28 वर्षांनंतर हिरेमुनवळीची श्री महालक्ष्मी यात्रा; पूर्वतयारीला वेग, आमदार हलगेकरांकडून प्रशासनाला तयारीच्या सूचना.
खानापूर : प्रतिनिधी
खानापूर तालुक्यातील हिरेमुनवळी येथे तब्बल 28 वर्षांनंतर एप्रिल 2027 मध्ये ऐतिहासिक श्री महालक्ष्मी यात्रा होणार असून, या पार्श्वभूमीवर यात्रेच्या पूर्वतयारीसाठी गावातील ऐतिहासिक श्री कलमेश्वर मंदिरात नुकतीच विशेष सभा उत्साहात पार पडली. सभेच्या अध्यक्षस्थानी श्री. श्रीनिवास कुलकर्णी होते. तालुक्याचे आमदार विठ्ठलराव हलगेकर प्रमुख पाहुणे म्हणून उपस्थित होते.

यावेळी ग्रामस्थांनी यात्रेच्या अनुषंगाने रस्ते, वीज, पाणी, वाहतूक, स्वच्छता तसेच अन्य मूलभूत सुविधांबाबतच्या समस्या व मागण्या आमदार हलगेकर यांच्यासमोर मांडल्या. त्यांनी ग्रामस्थांचे म्हणणे जाणून घेत संबंधित विभागांच्या अधिकाऱ्यांशी समन्वय साधून आवश्यक ती कामे वेळेत पूर्ण करण्याच्या सूचना दिल्या.
यात्रेच्या तयारीसाठी आतापासूनच नियोजन आवश्यक…
आमदार विठ्ठलराव हलगेकर यांनी सांगितले की, 28 वर्षांच्या प्रदीर्घ कालावधीनंतर होणारी ही यात्रा गावासाठी विशेष महत्त्वाची आहे. त्यामुळे केवळ यात्रेच्या काही दिवस आधी तयारी करण्याऐवजी आतापासूनच विविध कामांचे नियोजन करून त्यांची टप्प्याटप्प्याने पूर्तता करणे गरजेचे आहे. यात्रा मोठ्या उत्साहात, भक्तिभावाने आणि शिस्तबद्ध वातावरणात पार पडण्यासाठी ग्रामस्थ, यात्रा कमिटी आणि प्रशासनाने एकत्रितपणे काम करावे, असे त्यांनी आवाहन केले.
रस्त्यांची कामे तातडीने पूर्ण करण्यावर भर….
यात्रेच्या काळात मोठ्या संख्येने भाविक गावात दाखल होण्याची शक्यता असल्याने यात्रेकडे येणारे प्रमुख रस्ते, अंतर्गत मार्ग तसेच आवश्यक ठिकाणी दुरुस्तीची कामे वेळेत पूर्ण होणे महत्त्वाचे असल्याचे हलगेकर यांनी स्पष्ट केले. मंजूर झालेल्या रस्त्यांची कामे प्रलंबित ठेवू नयेत, तसेच आवश्यक त्या ठिकाणी दुरुस्ती व सुधारणा करून वाहतुकीस अडथळा निर्माण होणार नाही याची काळजी घेण्याच्या सूचना त्यांनी दिल्या.
अखंड वीजपुरवठ्यासाठी ट्रान्सफॉर्मर वाढविण्याच्या सूचना….
यात्रेदरम्यान वीजपुरवठा सुरळीत राहावा यासाठी आवश्यकतेनुसार ट्रान्सफॉर्मरची संख्या वाढविणे, वीजवाहिन्या व इतर तांत्रिक कामांची तपासणी करणे तसेच प्रलंबित कामे यात्रेपूर्वी पूर्ण करण्यावर भर देण्यात आला. यात्रेच्या काळात वीजपुरवठ्यात व्यत्यय येऊ नये यासाठी संबंधित वीज विभागाने पूर्वनियोजन करावे, अशा सूचना आमदारांनी दिल्या.
पिण्याच्या पाण्यासाठी स्वतंत्र नियोजन…
यात्रेला येणाऱ्या भाविकांची संख्या लक्षात घेता पिण्याचे पाणी ही महत्त्वाची बाब असून, त्यासाठी गावात तसेच यात्रा परिसरात योग्य व्यवस्था करण्याची गरज व्यक्त करण्यात आली. आवश्यक ठिकाणी जलवाहिन्या टाकणे, पाण्याची उपलब्धता वाढविणे आणि गरज भासल्यास टँकरची व्यवस्था करण्याचे नियोजन लवकरात लवकर करावे, असेही हलगेकर यांनी सांगितले.
सर्व विभागांनी समन्वयाने काम करण्याचे आवाहन….
यात्रेच्या तयारीत ग्रामपंचायत, महसूल, वीज, पाणीपुरवठा, सार्वजनिक बांधकाम, पोलीस तसेच इतर संबंधित विभागांचा समन्वय आवश्यक आहे. प्रत्येक विभागाने आपल्या जबाबदाऱ्या निश्चित करून यात्रेपूर्वी कामे पूर्ण करण्यासाठी कालबद्ध नियोजन करावे, असे आवाहन आमदारांनी केले. यात्रेच्या कामात हलगर्जीपणा करणाऱ्या संबंधितांबाबत प्रशासनाने गांभीर्याने भूमिका घ्यावी, असेही त्यांनी स्पष्ट केले.
राजकीय मतभेद बाजूला ठेवून एकजुटीने काम करण्याचे आवाहन….
“ही यात्रा आपल्या गावाच्या एकतेचे आणि परंपरेचे प्रतीक ठरली पाहिजे. त्यासाठी सर्वांनी राजकीय मतभेद बाजूला ठेवून एकदिलाने काम करणे आवश्यक आहे,” असे आवाहन आमदार हलगेकर यांनी केले. मागील यात्रांच्या अनुभवातून योग्य ते धडे घेऊन यंदाच्या यात्रेच्या नियोजनात कोणतीही त्रुटी राहणार नाही, यासाठी यात्रा कमिटी आणि ग्रामस्थांनी विशेष दक्षता घ्यावी, असे त्यांनी सांगितले.
निधीची कमतरता भासू देणार नाही : हलगेकर….
यात्रेच्या अनुषंगाने आवश्यक असलेल्या विकासकामांसाठी निधीची कमतरता भासू दिली जाणार नाही आणि शासनाच्या माध्यमातून आवश्यक ते सहकार्य मिळवून देण्यासाठी प्रयत्न केले जातील, असे आश्वासन आमदार हलगेकर यांनी ग्रामस्थांना दिले. त्यामुळे 2027 मध्ये होणाऱ्या या ऐतिहासिक यात्रेच्या तयारीला बैठकीनंतर अधिक वेग येण्याची अपेक्षा व्यक्त करण्यात येत आहे.
मान्यवर व ग्रामस्थांची मोठी उपस्थिती….
या बैठकीस अध्यक्ष श्रीनिवास कुलकर्णी, यात्रा कमिटीचे ज्येष्ठ सदस्य अशोक पाटील, खानापूर भाजप अध्यक्ष बसवराज सानिकोप, तालुका पंचायतीचे ई.ओ. रमेश मेत्री, तालुका आरोग्य अधिकारी डॉ महेश किडसन्नावर, देवेंद्र बडीगेर, भाजपाचे मल्लाप्पा मारीहाळ, स्थानिक नेते श्रीकांत इटगी, विविध शासकीय विभागांचे अधिकारी, पंच कमिटीचे पदाधिकारी, यात्रा कमिटीचे सदस्य तसेच मोठ्या संख्येने ग्रामस्थ व महिला वर्ग उपस्थित होता.
तब्बल 28 वर्षांच्या प्रतीक्षेनंतर होणाऱ्या श्री महालक्ष्मी यात्रेसाठी ग्रामस्थामध्ये उत्साहाचे वातावरण असून, यात्रेच्या भव्य आयोजनासाठी आतापासूनच तयारी सुरू करण्याचा निर्धार या बैठकीत व्यक्त करण्यात आला.
28 ವರ್ಷಗಳ ನಂತರ ಹಿರೇಮುನವಳ್ಳಿಯ ಶ್ರೀ ಮಹಾಲಕ್ಷ್ಮಿ ಜಾತ್ರೆ; ಪೂರ್ವಸಿದ್ಧತೆಗೆ ವೇಗ ನೀಡಲು , ಶಾಸಕ ವಿಠ್ಠಲರಾವ್ ಹಲಗೇಕರರಿಂದ ಆಡಳಿತಕ್ಕೆ ಸೂಚನೆಗಳು
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಬರೋಬ್ಬರಿ 28 ವರ್ಷಗಳ ನಂತರ ಏಪ್ರಿಲ್ 2027ರಲ್ಲಿ ಐತಿಹಾಸಿಕ ಶ್ರೀ ಮಹಾಲಕ್ಷ್ಮಿ ಜಾತ್ರೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಾತ್ರೆಯ ಪೂರ್ವಸಿದ್ಧತೆಗಾಗಿ ಗ್ರಾಮದ ಐತಿಹಾಸಿಕ ಶ್ರೀ ಕಲಮೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ವಿಶೇಷ ಸಭೆ ಉತ್ಸಾಹದಿಂದ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀನಿವಾಸ ಕುಲಕರ್ಣಿ ವಹಿಸಿದ್ದರು. ತಾಲೂಕಿನ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಜಾತ್ರೆಯ ಹಿನ್ನೆಲೆಯಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಸಾರಿಗೆ, ಸ್ವಚ್ಛತೆ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಶಾಸಕ ಹಲಗೇಕರ ಅವರ ಗಮನಕ್ಕೆ ತಂದರು. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಅವರು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಜಾತ್ರೆಯ ಸಿದ್ಧತೆಗಾಗಿ ಈಗಿನಿಂದಲೇ ಯೋಜನೆ ಅಗತ್ಯ…
ಶಾಸಕ ವಿಠ್ಠಲರಾವ್ ಹಲಗೇಕರ ಮಾತನಾಡಿ, 28 ವರ್ಷಗಳ ಸುದೀರ್ಘ ಅವಧಿಯ ನಂತರ ನಡೆಯುತ್ತಿರುವ ಈ ಜಾತ್ರೆ ಗ್ರಾಮಕ್ಕೆ ವಿಶೇಷ ಮಹತ್ವದ್ದಾಗಿದೆ. ಆದ್ದರಿಂದ ಜಾತ್ರೆ ನಡೆಯುವ ಕೆಲವೇ ದಿನಗಳ ಮೊದಲು ಸಿದ್ಧತೆ ಆರಂಭಿಸುವ ಬದಲು, ಈಗಿನಿಂದಲೇ ವಿವಿಧ ಕಾಮಗಾರಿಗಳಿಗೆ ಯೋಜನೆ ರೂಪಿಸಿ ಅವುಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಜಾತ್ರೆ ಅತ್ಯಂತ ಸಂಭ್ರಮದಿಂದ, ಭಕ್ತಿಭಾವದಿಂದ ಹಾಗೂ ಶಿಸ್ತುಬದ್ಧ ವಾತಾವರಣದಲ್ಲಿ ನಡೆಯಲು ಗ್ರಾಮಸ್ಥರು, ಜಾತ್ರಾ ಸಮಿತಿ ಹಾಗೂ ಆಡಳಿತ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ರಸ್ತೆ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಒತ್ತು….
ಜಾತ್ರೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗ್ರಾಮಕ್ಕೆ ಆಗಮಿಸುವ ಸಾಧ್ಯತೆ ಇರುವುದರಿಂದ ಜಾತ್ರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು, ಗ್ರಾಮದಲ್ಲಿನ ಆಂತರಿಕ ರಸ್ತೆಗಳು ಹಾಗೂ ಅಗತ್ಯವಿರುವ ಸ್ಥಳಗಳ ದುರಸ್ತಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಮಹತ್ವದ್ದಾಗಿದೆ ಎಂದು ಹಲಗೇಕರ ಸ್ಪಷ್ಟಪಡಿಸಿದರು.
ಈಗಾಗಲೇ ಮಂಜೂರಾಗಿರುವ ರಸ್ತೆ ಕಾಮಗಾರಿಗಳನ್ನು ಬಾಕಿ ಉಳಿಸಬಾರದು. ಅಗತ್ಯವಿರುವ ಸ್ಥಳಗಳಲ್ಲಿ ದುರಸ್ತಿ ಹಾಗೂ ಸುಧಾರಣಾ ಕಾಮಗಾರಿಗಳನ್ನು ಕೈಗೊಂಡು, ಜಾತ್ರೆಯ ಸಂದರ್ಭದಲ್ಲಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಿರಂತರ ವಿದ್ಯುತ್ ಪೂರೈಕೆಗಾಗಿ ಟ್ರಾನ್ಸ್ಫಾರ್ಮರ್ಗಳ ಸಂಖ್ಯೆ ಹೆಚ್ಚಿಸಲು ಸೂಚನೆ….
ಜಾತ್ರೆಯ ಅವಧಿಯಲ್ಲಿ ವಿದ್ಯುತ್ ಪೂರೈಕೆ ಸುಗಮವಾಗಿ ಮುಂದುವರಿಯಲು ಅಗತ್ಯಕ್ಕೆ ಅನುಗುಣವಾಗಿ ಟ್ರಾನ್ಸ್ಫಾರ್ಮರ್ಗಳ ಸಂಖ್ಯೆಯನ್ನು ಹೆಚ್ಚಿಸುವುದು, ವಿದ್ಯುತ್ ಮಾರ್ಗಗಳು ಹಾಗೂ ಇತರ ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲಿಸುವುದು ಮತ್ತು ಬಾಕಿ ಉಳಿದಿರುವ ಕಾಮಗಾರಿಗಳನ್ನು ಜಾತ್ರೆಗೂ ಮುನ್ನವೇ ಪೂರ್ಣಗೊಳಿಸುವುದಕ್ಕೆ ಒತ್ತು ನೀಡಲಾಯಿತು.
ಜಾತ್ರೆಯ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಸಂಬಂಧಿಸಿದ ವಿದ್ಯುತ್ ಇಲಾಖೆ ಮುಂಚಿತವಾಗಿಯೇ ಸೂಕ್ತ ಯೋಜನೆ ರೂಪಿಸಬೇಕು ಎಂದು ಶಾಸಕರು ಸೂಚಿಸಿದರು.
ಕುಡಿಯುವ ನೀರಿಗಾಗಿ ಪ್ರತ್ಯೇಕ ಯೋಜನೆ….
ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರು ಅತ್ಯಂತ ಪ್ರಮುಖ ವಿಷಯವಾಗಿದ್ದು, ಗ್ರಾಮದಲ್ಲಿ ಹಾಗೂ ಜಾತ್ರಾ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಅಗತ್ಯವಿರುವ ಸ್ಥಳಗಳಲ್ಲಿ ನೀರಿನ ಪೈಪ್ಲೈನ್ ಅಳವಡಿಸುವುದು, ನೀರಿನ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಅಗತ್ಯವಿದ್ದಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡುವ ಕುರಿತು ಶೀಘ್ರದಲ್ಲೇ ಯೋಜನೆ ರೂಪಿಸಬೇಕು ಎಂದು ಹಲಗೇಕರ ಹೇಳಿದರು.
ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಕರೆ….
ಜಾತ್ರೆಯ ಪೂರ್ವಸಿದ್ಧತೆಯಲ್ಲಿ ಗ್ರಾಮ ಪಂಚಾಯಿತಿ, ಕಂದಾಯ, ವಿದ್ಯುತ್, ಕುಡಿಯುವ ನೀರು, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇತರ ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಾಗಿದೆ.
ಪ್ರತಿಯೊಂದು ಇಲಾಖೆಯೂ ತನ್ನ ಜವಾಬ್ದಾರಿಗಳನ್ನು ನಿಗದಿಪಡಿಸಿಕೊಂಡು ಜಾತ್ರೆಗೂ ಮುನ್ನವೇ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾಲಬದ್ಧ ಯೋಜನೆ ರೂಪಿಸಬೇಕು ಎಂದು ಶಾಸಕರು ಕರೆ ನೀಡಿದರು.
ಜಾತ್ರೆಯ ಸಿದ್ಧತಾ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ತೋರುವ ಸಂಬಂಧಿಸಿದವರ ವಿರುದ್ಧ ಆಡಳಿತವು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಕರೆ….
“ಈ ಜಾತ್ರೆ ನಮ್ಮ ಗ್ರಾಮದ ಏಕತೆ ಮತ್ತು ಪರಂಪರೆಯ ಪ್ರತೀಕವಾಗಬೇಕು. ಅದಕ್ಕಾಗಿ ಎಲ್ಲರೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ಕೆಲಸ ಮಾಡುವುದು ಅಗತ್ಯವಾಗಿದೆ,” ಎಂದು ಶಾಸಕ ಹಲಗೇಕರ ಕರೆ ನೀಡಿದರು.
ಹಿಂದಿನ ಜಾತ್ರೆಗಳ ಅನುಭವಗಳಿಂದ ಸೂಕ್ತ ಪಾಠಗಳನ್ನು ಕಲಿತು, ಈ ಬಾರಿ ಜಾತ್ರೆಯ ಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಜಾತ್ರಾ ಸಮಿತಿ ಹಾಗೂ ಗ್ರಾಮಸ್ಥರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಅನುದಾನದ ಕೊರತೆಯಾಗಲು ಬಿಡುವುದಿಲ್ಲ : ಹಲಗೇಕರ….
ಜಾತ್ರೆಯ ಹಿನ್ನೆಲೆಯಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆಯಾಗಲು ಬಿಡುವುದಿಲ್ಲ. ಸರ್ಕಾರದ ಮೂಲಕ ಅಗತ್ಯ ಸಹಕಾರವನ್ನು ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಹಲಗೇಕರ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ 2027ರಲ್ಲಿ ನಡೆಯಲಿರುವ ಈ ಐತಿಹಾಸಿಕ ಜಾತ್ರೆಯ ಸಿದ್ಧತೆಗೆ ಸಭೆಯ ನಂತರ ಇನ್ನಷ್ಟು ವೇಗ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಗಣ್ಯರು ಹಾಗೂ ಗ್ರಾಮಸ್ಥರ ಹೆಚ್ಚಿನ ಉಪಸ್ಥಿತಿ….
ಈ ಸಭೆಯಲ್ಲಿ ಸಭಾಧ್ಯಕ್ಷ ಶ್ರೀನಿವಾಸ ಕುಲಕರ್ಣಿ, ಜಾತ್ರಾ ಸಮಿತಿಯ ಹಿರಿಯ ಸದಸ್ಯ ಅಶೋಕ ಪಾಟೀಲ, ಖಾನಾಪುರ ಬಿಜೆಪಿ ಅಧ್ಯಕ್ಷ ಬಸವರಾಜ ಸಾನಿಕೋಪ, ತಾಲೂಕು ಪಂಚಾಯಿತಿಯ ಇ.ಒ. ರಮೇಶ ಮೇತ್ರಿ, ದೇವೇಂದ್ರ ಬಡಿಗೇರ, ಬಿಜೆಪಿಯ ಮಲ್ಲಪ್ಪ ಮಾರಿಹಾಳ, ಸ್ಥಳೀಯ ಮುಖಂಡ ಶ್ರೀಕಾಂತ ಇಟಗಿ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಪಂಚ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಜಾತ್ರಾ ಸಮಿತಿಯ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಬರೋಬ್ಬರಿ 28 ವರ್ಷಗಳ ನಿರೀಕ್ಷೆಯ ನಂತರ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರೆಗಾಗಿ ಗ್ರಾಮಸ್ಥರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದ್ದು, ಜಾತ್ರೆಯ ಭವ್ಯ ಆಯೋಜನೆಗಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.



