खानापूर शहरात भक्तिमय वातावरणात जगन्नाथ रथयात्रा; हरे कृष्ण मंदिरात भजन-कीर्तन व महाप्रसादाचा लाभ.
खानापूर (प्रतिनिधी) : ओरिसा येथील जगन्नाथ पुरीच्या प्रसिद्ध रथयात्रेला गुरुवारी (दि. 16 जुलै) प्रारंभ झाला. त्याच अनुषंगाने इस्कॉन केंद्र, खानापूर (हरे कृष्ण मंदिर) यांच्या वतीने सलग दुसऱ्या वर्षी खानापूर शहरात श्री जगन्नाथ रथयात्रेचे भक्तिमय आयोजन करण्यात आले.
श्री मलप्रभा नदी घाटावरील हरे कृष्ण मंदिरातून सकाळी रथयात्रेला प्रारंभ झाला. हरे कृष्ण मंदिरातून निघालेली ही रथयात्रा अर्बन बँक चौक, बेंद्रे कॉर्नर, चिरमुरकर गल्ली, देसाई गल्ली, विठ्ठल मंदिर परिसर मार्गे पुन्हा हरे कृष्ण मंदिरात दाखल झाली. यावेळी भक्त मंडळींनी भजन कीर्तनात तल्लीन होऊन नाचत भाग घेतला होता. संपूर्ण वातावरण भक्तिमय झाले होते.

रथयात्रेदरम्यान “हरे कृष्ण” नामस्मरणाने संपूर्ण परिसर भक्तिमय झाला होता. हरे कृष्ण भक्तमंडळी, महिला तसेच शहरातील अनेक नागरिकांनी मोठ्या उत्साहाने रथयात्रेत सहभाग घेतला. भगवान श्री जगन्नाथांच्या जयघोषात आणि भजन-कीर्तनाच्या गजरात रथयात्रा पार पडली.
रथयात्रा हरे कृष्ण मंदिरात परतल्यानंतर यात्रेची सांगता करण्यात आली. त्यानंतर भजन-कीर्तनाचा कार्यक्रम आयोजित करण्यात आला. कार्यक्रमाच्या समारोपानंतर भाविकांसाठी महाप्रसादाचे आयोजन करण्यात आले असून मोठ्या संख्येने उपस्थित भाविकांनी महाप्रसादाचा लाभ घेतला. संपूर्ण कार्यक्रम भक्तिमय आणि उत्साहपूर्ण वातावरणात पार पडला.
ಖಾನಾಪುರ ಪಟ್ಟಣದಲ್ಲಿ ಭಕ್ತಿಮಯ ವಾತಾವರಣದಲ್ಲಿ ಶ್ರೀ ಜಗನ್ನಾಥ ರಥಯಾತ್ರೆ; ಹರೇ ಕೃಷ್ಣ ಮಂದಿರದಲ್ಲಿ ಭಜನೆ-ಕೀರ್ತನೆ ಹಾಗೂ ಮಹಾಪ್ರಸಾದದ ವ್ಯವಸ್ಥೆ.
ಖಾನಾಪುರ (ಪ್ರತಿನಿಧಿ) : ಒಡಿಶಾದ ಪುರಿಯ ಪ್ರಸಿದ್ಧ ಶ್ರೀ ಜಗನ್ನಾಥ ರಥಯಾತ್ರೆಗೆ ಗುರುವಾರ (ಜು. 16) ಚಾಲನೆ ದೊರೆತ ಹಿನ್ನೆಲೆಯಲ್ಲಿ, ಇಸ್ಕಾನ್ ಕೇಂದ್ರ ಖಾನಾಪುರ (ಹರೇ ಕೃಷ್ಣ ಮಂದಿರ) ವತಿಯಿಂದ ಸತತ ಎರಡನೇ ವರ್ಷವೂ ಖಾನಾಪುರ ಪಟ್ಟಣದಲ್ಲಿ ಶ್ರೀ ಜಗನ್ನಾಥ ರಥಯಾತ್ರೆಯನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.
ಶ್ರೀ ಮಲಪ್ರಭಾ ನದಿ ತೀರದಲ್ಲಿರುವ ಹರೇ ಕೃಷ್ಣ ಮಂದಿರದಿಂದ ಬೆಳಿಗ್ಗೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಹರೇ ಕೃಷ್ಣ ಮಂದಿರದಿಂದ ಹೊರಟ ರಥಯಾತ್ರೆಯು ಅರ್ಬನ್ ಬ್ಯಾಂಕ್ ಚೌಕ್, ಬೆಂದ್ರೆ ಕಾರ್ನರ್, ಚಿರಮುರಕರ ಗಲ್ಲಿ, ದೇಸಾಯಿ ಗಲ್ಲಿ, ವಿಠ್ಠಲ ದೇವಸ್ಥಾನ ಪ್ರದೇಶದ ಮಾರ್ಗವಾಗಿ ಸಂಚರಿಸಿ ಪುನಃ ಹರೇ ಕೃಷ್ಣ ಮಂದಿರಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಭಕ್ತರು ಭಜನೆ-ಕೀರ್ತನೆಗಳಲ್ಲಿ ತಲ್ಲೀನರಾಗಿ ನೃತ್ಯ ಮಾಡುತ್ತಾ ರಥಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಇಡೀ ವಾತಾವರಣ ಭಕ್ತಿಮಯವಾಗಿ ಕಂಗೊಳಿಸಿತು.
ರಥಯಾತ್ರೆಯ ಸಂದರ್ಭದಲ್ಲಿ “ಹರೇ ಕೃಷ್ಣ” ನಾಮಸ್ಮರಣೆಯ ಘೋಷಣೆಗಳಿಂದ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಭಕ್ತಿರಸದಲ್ಲಿ ಮುಳುಗಿತ್ತು. ಹರೇ ಕೃಷ್ಣ ಭಕ್ತರು, ಮಹಿಳೆಯರು ಹಾಗೂ ಪಟ್ಟಣದ ಅನೇಕ ನಾಗರಿಕರು ಅಪಾರ ಉತ್ಸಾಹದಿಂದ ರಥಯಾತ್ರೆಯಲ್ಲಿ ಪಾಲ್ಗೊಂಡರು. ಭಗವಾನ್ ಶ್ರೀ ಜಗನ್ನಾಥರ ಜಯಘೋಷ ಮತ್ತು ಭಜನೆ-ಕೀರ್ತನೆಯ ನಾದದ ಮಧ್ಯೆ ರಥಯಾತ್ರೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ರಥಯಾತ್ರೆಯು ಮರಳಿ ಹರೇ ಕೃಷ್ಣ ಮಂದಿರಕ್ಕೆ ಆಗಮಿಸಿದ ಬಳಿಕ ಯಾತ್ರೆಯ ಸಮಾರೋಪ ನೆರವೇರಿಸಲಾಯಿತು. ನಂತರ ಭಜನೆ-ಕೀರ್ತನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಮಾರೋಪದ ಬಳಿಕ ಭಕ್ತರಿಗಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.
ಸಂಪೂರ್ಣ ಕಾರ್ಯಕ್ರಮವು ಭಕ್ತಿಭಾವ ಮತ್ತು ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

