21 हजार दिव्यांग, विधवा व वृद्धांच्या पेन्शनवर गंडांतर; सर्वेक्षण तातडीने पूर्ण करून पेन्शन सुरू करा – प्रसाद पाटील यांचे तहसीलदारांना निवेदन.
खानापूर : खानापूर तालुक्यातील सुमारे 21 हजार दिव्यांग, विधवा आणि वृद्धांच्या पेन्शनवर महसूल विभागाने स्थगिती दिल्याने संबंधित लाभार्थ्यांना प्रचंड हालअपेष्टा सहन कराव्या लागत आहेत. उदरनिर्वाहाचे एकमेव साधन बंद झाल्यामुळे अनेक कुटुंबे अडचणीत सापडली आहेत. ही गंभीर समस्या तातडीने सोडवावी, अशी मागणी गर्लगुंजी ग्रामपंचायत सदस्य प्रसाद पाटील यांनी खानापूरचे तहसीलदार तथा तालुका दंडाधिकारी दुंडप्पा कोमार यांच्याकडे निवेदनाद्वारे केली.
निवेदनात सर्व तलाठी (गाव लेखापाल), महसूल निरीक्षक आणि नायब तहसीलदार यांना योग्य व पारदर्शक सर्वेक्षण करण्याबाबत स्पष्ट निर्देश द्यावेत, जेणेकरून कोणत्याही पात्र लाभार्थ्यावर अन्याय होणार नाही, अशी मागणी करण्यात आली आहे. दिव्यांग, वृद्ध आणि विधवा व्यक्तींना इतर कोणतेही उत्पन्नाचे साधन नसल्याने त्यांची पेन्शन तातडीने पुन्हा सुरू करणे अत्यावश्यक असल्याचेही नमूद करण्यात आले.
यावर प्रतिसाद देताना तहसीलदारांनी योग्य सर्वेक्षण करून अहवाल सादर करण्यात येईल व पेन्शन लवकरात लवकर पुन्हा सुरू करण्यासाठी प्रयत्न केले जातील. कोणावरही अन्याय होऊ नये यासाठी प्रशासन आवश्यक ती पावले उचलेल, असा विश्वास दिला.
दरम्यान, तालुक्यातील वीज व्यवस्थेबाबतही निवेदनात मागणी करण्यात आली. हुबळी इलेक्ट्रिसिटी सप्लाय कंपनी लिमिटेड (हेस्कॉम) खानापूर विभागाने वारंवार होणारा वीज खंडित होण्याचा प्रकार थांबवून रिपेअर, फांद्या कटिंग आदी कामे तातडीने पूर्ण करावीत, तसेच वीज व्यवस्था सुरळीत ठेवण्यासाठी तहसीलदारांनी संबंधित विभागाला समज द्यावी, अशीही मागणी करण्यात आली.
यावेळी माजी ग्रामपंचायत सदस्य प्रसाद पाटील, प्रमोद सुतार, परशराम बेळगावकर, रामचंद्र लोहार, मर्यप्पा पाटील आदी उपस्थित होते.
21 ಸಾವಿರಕ್ಕೂ ಅಧಿಕ ಅಂಗವಿಕಲ, ವಿಧವೆಯರು ಮತ್ತು ವೃದ್ಧರ ಪಿಂಚಣಿಗೆ ತಡೆ; ಸಮೀಕ್ಷೆ ತಕ್ಷಣ ಪೂರ್ಣಗೊಳಿಸಿ ತಕ್ಷಣವೇ ಪಿಂಚಣಿ ಸೌಲಭ್ಯ ಮರು ಪ್ರಾರಂಭಿಸಿ – ಪ್ರಸಾದ್ ಪಾಟೀಲ್ ಅವರಿಂದ ತಹಶೀಲ್ದಾರರಿಗೆ ಮನವಿ
ಖಾನಾಪುರ : ಖಾನಾಪುರ ತಾಲ್ಲೂಕಿನ ಸುಮಾರು 21 ಸಾವಿರಕ್ಕೂ ಅಧಿಕ ಅಂಗವಿಕಲರು, ವಿಧವೆಯರು ಹಾಗೂ ವೃದ್ಧರ ಪಿಂಚಣಿಯನ್ನು ಮಹಸೂಲು ಇಲಾಖೆ ಸ್ಥಗಿತಗೊಳಿಸಿರುವುದರಿಂದ ಸಂಬಂಧಿತ ಲಾಭಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನೋಪಾಯದ ಏಕೈಕ ಆಧಾರವಾದ ಪಿಂಚಣಿ ನಿಂತಿರುವುದರಿಂದ ಅನೇಕ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಈ ಗಂಭೀರ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಗರ್ಲಗುಂಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಪಾಟೀಲ್ ಅವರು ಖಾನಾಪುರದ ತಹಶೀಲ್ದಾರ ಹಾಗೂ ತಾಲ್ಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಎಲ್ಲಾ ತಲಾಠಿಗರಿಗೆ (ಗ್ರಾಮ ಲೆಕ್ಕಾಧಿಕಾರಿಗಳು), ಮಹಸೂಲ ನಿರೀಕ್ಷಕರು ಮತ್ತು ನಾಯಬ್ ತಹಶೀಲ್ದಾರರಿಗೆ ಸರಿಯಾದ ಹಾಗೂ ಪಾರದರ್ಶಕ ಸಮೀಕ್ಷೆ ನಡೆಸುವಂತೆ ಸ್ಪಷ್ಟ ಸೂಚನೆ ನೀಡಬೇಕು, ಇದರಿಂದ ಯಾವುದೇ ಅರ್ಹ ಲಾಭಾರ್ಥಿಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸಲಾಗಿದೆ. ಅಂಗವಿಕಲರು, ವೃದ್ಧರು ಮತ್ತು ವಿಧವೆಯರಿಗೆ ಬೇರೆ ಯಾವುದೇ ಆದಾಯ ಮೂಲಗಳಿಲ್ಲದ ಕಾರಣ ಅವರ ಪಿಂಚಣಿಯನ್ನು ತಕ್ಷಣ ಮರುಪ್ರಾರಂಭಿಸುವುದು ಅತ್ಯಾವಶ್ಯಕ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರರು, ಸಮರ್ಪಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು ಹಾಗೂ ಪಿಂಚಣಿಯನ್ನು ಶೀಘ್ರದಲ್ಲೇ ಮರುಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಯಾರಿಗೂ ಅನ್ಯಾಯವಾಗದಂತೆ ಆಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ಇದಲ್ಲದೆ, ತಾಲ್ಲೂಕಿನ ವಿದ್ಯುತ್ ವ್ಯವಸ್ಥೆಯ ಕುರಿತು ಕೂಡ ಮನವಿಯಲ್ಲಿ ಬೇಡಿಕೆ ಸಲ್ಲಿಸಲಾಗಿದೆ. Hubli Electricity Supply Company Limited (ಹೆಸ್ಕಾಂ) ಖಾನಾಪುರ ವಿಭಾಗದಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ವಿದ್ಯುತ್ ಕಡಿತವನ್ನು ತಡೆದು, ದುರಸ್ತಿ ಹಾಗೂ ಮರದ ಕೊಂಬೆಗಳನ್ನು ಕತ್ತರಿಸುವಂತಹ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು. ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಗಮವಾಗಿರಿಸಲು ಸಂಬಂಧಿತ ಇಲಾಖೆಗೆ ತಹಶೀಲ್ದಾರರು ಅಗತ್ಯ ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಪಾಟೀಲ್, ಪ್ರಮೋದ ಸುತಾರ, ಪರಶರಾಮ ಬೆಳೆಗಾವ್ಕರ್, ರಾಮಚಂದ್ರ ಲೋಹಾರ, ಮರ್ಯಪ್ಪ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.


