राजा शिवछत्रपती चौकातील अतिक्रमण हटविण्यावरून वाद; आमदारांच्या हस्तक्षेपाचा आरोप, उद्या आमरण उपोषणाचा इशारा
खानापूर : खानापूर येथील राजा शिवछत्रपती चौक ते मर्यामा देवी मंदिरापर्यंतच्या मार्गावरील अतिक्रमणे हटविण्यासाठी नगरपंचायतीने आजपासून कारवाईस सुरुवात केली. सकाळपासून संबंधित अतिक्रमणधारकांकडून क्रम घेण्याचे काम सुरू करण्यात आले होते.
दरम्यान, राजा शिवछत्रपती चौकातील तालुका पंचायतीच्या दुकान गाळ्यांवर कारवाई करण्यासाठी नगरपंचायतीचे कर्मचारी गेले असता भाजपाचे राजेंद्र रायका यांनी विठ्ठल हलगेकर यांना दूरध्वनीद्वारे संपर्क साधल्याची माहिती समोर आली आहे. त्यानंतर त्या ठिकाणी उपस्थित असलेले नगरपंचायतीचे अधिकारी गंगाधर कांबळे यांच्याशी आमदारांनी थेट संवाद साधून संबंधित दुकाने काढू नयेत, असे सांगितल्याचे समजते. तसेच आज दुपारी 3.00 वाजता या संदर्भात तोडगा काढू, असेही आमदारांनी सूचित केल्याची चर्चा आहे.
या घटनेनंतर नगरपंचायतीच्या कर्मचाऱ्यांनी राजा शिवछत्रपती चौकातील कारवाई थांबवून जांबोटी क्रॉस येथून अतिक्रमण हटविण्याची मोहीम सुरू ठेवली आहे.

आमदारांनी राजकीय हस्तक्षेप केल्याचा आरोप करत खानापूर शहरासह तालुक्यातील नागरिक आणि सर्वपक्षीय नेतेमंडळींनी संताप व्यक्त केला असून आमदारांचा निषेध नोंदविला आहे. अतिक्रमण हटविण्यासाठी आमरण उपोषण सुरू केलेले माजी नगरसेवक दिनकर मरगाळे व विवेक गिरी यांनीही आमदारांवर टीका करत, “राजकीय हस्तक्षेपामुळे विकासकामे रखडत असून आमदार विठ्ठल हलगेकर हेच विकासाच्या आड येत आहेत,” असा आरोप केला आहे.
याबाबत पुढे बोलताना त्यांनी सांगितले की, आमदारांनी विकासाच्या कामांमध्ये हस्तक्षेप करू नये, अन्यथा गुरुवार, दिनांक 26 फेब्रुवारी 2026 रोजी सकाळी 11.00 वाजता राजा शिवछत्रपती चौकात आमरण उपोषणाला सुरुवात करण्यात येईल. तसेच गरज पडल्यास आत्मदहनाचा इशाराही देण्यात आला आहे.
माजी नगरसेवक दिनकर मरगाळे व विवेक गिरी यांनी पुढे इशारा देताना म्हटले आहे की, खानापूरचे तहसीलदार दुंडाप्पा कोमार तसेच नगरपंचायतीचे मुख्याधिकारी संतोष कुरबेट यांनी कोणत्याही राजकीय दबावाला बळी न पडता तात्काळ अतिक्रमण हटविण्याची कारवाई करावी. अन्यथा उद्या आपल्या जीवितास काही धोका निर्माण झाल्यास त्यास आमदार विठ्ठल हलगेकर, तहसीलदार दुंडाप्पा कोमार व मुख्याधिकारी संतोष कुरबेट हे जबाबदार राहतील.
दरम्यान, उद्या सकाळी 11.00 वाजता राजा शिवछत्रपती चौकात होणाऱ्या आमरण उपोषण सत्याग्रह आंदोलनास तालुक्यातील सर्वपक्षीय नेतेमंडळी, सामाजिक कार्यकर्ते व नागरिकांनी उपस्थित राहून पाठिंबा द्यावा, असे आवाहनही दिनकर मरगाळे व विवेक गिरी यांनी केले आहे.
ರಾಜಾ ಶಿವಛತ್ರಪತಿ ಚೌಕ ದಲ್ಲಿನ ಅತಿಕ್ರಮಣ ತೆರವು ವಿಚಾರದಲ್ಲಿ ವಿವಾದ; ಖಾನಾಪುರ ಶಾಸಕರ ಹಸ್ತಕ್ಷೇಪದ ಆರೋಪ, ನಾಳೆ ಅಮರಣ ಉಪವಾಸದ ಎಚ್ಚರಿಕೆ.
ಖಾನಾಪುರ : ಖಾನಾಪುರದಲ್ಲಿನ ರಾಜಾ ಶಿವಛತ್ರಪತಿ ಚೌಕ್ ದಿಂದ ಮರ್ಯಾಮಾ ದೇವಿ ದೇವಾಲಯ ವರೆಗೆ ಇರುವ ರಸ್ತೆಯ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ನಗರ ಪಂಚಾಯಿತಿ ಇಂದಿನಿಂದ ಕ್ರಮ ಕೈಗೊಂಡಿದೆ. ಬೆಳಗ್ಗಿನಿಂದಲೇ ಸಂಬಂಧಿತ ಅತಿಕ್ರಮಣದ ಮೇಲೆ ಕ್ರಮ ಕೈಗೊಳ್ಳುವ ಕಾರ್ಯ ಆರಂಭಿಸಲಾಗಿತ್ತು.
ಈ ನಡುವೆ, ರಾಜಾ ಶಿವಛತ್ರಪತಿ ಚೌಕದಲ್ಲಿನ ತಾಲೂಕು ಪಂಚಾಯಿತಿಯ ಮಾಲಿಕತ್ವದ ಅಂಗಡಿಯನ್ನು ತೆರವುಗೊಳಿಸಲು ನಗರ ಪಂಚಾಯಿತಿಯ ಸಿಬ್ಬಂದಿ ತೆರಳಿದಾಗ, ಬಿಜೆಪಿ ಮುಖಂಡ ರಾಜೇಂದ್ರ ರಾಯ್ಕಾ ಅವರು ಶಾಸಕರಾದ ವಿಠ್ಠಲ ಹಲಗೇಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆಯೆಂಬ ಮಾಹಿತಿ ಹೊರಬಂದಿದೆ. ಬಳಿಕ ಸ್ಥಳದಲ್ಲಿದ್ದ ನಗರ ಪಂಚಾಯಿತಿಯ ಅಧಿಕಾರಿಯಾದ ಗಂಗಾಧರ ಕಾಂಬಳೆ ಅವರೊಂದಿಗೆ ಶಾಸಕರು ನೇರವಾಗಿ ಮಾತನಾಡಿ, ಸಂಬಂಧಿತ ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ. ಜೊತೆಗೆ, ಇಂದು ಮಧ್ಯಾಹ್ನ ಮೂರು ಗಂಟೆಗೆ ಈ ಕುರಿತು ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸೋಣ ಎಂದು ಶಾಸಕರು ಸೂಚಿಸಿದ್ದಾರೆಯೆಂಬ ಮಾತು ಕೇಳಿಬರುತ್ತಿದೆ.
ಈ ಘಟನೆಯ ನಂತರ ನಗರ ಪಂಚಾಯಿತಿಯ ಸಿಬ್ಬಂದಿ ರಾಜಾ ಶಿವಛತ್ರಪತಿ ಚೌಕದಲ್ಲಿನ ಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಜಾಂಬೋಟಿ ಕ್ರಾಸ್ ಪ್ರದೇಶದಿಂದ ಅತಿಕ್ರಮಣ ತೆರವು ಕಾರ್ಯ ಮುಂದುವರೆಸಿದ್ದಾರೆ.
ಶಾಸಕರು ರಾಜಕೀಯ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪದೊಂದಿಗೆ ಖಾನಾಪುರ ನಗರ ಹಾಗೂ ತಾಲೂಕು ಮಟ್ಟದ ನಾಗರಿಕರು ಮತ್ತು ಸರ್ವಪಕ್ಷೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶಾಸಕರ ವಿರುದ್ಧವೇ ಖಂಡನೆ ವ್ಯಕ್ತಪಡಿಸಿದ್ದಾರೆ. ಅತಿಕ್ರಮಣ ತೆರವಿಗಾಗಿ ಈಗಾಗಲೇ ಅಮರಣ ಉಪವಾಸ ಆರಂಭಿಸಿದ್ದ ಮಾಜಿ ನಗರಸಭಾ ಸದಸ್ಯ ದಿನಕರ ಮರಗಾಳೆ ಮತ್ತು ವಿವೇಕ ಗಿರಿ ಅವರು ಕೂಡ ಶಾಸಕರನ್ನು ಟೀಕಿಸಿ, “ರಾಜಕೀಯ ಹಸ್ತಕ್ಷೇಪದಿಂದ ಅಭಿವೃದ್ಧಿ ಕಾಮಗಾರಿಗಳು ಅಡಕವಾಗುತ್ತಿವೆ. ಶಾಸಕರಾದ ವಿಠ್ಠಲ ಹಲಗೇಕರ್ ಅವರೇ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಈ ಕುರಿತು ಮುಂದುವರೆದು ಮಾತನಾಡಿದ ಅವರು, ಶಾಸಕರು ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಇಲ್ಲವಾದರೆ ಗುರುವಾರ, ದಿನಾಂಕ 26 ಫೆಬ್ರವರಿ 2026ರಂದು ಬೆಳಿಗ್ಗೆ 11 ಗಂಟೆಗೆ ರಾಜಾ ಶಿವಛತ್ರಪತಿ ಚೌಕದಲ್ಲಿ ಅಮರಣ ಉಪವಾಸ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಗತ್ಯವಿದ್ದರೆ ಆತ್ಮದಹನಕ್ಕೂ ಮುಂದಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಾಜಿ ನಗರಸಭಾ ಸದಸ್ಯ ದಿನಕರ ಮರಗಾಳೆ ಮತ್ತು ವಿವೇಕ ಗಿರಿ ಅವರು ಮುಂದುವರೆದು ಎಚ್ಚರಿಕೆ ನೀಡುತ್ತಾ, ಖಾನಾಪುರ ತಹಶೀಲ್ದಾರ ದುಂಡಪ್ಪ ಕುಮಾರ್ ಹಾಗೂ ನಗರ ಪಂಚಾಯಿತಿಯ ಮುಖ್ಯಾಧಿಕಾರಿ ಸಂತೋಷ ಕುರಬೆಟ್ ಅವರು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ತಕ್ಷಣವೇ ಅತಿಕ್ರಮಣ ತೆರವು ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ನಾಳೆ ತಮ್ಮ ಜೀವಕ್ಕೆ ಏನಾದರೂ ಅಪಾಯ ಉಂಟಾದಲ್ಲಿ ಅದಕ್ಕೆ ಶಾಸಕರಾದ ವಿಠ್ಠಲ ಹಲಗೇಕರ್, ತಹಶೀಲ್ದಾರ ದುಂಡಪ್ಪ ಕುಮಾರ್ ಹಾಗೂ ಮುಖ್ಯಾಧಿಕಾರಿ ಸಂತೋಷ ಕುರಬೆಟ್ ಅವರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ಇಂದು ಸಂಬಂಧ ಪಟ್ಟ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯದಿದ್ದರೆ ನಾಳೆ ಬೆಳಿಗ್ಗೆ 11 ಗಂಟೆಗೆ ರಾಜಾ ಶಿವಛತ್ರಪತಿ ಚೌಕದಲ್ಲಿ ನಡೆಯಲಿರುವ ಅಮರಣ ಉಪವಾಸ ಸತ್ಯಾಗ್ರಹಕ್ಕೆ ತಾಲೂಕಿನ ಎಲ್ಲಾ ಸರ್ವಪಕ್ಷೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ದಿನಕರ ಮರಗಾಳೆ ಮತ್ತು ವಿವೇಕ ಗಿರಿ ಅವರು ಮನವಿ ಮಾಡಿದ್ದಾರೆ.



