केसरेकर कुटुंबीयांना आर्थिक मदत द्यावी; मुख्यमंत्री डी.के. शिवकुमार यांच्याकडे आमदार विठ्ठल हलगेकरांची मागणी.
खानापूर : महाराष्ट्रातील सांगली जिल्ह्यातील कुपवाड एमआयडीसी परिसरात झालेल्या हल्ल्यात खानापूर तालुक्यातील हेब्बाळ येथील पती-पत्नीचा दुर्दैवी मृत्यू झाला. या घटनेमुळे त्यांच्या दोन मुलांवरील आई-वडिलांचे छत्र हरपले असून, या अनाथ मुलांच्या भविष्यासाठी कर्नाटक सरकारने आर्थिक मदत करावी, अशी मागणी खानापूरचे आमदार विठ्ठल सोमाण्णा हलगेकर यांनी मुख्यमंत्री डी.के. शिवकुमार यांच्याकडे केली आहे.
हेब्बाळ येथील रहिवासी मोहन नागाप्पा केसरेकर व त्यांच्या पत्नी मनिषा मोहन केसरेकर हे रोजगारासाठी महाराष्ट्रात गेले होते. 15 ऑगस्ट रोजी सांगली जिल्ह्यातील कुपवाड एमआयडीसी परिसरातील विघ्नहर्ता शांती कॉलनी येथे अज्ञात कारणातून त्यांच्यावर हातोडी व चाकूने जीवघेणा हल्ला करण्यात आला. या हल्ल्यात गंभीर जखमी झालेल्या मनिषा केसरेकर यांचा यापूर्वीच मृत्यू झाला होता. त्यानंतर मिरज येथील शासकीय रुग्णालयात उपचार सुरू असलेल्या मोहन केसरकर यांचाही 18 ऑगस्ट रोजी उपचारादरम्यान मृत्यू झाला.
एकाच कुटुंबातील पती-पत्नीचा काही दिवसांच्या अंतराने मृत्यू झाल्याने त्यांची दोन मुले अनाथ झाली आहेत. कुटुंबातील कमावते आई-वडील दोघेही गेल्याने मुलांच्या शिक्षणासह भविष्यातील उदरनिर्वाहाचा गंभीर प्रश्न निर्माण झाला आहे.
या प्रकरणानंतर महाराष्ट्राचे सांगली जिल्ह्याचे पालकमंत्री चंद्रकांतदादा पाटील यांनी मोहन केसरेकर यांचे नातेवाईक श्रीधर केसरेकर यांच्याशी संपर्क साधून कुटुंबाला न्याय मिळवून देण्याचे आश्वासन दिले आहे. तसेच केसरकर यांच्या मुलगा व मुलीच्या पालनपोषणाची जबाबदारी महाराष्ट्र सरकार घेईल, असेही आश्वासन देण्यात आल्याचे आमदार हलगेकर यांनी आपल्या पत्रात नमूद केले आहे.
या दुर्दैवी घटनेची दखल घेत आमदार विठ्ठल हलगेकर यांनी मुख्यमंत्री डी.के. शिवकुमार यांना पत्र पाठवून केसरेकर कुटुंबीयांच्या दोन मुलांच्या भवितव्याचा विचार करून मानवतेच्या दृष्टिकोनातून कर्नाटक सरकारने योग्य ती आर्थिक मदत तातडीने उपलब्ध करून द्यावी, अशी विनंती केली आहे.
ಕೇಸರೆಕರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ; ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಅವರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ.
ಖಾನಾಪುರ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪವಾಡ ಎಂಐಡಿಸಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಖಾನಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದ ದಂಪತಿ ದುರಂತವಾಗಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಅವರ ಇಬ್ಬರು ಮಕ್ಕಳಿಗೆ ತಂದೆ-ತಾಯಿಯ ಆಶ್ರಯ ಕಳೆದುಹೋಗಿದ್ದು, ಈ ಅನಾಥ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಆರ್ಥಿಕ ನೆರವು ನೀಡಬೇಕು ಎಂದು ಖಾನಾಪುರ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
ಹೆಬ್ಬಾಳ ಗ್ರಾಮದ ನಿವಾಸಿಗಳಾದ ಮೋಹನ್ ನಾಗಪ್ಪ ಕೇಸರೆಕರ ಹಾಗೂ ಅವರ ಪತ್ನಿ ಮನಿಷಾ ಮೋಹನ್ ಕೇಸರೆಕರ ಅವರು ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಆಗಸ್ಟ್ 15ರಂದು ಸಾಂಗ್ಲಿ ಜಿಲ್ಲೆಯ ಕುಪವಾಡ ಎಂಐಡಿಸಿ ಪ್ರದೇಶದ ವಿಘ್ನಹರ್ತಾ ಶಾಂತಿ ಕಾಲೋನಿಯಲ್ಲಿ ಅವರ ಮೇಲೆ ಸುತ್ತಿಗೆ ಹಾಗೂ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮನಿಷಾ ಕೇಸರೆಕರ ಅವರು ಈ ಹಿಂದೆಯೇ ಮೃತಪಟ್ಟಿದ್ದರು. ನಂತರ ಮಿರಜ್ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಹನ್ ಕೇಸರೆಕರ ಅವರು ಕೂಡ ಆಗಸ್ಟ್ 18ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಒಂದೇ ಕುಟುಂಬದ ಗಂಡ-ಹೆಂಡತಿ ಕೆಲವೇ ದಿನಗಳ ಅಂತರದಲ್ಲಿ ಮೃತಪಟ್ಟಿರುವುದರಿಂದ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಕುಟುಂಬದ ದುಡಿಮೆಯ ಆಧಾರವಾಗಿದ್ದ ತಂದೆ-ತಾಯಿ ಇಬ್ಬರೂ ಮೃತಪಟ್ಟಿರುವುದರಿಂದ ಮಕ್ಕಳ ಶಿಕ್ಷಣದ ಜೊತೆಗೆ ಅವರ ಮುಂದಿನ ಜೀವನೋಪಾಯದ ಬಗ್ಗೆಯೂ ಗಂಭೀರ ಪ್ರಶ್ನೆ ಎದುರಾಗಿದೆ.
ಈ ಘಟನೆಯ ಬಳಿಕ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತದಾದಾ ಪಾಟೀಲ್ ಅವರು ಮೋಹನ್ ಕೇಸರಕರ ಅವರ ಸಂಬಂಧಿ ಶ್ರೀಧರ ಕೇಸರಕರ ಅವರೊಂದಿಗೆ ಸಂಪರ್ಕಿಸಿ, ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಕೇಸರಕರ ಅವರ ಮಗ ಮತ್ತು ಮಗಳ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಮಹಾರಾಷ್ಟ್ರ ಸರ್ಕಾರ ವಹಿಸಿಕೊಳ್ಳಲಿದೆ ಎಂಬ ಭರವಸೆಯನ್ನೂ ನೀಡಲಾಗಿದೆ ಎಂದು ಶಾಸಕ ಹಲಗೇಕರ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ವಿಠ್ಠಲ ಹಲಗೇಕರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು, ಕೇಸರಕರ ಕುಟುಂಬದ ಇಬ್ಬರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾನವೀಯ ದೃಷ್ಟಿಕೋನದಿಂದ ಕರ್ನಾಟಕ ಸರ್ಕಾರವು ಸೂಕ್ತ ಆರ್ಥಿಕ ನೆರವನ್ನು ತುರ್ತಾಗಿ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.



