गर्लगुंजी ग्रामस्थांचा अनधिकृत दारूविक्रीविरोधात एल्गार; तहसीलदारांकडे कारवाईची मागणी.
खानापूर : खानापूर तालुक्यातील गर्लगुंजी गावात अनधिकृतपणे सुरू असलेले दारूविक्री केंद्र तात्काळ बंद करण्यात यावे, तसेच गावातील शांतता व कायदा-सुव्यवस्था अबाधित ठेवण्यासाठी कठोर कारवाई करावी, अशी मागणी गर्लगुंजी ग्राम विकास समिती आणि ग्रामस्थांनी तहसीलदारांकडे निवेदनाद्वारे केली आहे.
निवेदनात म्हटले आहे की, गावात अनधिकृतपणे सुरू असलेल्या दारूविक्रीमुळे तरुणांमध्ये व्यसनाधीनतेचे प्रमाण वाढत असून, दारूच्या नशेत महिलांना, लहान मुलांना आणि ग्रामस्थांना त्रास दिला जात आहे. काही तरुण शाळेच्या परिसरात दारूच्या बाटल्या फोडत असल्याने विद्यार्थ्यांच्या सुरक्षिततेचा गंभीर प्रश्न निर्माण झाला असून, काचेच्या तुकड्यांमुळे दुखापत व अपघात होण्याची भीती व्यक्त करण्यात आली आहे.
याशिवाय, गर्लगुंजी–नंदीहळ्ळी मार्गावरील अधिकृत दारू दुकानासमोरही मद्यपींकडून दारू पिऊन रस्त्यावर गोंधळ घालणे, महिलांशी अश्लील भाषेत बोलणे तसेच रिकाम्या बाटल्या शेतात फेकणे असे प्रकार वारंवार घडत असल्याचे निवेदनात नमूद करण्यात आले आहे. त्यामुळे शेतकऱ्यांनाही मोठा त्रास सहन करावा लागत असल्याचे ग्रामस्थांनी सांगितले.
पोलीस प्रशासनाने या ठिकाणी नियमित गस्त घालून मद्यपींवर कठोर कारवाई करावी आणि गावात सुरू असलेली अनधिकृत दारूविक्री तातडीने बंद करावी, अशी मागणी ग्रामस्थांनी केली आहे.
या निवेदनावर ग्रामपंचायत माजी अध्यक्ष गोपाळ पाटील, तालुकापंचायत माजी सदस्य पांडुरंग सावंत, हनमंत मेलगे, परशुराम चौगुले, माजी ग्रामपंचायत सदस्य अजित वसंतराव पाटील, सुरेश मेलगे, प्रसाद पाटील, बजरंग दल खानापूर तालुका अध्यक्ष नंदकुमार निट्टूरकर, राजाराम सिद्दानी, संजय श. पाटील, शांताराम शिवाजी मेलगे, गंगाराम कृष्णा वड्डबैलकर, विनोद विठ्ठल कुंभार, शिवाजी वेंकप्पा कोलकार यांच्यासह अनेक ग्रामस्थांच्या स्वाक्षऱ्या आहेत.
ಗರ್ಲಗುಂಜಿ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟದ ವಿರುದ್ಧ ಆಕ್ರೋಶ; ತಹಶೀಲ್ದಾರರಿಗೆ ಕ್ರಮ ಕೈಗೊಳ್ಳುವಂತೆ ಮನವಿ.
ಖಾನಾಪುರ: ಖಾನಾಪುರ ತಾಲ್ಲೂಕಿನ ಗರ್ಲಗುಂಜಿ ಗ್ರಾಮದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮದ್ಯ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಿ, ಗ್ರಾಮದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗರ್ಲಗುಂಜಿ ಗ್ರಾಮ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಮನವಿಯಲ್ಲಿ, ಗ್ರಾಮದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮದ್ಯ ಮಾರಾಟದಿಂದ ಯುವಕರಲ್ಲಿ ಮದ್ಯ ವ್ಯಸನ ಹೆಚ್ಚುತ್ತಿದ್ದು, ಮದ್ಯದ ಅಮಲಿನಲ್ಲಿ ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕೆಲವು ಯುವಕರು ಶಾಲೆಯ ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಒಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಗೆ ಗಂಭೀರ ಧಕ್ಕೆಯಾಗಿದ್ದು, ಗಾಜಿನ ಚೂರುಗಳಿಂದ ಗಾಯಗಳು ಹಾಗೂ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ ಎಂದು ತಿಳಿಸಲಾಗಿದೆ.
ಇದಲ್ಲದೆ, ಗರ್ಲಗುಂಜಿ–ನಂದಿಹಳ್ಳಿ ರಸ್ತೆಯಲ್ಲಿರುವ ಅಧಿಕೃತ ಮದ್ಯದ ಅಂಗಡಿಯ ಎದುರು ಕೂಡ ಮದ್ಯಪಾನ ಮಾಡಿದವರು ರಸ್ತೆಯಲ್ಲೇ ಗದ್ದಲ ಸೃಷ್ಟಿಸುವುದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದು ಹಾಗೂ ಖಾಲಿ ಮದ್ಯದ ಬಾಟಲಿಗಳನ್ನು ಹೊಲಗಳಲ್ಲಿ ಎಸೆಯುವುದು ಸಾಮಾನ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ರೈತರು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಈ ಪ್ರದೇಶದಲ್ಲಿ ನಿಯಮಿತ ಗಸ್ತು ನಡೆಸಿ ಮದ್ಯದ ಅಮಲಿನಲ್ಲಿ ಗಲಾಟೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ನಡೆಯುತ್ತಿರುವ ಅನಧಿಕೃತ ಮದ್ಯ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಮನವಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋಪಾಳ ಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಾಂಡುರಂಗ ಸಾವಂತ, ಹನುಮಂತ ಮೆಲಗೆ, ಪರಶುರಾಮ ಚೌಗುಲೆ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅಜಿತ್ ವಸಂತರಾವ್ ಪಾಟೀಲ, ಸುರೇಶ್ ಮೆಲಗೆ, ಪ್ರಸಾದ್ ಪಾಟೀಲ, ಬಜರಂಗ ದಳ ಖಾನಾಪುರ ತಾಲ್ಲೂಕು ಅಧ್ಯಕ್ಷ ನಂದಕುಮಾರ ನಿಟ್ಟೂರಕರ, ರಾಜಾರಾಮ ಸಿದ್ದಾಣಿ, ಸಂಜಯ್ ಎಸ್. ಪಾಟೀಲ, ಶಾಂತಾರಾಮ ಶಿವಾಜಿ ಮೆಲಗೆ, ಗಂಗಾರಾಮ ಕೃಷ್ಣ ವಡ್ಡಬೈಲ್ಕರ್, ವಿನೋದ್ ವಿಠ್ಠಲ ಕುಂಭಾರ, ಶಿವಾಜಿ ವೆಂಕಪ್ಪ ಕೊಲ್ಕಾರ ಸೇರಿದಂತೆ ಅನೇಕ ಗ್ರಾಮಸ್ಥರು ಸಹಿ ಹಾಕಿದ್ದಾರೆ.

