रायचूर-बळ्ळारी भाजपच्या पदयात्रेत माजी आमदार अरविंद पाटील सहभागी; विजयेंद्र यांच्या नेतृत्वाखाली सरकारविरोधात एल्गार.
बेंगळुरू : राज्यातील काँग्रेस सरकारच्या कथित अपयशाचा पर्दाफाश करून जनतेमध्ये जागृती निर्माण करण्याच्या उद्देशाने भारतीय जनता पक्षाच्या वतीने रायचूर ते बळ्ळारी अशी सुमारे २०० किलोमीटरची भव्य पदयात्रा आयोजित करण्यात आली आहे. भाजपचे प्रदेशाध्यक्ष बी. वाय. विजयेंद्र यांच्या नेतृत्वाखाली १ सप्टेंबरपासून सुरू झालेली ही पदयात्रा 10 सप्टेंबरपर्यंत चालणार आहे.
या पदयात्रेत खानापूरचे माजी आमदार तथा बेळगाव जिल्हा मध्यवर्ती सहकारी बँकेचे संचालक अरविंद पाटील यांनी शनिवार, दि. 5 सप्टेंबर रोजी उत्स्फूर्त सहभाग घेतला. यावेळी त्यांनी भाजप प्रदेशाध्यक्ष बी. वाय. विजयेंद्र यांच्यासोबत पदयात्रेत सहभागी होत सरकारविरोधातील आंदोलनाला पाठिंबा दर्शविला.
पदयात्रेदरम्यान भाजपच्या नेत्यांकडून राज्य सरकारच्या कारभारावर टीका करत विविध जनहिताच्या प्रश्नांकडे जनतेचे लक्ष वेधले जात आहे. महागाई, बेरोजगारी, शेतकरी प्रश्न, विकासकामे आणि सरकारच्या योजनांच्या अंमलबजावणीतील त्रुटी यासह विविध मुद्द्यांवर जनजागृती करण्याचा प्रयत्न भाजपकडून केला जात आहे.
या पदयात्रेत बेळगाव जिल्हा भाजप अध्यक्ष सुभाष पाटील यांच्यासह बेळगाव जिल्ह्यातील तसेच राज्यभरातील भाजपचे पदाधिकारी, लोकप्रतिनिधी आणि कार्यकर्ते मोठ्या संख्येने सहभागी झाले आहेत.
रायचूरपासून सुरू झालेली ही पदयात्रा विविध भागांतून मार्गक्रमण करत बळ्ळारी येथे समारोप होणार आहे. आगामी काळात राज्य सरकारविरोधात पक्षाची भूमिका अधिक आक्रमकपणे जनतेपर्यंत पोहोचविण्यासाठी ही पदयात्रा महत्त्वाची ठरणार असल्याचे माजी आमदार अरविंद पाटील यांनी सांगितले आहे.
ರಾಯಚೂರು-ಬಳ್ಳಾರಿ ಬಿಜೆಪಿ ಪಾದಯಾತ್ರೆಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ಭಾಗಿ; ವಿಜಯೇಂದ್ರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ.
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಮೂಲಕ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷದ ವತಿಯಿಂದ ರಾಯಚೂರಿನಿಂದ ಬಳ್ಳಾರಿವರೆಗೆ ಸುಮಾರು 200 ಕಿಲೋಮೀಟರ್ಗಳ ಭವ್ಯ ಪಾದಯಾತ್ರೆ ಆಯೋಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 1ರಿಂದ ಆರಂಭವಾಗಿರುವ ಈ ಪಾದಯಾತ್ರೆ ಸೆಪ್ಟೆಂಬರ್ 10ರವರೆಗೆ ನಡೆಯಲಿದೆ.
ಈ ಪಾದಯಾತ್ರೆಯಲ್ಲಿ ಖಾನಾಪುರ ತಾಲೂಕಿನ ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ನ ನಿರ್ದೇಶಕ ಅರವಿಂದ ಪಾಟೀಲ ಅವರು ಶನಿವಾರ, ಸೆಪ್ಟೆಂಬರ್ 5ರಂದು ಉತ್ಸಾಹದಿಂದ ಭಾಗವಹಿಸಿದರು. ಈ ವೇಳೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಪಾದಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಟೀಕೆಗಳನ್ನು ಮಾಡುತ್ತಾ ವಿವಿಧ ಜನಹಿತದ ಸಮಸ್ಯೆಗಳತ್ತ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ಲೋಪಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಜನಜಾಗೃತಿ ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ಈ ಪಾದಯಾತ್ರೆಯಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಸೇರಿದಂತೆ ಬೆಳಗಾವಿ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ರಾಯಚೂರಿನಿಂದ ಆರಂಭವಾಗಿರುವ ಈ ಪಾದಯಾತ್ರೆ ವಿವಿಧ ಪ್ರದೇಶಗಳ ಮೂಲಕ ಸಂಚರಿಸಿ ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪಕ್ಷದ ನಿಲುವನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಜನರ ಮುಂದಿಡಲು ಈ ಪಾದಯಾತ್ರೆ ಮಹತ್ವದ್ದಾಗಲಿದೆ ಎಂದು ಮಾಜಿ ಶಾಸಕ ಅರವಿಂದ ಪಾಟೀಲ ತಿಳಿಸಿದ್ದಾರೆ.

