शिक्षक भरती मराठी माध्यमाच्या 195 शिक्षक पदांचा समावेश करा; आमदार विठ्ठल हलगेकरांची मुख्यमंत्र्यांकडे मागणी.
खानापूर : राज्यात सुरू असलेल्या शिक्षक भरती प्रक्रियेत मराठी माध्यमाच्या रिक्त असलेल्या 195 शिक्षक पदांचा तातडीने समावेश करून मराठी माध्यमातून शिक्षण घेतलेल्या पात्र D.Ed. व B.Ed. उमेदवारांना समान संधी द्यावी, अशी मागणी खानापूरचे आमदार विठ्ठल सोमण्णा हलगेकर यांनी मुख्यमंत्री डी. के. शिवकुमार व उपमुख्यमंत्री यांच्याकडे केली आहे.
यासंदर्भात आमदार हलगेकर यांनी 21 ऑगस्ट रोजी मुख्यमंत्र्यांना पत्र पाठविले आहे. कर्नाटक सरकारच्या शिक्षण विभागाने राज्यभरात सुमारे 15 हजार शिक्षक पदांची भरती प्रक्रिया सुरू केली आहे. बेळगाव विभागासाठी यापूर्वी 831 शिक्षक पदांना मंजुरी देण्यात आली होती. मात्र, 12 ऑगस्ट 2026 रोजी प्रसिद्ध झालेल्या नवीन शिक्षक भरती अधिसूचनेत मराठी तसेच इतर भाषिक अल्पसंख्याक माध्यमांच्या शाळांमधील रिक्त पदांचा योग्य समावेश करण्यात आलेला नसल्याचे आमदारांनी निदर्शनास आणून दिले आहे.
खानापूर तालुक्यात एकूण 297 शिक्षक पदे रिक्त असून, त्यापैकी 195 पदे मराठी माध्यमाची, 92 पदे कन्नड माध्यमाची आणि 16 पदे उर्दू माध्यमाची असल्याचे पत्रात नमूद करण्यात आले आहे. मराठी माध्यमाच्या शाळांमध्ये आवश्यक संख्येने शिक्षक उपलब्ध नसल्यामुळे अध्यापन व्यवस्थेवर परिणाम होण्याची शक्यता असून, ग्रामीण भागातील विद्यार्थ्यांना त्याचा मोठा फटका बसू शकतो, असे हलगेकर यांनी म्हटले आहे.
सध्या बेळगाव विभागात माध्यमिक शिक्षकांची 240 पदे भरण्याची प्रक्रिया जाहीर करण्यात आली आहे. त्यामध्ये कन्नड आणि इंग्रजी माध्यमातील विविध विषयांच्या पदांचा समावेश करण्यात आला असला, तरी मराठी माध्यमातील रिक्त पदांचा योग्य प्रकारे समावेश झालेला नसल्याने मराठी माध्यमाच्या शाळांमध्ये शिक्षकांची कमतरता निर्माण होणार आहे. तसेच मराठी माध्यमातून शिक्षण घेऊन शिक्षक होण्याची तयारी करणाऱ्या हजारो पात्र तरुणांवर अन्याय होणार असल्याचे आमदारांनी स्पष्ट केले.
भाषिक अल्पसंख्याकांना मातृभाषेत शिक्षण घेण्याचा अधिकार संविधानातील कलम 29, 30 आणि 350-ए अंतर्गत संरक्षण मिळालेले आहे. त्यामुळे मराठी माध्यमाच्या शाळांमधील शिक्षकांची कमतरता दूर करणे आणि पात्र उमेदवारांना सरकारी सेवेत प्रवेशाची समान संधी देणे आवश्यक असल्याचे हलगेकर यांनी पत्रात नमूद केले आहे.
खानापूर तालुका हा सीमाभागातील मराठी भाषिकबहुल तालुका असून येथे मोठ्या संख्येने मराठी माध्यमाच्या शाळा आहेत. त्यामुळे विद्यार्थ्यांची संख्या, शाळांची गरज आणि माध्यमनिहाय रिक्त पदांचा वस्तुनिष्ठ आढावा घेऊन शिक्षक भरती करावी, अशी मागणी त्यांनी केली आहे.
सध्याच्या शिक्षक भरती प्रक्रियेत मराठी माध्यमाची 195 रिक्त पदे तातडीने समाविष्ट करून पात्र D.Ed. व B.Ed. उमेदवारांना समान संधी द्यावी आणि शिक्षकांच्या कमतरतेमुळे विद्यार्थ्यांचे शैक्षणिक नुकसान होणार नाही, यासाठी सरकारने तातडीने योग्य कार्यवाही करावी, अशी मागणी आमदार विठ्ठल सोमण्णा हलगेकर यांनी मुख्यमंत्री डी. के. शिवकुमार यांच्याकडे केली आहे.
ಶಿಕ್ಷಕರ ನೇಮಕಾತಿಯಲ್ಲಿ ಮರಾಠಿ ಮಾಧ್ಯಮದ 195 ಶಿಕ್ಷಕ ಹುದ್ದೆಗಳನ್ನು ಸೇರಿಸಬೇಕು; ಮುಖ್ಯಮಂತ್ರಿ ಅವರಿಗೆ ಶಾಸಕ ವಿಠ್ಠಲ ಹಲ್ಗೇಕರ್ ಅವರಿಂದ ಮನವಿ ಮೂಲಕ ಆಗ್ರಹ.
ಖಾನಾಪುರ : ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮರಾಠಿ ಮಾಧ್ಯಮದ ಖಾಲಿ ಇರುವ 195 ಶಿಕ್ಷಕ ಹುದ್ದೆಗಳನ್ನು ತಕ್ಷಣವೇ ಸೇರಿಸಿ, ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅರ್ಹ D.Ed. ಹಾಗೂ B.Ed. ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಬೇಕು ಎಂದು ಖಾನಾಪುರ ಶಾಸಕ ವಿಠ್ಠಲ ಸೋಮಣ್ಣ ಹಲ್ಗೇಕರ್ ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಯವರಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತು ಶಾಸಕ ಹಲಗೇಕರ್ ಅವರು ಆಗಸ್ಟ್ 21ರಂದು ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿದ್ದಾರೆ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ಸುಮಾರು 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಬೆಳಗಾವಿ ವಿಭಾಗಕ್ಕೆ ಈ ಹಿಂದೆ 831 ಶಿಕ್ಷಕರ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ಆಗಸ್ಟ್ 12, 2026ರಂದು ಪ್ರಕಟಿಸಲಾದ ಹೊಸ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಮರಾಠಿ ಹಾಗೂ ಇತರ ಭಾಷಿಕ ಅಲ್ಪಸಂಖ್ಯಾತ ಮಾಧ್ಯಮದ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಸೂಕ್ತವಾಗಿ ಸೇರಿಸಲಾಗಿಲ್ಲ ಎಂದು ಶಾಸಕ ಹಲಗೇಕರ್ ಅವರು ಗಮನಕ್ಕೆ ತಂದಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಒಟ್ಟು 297 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ 195 ಹುದ್ದೆಗಳು ಮರಾಠಿ ಮಾಧ್ಯಮದ, 92 ಹುದ್ದೆಗಳು ಕನ್ನಡ ಮಾಧ್ಯಮದ ಹಾಗೂ 16 ಹುದ್ದೆಗಳು ಉರ್ದು ಮಾಧ್ಯಮದ ಹುದ್ದೆಗಳಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮರಾಠಿ ಮಾಧ್ಯಮದ ಶಾಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರು ಲಭ್ಯವಿಲ್ಲದ ಕಾರಣ ಬೋಧನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದರಿಂದ ದೊಡ್ಡ ಹೊಡೆತ ಬೀಳಬಹುದು ಎಂದು ಹಲಗೇಕರ್ ಅವರು ತಿಳಿಸಿದ್ದಾರೆ.
ಪ್ರಸ್ತುತ ಬೆಳಗಾವಿ ವಿಭಾಗದಲ್ಲಿ ಪ್ರೌಢಶಾಲಾ ಶಿಕ್ಷಕರ 240 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ವಿವಿಧ ವಿಷಯಗಳ ಹುದ್ದೆಗಳನ್ನು ಸೇರಿಸಲಾಗಿದೆ. ಆದರೆ ಮರಾಠಿ ಮಾಧ್ಯಮದ ಖಾಲಿ ಹುದ್ದೆಗಳನ್ನು ಸೂಕ್ತ ರೀತಿಯಲ್ಲಿ ಸೇರಿಸದಿರುವುದರಿಂದ ಮರಾಠಿ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಲಿದೆ. ಅಲ್ಲದೆ, ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಶಿಕ್ಷಕರಾಗಲು ಸಿದ್ಧತೆ ನಡೆಸುತ್ತಿರುವ ಸಾವಿರಾರು ಅರ್ಹ ಯುವಕರಿಗೆ ಅನ್ಯಾಯವಾಗಲಿದೆ ಎಂದು ಶಾಸಕ ಹಲಗೇಕರ್ ಅವರು ಸ್ಪಷ್ಟಪಡಿಸಿದ್ದಾರೆ.
ಭಾಷಿಕ ಅಲ್ಪಸಂಖ್ಯಾತರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕಿಗೆ ಸಂವಿಧಾನದ ಕಲಂ 29, 30 ಮತ್ತು 350-ಎ ಅಡಿಯಲ್ಲಿ ರಕ್ಷಣೆ ದೊರೆತಿದೆ. ಆದ್ದರಿಂದ ಮರಾಠಿ ಮಾಧ್ಯಮದ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನಿವಾರಿಸುವುದು ಹಾಗೂ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಸೇವೆಗೆ ಪ್ರವೇಶ ಪಡೆಯಲು ಸಮಾನ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ ಎಂದು ಹಲಗೇಕರ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಖಾನಾಪುರ ತಾಲೂಕು ಗಡಿ ಪ್ರದೇಶದಲ್ಲಿರುವ ಮರಾಠಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ತಾಲೂಕಾಗಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಮಾಧ್ಯಮದ ಶಾಲೆಗಳಿವೆ. ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ, ಶಾಲೆಗಳ ಅಗತ್ಯತೆ ಹಾಗೂ ಮಾಧ್ಯಮನಿಹಾಯ್ ಖಾಲಿ ಹುದ್ದೆಗಳ ವಸ್ತುನಿಷ್ಠ ಪರಿಶೀಲನೆ ನಡೆಸಿ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮರಾಠಿ ಮಾಧ್ಯಮದ 195 ಖಾಲಿ ಹುದ್ದೆಗಳನ್ನು ತಕ್ಷಣವೇ ಸೇರಿಸಿ, ಅರ್ಹ D.Ed. ಹಾಗೂ B.Ed. ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಬೇಕು. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಾನಿಯಾಗದಂತೆ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ್ ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಲ್ಲಿ ಮನವಿ ಮೂಲಕ ಆಗ್ರಹಿಸಿದ್ದಾರೆ.



