मलप्रभा पाणीवळवणे वाद: आमदारांनी जनतेसमोर भूमिका मांडावी, समितीची मागणी. समिती व तालुक्याच्या भूमिकेवर प्रश्न उपस्थित करण्याचा सुरेश जाधव यांना नैतिक अधिकार नाही.
खानापूर : महाराष्ट्र एकीकरण समितीची बैठक समितीचे अध्यक्ष गोपाळराव देसाई यांच्या अध्यक्षतेखाली नुकतीच पार पडली. बैठकीत खानापूर तालुक्यातील पाणीवळवणुकीसह विविध विषयांवर सविस्तर चर्चा करण्यात आली. संबंधित विषयांवर ठराव मांडून संबंधित विभागाच्या अधिकाऱ्यांना निवेदन देण्याचे ठरविण्यात आले.
बैठकीत माजी आमदार दिगंबरराव पाटील, मुरलीधर पाटील, विलासराव बेळगावकर, जयराम देसाई, रणजीत पाटील, अभिजीत सरदेसाई, गोपाल पाटील, बाळासाहेब शेलार, पांडुरंग सावंत, बी. बी. पाटील, पुंडलिक रामचंद्र पाटील, रुक्कमाण्णा जुंझवाडकर, राजेंद्र कुलम, रमेश धबाले, मारूती गुरव व आदीजणांनी आपले विचार मांडले.

बैठकीनंतर प्रतिक्रिया देताना महाराष्ट्र एकीकरण समितीचे मुख्य कार्यदर्शी आबासाहेब दळवी यांनी कळसा-भांडुरा, महादई व मलप्रभा नदीच्या पाण्याशी संबंधित चर्चेवरून काँग्रेस नेत्यांवर टीका केली. कुसमळी प्रकल्प पूर्णत्वास गेल्यानंतरच पाणीवळवणुकीबाबत बातम्या का प्रसारित करण्यात आल्या, याचा संबंधितांनी खुलासा करावा, अशी मागणी त्यांनी केली.
आज राज्यात काँग्रेसचे सरकार सत्तेवर असून, माजी आमदार अंजलीताई निंबाळकर यांनी हा प्रश्न उपस्थित करणे अपेक्षित होते. मात्र, त्यांनी हा मुद्दा उपस्थित न करता सुरेश जाधव यांनी हा प्रश्न उपस्थित केला आहे. खानापूर तालुका किंवा महाराष्ट्र एकीकरण समितीच्या भूमिकेबाबत प्रश्न उपस्थित करण्याचा त्यांना नैतिक अधिकार नाही, असा दावा दळवी यांनी केला.
महाराष्ट्र एकीकरण समितीने गेल्या 40 ते 50 वर्षांपासून कळसा-भांडुरा, महादई तसेच खानापूर तालुक्याच्या हिताला बाधक ठरणाऱ्या विविध प्रकल्पांना विरोध केला आहे. त्यामुळे समिती काय करते, असा प्रश्न विचारण्यापेक्षा समितीने केलेल्या पाठपुराव्याची माहिती घ्यावी, असेही दळवी म्हणाले.
आमदार विठ्ठलराव हलगेकरांनी जनतेसमोर लिखित स्वरूपात भूमिका मांडावी..
खानापूरचे विद्यमान आमदार विठ्ठलराव हलगेकर यांनी संबंधित प्रकल्प नेमका काय आहे, याबाबत तालुक्यातील जनतेसमोर स्पष्ट खुलासा करणे आवश्यक आहे. त्यांनी आतापर्यंत या विषयावर ठोस भूमिका मांडलेली नाही. त्यामुळे त्यांनी केवळ तोंडी वक्तव्य न करता पुराव्यासह लिखित स्वरूपात आपली भूमिका जनतेसमोर मांडावी, अशी मागणी दळवी यांनी केली.
आमदार हलगेकर पावसाचे पाणी तेवढेच प्रकल्पाकडे वळविण्यात येणार असल्याचे सांगत असतील, तर त्याबाबतचे पुरावे जनतेसमोर सादर करून या विषयाचा सोक्षमोक्ष लावावा, असेही त्यांनी स्पष्ट केले.
सर्वपक्षीय बैठक घेण्याचा ठराव…
या प्रश्नावर माजी आमदार दिगंबरराव पाटील यांच्या पुढाकाराने सर्वपक्षीय बैठक बोलावण्यात यावी. या बैठकीला महाराष्ट्र एकीकरण समितीचे माजी आमदार, पदाधिकारी तसेच काँग्रेसच्या माजी आमदार अंजलीताई निंबाळकर यांनी उपस्थित राहून या प्रश्नावर स्पष्ट भूमिका मांडावी, असा ठराव बैठकीत करण्यात आला.
दरम्यान, मध्यवर्ती समितीच्या वतीने यापूर्वी अनेक बैठका घेण्यात आल्या आहेत. खानापूर समितीच्या वतीने 21 ऑक्टोबर रोजी प्रकाश चव्हाण यांची तज्ज्ञ समितीसाठी निवड करण्यात आल्याचे पत्र मध्यवर्ती समितीला देण्यात आले आहे. मुंबई किंवा दिल्ली दौऱ्यावर जाताना मध्यवर्ती समितीने खानापूर समितीला विश्वासात घेऊन पुढील दौऱ्यात खानापूरच्या एखाद्या पदाधिकाऱ्याला सहभागी करून घ्यावे. अन्यथा हा प्रश्न केवळ बेळगावपुरताच मर्यादित आहे का, याचा खुलासा मध्यवर्ती समितीच्या अध्यक्षांनी करावा, अशी मागणीही करण्यात आली.
‘हा प्रश्न केवळ समितीचा नाही, संपूर्ण खानापूर तालुक्याचा’…
महाराष्ट्र एकीकरण समितीचे अध्यक्ष गोपाळराव देसाई यांनी प्रतिक्रिया देताना सांगितले की, खानापूर तालुक्यातून दुसऱ्या तालुक्यात पाणी वळविण्याचा प्रश्न हा केवळ महाराष्ट्र एकीकरण समितीचा नसून संपूर्ण खानापूर तालुक्याच्या हिताचा प्रश्न आहे. त्यामुळे समितीवर टीका करण्यापेक्षा राष्ट्रीय पक्षांच्या नेत्यांनी पुढाकार घेऊन सर्वपक्षीय बैठक बोलवावी आणि या प्रश्नावर एकत्रितपणे भूमिका मांडावी, असे त्यांनी सांगितले.
बैठकीस महाराष्ट्र एकीकरण समितीचे अनेक पदाधिकारी व कार्यकर्ते मोठ्या संख्येने उपस्थित होते.
ನೀರು ತಿರುಗಿಸುವ ವಿವಾದ: ಶಾಸಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು; ಖಾನಾಪುರ ಎಂಇ ಸಮಿತಿ ವತಿಯಿಂದ ಆಗ್ರಹ. ಸುರೇಶ್ ಜಾಧವ್ ತಾಲ್ಲೂಕಿನ ಆಗು ಹೋಗುಗಳ ಕುರಿತು ಪ್ರಶ್ನೆ ಎತ್ತುವ ಹಕ್ಕಿಲ್ಲ ನಾಯಕರು.
ಖಾನಾಪುರ : ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯು ಸಮಿತಿಯ ಅಧ್ಯಕ್ಷ ಗೋಪಾಳರಾವ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗಷ್ಟೇ ಸಭೆ ನಡೆಯಿತು. ಸಭೆಯಲ್ಲಿ ಖಾನಾಪುರ ತಾಲ್ಲೂಕಿನ ನೀರು ತಿರುವು ಸೇರಿದಂತೆ ವಿವಿಧ ವಿಷಯಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಸಂಬಂಧಿಸಿದ ವಿಷಯಗಳ ಕುರಿತು ನಿರ್ಣಯಗಳನ್ನು ಮಂಡಿಸಿ, ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ದಿಗಂಬರರಾವ್ ಪಾಟೀಲ, ಮುರಳೀಧರ ಪಾಟೀಲ, ವಿಲಾಸರಾವ್ ಬೆಳಗಾಂವ್ಕರ್, ಜಯರಾಮ ದೇಸಾಯಿ, ರಣಜೀತ್ ಪಾಟೀಲ, ಅಭಿಜೀತ್ ಸರದೇಶಾಯಿ, ಗೋಪಾಳ ಪಾಟೀಲ, ಬಾಳಾಸಾಹೇಬ ಶೇಲಾರ, ಪಾಂಡುರಂಗ ಸಾವಂತ್, ಬಿ. ಬಿ. ಪಾಟೀಲ, ಪುಂಡಲಿಕ ರಾಮಚಂದ್ರ ಪಾಟೀಲ, ರುಕ್ಕಮಾಣ್ಣಾ ಜುಂಜವಾಡ್ಕರ್, ರಾಜೇಂದ್ರ ಕುಲಮ, ರಮೇಶ್ ಧಬಾಲೆ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯ ನಂತರ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಬಾಸಾಹೇಬ ದಳವಿ ಅವರು ಕಳಸಾ–ಭಾಂಡೂರಾ, ಮಹಾದಾಯಿ ಹಾಗೂ ಮಲಪ್ರಭಾ ನದಿಯ ನೀರಿಗೆ ಸಂಬಂಧಿಸಿದ ಚರ್ಚೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದರು.
ಕುಸಮಳಿ ಯೋಜನೆ ಪೂರ್ಣಗೊಂಡ ಬಳಿಕವೇ ನೀರು ತಿರುವಿನ ಸುದ್ದಿಗಳು ಏಕೆ?
ಕುಸಮಳಿ ಯೋಜನೆ ಪೂರ್ಣಗೊಂಡ ನಂತರವೇ ನೀರು ತಿರುವಿಗೆ ಸಂಬಂಧಿಸಿದ ಸುದ್ದಿಗಳು ಪ್ರಸಾರವಾಗಲು ಕಾರಣವೇನು ಎಂಬುದನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮಾಜಿ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಅವರು ಈ ಪ್ರಶ್ನೆಯನ್ನು ಪ್ರಸ್ತಾಪಿಸಬೇಕಿತ್ತು. ಆದರೆ ಅವರು ಈ ವಿಷಯವನ್ನು ಪ್ರಸ್ತಾಪಿಸದೆ ಸುರೇಶ ಜಾಧವ್ ಅವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಖಾನಾಪುರ ತಾಲ್ಲೂಕು ಅಥವಾ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿಲುವಿನ ಕುರಿತು ಪ್ರಶ್ನೆ ಎತ್ತುವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ದಳವಿ ಅವರು ಆರೋಪಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿಯು ಕಳೆದ 40, 50 ವರ್ಷಗಳಿಂದ ಕಳಸಾ–ಭಾಂಡೂರಾ, ಮಹಾದಾಯಿ ಹಾಗೂ ಖಾನಾಪುರ ತಾಲ್ಲೂಕಿನ ಹಿತಾಸಕ್ತಿಗೆ ಧಕ್ಕೆ ತರುವ ವಿವಿಧ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಆದ್ದರಿಂದ ಸಮಿತಿ ಏನು ಮಾಡುತ್ತಿದೆ ಎಂದು ಪ್ರಶ್ನಿಸುವ ಬದಲು, ಸಮಿತಿಯು ನಡೆಸಿಕೊಂಡು ಬಂದಿರುವ ಹೋರಾಟ ಹಾಗೂ ನಿರಂತರ ಒತ್ತಾಯದ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ದಳವಿ ಹೇಳಿದರು.
ಶಾಸಕ ವಿಠ್ಠಲರಾವ್ ಹಲಗೇಕರ್ ಅವರು ಜನತೆಯ ಮುಂದೆ ಲಿಖಿತ ರೂಪದಲ್ಲಿ ತಮ್ಮ ನಿಲುವು ಪ್ರಕಟಿಸಬೇಕು
ಖಾನಾಪುರದ ಹಾಲಿ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು ಸಂಬಂಧಿತ ಯೋಜನೆ ನಿಖರವಾಗಿ ಏನು ಎಂಬುದರ ಕುರಿತು ತಾಲ್ಲೂಕಿನ ಜನತೆಯ ಮುಂದೆ ಸ್ಪಷ್ಟವಾದ ವಿವರಣೆ ನೀಡುವುದು ಅಗತ್ಯವಾಗಿದೆ. ಅವರು ಇದುವರೆಗೆ ಈ ವಿಷಯದ ಕುರಿತು ಯಾವುದೇ ಸ್ಪಷ್ಟ ಹಾಗೂ ದೃಢವಾದ ನಿಲುವನ್ನು ವ್ಯಕ್ತಪಡಿಸಿಲ್ಲ.
ಆದ್ದರಿಂದ ಅವರು ಕೇವಲ ಮೌಖಿಕ ಹೇಳಿಕೆ ನೀಡುವುದಕ್ಕಿಂತ, ಸೂಕ್ತ ಪುರಾವೆಗಳೊಂದಿಗೆ ಲಿಖಿತ ರೂಪದಲ್ಲಿ ತಮ್ಮ ನಿಲುವನ್ನು ಜನತೆಯ ಮುಂದೆ ಪ್ರಕಟಿಸಬೇಕು ಎಂದು ದಳವಿ ಆಗ್ರಹಿಸಿದರು.
ಶಾಸಕ ಹಲಗೇಕರ್ ಅವರು ಕೇವಲ ಮಳೆ ನೀರನ್ನು ಮಾತ್ರ ಯೋಜನೆಯ ಕಡೆಗೆ ತಿರುಗಿಸಲಾಗುವುದು ಎಂದು ಹೇಳುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಜನತೆಯ ಮುಂದೆ ಮಂಡಿಸಿ ಈ ವಿಷಯಕ್ಕೆ ಅಂತ್ಯ ಹಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಸರ್ವಪಕ್ಷೀಯ ಸಭೆ ಕರೆಯುವ ನಿರ್ಣಯ
ಈ ವಿಷಯದ ಕುರಿತು ಮಾಜಿ ಶಾಸಕ ದಿಗಂಬರರಾವ್ ಪಾಟೀಲ ಅವರ ಮುಂದಾಳತ್ವದಲ್ಲಿ ಸರ್ವಪಕ್ಷೀಯ ಸಭೆಯನ್ನು ಕರೆಯಬೇಕು. ಈ ಸಭೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಾಜಿ ಶಾಸಕರು, ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ನ ಮಾಜಿ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಅವರು ಹಾಜರಾಗಿ, ಈ ಪ್ರಶ್ನೆಯ ಕುರಿತು ತಮ್ಮ ಸ್ಪಷ್ಟ ನಿಲುವನ್ನು ಮಂಡಿಸಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಮಧ್ಯೆ, ಮಧ್ಯವರ್ತಿ ಸಮಿತಿಯ ವತಿಯಿಂದ ಈ ಹಿಂದೆ ಹಲವು ಸಭೆಗಳನ್ನು ನಡೆಸಲಾಗಿದೆ. ಖಾನಾಪುರ ಸಮಿತಿಯ ವತಿಯಿಂದ ಅಕ್ಟೋಬರ್ 21ರಂದು ಪ್ರಕಾಶ್ ಚವ್ಹಾಣ್ ಅವರನ್ನು ತಜ್ಞ ಸಮಿತಿಗೆ ಆಯ್ಕೆ ಮಾಡಿರುವ ಕುರಿತು ಮಧ್ಯವರ್ತಿ ಸಮಿತಿಗೆ ಪತ್ರ ನೀಡಲಾಗಿದೆ.
ಮುಂಬೈ ಅಥವಾ ದೆಹಲಿ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಮಧ್ಯವರ್ತಿ ಸಮಿತಿಯು ಖಾನಾಪುರ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮುಂದಿನ ಪ್ರವಾಸದಲ್ಲಿ ಖಾನಾಪುರದ ಒಬ್ಬ ಪದಾಧಿಕಾರಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಬೇಕು. ಇಲ್ಲವಾದರೆ ಈ ಪ್ರಶ್ನೆ ಕೇವಲ ಬೆಳಗಾವಿಗೆ ಮಾತ್ರ ಸೀಮಿತವಾಗಿದೆಯೇ ಎಂಬುದನ್ನು ಮಧ್ಯವರ್ತಿ ಸಮಿತಿಯ ಅಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಲಾಯಿತು.
‘ಈ ಪ್ರಶ್ನೆ ಕೇವಲ ಸಮಿತಿಯದ್ದಲ್ಲ, ಇಡೀ ಖಾನಾಪುರ ತಾಲ್ಲೂಕಿನ ಜನತೆಯ ಪ್ರಶ್ನೆ’
ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ಗೋಪಾಳರಾವ್ ದೇಸಾಯಿ ಅವರು ಪ್ರತಿಕ್ರಿಯೆ ನೀಡುತ್ತಾ, ಖಾನಾಪುರ ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ನೀರನ್ನು ತಿರುಗಿಸುವ ಪ್ರಶ್ನೆಯು ಕೇವಲ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಸಂಬಂಧಿಸಿದ ವಿಷಯವಲ್ಲ. ಇದು ಇಡೀ ಖಾನಾಪುರ ತಾಲ್ಲೂಕಿನ ಹಿತಾಸಕ್ತಿಗೆ ಸಂಬಂಧಿಸಿದ ಪ್ರಶ್ನೆಯಾಗಿದೆ ಎಂದು ಹೇಳಿದರು.
ಆದ್ದರಿಂದ ಸಮಿತಿಯ ಮೇಲೆ ಟೀಕೆ ಮಾಡುವ ಬದಲು ರಾಷ್ಟ್ರೀಯ ಪಕ್ಷಗಳ ನಾಯಕರು ಮುಂದಾಳತ್ವ ವಹಿಸಿ ಸರ್ವಪಕ್ಷೀಯ ಸಭೆಯನ್ನು ಕರೆಯಬೇಕು ಹಾಗೂ ಈ ಪ್ರಶ್ನೆಯ ಕುರಿತು ಒಗ್ಗಟ್ಟಿನಿಂದ ತಮ್ಮ ನಿಲುವನ್ನು ಮಂಡಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


