯುದ್ಧದ ವೀರ ಯೋಧ ಶಹೀದ ಧೊಂಡಿಬಾ ದೇಸಾಯಿ ಅವರು 25 ಮೇ 1999ರಂದು ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದರು. ಅವರು ಕಾರ್ಗಿಲ್ ಯುದ್ಧದಲ್ಲಿ ಕರ್ನಾಟಕ ರಾಜ್ಯದ ಮೂರನೇ ಹಾಗೂ ಬೆಳಗಾವಿ ಜಿಲ್ಲೆಯ ಮೊದಲ ಭಾರತೀಯ ಶಹೀದ ಯೋಧರಾಗಿದ್ದರು.
ಅವರ ಶೌರ್ಯಮಯ ಸ್ಮೃತಿಯನ್ನು ಚಿರಸ್ಥಾಯಿಯಾಗಿಸಲು ಈ ಹಿಂದೆ ಜಾಂಬೋಟಿ–ವಡಗಾವ ಗ್ರಾಮದಲ್ಲಿ ಅವರ ಹೆಸರಿನಲ್ಲಿ ಭವ್ಯ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಇದೀಗ ಅದೇ ಕಮಾನಿನ ಬಳಿ ಶಹೀದ ಧೊಂಡಿಬಾ ದೇಸಾಯಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಭಾನುವಾರ, ದಿನಾಂಕ 24 ಮೇ 2026ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿಯ ಅನಗೋಳ ಪ್ರದೇಶದಿಂದ ಶಹೀದ ಧೊಂಡಿಬಾ ದೇಸಾಯಿ ಅವರ ಪ್ರತಿಮೆಯನ್ನು ಭವ್ಯ ಮೆರವಣಿಗೆಯ ಮೂಲಕ ಜಾಂಬೋಟಿ–ವಡಗಾವ ಗ್ರಾಮಕ್ಕೆ ಕರೆತರಲಾಗುವುದು.
ಈ ಹಿನ್ನೆಲೆಯಲ್ಲಿ ಭಾನುವಾರ, ದಿನಾಂಕ 24 ಮೇ 2026ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿಯ ಅನಗೋಳ ಪ್ರದೇಶದಿಂದ ಶಹೀದ ಧೊಂಡಿಬಾ ದೇಸಾಯಿ ಅವರ ಪ್ರತಿಮೆಯನ್ನು ಭವ್ಯ ಮೆರವಣಿಗೆಯ ಮೂಲಕ ಜಾಂಬೋಟಿ–ವಡಗಾವ ಗ್ರಾಮಕ್ಕೆ ಕರೆತರಲಾಗುವುದು.
ಈ ಐತಿಹಾಸಿಕ ಹಾಗೂ ಪ್ರೇರಣಾದಾಯಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಹೀದ ಯೋಧನಿಗೆ ಗೌರವ ನಮನ ಸಲ್ಲಿಸಲು ಸಾರ್ವಜನಿಕರು, ಯುವಕರು, ನಿವೃತ್ತ ಸೈನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ದೇಶಭಕ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಾಗುವಂತೆ ವಡಗಾವ (ಜಾಂಬೋಟಿ) ಗ್ರಾಮಸ್ಥರ ಪರವಾಗಿ ಮನವಿ ಮಾಡಲಾಗಿದೆ.

