क्रॉस-व्होटिंग प्रकरणी भाजपमध्ये खळबळ; पक्षद्रोहींवर कठोर कारवाईचे संकेत – आर. अशोक.
बेळगाव : प्रतिनिधी
विधान परिषद निवडणुकीत झालेल्या कथित क्रॉस-व्होटिंगच्या पार्श्वभूमीवर भाजपमध्ये सुरू असलेल्या घडामोडींना वेग आला असून, पक्षविरोधी भूमिका घेणाऱ्यांवर कठोर शिस्तभंगाची कारवाई केली जाईल, असा इशारा विरोधी पक्षनेते आर अशोक यांनी दिला आहे.
बेळगाव येथे आयोजित एका कार्यक्रमात माध्यमांशी संवाद साधताना अशोक यांनी पक्षाच्या केंद्रीय नेतृत्वाकडून दिल्लीला बोलावणे आल्याची माहिती दिली. उद्या सोमवारी प्रदेशाध्यक्ष बी वाय विजेंद्र यांच्यासह दिल्लीत वरिष्ठ नेत्यांची भेट घेऊन विधान परिषद निवडणुकीतील घडामोडींवर सविस्तर चर्चा केली जाणार असल्याचे त्यांनी स्पष्ट केले.
क्रॉस-व्होटिंगच्या घटनेमुळे पक्षाशी विश्वासघात झाल्याचे दिसून येत असले, तरी यामागे नेमके कोण आहेत याची माहिती अद्याप समोर आलेली नसल्याचे अशोक यांनी सांगितले. यासंदर्भातील संपूर्ण अहवाल पक्षश्रेष्ठींसमोर मांडला जाणार असून, त्यानंतर योग्य निर्णय घेतला जाईल, असेही त्यांनी नमूद केले.
यावेळी त्यांनी काँग्रेसवरही जोरदार टीका केली. विरोधी पक्षातील लोकप्रतिनिधींवर दबाव टाकण्यासाठी विविध यंत्रणांचा वापर केला जात असल्याचा आरोप त्यांनी केला. तसेच आर्थिक प्रलोभने देऊन आमदारांना आपल्या बाजूने वळविण्याचे प्रयत्न होत असल्याचेही त्यांनी म्हटले.
2019 मध्ये आमदारांना रिसॉर्टमध्ये ठेवण्याच्या प्रकरणावरून भाजपवर टीका करणारेच नेते आज वेगळ्या पद्धतीने राजकीय डावपेच राबवत असल्याचा टोला त्यांनी लगावला. उपमुख्यमंत्री डी के शिवकुमार यांच्यावर अप्रत्यक्ष निशाणा साधत, राजकारणात घोडेबाजाराला खतपाणी घालण्याचे काम होत असल्याचा आरोपही त्यांनी केला.
“पक्षाशी बेईमानी करणाऱ्यांना माफ केले जाणार नाही. भविष्यात अशा घटना पुन्हा घडू नयेत यासाठी कठोर पावले उचलली जातील,” असे स्पष्ट करत अशोक यांनी पक्षशिस्तीबाबत कडक भूमिका मांडली.
ಕ್ರಾಸ್-ವೋಟಿಂಗ್ ಪ್ರಕರಣದಿಂದ ಬಿಜೆಪಿ ಯಲ್ಲಿ ಸಂಚಲನ; ಪಕ್ಷದ್ರೋಹಿಗಳ ವಿರುದ್ಧ ಕಠಿಣ ಕ್ರಮದ ಸೂಚನೆ – ಆರ್. ಅಶೋಕ್.
ಬೆಳಗಾವಿ : ಪ್ರತಿನಿಧಿ
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಎನ್ನಲಾದ ಕ್ರಾಸ್-ವೋಟಿಂಗ್ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದೊಳಗಿನ ಬೆಳವಣಿಗೆಗಳು ವೇಗ ಪಡೆದುಕೊಂಡಿದ್ದು, ಪಕ್ಷವಿರೋಧಿ ನಿಲುವು ತಳೆದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ.ಅಶೋಕ್, ಪಕ್ಷದ ಕೇಂದ್ರ ನಾಯಕತ್ವದಿಂದ ದೆಹಲಿಗೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು. ನಾಳೆ ಸೋಮವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆಯ ಬೆಳವಣಿಗೆಗಳ ಕುರಿತು ಸವಿಸ್ತಾರ ಚರ್ಚೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕ್ರಾಸ್-ವೋಟಿಂಗ್ ಘಟನೆಯಿಂದ ಪಕ್ಷಕ್ಕೆ ದ್ರೋಹ ನಡೆದಿರುವುದು ಕಂಡುಬಂದಿದ್ದರೂ, ಇದರ ಹಿಂದೆ ನಿಖರವಾಗಿ ಯಾರು ಇದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ ಎಂದು ಅಶೋಕ್ ಹೇಳಿದರು. ಈ ಸಂಬಂಧದ ಸಂಪೂರ್ಣ ವರದಿಯನ್ನು ಪಕ್ಷದ ಹಿರಿಯ ನಾಯಕರ ಮುಂದೆ ಮಂಡಿಸಲಾಗುವುದು. ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ವೇಳೆ ಅವರು ಕಾಂಗ್ರೆಸ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷಗಳ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ವಿವಿಧ ವ್ಯವಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಆರ್ಥಿಕ ಆಮಿಷಗಳನ್ನು ನೀಡಿ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೂಡ ಹೇಳಿದರು.
2019ರಲ್ಲಿ ಶಾಸಕರನ್ನು ರೆಸಾರ್ಟ್ಗಳಲ್ಲಿ ಇರಿಸಿದ್ದ ಪ್ರಕರಣದ ಬಗ್ಗೆ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದವರೇ ಇಂದು ಬೇರೆ ರೀತಿಯ ರಾಜಕೀಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ, ರಾಜ್ಯ ರಾಜಕಾರಣದಲ್ಲಿ ಕುದುರೆ ವ್ಯಾಪಾರಕ್ಕೆ ಉತ್ತೇಜನ ನೀಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
“ಪಕ್ಷಕ್ಕೆ ದ್ರೋಹ ಮಾಡಿದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗುವುದಿಲ್ಲ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಅಶೋಕ್ ಸ್ಪಷ್ಟಪಡಿಸಿದರು. ಇದೇ ವೇಳೆ ಪಕ್ಷ ಶಿಸ್ತಿನ ವಿಷಯದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದರು.


