SIR अंतर्गत 24 ऑगस्टला प्रारूप मतदार यादी प्रसिद्ध; दावे-हरकतींसाठी 23 सप्टेंबरपर्यंत मुदत : बलराम चव्हाण.
खानापूर : विशेष संक्षिप्त पुनरिक्षण (SIR) प्रक्रियेंतर्गत खानापूर तालुक्याची प्रारूप मतदार यादी 24 ऑगस्ट 2026 रोजी प्रसिद्ध करण्यात आली आहे. या प्रक्रियेला तालुक्यातील नागरिकांनी दिलेल्या सहकार्याबद्दल मुख्य निवडणूक मतदार यादी नोंदणी अधिकारी बलराम चव्हाण यांनी आभार व्यक्त केले. प्रारूप मतदार यादीतील नाव, पत्ता किंवा इतर तपशीलांबाबत दावे-हरकती नोंदविण्यासाठी 24 ऑगस्ट ते 23 सप्टेंबर 2026 पर्यंत मुदत देण्यात आली आहे.
यासंदर्भात बलराम चव्हाण यांनी विविध राजकीय पक्षांच्या पदाधिकाऱ्यांची बैठक व पत्रकार परिषद घेऊन SIR प्रक्रियेत आतापर्यंत झालेल्या मतदार नोंदणीची माहिती दिली. अंतिम मतदार यादी प्रसिद्ध होईपर्यंत नागरिकांनी यापुढेही सहकार्य करावे, असे आवाहन त्यांनी केले. यावेळी तहसीलदार एस. के. तंगोळी, उपतहसीलदार व्ही. आर. मॅगेरी, सुनील देसाई यांच्यासह विविध राजकीय पक्षांचे पदाधिकारी उपस्थित होते.
बलराम चव्हाण यांनी दिलेल्या माहितीनुसार, यापूर्वी खानापूर तालुक्यातील मतदारांची संख्या 2,19,152 होती. SIR प्रक्रियेनंतर प्रसिद्ध करण्यात आलेल्या प्रारूप मतदार यादीत 1,01,866 पुरुष, 94,879 महिला आणि 4 तृतीयपंथी, असे एकूण 1,96,749 मतदार नोंदविण्यात आले आहेत. प्रारूप प्रक्रियेत एकूण 22,403 मतदारांची तफावत आढळून आली आहे.
या तफावतीमध्ये 5,902 मृत मतदार, 12,708 कायमस्वरूपी स्थलांतरित मतदार, 3,492 आधीच नोंद असलेले मतदार, 300 अनुपस्थित मतदार आणि इतर कारणातील 1 मतदार यांचा समावेश आहे. तालुक्यात एकूण 319 मतदान केंद्रे असल्याची माहितीही देण्यात आली.
दावे-हरकतींसाठी विविध नमुने…
SIR प्रक्रियेदरम्यान निर्धारित कालावधीत Enumeration Form सादर करता न आलेल्या पात्र मतदारांना विहित घोषणापत्रासह नमुना-6 सादर करून मतदार यादीत नाव समाविष्ट करण्याची संधी देण्यात आली आहे.
नमुना-6 : नवीन मतदार म्हणून नोंदणी.
नमुना-6A : परदेशस्थ (Overseas) मतदार म्हणून नोंदणी.
नमुना-7 : मतदार यादीतून नाव वगळण्यासाठी.
नमुना-8 : निवासस्थान बदल, मतदार नोंदीतील दुरुस्ती, EPIC बदल किंवा PwD चिन्हांकनासाठी.
हे नमुने ECI च्या मतदार सेवा पोर्टलवर उपलब्ध आहेत.
22 ऑक्टोबरपर्यंत दावे-हरकतींची सुनावणी…
दावे व हरकतींबाबत नोटीस देणे, सुनावणी घेणे, Enumeration Forms ची छाननी करून निर्णय घेणे तसेच प्राप्त अर्जांचा निपटारा करण्याची प्रक्रिया 24 ऑगस्ट ते 22 ऑक्टोबर 2026 या कालावधीत पूर्ण करण्यात येणार आहे.
अपीलचीही सुविधा…
मतदाराचे नाव मतदार यादीतून वगळण्यात आल्यास संबंधित मतदार नोंदणी अधिकाऱ्याच्या आदेशाच्या तारखेपासून 15 दिवसांच्या आत जिल्हाधिकारी/जिल्हा दंडाधिकारी यांच्याकडे प्रथम अपील करता येईल. प्रथम अपीलाच्या निर्णयाच्या तारखेपासून 30 दिवसांच्या आत मुख्य निवडणूक अधिकाऱ्यांकडे द्वितीय अपील करता येणार आहे.
त्यामुळे प्रत्येक मतदाराने प्रारूप मतदार यादीत आपले नाव व तपशील तपासून आवश्यक असल्यास निर्धारित मुदतीत दावे-हरकती दाखल कराव्यात, असे आवाहन करण्यात आले आहे.
अंतिम मतदार यादी 27 ऑक्टोबरला
SIR प्रक्रियेतील दावे, हरकती, सुनावणी आणि पडताळणीची प्रक्रिया पूर्ण झाल्यानंतर अंतिम मतदार यादी 27 ऑक्टोबर 2026 रोजी प्रसिद्ध करण्यात येणार आहे. अंतिम मतदार यादी मुख्य निवडणूक अधिकारी, कर्नाटक यांच्या संकेतस्थळावर उपलब्ध होणार आहे.
मतदारांनी आपले नाव आणि मतदार यादीतील इतर तपशील तपासणे ही प्रत्येक पात्र नागरिकाची महत्त्वाची जबाबदारी आहे. नाव नसल्यास किंवा तपशिलात काही त्रुटी असल्यास निर्धारित मुदतीत संबंधित अर्ज दाखल करावा, असे बलराम चव्हाण यांनी सांगितले.
यावेळी भाजपचे प्रधान कार्यदर्शी मल्लाप्पा मारीहाळ, गुंडू तोपिनकट्टी, उपाध्यक्ष चेतन मणेरीकर, वसंत देसाई तसेच काँग्रेसचे अध्यक्ष महांतेश राऊत, महादेव कोळी, गुड्डू टेकडी, लियाकतअली बिच्चनावर यांच्यासह विविध पक्षांचे पदाधिकारी उपस्थित होते.
संकेतस्थळ : www.ceo.karnataka.gov.in
मतदार सेवा पोर्टल : voters.eci.gov.in
SIR ಅಡಿಯಲ್ಲಿ ಆಗಸ್ಟ್ 24ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ; ಆಕ್ಷೇಪಣೆ-ಹಕ್ಕು ಮಂಡಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ : ಬಲರಾಮ ಚವ್ಹಾಣ.
ಖಾನಾಪುರ : ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಖಾನಾಪುರ ತಾಲ್ಲೂಕಿನ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24, 2026ರಂದು ಪ್ರಕಟಿಸಲಾಗಿದೆ. ಈ ಪ್ರಕ್ರಿಯೆಗೆ ತಾಲ್ಲೂಕಿನ ನಾಗರಿಕರು ನೀಡಿದ ಸಹಕಾರಕ್ಕೆ ಮುಖ್ಯ ಚುನಾವಣಾ ಮತದಾರರ ಪಟ್ಟಿ ನೋಂದಣಿ ಅಧಿಕಾರಿ ಬಲರಾಮ ಚವ್ಹಾಣ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕರಡು ಮತದಾರರ ಪಟ್ಟಿಯಲ್ಲಿರುವ ಹೆಸರು, ವಿಳಾಸ ಅಥವಾ ಇತರ ವಿವರಗಳಿಗೆ ಸಂಬಂಧಿಸಿದಂತೆ ಹಕ್ಕು-ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23, 2026ರವರೆಗೆ ಅವಕಾಶ ನೀಡಲಾಗಿದೆ.
ಈ ಕುರಿತು ಬಲರಾಮ ಚವ್ಹಾಣ ಅವರು ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಸಿ, SIR ಪ್ರಕ್ರಿಯೆಯಲ್ಲಿ ಇದುವರೆಗೆ ನಡೆದ ಮತದಾರರ ನೋಂದಣಿ ಕುರಿತು ಮಾಹಿತಿ ನೀಡಿದರು. ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವವರೆಗೆ ನಾಗರಿಕರು ಇದೇ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್. ಕೆ. ತಂಗೋಳಿ, ಉಪತಹಶೀಲ್ದಾರ್ ವಿ. ಆರ್. ಮಾಂಗೆರಿ, ಸುನಿಲ್ ದೇಸಾಯಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಲರಾಮ ಚವ್ಹಾಣ ಅವರು ನೀಡಿದ ಮಾಹಿತಿಯ ಪ್ರಕಾರ, ಈ ಹಿಂದೆ ಖಾನಾಪುರ ತಾಲ್ಲೂಕಿನಲ್ಲಿ ಒಟ್ಟು 2,19,152 ಮತದಾರರು ಇದ್ದರು. SIR ಪ್ರಕ್ರಿಯೆಯ ನಂತರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 1,01,866 ಪುರುಷರು, 94,879 ಮಹಿಳೆಯರು ಹಾಗೂ 4 ತೃತೀಯಲಿಂಗಿಗಳು, ಸೇರಿದಂತೆ ಒಟ್ಟು 1,96,749 ಮತದಾರರು ದಾಖಲಾಗಿದ್ದಾರೆ.
ಕರಡು ಪಟ್ಟಿಯ ಪ್ರಕ್ರಿಯೆಯಲ್ಲಿ ಒಟ್ಟು 22,403 ಮತದಾರರ ವ್ಯತ್ಯಾಸ ಕಂಡುಬಂದಿದೆ. ಇದರಲ್ಲಿ 5,902 ಮೃತ ಮತದಾರರು, 12,708 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, 3,492 ಈಗಾಗಲೇ ನೋಂದಾಯಿತ ಮತದಾರರು, 300 ಗೈರುಹಾಜರಿದ್ದ ಮತದಾರರು ಹಾಗೂ ಇತರ ಕಾರಣದಿಂದ 1 ಮತದಾರ ಸೇರಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 319 ಮತಗಟ್ಟೆಗಳು ಇವೆ ಎಂದು ಮಾಹಿತಿ ನೀಡಲಾಗಿದೆ.
ಹಕ್ಕು-ಆಕ್ಷೇಪಣೆ ಸಲ್ಲಿಸಲು ವಿವಿಧ ನಮೂನೆಗಳು
SIR ಪ್ರಕ್ರಿಯೆಯ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ Enumeration Form ಸಲ್ಲಿಸಲು ಸಾಧ್ಯವಾಗದ ಅರ್ಹ ಮತದಾರರಿಗೆ, ನಿಗದಿತ ಘೋಷಣಾಪತ್ರದೊಂದಿಗೆ ನಮೂನೆ-6 ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ.
ನಮೂನೆ-6 : ಹೊಸ ಮತದಾರರಾಗಿ ನೋಂದಣಿ.
ನಮೂನೆ-6A : ವಿದೇಶದಲ್ಲಿರುವ (Overseas) ಮತದಾರರಾಗಿ ನೋಂದಣಿ.
ನಮೂನೆ-7 : ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು.
ನಮೂನೆ-8 : ನಿವಾಸ ಬದಲಾವಣೆ, ಮತದಾರರ ದಾಖಲೆಯಲ್ಲಿನ ತಿದ್ದುಪಡಿ, EPIC ಬದಲಾವಣೆ ಅಥವಾ PwD ಗುರುತಿಗಾಗಿ.
ಈ ಎಲ್ಲಾ ನಮೂನೆಗಳು ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್ನಲ್ಲಿ ಲಭ್ಯವಿವೆ.
ಅಕ್ಟೋಬರ್ 22ರವರೆಗೆ ಹಕ್ಕು-ಆಕ್ಷೇಪಣೆಗಳ ವಿಚಾರಣೆ
ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡುವುದು, ವಿಚಾರಣೆ ನಡೆಸುವುದು, Enumeration Forms ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಹಾಗೂ ಸ್ವೀಕರಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ಆಗಸ್ಟ್ 24ರಿಂದ ಅಕ್ಟೋಬರ್ 22, 2026ರವರೆಗೆ ಪೂರ್ಣಗೊಳಿಸಲಾಗುವುದು.
ಮೇಲ್ಮನವಿಗೂ ಅವಕಾಶ
ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ತೆಗೆದುಹಾಕಿದಲ್ಲಿ, ಸಂಬಂಧಪಟ್ಟ ಮತದಾರರ ನೋಂದಣಿ ಅಧಿಕಾರಿಯ ಆದೇಶದ ದಿನಾಂಕದಿಂದ 15 ದಿನಗಳೊಳಗೆ ಜಿಲ್ಲಾಧಿಕಾರಿ/ಜಿಲ್ಲಾ ದಂಡಾಧಿಕಾರಿಗಳ ಮುಂದೆ ಮೊದಲ ಮೇಲ್ಮನವಿ ಸಲ್ಲಿಸಬಹುದು.
ಮೊದಲ ಮೇಲ್ಮನವಿಯ ತೀರ್ಪಿನ ದಿನಾಂಕದಿಂದ 30 ದಿನಗಳೊಳಗೆ ಮುಖ್ಯ ಚುನಾವಣಾಧಿಕಾರಿಗಳ ಮುಂದೆ ಎರಡನೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ಆದ್ದರಿಂದ ಪ್ರತಿಯೊಬ್ಬ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಇತರ ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಹಕ್ಕು-ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಬಲರಾಮ ಚವ್ಹಾಣ ಅವರು ಮನವಿ ಮಾಡಿದ್ದಾರೆ.
ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು
SIR ಪ್ರಕ್ರಿಯೆಯಡಿ ಹಕ್ಕು-ಆಕ್ಷೇಪಣೆಗಳು, ವಿಚಾರಣೆ ಹಾಗೂ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27, 2026ರಂದು ಪ್ರಕಟಿಸಲಾಗುವುದು.
ಅಂತಿಮ ಮತದಾರರ ಪಟ್ಟಿಯು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಅವರ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರು ಹಾಗೂ ಮತದಾರರ ಪಟ್ಟಿಯಲ್ಲಿರುವ ಇತರ ವಿವರಗಳನ್ನು ಪರಿಶೀಲಿಸುವುದು ಮಹತ್ವದ ಜವಾಬ್ದಾರಿಯಾಗಿದೆ. ಹೆಸರು ಇಲ್ಲದಿದ್ದಲ್ಲಿ ಅಥವಾ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಅರ್ಜಿಯನ್ನು ಸಲ್ಲಿಸಬೇಕು ಎಂದು ಬಲರಾಮ ಚವ್ಹಾಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಗುಂಡು ತೋಪಿನಕಟ್ಟಿ, ಉಪಾಧ್ಯಕ್ಷ ಚೇತನ್ ಮಣೇರಿಕರ್, ವಸಂತ ದೇಸಾಯಿ, ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾವತ್, ಮಹಾದೇವ ಕೋಳಿ, ಗುಡ್ಡು ಟೆಕಡಿ, ಲಿಯಾಕತ್ ಅಲಿ ಬಿಚ್ಚನವರ್ ಸೇರಿದಂತೆ ವಿವಿಧ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೆಬ್ಸೈಟ್ : www.ceo.karnataka.gov.in
ಮತದಾರರ ಸೇವಾ ಪೋರ್ಟಲ್ : voters.eci.gov.in



