पारिषवाडकडे जाणाऱ्या रस्त्यावर खड्डे-खड्ड्यांनी नागरीक त्रस्त; गणपती उत्सवापूर्वी दुरुस्तीची मागणी.
खानापूर : खानापूरहून पारिषवाडकडे जाणाऱ्या प्रमुख मार्गाची मोठ्या प्रमाणात दुरावस्था झाली असून, रस्त्यावर ठिकठिकाणी पडलेल्या खड्ड्यांमुळे वाहनचालक व नागरिकांना मोठ्या त्रासाला सामोरे जावे लागत आहे. विशेषतः पारिषवाड गावाजवळील मार्गावर मोठमोठे खड्डे पडल्याने अपघाताचा धोका निर्माण झाला आहे.
खानापूर-पारिषवाड मार्गावर दररोज मोठ्या प्रमाणात दुचाकी, चारचाकी तसेच इतर वाहनांची वाहतूक सुरू असते. मात्र रस्त्याची अवस्था खराब झाल्यामुळे वाहनचालकांना खड्डे चुकवत वाहने चालवावी लागत आहेत. पावसाळ्यात खड्ड्यांमध्ये पाणी साचत असल्याने त्यांची खोली लक्षात येत नाही. त्यामुळे विशेषतः दुचाकीस्वारांसाठी हा मार्ग धोकादायक ठरत आहे.
रस्त्याच्या दुरवस्थेमुळे नागरिकांमध्ये नाराजी असून, संबंधित विभागाने याकडे तातडीने लक्ष देण्याची मागणी होत आहे. गणपती उत्सव काही दिवसांवर आला असून, उत्सवादरम्यान या मार्गावर नागरिकांची व वाहनांची मोठ्या प्रमाणात ये-जा होण्याची शक्यता आहे. त्यामुळे उत्सवापूर्वीच रस्त्यावरील खड्डे बुजवून आवश्यक त्या ठिकाणी डांबरीकरण अथवा रस्त्याची दुरुस्ती करावी, अशी मागणी करण्यात आली आहे.
या पार्श्वभूमीवर श्रीराम सेना हिंदुस्तानच्या वतीने सोमेश नागोजी व पदाधिकाऱ्यांनी खानापूरचे आमदार विठ्ठलराव हलगेकर तसेच संबंधित खात्याच्या अधिकाऱ्यांचे लक्ष या समस्येकडे वेधले आहे. गणपती उत्सवाच्या पार्श्वभूमीवर नागरिकांची गैरसोय आणि संभाव्य अपघात टाळण्यासाठी रस्त्याची तातडीने पाहणी करून दुरुस्तीचे काम हाती घ्यावे, अशी विनंती करण्यात आली आहे.
गणपती उत्सवापूर्वी रस्ता सुस्थितीत करून नागरिकांना सुरक्षित व सुरळीत वाहतुकीची सुविधा उपलब्ध करून द्यावी, अशी अपेक्षा श्रीराम सेना हिंदुस्तानच्या पदाधिकाऱ्यांनी व्यक्त केली आहे.
ಪಾರಿಶವಾಡಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯದಿಂದ ನಾಗರಿಕರ ಪರದಾಟ; ಗಣೇಶೋತ್ಸವಕ್ಕೂ ಮುನ್ನ ರಸ್ತೆ ದುರಸ್ತಿಗೆ ಆಗ್ರಹ.
ಖಾನಾಪುರ : ಖಾನಾಪುರದಿಂದ ಪಾರಿಶವಾಡಕ್ಕೆ ತೆರಳುವ ಪ್ರಮುಖ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರು ಹಾಗೂ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿಶೇಷವಾಗಿ ಪಾರಿಶವಾಡ ಗ್ರಾಮದ ಸಮೀಪದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ಅಪಘಾತದ ಅಪಾಯ ಎದುರಾಗಿದೆ.
ಖಾನಾಪುರ-ಪಾರಿಶವಾಡ ಮಾರ್ಗದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು, ಕಾರುಗಳು ಹಾಗೂ ಇತರ ವಾಹನಗಳ ಸಂಚಾರ ನಡೆಯುತ್ತಿದೆ. ಆದರೆ ರಸ್ತೆಯ ಸ್ಥಿತಿ ಹದಗೆಟ್ಟಿರುವುದರಿಂದ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಅವುಗಳ ಆಳ ತಿಳಿಯುವುದಿಲ್ಲ. ಇದರಿಂದ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ.
ರಸ್ತೆಯ ದುಸ್ಥಿತಿಯಿಂದ ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯತ್ತ ತಕ್ಷಣ ಗಮನಹರಿಸಬೇಕೆಂದು ಆಗ್ರಹಿಸಲಾಗಿದೆ. ಗಣೇಶೋತ್ಸವ ಕೆಲವೇ ದಿನಗಳಲ್ಲಿ ಆಗಮನಿಸಲಿದ್ದು, ಉತ್ಸವದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ನಾಗರಿಕರು ಹಾಗೂ ವಾಹನಗಳ ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಗಣೇಶೋತ್ಸವಕ್ಕೂ ಮುನ್ನವೇ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ, ಅಗತ್ಯವಿರುವ ಸ್ಥಳಗಳಲ್ಲಿ ಡಾಂಬರೀಕರಣ ಅಥವಾ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನಾ ಹಿಂದೂಸ್ತಾನ್ ವತಿಯಿಂದ ಸೋಮೇಶ ನಾಗೋಜಿ ಹಾಗೂ ಪದಾಧಿಕಾರಿಗಳು ಖಾನಾಪುರದ ಶಾಸಕ ವಿಠ್ಠಲರಾವ್ ಹಲಗೇಕರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನವನ್ನು ಈ ಸಮಸ್ಯೆಯತ್ತ ಸೆಳೆದಿದ್ದಾರೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ನಾಗರಿಕರಿಗೆ ಆಗುವ ಅನಾನುಕೂಲತೆ ಹಾಗೂ ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಖಾನಾಪುರ ದಿಂದ ಪಾರಿಶವಾಡ ರಸ್ತೆಯನ್ನು ತುರ್ತಾಗಿ ಪರಿಶೀಲಿಸಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಗಣೇಶೋತ್ಸವಕ್ಕೂ ಮುನ್ನ ರಸ್ತೆಯನ್ನು ಸುಸ್ಥಿತಿಗೆ ತಂದು ನಾಗರಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರದ ಸೌಲಭ್ಯ ಕಲ್ಪಿಸಬೇಕು, ಎಂದು ಶ್ರೀರಾಮ ಸೇನಾ ಹಿಂದೂಸ್ತಾನ್ ಪದಾಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.


