गांधी ग्राम पुरस्काराने नागरगाळी ग्रामपंचायतीचा सन्मान.
खानापूर : ग्रामीण विकास आणि पंचायत राज विभाग, कर्नाटक सरकार यांच्या वतीने सन 2024-25 या वर्षासाठी दिला जाणारा प्रतिष्ठेचा गांधी ग्राम पुरस्कार खानापूर तालुक्यातील पश्चिम घाटाच्या कुशीत वसलेल्या छोट्याशा नागरगाळी ग्रामपंचायतीला जाहीर झाला आहे. मूलभूत सुविधा, स्वच्छता, उत्तम प्रशासन आणि हरित ग्राम व्यवस्थापन या क्षेत्रांत उल्लेखनीय कामगिरी केल्याबद्दल हा पुरस्कार प्रदान करण्यात आला आहे.
नागरगाळी ग्रामपंचायतीच्या कार्यक्षेत्रात एकूण आठ महसुली गावे व पाच मजरे आहेत. 2011 च्या जनगणनेनुसार येथे 2,701 लोकसंख्या आहे. सन 2024-25 या वर्षात शंभर टक्के कर वसुली करण्यात ग्रामपंचायतीला यश आले आहे. ग्रामपंचायतीच्या सर्व गावांमध्ये स्वच्छतेचा आदर्श निर्माण झाला असून गावे स्वच्छ आणि सुबक दिसत आहेत.
स्वच्छ भारत मिशन अंतर्गत सुमारे 20 लाख रुपये खर्चून सुसज्ज घनकचरा व्यवस्थापन प्रकल्प उभारण्यात आला आहे. ग्रामपंचायतीच्या स्वतःच्या ‘स्वच्छ वाहिनी’द्वारे दररोज ओला व सुका कचरा संकलित करून त्याचे वर्गीकरण केले जाते. या स्वच्छ वाहिनीकरिता GPLF महिला स्वयंसहाय्यता गटामार्फत महिला चालकाची नियुक्ती करण्यात आली आहे.
ग्रामपंचायतीच्या हद्दीत असलेल्या सर्व 10 अंगणवाड्यांना सुसज्ज आणि हायटेक शौचालयांची सुविधा उपलब्ध करून देण्यात आली आहे. तसेच ग्रामपंचायतीच्या स्वनिधीतून सर्व अंगणवाड्या बालस्नेही पद्धतीने विकसित करण्यात आल्या आहेत.
एकूण 11 कनिष्ठ व वरिष्ठ प्राथमिक शाळांना हायटेक शौचालयांची सुविधा देण्यात आली असून प्रत्येक शाळेसाठी मनरेगा योजनेतून स्वयंपाकगृह बांधण्यात आले आहे. तसेच प्रत्येक शाळेचे मैदान मनरेगा अंतर्गत बालस्नेही क्रीडांगणात रूपांतरित करण्यात आले आहे.
ग्रामपंचायतीत अनुसूचित जाती व अनुसूचित जमातीच्या नागरिकांच्या अंत्यसंस्कारासाठी स्वनिधीतून प्रत्येकी 5,000 रुपयांची मदत दिली जाते. सर्व कुटुंबांकडे स्वतंत्र शौचालये असून त्यांचा योग्य वापर केला जातो. नागरिकांसाठी तसेच मनरेगा कामगारांसाठी वेळोवेळी मोफत आरोग्य शिबिरे आयोजित केली जातात.
15 व्या वित्त आयोग आणि मनरेगा योजनेंतर्गत प्रत्येक गावात आकर्षक सिमेंट काँक्रीट (सीसी) रस्ते व सिमेंट काँक्रीट गटारे बांधण्यात आली आहेत. ग्रामपंचायतीत एकूण 668 जॉब कार्डधारक असून सन 2024-25 मध्ये 21,479 मानवदिवसांची निर्मिती करण्यात आली आहे.
एकूणच भारतीय संविधानाच्या 73 व्या घटनादुरुस्तीमुळे ग्रामस्वराज्याची संकल्पना प्रत्यक्षात साकार होत असल्याचे नागरगाळी ग्रामपंचायतीने आपल्या कार्यातून सिद्ध केले आहे.
कर्तव्यदक्ष पीडीओ बलराज भजंत्री
नागरगाळी ग्रामपंचायतीचे विकास अधिकारी (पीडीओ) बलराज भजंत्री यांनी आपल्या कार्यकाळात उल्लेखनीय कामगिरी बजावली आहे. यापूर्वी ते लोंडा ग्रामपंचायतीचे पीडीओ असताना त्या ग्रामपंचायतीला गांधी ग्राम पुरस्कार प्राप्त झाला होता. त्यानंतर आता त्यांच्या नेतृत्वाखाली नागरगाळी ग्रामपंचायतीलाही गांधी ग्राम पुरस्कार मिळाला आहे. ही त्यांच्या नियोजनबद्ध कार्यपद्धतीची आणि ग्रामपंचायत सदस्य व कर्मचाऱ्यांच्या सहकार्याने राबविलेल्या विकासकामांची पोचपावतीच मानावी लागेल.ग्रामपंचायतीला मिळालेल्या या सन्मानाचे श्रेय पीडीओ बलराज भजंत्री यांनी ग्रामपंचायतीचे अध्यक्ष, उपाध्यक्ष, सर्व सदस्य, कर्मचारीवर्ग तसेच ग्रामपंचायत क्षेत्रातील ग्रामस्थ व नागरिकांना दिले आहे. सर्वांच्या एकजुटीच्या आणि सहकार्याच्या बळावरच नागरगाळी ग्रामपंचायतीला गांधी ग्राम पुरस्कार मिळाल्याचे त्यांनी नमूद केले. तसेच सहकार्य केलेल्या सर्वांचे आभार मानून त्यांनी सर्वांना धन्यवाद दिले.
ग्रामपंचायतीला मिळालेल्या या सन्मानाचे श्रेय पीडीओ बलराज भजंत्री यांनी ग्रामपंचायतीचे अध्यक्ष, उपाध्यक्ष, सर्व सदस्य, कर्मचारीवर्ग तसेच ग्रामपंचायत क्षेत्रातील ग्रामस्थ व नागरिकांना दिले आहे. सर्वांच्या एकजुटीच्या आणि सहकार्याच्या बळावरच नागरगाळी ग्रामपंचायतीला गांधी ग्राम पुरस्कार मिळाल्याचे त्यांनी नमूद केले. तसेच सहकार्य केलेल्या सर्वांचे आभार मानून त्यांनी सर्वांना धन्यवाद दिले.
ನಾಗರಗಾಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ.
ಖಾನಾಪುರ : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರವು 2024-25ನೇ ಸಾಲಿನ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರವನ್ನು ಘೋಷಿಸಿದ್ದು ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟಗಳ ಮಧ್ಯದಲ್ಲಿರುವ ಪುಟ್ಟದಾದ ನಾಗರಗಾಳಿ ಗ್ರಾಮ ಪಂಚಾಯಿತಿಗೆ ಲಭಿಸಿದೆ. ಮೂಲಸೌಲಭ್ಯ, ಸ್ವಚ್ಛತೆ, ಉತ್ತಮ ಆಡಳಿತ ಮತ್ತು ಹಸಿರು ಗ್ರಾಮ ನಿರ್ವಹಣೆಯಲ್ಲಿ ಶ್ರೇಷ್ಠ ಸಾಧನೆಗೈದ ಹಿನ್ನೆಲೆ ಈ ಪ್ರಶಸ್ತಿ ದೊರೆತಿದೆ.
ನಾಗರಗಾಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕಂದಾಯ ಗ್ರಾಮಗಳು ಹಾಗೂ ಐದು ಮಜರೆಗಳು ಸೇರಿವೆ. 2011ರ ಜನಗಣತಿಯ ಪ್ರಕಾರ ಇಲ್ಲಿ 2701 ಜನಸಂಖ್ಯೆ ಇದ್ದು. 2024-25ನೇ ಸಾಲಿನ ಶೇಕಡಾ 100ರಷ್ಟು ತೆರಿಗೆ ವಸೂಲಾತಿ ಸಾಧಿಸಿರುವುದು ವಿಶೇಷವಾಗಿದೆ.
ಗ್ರಾಮದ ಎಲ್ಲಾ ವಸತಿ ಪ್ರದೇಶಗಳು ಅತ್ಯಂತ ಸ್ವಚ್ಛತೆಯಿಂದ ಕಂಗೊಳಿಸುತ್ತಿವೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿಯ ಸ್ವಂತ ‘ಸ್ವಚ್ಛ ವಾಹಿನಿ’ ಮೂಲಕ ಪ್ರತಿದಿನ ಒಣ ಹಾಗೂ ಹಸಿ ಕಸವನ್ನು ಸಂಗ್ರಹಿಸಿ ವಿಂಗಡಿಸಲಾಗುತ್ತಿದೆ. ಈ ವಾಹನಕ್ಕೆ ಜಿಪಿಎಲ್ಎಫ್ ಮಹಿಳಾ ಸ್ವಸಹಾಯ ಸಂಘದ ಮೂಲಕ ಮಹಿಳಾ ಚಾಲಕಿಯನ್ನು ನೇಮಕ ಮಾಡಿರುವುದು ಗಮನಾರ್ಹವಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 10 ಅಂಗನವಾಡಿಗಳಿಗೆ ಸುಸಜ್ಜಿತ ಹಾಗೂ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪಂಚಾಯಿತಿಯ ಸ್ವಂತ ನಿಧಿಯಿಂದ ಮಕ್ಕಳ ಸ್ನೇಹಿ ಅಂಗನವಾಡಿಗಳನ್ನು ರೂಪಿಸಲಾಗಿದೆ. ಇದೇ ರೀತಿ ಒಟ್ಟು 11 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿ, ನರೇಗಾ ಯೋಜನೆಯಡಿ ಅಡುಗೆ ಕೋಣೆಗಳನ್ನೂ ಕಲ್ಪಿಸಲಾಗಿದೆ. ಶಾಲೆಗಳ ಮೈದಾನಗಳನ್ನು ಮಕ್ಕಳಿಗೆ ಅನುಕೂಲಕರವಾಗುವಂತೆ ಅಭಿವೃದ್ಧಿಪಡಿಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳ ಅಂತ್ಯಸಂಸ್ಕಾರ ನೆರವಿಗಾಗಿ ಗ್ರಾಮ ಪಂಚಾಯಿತಿಯ ಸ್ವಂತ ನಿಧಿಯಿಂದ ರೂ. 5000 ಸಹಾಯಧನ ನೀಡಲಾಗುತ್ತಿದೆ. ಗ್ರಾಮದಲ್ಲಿನ ಎಲ್ಲಾ ಕುಟುಂಬಗಳು ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ.
ನಾಗರಿಕರು ಹಾಗೂ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ. 15ನೇ ಹಣಕಾಸು ಆಯೋಗ ಹಾಗೂ ನರೇಗಾ ಯೋಜನೆಯಡಿ ಪ್ರತಿ ಗ್ರಾಮದಲ್ಲೂ ಸುಂದರ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿಗಳನ್ನು ನಿರ್ಮಿಸಲಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 668 ಜಾಬ್ ಕಾರ್ಡ್ಗಳಿದ್ದು, 2024-25ರಲ್ಲಿ 21,479 ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ.
ಒಟ್ಟಾರೆ, ಸಂವಿಧಾನದ 73ನೇ ತಿದ್ದುಪಡಿಯ ಆಶಯವಾದ ಗ್ರಾಮ ಸ್ವರಾಜ್ಯದ ಕನಸನ್ನು ನಾಗರಗಾಳಿ ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ನನಸುಗೊಳಿಸಿದ್ದು, ಈ ಪ್ರಶಸ್ತಿ ಖಾನಾಪುರ ತಾಲ್ಲೂಕಿಗೆ ಹೆಮ್ಮೆ ತಂದಿದೆ.
ಬಲರಾಜ್ ಭಜಂತ್ರಿ ಕರ್ತವ್ಯ ದಕ್ಷ
ಪಿಡಿಒ.
ನಾಗರಗಾಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬಲರಾಜ್ ಭಜಂತ್ರಿ ಅವರು ತಮ್ಮ ಕಾರ್ಯಕಾಲದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಇದಕ್ಕೂ ಮೊದಲು ಅವರು ಲೊಂಡಾ ಗ್ರಾಮ ಪಂಚಾಯಿತಿಯ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿತ್ತು. ಇದೀಗ ಅವರ ನಾಯಕತ್ವದಲ್ಲಿ ನಾಗರಗಾಳಿ ಗ್ರಾಮ ಪಂಚಾಯಿತಿಗೂ ಗಾಂಧಿ ಗ್ರಾಮ ಪ್ರಶಸ್ತಿ ದೊರೆತಿದೆ. ಇದು ಅವರ ಯೋಜಿತ ಕಾರ್ಯಪದ್ಧತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ದೊರೆತ ಮಾನ್ಯತೆಯಾಗಿದೆ.
ಗ್ರಾಮ ಪಂಚಾಯಿತಿಗೆ ದೊರೆತಿರುವ ಈ ಗೌರವದ ಶ್ರೇಯಸ್ಸನ್ನು ಪಿಡಿಒ ಬಲರಾಜ್ ಭಜಂತ್ರಿ ಅವರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಮತ್ತು ನಾಗರಿಕರಿಗೆ ಸಲ್ಲಿಸಿದ್ದಾರೆ. ಎಲ್ಲರ ಏಕತೆ ಮತ್ತು ಸಹಕಾರದ ಬಲದಿಂದಲೇ ನಾಗರಗಾಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪ್ರಶಸ್ತಿ ದೊರೆತಿದೆ ಎಂದು ಅವರು ತಿಳಿಸಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದು ಅವರು ಕಾರ್ಯ ಮಾಡುತ್ತಿರುವ ದಕ್ಷತೆಯನ್ನು ತೋರುತ್ತದೆ.


